ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಈಗ ಬಿಜೆಪಿ ಉಪಾಧ್ಯಕ್ಷ

ತಾರಿಕ್ ಮನ್ಸೂರ್ ಉತ್ತರ ಪ್ರದೇಶದ ಅಲಿಗಢದವರು. ಅಲ್ಲಿ ಮುಸ್ಲಿಮರು ರಾಜ್ಯದ ಮತದಾರರಲ್ಲಿ ಸರಿಸುಮಾರು 19% ರಷ್ಟಿದ್ದಾರೆ. ಕನಿಷ್ಠ 30 ಲೋಕಸಭಾ ಸ್ಥಾನಗಳಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿದ್ದಾರೆ. ಈ ಪೈಕಿ 15 ರಿಂದ 20 ಕ್ಷೇತ್ರಗಳಲ್ಲಿ ಫಲಿತಾಂಶವನ್ನು ನಿರ್ಧರಿಸುವಲ್ಲಿ ಮುಸ್ಲಿಮರು ಪ್ರಮುಖ ಪಾತ್ರ ವಹಿಸುತ್ತಾರೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಈಗ ಬಿಜೆಪಿ ಉಪಾಧ್ಯಕ್ಷ
ತಾರಿಕ್ ಮನ್ಸೂರ್
ರಶ್ಮಿ ಕಲ್ಲಕಟ್ಟ

Updated on: Jul 29, 2023 | 8:31 PM

ದೆಹಲಿ ಜುಲೈ 29: ಮುಸ್ಲಿಂ ಪಸ್ಮಾಂಡ ಸಮುದಾಯಗಳಲ್ಲಿ (Muslim Pasmanda communities) ತನ್ನ ಚಾಲ್ತಿಯಲ್ಲಿರುವ ಪ್ರಭಾವವನ್ನು ಬಲಪಡಿಸುವ ಪ್ರಯತ್ನದಲ್ಲಿ ಬಿಜೆಪಿ ಶನಿವಾರ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (Aligarh Muslim University) ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ (Tariq Mansoor) ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಕೇಂದ್ರಗಳಲ್ಲಿ ಒಂದಾದ AMU ಅನ್ನು “ಮಧ್ಯಮ ಮಾರ್ಗ” ದಲ್ಲಿ ಮುನ್ನಡೆಸುವಲ್ಲಿ ಮನ್ಸೂರ್ ಪ್ರಮುಖ ಪಾತ್ರ ವಹಿಸಿದ್ದರು. ಇವರು ಶಾಂತಿಯುತ ಹಿಂದೂಗಳ ಕುರಿತು ಮೊಘಲ್ ರಾಜಕುಮಾರ ದಾರಾ ಶಿಕೋ ಅವರ ಬೋಧನೆಗಳನ್ನು ಉತ್ತೇಜಿಸುವ ಯೋಜನೆಯಲ್ಲಿ ಆರ್‌ಎಸ್‌ಎಸ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿನ ರಾಮೇಶ್ವರಂನಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಲು ಬಂದ ದಿನವೇ ಈ ನೇಮಕಾತಿ ನಡೆದಿದೆ.

ಬಿಜೆಪಿಯು ಅಲ್ಪಸಂಖ್ಯಾತ ಮೋರ್ಚಾ ಸಭೆಗಳ ಮೂಲಕ ಮುಸ್ಲಿಂ ಜನಸಂಖ್ಯೆಯ ಒಂದು ವರ್ಗವನ್ನು ನಿರಂತರವಾಗಿ ತಲುಪುತ್ತಿದೆ. ಇದು ಹೆಚ್ಚಾಗಿ ದಲಿತ ಮತ್ತು ಇತರ ಹಿಂದುಳಿದ ವರ್ಗದ ಸಮುದಾಯಗಳಿಂದ ಬಂದಿರುವ ಪಸ್ಮಾಂಡ ಮುಸ್ಲಿಮರನ್ನು ಕೇಂದ್ರೀಕರಿಸಿದೆ. ಮನ್ಸೂರ್ ಅವರು ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಚುನಾಯಿತರಾಗಿದ್ದು, ಕಳೆದ ಕೆಲವು ವರ್ಷಗಳಲ್ಲಿ ಈ ಹುದ್ದೆಗೆ ಬಿಜೆಪಿಯಿಂದ ಆಯ್ಕೆಯಾದ ನಾಲ್ಕನೇ ಮುಸ್ಲಿಂ ಆಗಿದ್ದಾರೆ.

