
ಒಡಿಶಾ (Odisha) ಮೂಲದ ಉದ್ಯಮಿ ಬಿಸ್ವನಾಥ್ ಪಟ್ನಾಯಕ್ (Biswanath Patnaik) ಅವರು ಯುನೈಟೆಡ್ ಕಿಂಗ್ಡಂನಲ್ಲಿರುವ ಜಗನ್ನಾಥ ದೇವಾಲಯಕ್ಕೆ 25 ಮಿಲಿಯನ್ ಪೌಂಡ್ (ರೂ.250 ಕೋಟಿ) ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ವರದಿಗಳ ಪ್ರಕಾರ, ಇದು ಭಾರತದ ಹೊರಗಿನ ದೇವಸ್ಥಾನಕ್ಕೆ ನೀಡಿದ ದೊಡ್ಡ ಪರೋಪಕಾರಿ ದೇಣಿಗೆಗಳಲ್ಲಿ ಒಂದಾಗಿದೆ. ಬಿಲಿಯನೇರ್ ಉದ್ಯಮಿ ಬಿಸ್ವನಾಥ್ ಪಟ್ನಾಯಕ್ ಅವರು ಭಾನುವಾರ (April 23) ಅಕ್ಷಯ ತೃತಿಯ ಶುಭ ಸಂದರ್ಭದಲ್ಲಿ ನಡೆದ ಯುಕೆಯ (Britain) ಮೊದಲ ಜಗನ್ನಾಥ ಸಮಾವೇಶದಲ್ಲಿ ಕೊಡುಗೆ ನೀಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಈ ಬಿಲಿಯನೇರ್ ಉದ್ಯಮಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತ ಅತ್ಯಂತ ಕಷ್ಟದ ಸಂದರ್ಭಗಳಲ್ಲಿಯೂ ಹೊಸತನವನ್ನು ಕಂಡುಕೊಳ್ಳುವ ಶಕ್ತಿ ಹೊಂದಿದೆ: ಸೌರಾಷ್ಟ್ರ ತಮಿಳು ಸಂಗಮದಲ್ಲಿ ಮೋದಿ ಮಾತು