AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನ ಬಾಂಡ್ಲಗುಡ ಗಣೇಶ ಲಡ್ಡು 1.26 ಕೋಟಿ ರೂ.ಗೆ ಹರಾಜು!

ಕಳೆದ ವರ್ಷದ ಹರಾಜಿನಲ್ಲಿ ಬಾಂಡ್ಲಗುಡ ಗಣೇಶ ಲಡ್ಡು 60.08 ಲಕ್ಷ ರೂ.ಗೆ ಮಾರಾಟವಾಗಿತ್ತು. ಈ ಬಾರಿ 1.26 ಕೋಟಿ ರೂ.ಗೆ ಹರಾಜಾಗುವ ಮೂಲಕ ಅತ್ಯಂತ ದುಬಾರಿ ಲಡ್ಡು ಎನಿಸಿಕೊಂಡಿದೆ. ಬಾಂಡ್ಲಗುಡ ಗಣೇಶ ಲಡ್ಡು 12 ಕೆ.ಜಿ ಇರುತ್ತದೆ.

ಹೈದರಾಬಾದ್​ನ ಬಾಂಡ್ಲಗುಡ ಗಣೇಶ ಲಡ್ಡು 1.26 ಕೋಟಿ ರೂ.ಗೆ ಹರಾಜು!
ಬಾಂಡ್ಲಗುಡ ಲಡ್ಡು
ಸುಷ್ಮಾ ಚಕ್ರೆ
|

Updated on: Sep 28, 2023 | 6:18 PM

Share

ಹೈದರಾಬಾದ್: ತೆಲಂಗಾಣದ ಬಾಂಡ್ಲಗುಡದ ಕೀರ್ತಿ ರಿಚ್ಮಂಡ್ ವಿಲ್ಲಾಸ್‌ನ ಗಣಪತಿಯ ಲಡ್ಡುಗೆ ಪ್ರತಿವರ್ಷ ಭಾರೀ ಬೇಡಿಕೆ ಇರುತ್ತದೆ. ಈ ವಿಶೇಷ ಲಡ್ಡುವನ್ನು ಈ ಬಾರಿಯೂ ಇಂದು ಹರಾಜು ಹಾಕಲಾಗಿದ್ದು, ದಾಖಲೆಯ 1.26 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಈ ಲಡ್ಡು ಹೊಸ ದಾಖಲೆ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಐಕಾನಿಕ್ ‘ಬಾಳಾಪುರ್ ಗಣೇಶ್ ಲಡ್ಡು’ಗಿದ್ದ ಅತ್ಯಂತ ದುಬಾರಿ ಲಡ್ಡು ಎಂಬ ಪಟ್ಟ ಈಗ ಬಾಂಡ್ಲಗುಡದ ಗಣೇಶ ಲಡ್ಡುವಿಗೆ ಸಿಕ್ಕಿದೆ.

ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಬೆಲೆಗೆ ಹರಾಜಾದ ಲಡ್ಡು ಇದೆಂದು ಹೇಳಲಾಗುತ್ತಿದೆ. ಕೀರ್ತಿ ರಿಚ್ಮಂಡ್ ವಿಲ್ಲಾಸ್ ನಿವಾಸಿಗಳು ಒಟ್ಟಾಗಿ ಈ ಲಡ್ಡುವನ್ನು ಖರೀದಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಕಳೆದ ವರ್ಷದ ಹರಾಜಿನಲ್ಲಿ ಬಾಂಡ್ಲಗುಡ ಲಡ್ಡು 60.08 ಲಕ್ಷ ರೂ.ಗೆ ಮಾರಾಟವಾಗಿತ್ತು. ಈ ಲಡ್ಡುವಿನ ಹರಾಜಿನಿಂದ ಬರುವ ಆದಾಯವನ್ನು ದತ್ತಿ ಉದ್ದೇಶಗಳಿಗೆ ಮೀಸಲಿಡಲಾಗುವುದು ಎಂದು ರಿಚ್ಮಂಡ್ ವಿಲ್ಲಾಸ್ ನಿವಾಸಿಗಳು ಹೇಳುತ್ತಾರೆ. ವಿವಿಧ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳನ್ನು ಬೆಂಬಲಿಸಲು ಈ ಹಣವನ್ನು ವಿನಿಯೋಗಿಸಲಾಗುತ್ತದೆ.

