AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Call Before You Dig: 5G ಚಾಲನೆಗೆ ಮುನ್ನ CBUD ಆಪ್ ಕಡ್ಡಾಯವಾಗಿ ಬಳಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಗುಜರಾತ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಾಗರ್ ಹವೇಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ CBUD ಆಪ್ ಚಾಲನೆ ಮಾಡಲಾಗಿತ್ತು. ಇದೀಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಬಳಸಲು ನಿರ್ದೇಶಿಸಲಾಗಿದೆ. 

Call Before You Dig: 5G ಚಾಲನೆಗೆ ಮುನ್ನ CBUD ಆಪ್ ಕಡ್ಡಾಯವಾಗಿ ಬಳಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 28, 2022 | 1:29 PM

ಶೀಘ್ರದಲ್ಲೇ, ದೇಶದ ಯಾವುದೇ ಪ್ರಾಧಿಕಾರವು ವಿದ್ಯುತ್ ಕೇಬಲ್‌ಗಳು, ನೀರಿನ ಪೈಪ್‌ಲೈನ್‌ಗಳು ಅಥವಾ ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕಲು ಭೂಮಿಯನ್ನು ಅಗೆಯಬೇಕಾದರೆ, ದುಬಾರಿ ಟೆಲಿಕಾಂ ಫೈಬರ್‌ಗೆ ಯಾವುದೇ ಹಾನಿಯಾಗದಂತೆ ಖಚಿತಪಡಿಸಿಕೊಳ್ಳಲು ಅದು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅದನ್ನು ತಿಳಿಸಬೇಕಾಗುತ್ತದೆ. ಭಾರತವು ದೇಶಾದ್ಯಂತ 5G ನೆಟ್‌ವರ್ಕ್ ಅನ್ನು ಹೊರತರಲು ಸಿದ್ಧವಾಗಿರುವುದರಿಂದ, ನರೇಂದ್ರ ಮೋದಿ (Narendra Modi) ಸರ್ಕಾರವು ‘ಕಾಲ್ ಬಿಫೋರ್ ಯು ಡಿಗ್’ (CBUD) ಮೊಬೈಲ್ ಅಪ್ಲಿಕೇಶನ್‌ ಚಾಲನೆ ಮಾಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದು ಇದರ ಅವಧಿ ವಿಸ್ತರಿಸಲು ನಿರ್ಧರಿಸಿದೆ  ಎಂದು ನ್ಯೂಸ್ 18 ವರದಿ ಮಾಡಿದೆ. ಗುಜರಾತ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಾಗರ್ ಹವೇಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ CBUD ಆಪ್ ಚಾಲನೆ ಮಾಡಲಾಗಿತ್ತು. ಇದೀಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಬಳಸಲು ನಿರ್ದೇಶಿಸಲಾಗಿದೆ.  ಕಳೆದ ವಾರ ಸಿಐಐ ಕಾರ್ಯಕ್ರಮದಲ್ಲಿ ಮಾತನಾಡಿದ ಟೆಲಿಕಾಂ ಕಾರ್ಯದರ್ಶಿ ಕೆ ರಾಜಾರಾಮನ್ ಆಪ್ಟಿಕ್ ಫೈಬರ್ ಅನ್ನು ನಿರ್ವಹಿಸುವ ವೆಚ್ಚವು ತುಂಬಾ ಹೆಚ್ಚುಎಂದು ಹೇಳಿದ್ದರು. ರಸ್ತೆಗಳನ್ನು ಅಗೆಯುವಾಗ ಮತ್ತು ಇತರ ಮೂಲಸೌಕರ್ಯ ಸಂಬಂಧಿತ ಕೆಲಸಗಳನ್ನು ಮಾಡುವಾಗ ಟೆಲಿಕಾಂ ಮೂಲಸೌಕರ್ಯಕ್ಕೆ ಹಾನಿಯಾಗುವುದನ್ನು ತಪ್ಪಿಸಲು CBUD ಅನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಮೊಬೈಲ್ ಸೇವೆಗಳನ್ನು ಬೆಂಬಲಿಸಲು ಫೈಬರ್ ಮೂಲಕ ಪೂರಕ ಸಂಪರ್ಕ ಬಹಳ ಮುಖ್ಯ ಎಂದು ರಾಜಾರಾಮನ್ ಹೇಳಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷ ಆಪ್ಟಿಕ್ ಫೈಬರ್ ಕೇಬಲ್ ಕಡಿತ ಉಂಟಾಗುತ್ತದೆ ಇದು ಭಾರಿ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. ಇದು ದೂರಸಂಪರ್ಕ ಸೇವಾ ಪೂರೈಕೆದಾರರು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಪ್ರತಿ ವರ್ಷ ಸುಮಾರು 3,000 ಕೋಟಿ ರೂಪಾಯಿಗಳ ವ್ಯರ್ಥ ವೆಚ್ಚವನ್ನು ಉಂಟುಮಾಡುತ್ತದೆ, ಜೊತೆಗೆ ನಾಗರಿಕರಿಗೆ ಅನಾನುಕೂಲತೆ ಮತ್ತು ವ್ಯಾಪಾರ ನಷ್ಟವನ್ನು ಉಂಟುಮಾಡುತ್ತದೆ ಎಂದು ಸರ್ಕಾರದ ಅಂಕಿ ಅಂಶ ಹೇಳುತ್ತದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ

