AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ಅಕ್ರಮ ನೇಮಕಾತಿ: ಸತತ ಮೂರನೇ ದಿನ ಸಿಬಿಐ ಅಧಿಕಾರಗಳ ಮುಂದೆ ಹಾಜರಾದರು ಬಂಗಾಳ ಸಚಿವ ಪರೇಶ್ ಅಧಿಕಾರಿ

ಮೇಕ್ಲಿಗಂಜ್ ಕ್ಷೇತ್ರದ ಶಾಸಕರಾಗಿರುವ ಅಧಿಕಾರಿ ಅವರನ್ನು ಗುರುವಾರದಂದು 9 ಗಂಟೆಗಳಿಗಿಂತ ಹೆಚ್ಚು ಮತ್ತು ಶುಕ್ರವಾರದಂದು ಸುಮಾರು 4 ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.

ಮಗಳ ಅಕ್ರಮ ನೇಮಕಾತಿ: ಸತತ ಮೂರನೇ ದಿನ ಸಿಬಿಐ ಅಧಿಕಾರಗಳ ಮುಂದೆ ಹಾಜರಾದರು ಬಂಗಾಳ ಸಚಿವ ಪರೇಶ್ ಅಧಿಕಾರಿ
ಅಂಕಿತಾ ಅಧಿಕಾರಿ ಮತ್ತು ಪರೇಶ್ ಅಧಿಕಾರಿ
TV9 Web
| Edited By: |

Updated on: May 21, 2022 | 6:25 PM

Share

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜೀ(Mamata Banerjee) ಅವರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಪರೇಶ್ ಅಧಿಕಾರಿ (Paresh Adhikari) ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) (CBI) ಶನಿವಾರದಂದು ಸತತ ಮೂರನೇ ದಿನ ವಿಚಾರಣೆ ನಡೆಸಿದರು. ಅಧಿಕಾರಿ ಅವರು ತಮ್ಮ ಮಗಳಿಗೆ ಕಾನೂನುಬಾಹಿರವಾಗಿ ಒಬ್ಬ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ (primary school teacher) ನೇಮಕಾತಿ ಮಾಡಿಸಿರುವ ಆರೋಪ ಎದುರಿಸುತ್ತಿದ್ದಾರೆ. ಕೊಲ್ಕತ್ತಾದ ಹೈಕೋರ್ಟ್ ಶುಕ್ರವಾರದಂದು ಸಚಿವರ ಪುತ್ರಿ ಅಂಕಿತಾ ಅಧಿಕಾರಿ ಅವರನ್ನು ಸರ್ಕಾರದ ಅನುದಾನಿತ ಶಾಲೆಯೊಂದರ ಶಿಕ್ಷಕಿಯು ಹುದ್ದೆಯಿಂದ ವಜಾಗೊಳಿಸಿದೆ ಮತ್ತು ಅವರು ಕೆಲಸ ಮಾಡಿದ 41-ತಿಂಗಳ ಅವಧಿಯಲ್ಲಿ ಪಡೆದ ಸಂಬಳವನ್ನು ಹಿಂತಿರುಗಿಸುವಂತೆ ಆದೇಶವನ್ನೂ ನೀಡಿದೆ.

ಮಮತಾ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿರುವ ಪರೇಶ್ ಅಧಿಕಾರಿ ಅವರು ಕೊಲ್ಕತ್ತಾದ ಸಿಬಿಐ ಕಚೇರಿಯನ್ನು ಶನಿವಾರ ಬೆಳಗ್ಗೆ 10:35 ಕ್ಕೆ ತಲುಪಿದರು. ಅವರ ಆಪ್ತ ಮೂಲಗಳಿಂದ ಪ್ರಾಪ್ತವಾಗಿರುವ ಮಾಹಿತಿ ಪ್ರಕಾರ ಅಂಕಿತಾ ಅವರ ನೇಮಕಾತಿಗೆ ಸಂಬಂಧಿಸಿದ ಹಲವಾರು ಪ್ರಮುಖ ದಾಖಲೆಗಳ ಫೈಲ್ ಒಂದನ್ನು ಸಚಿವರು ಕಚೇರಿಗೆ ತೆಗೆದುಕೊಂಡು ಹೋದರು.

ಶನಿವಾರ ವಿಚಾರಣೆ ಅರಂಭವಾಗುವ ಮೊದಲು ಸಿಬಿಐ ಆಧಿಕಾರಿಯೊಬ್ಬರು ಮಾಧ್ಯಮಗಳಿಗೆ ಒದಗಿಸಿದ ಮಾಹಿತಿಯ ಪ್ರಕಾರ ತಮ್ಮ ಮಗಳು ಅಂಕಿತಾಳ ನೇಮಕಾತಿಯ ಸಲುವಾಗಿ ಪರೇಶ್ ಆಧಿಕಾರಿ ತಮ್ಮ ಮೊಬೈಲ್ ಫೋನಿಂದ ಮಾಡಿದ ಹಲವಾರು ಫೋನ್ ಕರೆಗಳ ಬಗ್ಗೆ ಪ್ರಶ್ನಿಸಲಾಗಲಿದೆ.

ಸಚಿವರು ಮಾಡಿದ ಕರೆಗಳು ಅವರ ಮಗಳು ಅಂಕಿತಾ ಸರ್ಕಾರದ ಅನುದಾನಿತ ಶಾಲೆಯೊಂದರಲ್ಲಿ ಸಹಾಯಕ ಶಿಕ್ಷಕಿಯಾಗಿ ನೇಮಕಾತಿ ಹೊಂದಿದ ಅಂಶದ ಜೊತೆ ಸಂಬಂಧ ಹೊಂದಿರುವ ಸಾಧ್ಯತೆ ಇದೆ. ಶುಕ್ರವಾರದ ಹಾಗೆ ಶನಿವಾರ ನಡೆದ ವಿಚಾರಣೆಯನ್ನು ವಿಡಿಯೋಗ್ರಾಫ್ ಮಾಡಲಾಗುತ್ತದೆ ಎಂದು ಸಿಬಿಐ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದರು.

ಮೇಕ್ಲಿಗಂಜ್ ಕ್ಷೇತ್ರದ ಶಾಸಕರಾಗಿರುವ ಅಧಿಕಾರಿ ಅವರನ್ನು ಗುರುವಾರದಂದು 9 ಗಂಟೆಗಳಿಗಿಂತ ಹೆಚ್ಚು ಮತ್ತು ಶುಕ್ರವಾರದಂದು ಸುಮಾರು 4 ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.

ಸಿಬಿಐ ಆಂತರಿಕ ಮೂಲಗಳಿಂದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸುದ್ದಿ ಸಂಸ್ಥೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅದರ ಅಧಿಕಾರಿಗಳು ಮುಂದಿನ ವಾರ ಅಂಕಿತಾ ಅಧಿಕಾರಿಯನ್ನು ವಿಚಾರಣೆಗೆ ಕರೆಸಲಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್