AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೆ ಮೂರು ದಿನ ಇರುವಾಗ ಯುವತಿಯ ಅಪಹರಣ, ಅತ್ಯಾಚಾರ; ಬಿಜೆಪಿ ಮುಖಂಡ ಸೇರಿ ಇಬ್ಬರ ವಿರುದ್ಧ ಕೇಸ್​ ದಾಖಲು

ವಾಪಸ್ ಬಂದ ಬಳಿಕ ಯುವತಿ ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾಳೆ. ನಾನು ಮನೆಯ ಹೊರಗೆ ಇದ್ದಾಗ, ಅಲ್ಲಿಂದಲೇ ನನ್ನನ್ನು ಕೋಮಲ್​ ಗುಪ್ತಾ ಮತ್ತು ಧರ್ಮೇಂದ್ರ ಗುಪ್ತಾ ಅಪಹರಿಸಿದ್ದಾರೆ. ನನ್ನ ಮೂಗಿಗೆ ಮತ್ತು ಬರುವ ಔಷಧ ಹಿಡಿದು ಎಚ್ಚರ ತಪ್ಪಿಸಲಾಗಿತ್ತು ಎಂದಿದ್ದಾರೆ.

ಮದುವೆಗೆ ಮೂರು ದಿನ ಇರುವಾಗ ಯುವತಿಯ ಅಪಹರಣ, ಅತ್ಯಾಚಾರ; ಬಿಜೆಪಿ ಮುಖಂಡ ಸೇರಿ ಇಬ್ಬರ ವಿರುದ್ಧ ಕೇಸ್​ ದಾಖಲು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 20, 2022 | 5:28 PM

Share

ಯುವತಿಯನ್ನು ಅಪಹರಣ ಮಾಡಿ, ಅತ್ಯಾಚಾರ ಮಾಡಿದ ಆರೋಪದಡಿ ಮಧ್ಯಪ್ರದೇಶದ ಸಿಂಗ್ರೌಲಿಯ ಬಿಜೆಪಿ ಮುಖಂಡ ಮತ್ತು ಆತನ ಬಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಬಿಜೆಪಿಯ ಸರೈ ಮಂಡಲ ಅಧ್ಯಕ್ಷ ಕೋಮಲ್​ ಗುಪ್ತಾ ಮತ್ತು ಆತನ ಬಾವ ಧರ್ಮೇಂದ್ರ ಗುಪ್ತಾ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದು, ಇದರಲ್ಲಿ ಧರ್ಮೇಂದ್ರ ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಕೋಮಲ್​ ಗುಪ್ತಾ ಇನ್ನೂ ಸಿಕ್ಕಿಲ್ಲ.

ಇದು ಜನವರಿಯಲ್ಲಿ ನಡೆದ ಘಟನೆ. ಈ ಯುವತಿಯ ವಿವಾಹ ಇನ್ನು ಮೂರು ದಿನ ಇದೆ ಎನ್ನುವಾಗ ಅಂದರೆ ಜನವರಿ 27ರಂದು ಆಕೆಯನ್ನು ಅಪಹರಣ ಮಾಡಲಾಗಿತ್ತು. ಅದೇ ದಿನ ಸಂಜೆ ಹೊತ್ತಿಗೆ ಹುಡುಗಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿ, ನಮ್ಮ ಮಗಳು ಕಾಣಿಸುತ್ತಿಲ್ಲ ಎಂದು ಹೇಳಿದ್ದರು. ಅಂದಿನಿಂದಲೂ ಹುಡುಕಾಟ ನಡೆಸಿದ್ದ ಪೊಲೀಸರು ಸಂತ್ರಸ್ತೆಯನ್ನು ಫೆ.19ರಂದು ಬಾಲಾಘಾಟ್​ ಬಳಿ ರಕ್ಷಿಸಿದ್ದಾರೆ.

ವಾಪಸ್ ಬಂದ ಬಳಿಕ ಯುವತಿ ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾಳೆ. ನಾನು ಮನೆಯ ಹೊರಗೆ ಇದ್ದಾಗ, ಅಲ್ಲಿಂದಲೇ ನನ್ನನ್ನು ಕೋಮಲ್​ ಗುಪ್ತಾ ಮತ್ತು ಧರ್ಮೇಂದ್ರ ಗುಪ್ತಾ ಅಪಹರಿಸಿದ್ದಾರೆ. ನನ್ನ ಮೂಗಿಗೆ ಮತ್ತು ಬರುವ ಔಷಧ ಹಿಡಿದು ಎಚ್ಚರ ತಪ್ಪಿಸಲಾಗಿತ್ತು. ಕೆಲವು ಹೊತ್ತುಗಳ ಬಳಿಕ ನನಗೆ ಎಚ್ಚರವಾಯ್ತು. ಆಗ ನಾನು ಜಬಲ್ಪುರದ ಸಮೀಪ ಎಲ್ಲೋ ಇದ್ದಿದ್ದು ಗೊತ್ತಾಯ್ತು. ಅಲ್ಲಿ ಧರ್ಮೇಂದ್ರ ಗುಪ್ತಾ ಮತ್ತು ಕೋಮಲ್​ ಗುಪ್ತಾ ಪ್ರತ್ಯೇಕ ದಾರಿ ಹಿಡಿದರು. ಧರ್ಮೇಂದ್ರ ಗುಪ್ತಾ ನನ್ನನ್ನು ಕರೆದುಕೊಂಡು, ತನ್ನ ಆಂಟಿಯ ಮನೆಗೆ ಹೋಗಿದ್ದಲ್ಲದೆ, ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಂಗ್ರೌಲಿ ಎಸ್​​ಪಿ ಬೀರೇಂದ್ರ ಕುಮಾರ್​ ಸಿಂಗ್​, ಧರ್ಮೇಂದ್ರ ಗುಪ್ತಾ ಮುಖ್ಯ ಆರೋಪಿ. ಈತನೇ ರೇಪ್​ ಮಾಡಿದ್ದಾಗಿ ಸಂತ್ರಸ್ತ ಯುವತಿ ಹೇಳಿಕೊಂಡಿದ್ದಾಳೆ. ಇನ್ನು ಈತನಿಗೆ ಕೋಮಲ್​ ಗುಪ್ತಾ ಸಹಾಯ ಮಾಡಿದ್ದಾನೆ. ಮುಖ್ಯ ಆರೋಪಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿಯ ಮೊಬೈಲ್ ಕದ್ದವರ ಬಂಧನ; ಆರೋಪಿಗಳ ಮೇಲಿತ್ತು 35ಕ್ಕೂ ಹೆಚ್ಚು ಸುಲಿಗೆ ಕೇಸ್!

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