ಇದನ್ನೂ ಓದಿ: Viral Video: ಗಣೇಶೋತ್ಸವ ಮೆರವಣಿಗೆಯಲ್ಲಿ ಬುರ್ಖಾ ಧರಿಸಿ ನೃತ್ಯ; ತಮಿಳುನಾಡಿನ ವ್ಯಕ್ತಿಯ ಬಂಧನ

ಈ ವರ್ಷದ ಬಾಳಾಪುರ ಗಣೇಶ ಲಡ್ಡು 27 ಲಕ್ಷ ರೂ.ಗೆ ತುರ್ಕಯಾಮಜಲ್ ಗ್ರಾಮದ ನಿವಾಸಿ ದಾಸರಿ ದಯಾನಂದ ರೆಡ್ಡಿ ಅವರಿಗೆ ಮಾರಾಟವಾಗಿದೆ. ಬಾಂಡ್ಲಗುಡ ಗಣೇಶ ಲಡ್ಡು 12 ಕೆ.ಜಿ ಇರುತ್ತದೆ. ಬಾಳಾಪುರದ ಗಣಪತಿ ಲಡ್ಡು 21 ಕೆ.ಜಿಯ ಲಡ್ಡುವಾಗಿದೆ.

ಪ್ರತಿ ವರ್ಷ ಗಣೇಶ ಚತುರ್ಥಿಯ ಸಮಯದಲ್ಲಿ ರಿಚ್‌ಮಂಡ್‌ ವಿಲ್ಲಾಸ್‌ ನಿವಾಸಿಗಳು ಗಣಪತಿಯ ಕೈನಲ್ಲಿ ಇರಿಸಲಾದ ಲಡ್ಡುವಿನ ಹರಾಜು ಪ್ರಕ್ರಿಯೆ ನಡೆಸುತ್ತಾರೆ. 1994ರಿಂದ ಹರಾಜು ಪದ್ಧತಿ ಜಾರಿಯಲ್ಲಿದೆ. ಬಾಳಾಪುರ ಗಣೇಶ ಲಡ್ಡು ಹರಾಜು ಪ್ರಕ್ರಿಯೆ 1994ರಿಂದ ನಡೆಯುತ್ತಿದೆ. ಬಾಳಾಪುರ ಗಣೇಶ ಉತ್ಸವ ಸಮಿತಿ ಇದರ ನೇತೃತ್ವ ವಹಿಸುತ್ತದೆ. ಹರಾಜಿನಿಂದ ಬಂದ ಹಣವನ್ನು ಗಣೇಶ ಉತ್ಸವ ಸಮಿತಿಯು ವಿವಿಧ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳಿಗೆ ನೀಡುತ್ತದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿಂದು ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆ: ಫುಲ್​ ಪೊಲೀಸ್ ಬಂದೋಬಸ್ತ್

ಬಾಳಾಪುರ ಗಣೇಶ ಲಡ್ಡುವಿನ ಮೊದಲು ಹರಾಜು ಪ್ರಕ್ರಿಯೆಯಲ್ಲಿ ಈ ಲಡ್ಡು 450 ರೂ.ಗೆ ಮಾರಾಟವಾಗಿತ್ತು. 2021ರಲ್ಲಿ ಬಾಳಾಪುರ ಗಣೇಶ ಲಡ್ಡು 18.90 ಲಕ್ಷಕ್ಕೆ ಹರಾಜಾಗಿತ್ತು. 2020ರಲ್ಲಿ ಕೊವಿಡ್​ನಿಂದಾಗಿ ಗಣೇಶ ಉತ್ಸವ ನಡೆದಿರಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