ತಾರಿಕ್ ಮನ್ಸೂರ್ ಉತ್ತರ ಪ್ರದೇಶದ ಅಲಿಗಢದವರು. ಅಲ್ಲಿ ಮುಸ್ಲಿಮರು ರಾಜ್ಯದ ಮತದಾರರಲ್ಲಿ ಸರಿಸುಮಾರು 19% ರಷ್ಟಿದ್ದಾರೆ. ಕನಿಷ್ಠ 30 ಲೋಕಸಭಾ ಸ್ಥಾನಗಳಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿದ್ದಾರೆ. ಈ ಪೈಕಿ 15 ರಿಂದ 20 ಕ್ಷೇತ್ರಗಳಲ್ಲಿ ಫಲಿತಾಂಶವನ್ನು ನಿರ್ಧರಿಸುವಲ್ಲಿ ಮುಸ್ಲಿಮರು ಪ್ರಮುಖ ಪಾತ್ರ ವಹಿಸುತ್ತಾರೆ.

ಆರ್‌ಎಸ್‌ಎಸ್ ಕಾರ್ಯನಿರ್ವಾಹಕರ ಪ್ರಕಾರ, ಮನ್ಸೂರ್ ಅವರು ದಾರಾ ಶಿಕೋ ಯೋಜನೆಯಲ್ಲಿ ತಮ್ಮ ಕೆಲಸದ ಮೂಲಕ ಸಂಘದ ನಾಯಕತ್ವವನ್ನು ಪ್ರಭಾವಿಸಿದ್ದಾರೆ. ಎಎಮ್‌ಯುನ ಪರ್ಷಿಯನ್ ವಿಭಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಶಿಕೋಹ್‌ನ ಹೆಚ್ಚಿನ ಕೆಲಸವನ್ನು ಅಂತರ್-ಧರ್ಮೀಯ ಸಂವಾದದಲ್ಲಿ ಭಾಷಾಂತರಿಸಲು ಮತ್ತು ಅವರನ್ನು ಮುಸ್ಲಿಂ ಸಮುದಾಯಕ್ಕೆ ಆದರ್ಶವಾಗಿ ತೋರಿಸಿದ್ದಾರೆ. ಇದೇ ವಿಚಾರದಲ್ಲಿ ವಿಚಾರ ಸಂಕಿರಣ, ಸಮ್ಮೇಳನಗಳನ್ನು ಅವರು ಆಯೋಜಿಸಿದ್ದರು.

ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಬಗ್ಗೆ ಮೌನವೇಕೆ?: ಸ್ಮೃತಿ ಇರಾನಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ಸರ್ಜನ್ ಆಗಿರುವ ಮನ್ಸೂರ್ ವಿಶ್ವವಿದ್ಯಾನಿಲಯದ JN ವೈದ್ಯಕೀಯ ಕಾಲೇಜಿನಿಂದ ಶಸ್ತ್ರಚಿಕಿತ್ಸೆಯಲ್ಲಿ MBBS ಪದವಿಯನ್ನು ಪೂರ್ಣಗೊಳಿಸಿದಾಗ 1970 ರಿಂದ AMU ನೊಂದಿಗೆ ಸಂಬಂಧ ಹೊಂದಿದ್ದಾರೆ. ನಂತರ ಅವರು 1982 ರಲ್ಲಿ ಅದೇ ಕಾಲೇಜಿನಲ್ಲಿ ತಮ್ಮ ಮಾಸ್ಟರ್ ಆಫ್ ಸರ್ಜರಿ (MS) ಪದವಿಯನ್ನು ಪಡೆದರು.

ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥ ಜಮಾಲ್ ಸಿದ್ದಿಕಿ, ಮನ್ಸೂರ್ ಅವರು “ರಾಷ್ಟ್ರೀಯ ಮುಸ್ಲಿಂ” ಆಗಿದ್ದು, ಅವರು ಯಾವಾಗಲೂ “ದೇಶ ಮೊದಲು” ಎಂಬ ಆದರ್ಶವನ್ನು ಪ್ರಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬುಕ್ಕಲ್ ನವಾಬ್, ಮೊಹ್ಸಿನ್ ರಜಾ ಮತ್ತು ಡ್ಯಾನಿಶ್ ಆಜಾದ್ ಅನ್ಸಾರಿ ನಂತರ 2017 ರಿಂದ ಯುಪಿಯಲ್ಲಿ ಪಕ್ಷದಿಂದ ಶಾಸಕಾಂಗ ಮಂಡಳಿಗೆ ಬಡ್ತಿ ಪಡೆದ ಮುಸ್ಲಿಂ ಸಮುದಾಯದ ನಾಲ್ಕನೇ ವ್ಯಕ್ತಿ ಮನ್ಸೂರ್ ಆಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Sat, 29 July 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us