AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಸಹಾಯವಾಗಲಿದೆಯೇ ನಿತೀಶ್ ಕುಮಾರ್ ಯು-ಟರ್ನ್ ನಿರ್ಧಾರ?

ಸುಮಾರು 4,000 ಭಾಗವಹಿಸಿದ ಎನ್‌ಡಿಟಿವಿ ಪ್ರಶ್ನಮ್ ಸಮೀಕ್ಷೆಯಲ್ಲಿ ಬಿಹಾರದ ರಾಜಕೀಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶೇ.53 ರಷ್ಟು ಜನರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಮತ ಹಾಕುವುದಾಗಿ ಹೇಳಿದ್ದಾರೆ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಸಹಾಯವಾಗಲಿದೆಯೇ ನಿತೀಶ್ ಕುಮಾರ್ ಯು-ಟರ್ನ್ ನಿರ್ಧಾರ?
ನಿತೀಶ್ ಕುಮಾರ್
Follow us
ರಶ್ಮಿ ಕಲ್ಲಕಟ್ಟ
|

Updated on: Jan 31, 2024 | 4:53 PM

ದೆಹಲಿ ಜನವರಿ 31: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ಇತ್ತೀಚಿನ ಯು ಟರ್ನ್ ಟೀಕೆಗೊಳಗಾಗಿರಬಹುದು ಆದರೆ ಲೋಕಸಭೆ ಚುನಾವಣೆಗೆ (Lok sabha Election) ತಿಂಗಳುಗಳ ಮೊದಲು ಬಿಜೆಪಿಯ (BJP) ಭವಿಷ್ಯವನ್ನು ಸುಧಾರಿಸಿದೆ ಎಂದು ಎನ್‌ಡಿಟಿವಿ ಪ್ರಶ್ನಮ್ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಸುಮಾರು 4,000 ಜನರ ಅಭಿಪ್ರಾಯ ಕೇಳಿ ಮಾಡಿದ ಈ ಸಮೀಕ್ಷೆಯು ಬಿಹಾರದ ರಾಜಕೀಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶೇ.53 ರಷ್ಟು ಜನರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಮತ ಹಾಕುವುದಾಗಿ ಹೇಳಿದ್ದಾರೆ. 23ರಷ್ಟು ಮಂದಿ ಆರ್‌ಜೆಡಿ-ಕಾಂಗ್ರೆಸ್ ಬಣಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಉಳಿದವುಗಳನ್ನು ಇತರ ಪಕ್ಷಗಳ ಬೆಂಬಲಿಗರು ಮತ್ತು ಇನ್ನೂ ನಿರ್ಧರಿಸದವರ ನಡುವೆ ವಿಂಗಡಿಸಲಾಗಿದೆ.

ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಹಾಘಟಬಂಧನ್ ಇನ್ನೂ ಯಥಾಸ್ಥಿತಿಯಲ್ಲಿದ್ದರೆ ಅವರ ಆಯ್ಕೆ ಏನಾಗುತ್ತಿತ್ತು ಎಂಬ ಪ್ರಶ್ನೆಗೆ, ಸಮೀಕ್ಷೆಯಲ್ಲಿ ಶೇಕಡಾ 35 ರಷ್ಟು ಜನರು ವಿರೋಧ ಪಕ್ಷಗಳ ಬಣವನ್ನು ಬೆಂಬಲಿಸುತ್ತಿದ್ದರು ಎಂದು ಹೇಳಿದ್ದಾರೆ. ಏನೇ ಆದರೂ ಎನ್​​ಡಿಎಗೆ ಬೆಂಬಲ ನೀಡುತ್ತೇವೆ ಎಂದು ಹೇಳುತ್ತಿದ್ದವರ ಸಂಖ್ಯೆಗೆ ಇದು ಸಮಾನವಾಗಿದೆ.

