AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ 5,000 ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ: ಮೋಹನ್ ಭಾಗವತ್

ದೇಶದಲ್ಲಿ ತುಂಬಾ ವೈವಿಧ್ಯತೆ ಇದೆ. ಪರಸ್ಪರ ಜಗಳವಾಡಬೇಡಿ ಎಂದು ಅವರು ಜನರಿಗೆ ಹೇಳಿದ್ದಾರೆ. ನಾವು ಒಂದೇ ಎಂದು ಜಗತ್ತಿಗೆ ಕಲಿಸಲು ನಿಮ್ಮ ದೇಶವನ್ನು ಸಮರ್ಥವಾಗಿ ಮಾಡಿ. ಇದು ಭಾರತದ ಅಸ್ತಿತ್ವದ ಏಕೈಕ ಉದ್ದೇಶವಾಗಿದೆ ಎಂದು ಹೇಳಿದರು. ಲೋಕಕಲ್ಯಾಣಕ್ಕಾಗಿ ದಾರ್ಶನಿಕರು ‘ಭಾರತ’ವನ್ನು ರಚಿಸಿದ್ದಾರೆ. ಅವರು ತಮ್ಮ ಜ್ಞಾನವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಸಮಾಜವನ್ನು ಸೃಷ್ಟಿಸಿದ್ದಾರೆ ಎಂದರು.

ಭಾರತ 5,000 ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ: ಮೋಹನ್ ಭಾಗವತ್
ಮೋಹನ್ ಭಾಗವತ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 12, 2023 | 12:57 PM

ದೆಹಲಿ ಅಕ್ಟೋಬರ್ 12: ಜನರು ಒಗ್ಗಟ್ಟಿನಿಂದ ಇರಲು ಮತ್ತು ವಿಶ್ವದ ಮುಂದೆ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಲು ಕರೆ ನೀಡಿದ ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಬುಧವಾರ ‘ಭಾರತ’ 5,000 ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಹಿರಿಯ ಪದಾಧಿಕಾರಿ ರಂಗಾ ಹರಿ ಅವರ ‘ಪೃಥ್ವಿ ಸೂಕ್ತ’- ಆನ್‌ ಓಡ್‌ ಟು ಮದರ್‌ ಅರ್ಥ್‌ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರವರು.

“ನಾವು ಮಾತೃಭೂಮಿಯನ್ನು ನಮ್ಮ ರಾಷ್ಟ್ರೀಯ ಏಕತೆಯ ಅತ್ಯಗತ್ಯ ಅಂಶವೆಂದು ಪರಿಗಣಿಸುತ್ತೇವೆ. ನಮ್ಮ 5,000 ವರ್ಷಗಳ ಹಿಂದಿನ ಸಂಸ್ಕೃತಿ ಜಾತ್ಯತೀತವಾಗಿದೆ. ಎಲ್ಲಾ ‘ತತ್ವ ಜ್ಞಾನ’ (ಅಂಶಗಳ ಜ್ಞಾನ) ದಲ್ಲಿ ಇದು ತೀರ್ಮಾನವಾಗಿದೆ. ಇಡೀ ಪ್ರಪಂಚವು ಒಂದು ಕುಟುಂಬ, ಇದು ಇದು ನಮ್ಮ ಭಾವನೆ. ಇದು ಸಿದ್ಧಾಂತವಲ್ಲ.ಅದನ್ನು ತಿಳಿದುಕೊಳ್ಳಿ, ಅರಿತುಕೊಳ್ಳಿ ಮತ್ತು ಅದರಂತೆ ನಡೆದುಕೊಳ್ಳಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.