ಹೆಚ್ಚುವರಿ ಕಾರ್ಯದರ್ಶಿ (ಟೆಲಿಕಾಂ) ನೇತೃತ್ವದಲ್ಲಿ ಡಿಸೆಂಬರ್ 9 ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಪರಿಶೀಲನಾ ಸಭೆಯಲ್ಲಿ, ಎಲ್ಲಾ ರಾಜ್ಯಗಳು ಎಲ್ಲಾ ಭೂಗತ ಉಪಯುಕ್ತತೆ ಅಥವಾ ವಿದ್ಯುತ್ ಕೇಬಲ್‌ಗಳು, ನೀರಿನ ಪೈಪ್‌ಲೈನ್‌ಗಳು, ಗ್ಯಾಸ್ ಪೈಪ್‌ಲೈನ್‌ಗಳು ಮತ್ತು ಒಳಚರಂಡಿಗಳಂತಹ ಆಸ್ತಿ ಮಾಲೀಕರಿಗೆ ನಿರ್ದೇಶನಗಳನ್ನು ರವಾನಿಸಲು ತಿಳಿಸಲಾಯಿತು. ಡಿಸೆಂಬರ್ 31, 2022 ರೊಳಗೆ ಅವರು ಸಂಪರ್ಕ ವಿವರಗಳ ಮ್ಯಾಪಿಂಗ್ ಅನ್ನು ಜಿಲ್ಲಾ ಮಟ್ಟಕ್ಕೆ ಪೂರ್ಣಗೊಳಿಸಬೇಕು ಎಂದು ಈ ಸಭೆಯಲ್ಲಿ ಹೇಳಲಾಗಿತ್ತು. ಇದಲ್ಲದೆ, ಈ ಎಲ್ಲಾ ಯುಟಿಲಿಟಿ ಮಾಲೀಕರು CBUD ಮೂಲಕ ಪೂರ್ವ ಸೂಚನೆಯ ನಂತರವೇ ಯಾವುದೇ ರೀತಿಯ ಅಗೆಯುವಿಕೆಯನ್ನು ಮಾಡಲು ಕಡ್ಡಾಯಗೊಳಿಸಲಾಗುತ್ತದೆ. ಎಲ್ಲಾ ಭೂಗತ ಉಪಯುಕ್ತತೆ ಮತ್ತು ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ಪಿಎಂ ಗತಿಶಕ್ತಿ ಎನ್​​ಪಿಎಂ ಪೋರ್ಟಲ್‌ನಲ್ಲಿ ಮ್ಯಾಪ್ ಮಾಡಬೇಕಾಗುತ್ತದೆ ಎಂದು ಪರಿಶೀಲನಾ ಸಭೆಯಲ್ಲಿ ನಿರ್ದೇಶನ ನೀಡಲಾಗಿತ್ತು.

ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

5G ನೆಟ್​​ವರ್ಕ್​​ಗೆ ಚಾಲನೆಗೆ ಸಿದ್ಧತೆ

ಅಕ್ಟೋಬರ್ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸೇವೆಗಳನ್ನು ಪ್ರಾರಂಭಿಸಿದ ನಂತರ ದೇಶವು ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 5G ಆರಂಭಿಸಲು ಕಾರ್ಯನಿರ್ವಹಿಸುತ್ತಿದೆ. ಇದು 5G Form  ಮತ್ತು PM ಗತಿಶಕ್ತಿ ಪೋರ್ಟಲ್‌, ಪೋರ್ಟಲ್ ಮ್ಯಾಪಿಂಗ್ ಅನ್ನು ಒಳಗೊಂಡಿರುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಭಾರತದಲ್ಲಿ ಶೀಘ್ರದಲ್ಲೇ 5G ಆರಂಭಿಸಲು ತಯಾರಿ ನಡೆಸುವಂತೆ ರಾಜ್ಯಗಳನ್ನು ಸಿದ್ಧಗೊಳಿಸುತ್ತದೆ.

ಟೆಲಿಕಾಂ ರಚನೆಗಳನ್ನು ಸ್ಥಾಪಿಸಲು ಸರ್ಕಾರಿ ಮೂಲಸೌಕರ್ಯದ ವಿಧಾನಗಳನ್ನು ರೂಪಿಸಲು ರಾಜ್ಯಗಳು ಕಾರ್ಯಕಾರಿ ಸಮಿತಿಗಳನ್ನು ರಚಿಸುತ್ತಿವೆ. ಇವು ಸಾಮಾನ್ಯ ವಿದ್ಯುತ್ ಬಿಲ್‌ಗಳನ್ನು ನೀಡುವ ವಿಧಾನವನ್ನು ಅಂತಿಮಗೊಳಿಸುವುದು, ಸಮಸ್ಯೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸುವುದು ಮತ್ತು ಸಂಪರ್ಕ ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವುದಾಗಿದೆ. 17 ರಾಜ್ಯಗಳು ಇಂತಹ ಕಾರ್ಯಕಾರಿ ಸಮಿತಿಗಳನ್ನು ರಚಿಸಿವೆ.

ಆದಾಗ್ಯೂ ತಮಿಳುನಾಡು, ತಮಿಳುನಾಡು, ಕೇರಳ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಯೋಜನೆಗೆ ರೈಟ್ ಆಫ್ ವೇ (RoW) ಬಾಕಿಯಿದೆ. ತಮಿಳುನಾಡಿನಲ್ಲಿ ಸುಮಾರು 18,188 ಅರ್ಜಿಗಳು ಬಾಕಿ ಉಳಿದಿದ್ದರೆ, ಕೇರಳದಲ್ಲಿ ಸುಮಾರು 2,724 ಮತ್ತು ಬಿಹಾರದಲ್ಲಿ 1,740 ಅರ್ಜಿಗಳು ಬಾಕಿ ಉಳಿದಿವೆ. ತಮಿಳುನಾಡು ಇನ್ನೂ 5G ಆರಂಭಕ್ಕಾಗಿ RoW ಅರ್ಜಿ ನಮೂನೆಯನ್ನು ಅಂತಿಮಗೊಳಿಸಿಲ್ಲ ಕೇರಳ ಮತ್ತು ಬಿಹಾರವೂ ಇದೇ ರೀತಿ ಮಾಡಿದ್ದು ರಾಜ್ಯಗಳು ಇದನ್ನು ತ್ವರಿತಗೊಳಿಸುವಂತೆ ಕೇಂದ್ರ ಸರ್ಕಾರ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!