ಅಂದಹಾಗೆ ನಿತೀಶ್ ಕುಮಾರ್ ಯು ಟರ್ನ್ ನಿಂದಾಗಿ ಎನ್​​ಡಿಎಗೆ ಅನುಕೂಲ ಆಗುತ್ತದೆ ಎಂದು ಇದು ಸೂಚಿಸುತ್ತದೆ. ಸುಮಾರು 73 ಪ್ರತಿಶತ ಎನ್ ಡಿಎ ಮತದಾರರು ಬಿಹಾರದಲ್ಲಿನ ಬದಲಾವಣೆ ನಂತರ ಬಿಜೆಪಿ-ಜೆಡಿಯು ಮೈತ್ರಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ, ಇದು ಬಿಜೆಪಿ ಮತದಾರರು ನಿತೀಶ್ ಕುಮಾರ್ ಎನ್‌ಡಿಎಗೆ ಮರಳುವುದನ್ನು ಹೆಚ್ಚಾಗಿ ಒಪ್ಪಿಕೊಂಡಿದ್ದಾರೆ ಎಂದು ಸೂಚಿಸುತ್ತದೆ.

ಲೋಕಸಭೆ ಚುನಾವಣೆ ಮಾತ್ರವಲ್ಲದೆ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಕುಮಾರ್ ಅವರ ಬದಲಾವಣೆ ಬಿಜೆಪಿಗೆ ಲಾಭ ತಂದುಕೊಡಬಹುದು ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ಭಾಗವಾಗಿರುವ ಸುಮಾರು 54 ಪ್ರತಿಶತದಷ್ಟು ಜನರು ರಾಜ್ಯ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.  27 ರಷ್ಟು ಜನರು ಆರ್‌ಜೆಡಿ-ಕಾಂಗ್ರೆಸ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, 41 ಪ್ರತಿಶತದಷ್ಟು ಜನರು 2025 ರಲ್ಲಿ ಮಹಾಘಟಬಂಧನ್ ಹಾಗೇ ಉಳಿದಿದ್ದರೆ ಅದಕ್ಕೆ ಮತ ಹಾಕುತ್ತಿದ್ದರು ಎಂದು ಹೇಳಿದ್ದಾರೆ. ಶೇ.38ರಷ್ಟು ಮಂದಿ ಹೇಗಾದರೂ ಎನ್ ಡಿಎ ಪರ ನಿಲ್ಲುವುದಾಗಿ ಹೇಳಿದ್ದಾರೆ.

ಇದನ್ನೂ ಓದಿಪ್ರತಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದು ನನಗೆ ಇಷ್ಟವಿರಲಿಲ್ಲ, ಮೊದಲಿಂದಲೂ ವಿರೋಧಿಸಿದ್ದೆ: ನಿತೀಶ್​ ಕುಮಾರ್

ಆಗಾಗ್ಗೆ ಜಿಗಿಯುವ ನಿತೀಶ್ ಕುಮಾರ್ ಅವರು ಇನ್ನೂ ಜನಪ್ರಿಯ ಬೆಂಬಲವನ್ನು ಹೊಂದಿದ್ದಾರೆಯೇ ಎಂದು ಸಮೀಕ್ಷೆಯು ಡಿಕೋಡ್ ಮಾಡಲು ಪ್ರಯತ್ನಿಸಿದೆ. 36 ರಷ್ಟು ವಿರೋಧ ಪಕ್ಷದ ಮೈತ್ರಿ ಮತದಾರರು ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಒಂಬತ್ತು ಬಾರಿ ಮುಖ್ಯಮಂತ್ರಿಯಾದವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಇದು ಶೇ 46ಕ್ಕೆ ಏರಿದೆ. ಸಮೀಕ್ಷೆಯಲ್ಲಿ ಶೇಕಡ 70 ರಷ್ಟು ಜನರು 2025 ರಲ್ಲಿ ಬಿಜೆಪಿ-ಜೆಡಿಯು ಮೈತ್ರಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