ದೇಶದಲ್ಲಿ ತುಂಬಾ ವೈವಿಧ್ಯತೆ ಇದೆ. ಪರಸ್ಪರ ಜಗಳವಾಡಬೇಡಿ ಎಂದು ಅವರು ಜನರಿಗೆ ಹೇಳಿದ್ದಾರೆ. ನಾವು ಒಂದೇ ಎಂದು ಜಗತ್ತಿಗೆ ಕಲಿಸಲು ನಿಮ್ಮ ದೇಶವನ್ನು ಸಮರ್ಥವಾಗಿ ಮಾಡಿ. ಇದು ಭಾರತದ ಅಸ್ತಿತ್ವದ ಏಕೈಕ ಉದ್ದೇಶವಾಗಿದೆ ಎಂದು ಹೇಳಿದರು. ಲೋಕಕಲ್ಯಾಣಕ್ಕಾಗಿ ದಾರ್ಶನಿಕರು ‘ಭಾರತ’ವನ್ನು ರಚಿಸಿದ್ದಾರೆ. ಅವರು ತಮ್ಮ ಜ್ಞಾನವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಸಮಾಜವನ್ನು ಸೃಷ್ಟಿಸಿದ್ದಾರೆ ಎಂದರು.

“ಅವರು ಕೇವಲ ‘ಸನ್ಯಾಸಿಗಳು’ ಆಗಿರಲಿಲ್ಲ. ಅವರು ತಮ್ಮ ಕುಟುಂಬಗಳೊಂದಿಗೆ ಅಲೆದಾಡುವ ಜೀವನವನ್ನು ನಡೆಸುತ್ತಿದ್ದರು. ಬ್ರಿಟಿಷರು ಕ್ರಿಮಿನಲ್ ಬುಡಕಟ್ಟುಗಳೆಂದು ಘೋಷಿಸಿದ ಈ ಎಲ್ಲಾ ಅಲೆಮಾರಿಗಳು ಈಗಲೂ ಇದ್ದಾರೆ. ಅವರು ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದನ್ನು ಹೆಚ್ಚಾಗಿ ಕಾಣಬಹುದು. ಸಮಾಜ, ಕೆಲವರು ಆಯುರ್ವೇದ ಜ್ಞಾನವನ್ನು ಹಂಚಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಂದು ಮೋದಿ ವಿಶ್ವದ ಬಾಸ್​​, ಇಂದು ರಾಕ್‌ಸ್ಟಾರ್: ಭಾರತವನ್ನು ಕೊಂಡಾಡಿದ ಆಸ್ಟೇಲಿಯಾ ಸ್ಪೀಕರ್

ನಮ್ಮ ಜನರು ಮೆಕ್ಸಿಕೋದಿಂದ ಸೈಬೀರಿಯಾದವರೆಗೆ ಜ್ಞಾನವನ್ನು ತೆಗೆದುಕೊಂಡು ಪ್ರಪಂಚದಾದ್ಯಂತ ಹೋದರು ಎಂದು ಅವರು ಹೇಳಿದ್ದಾರೆ. ಮುಖ್ಯವಾಗಿ ಆರ್ಥಿಕ ವಿಷಯಗಳ ಕುರಿತು ಚರ್ಚಿಸುವ ವೇದಿಕೆಯಾಗಿರುವ ಜಿ 20 ಅನ್ನು ಭಾರತವು ಮಾನವೀಯತೆಯ ಬಗ್ಗೆ ಯೋಚಿಸುವ ವೇದಿಕೆಯಾಗಿ ಪರಿವರ್ತಿಸುವುದರಲ್ಲಿ ಆಶ್ಚರ್ಯವಿಲ್ಲ ಎಂದು ಆರ್‌ಎಸ್‌ಎಸ್ ನಾಯಕ ಹೇಳಿದರು. ಅದಕ್ಕೆ ‘ವಸುಧೈವ ಕುಟುಂಬಕಂ’ ಎಂಬ ಭಾವನೆಯನ್ನು ನೀಡುವ ಮೂಲಕ ಅದನ್ನು ಮನುಷ್ಯರ ಬಗ್ಗೆ ಚಿಂತಿಸುವ ವೇದಿಕೆಯನ್ನಾಗಿಸಿದೆವು’ ಎಂದಿದ್ದಾರೆ ಅವರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