AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣಾನಗರ: ಮಹುವಾ ಮೊಯಿತ್ರಾಗೆ ಪೈಪೋಟಿ ನೀಡಲು ರಾಜಮಾತೆಯನ್ನು ಕಣಕ್ಕಿಳಿಸಲಿದೆಯೇ ಬಿಜೆಪಿ?

ಬಿಜೆಪಿ ಸೇರಿದ ರಾಣಿ ಮಾ ಅಮೃತಾ ರಾಯ್, 'ನನ್ನ ಜತೆಗೆ ಇರಿ, ಎಲ್ಲರೂ ನನ್ನನ್ನು ಬೆಂಬಲಿಸಿ. ನಾನು ಖಂಡಿತವಾಗಿಯೂ ಮತ್ತೆ ಗೆಲ್ಲುತ್ತೇನೆ ಎಂದಿದ್ದಾರೆ. ಆದರೆ, ಕೃಷ್ಣಾನಗರದ ಯಾವುದೇ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಉನ್ನತ ನಾಯಕತ್ವ ಅಧಿಕೃತವಾಗಿ ಪ್ರಕಟಿಸಿಲ್ಲ. ಕೃಷ್ಣಾನಗರದ ರಾಣಿ ಮಾ, ಸುವೇಂದು  ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

ಕೃಷ್ಣಾನಗರ: ಮಹುವಾ ಮೊಯಿತ್ರಾಗೆ ಪೈಪೋಟಿ ನೀಡಲು ರಾಜಮಾತೆಯನ್ನು ಕಣಕ್ಕಿಳಿಸಲಿದೆಯೇ ಬಿಜೆಪಿ?
ಅಮೃತಾ ರಾಯ್
ರಶ್ಮಿ ಕಲ್ಲಕಟ್ಟ
|

Updated on: Mar 21, 2024 | 4:37 PM

Share

ಕೃಷ್ಣಾನಗರ  ಮಾರ್ಚ್ 21:  ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ (BJP) ಮತ್ತೊಂದು ದೊಡ್ಡ ಅಚ್ಚರಿ. ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳ ನಡುವೆ ಪಶ್ಚಿಮ ಬಂಗಾಳದ ಕೃಷ್ಣಾನಗರದ (Krishnanagar) ರಾಜಮಾತೆ ಅಮೃತಾ ರಾಯ್(Amrita Roy) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೃಷ್ಣಾನಗರದ ರಾಜವಂಶಸ್ಥ ವಧು ಬುಧವಾರ ನಾಡಿಯಾದ ಕೃಷ್ಣಾನಗರದಲ್ಲಿರುವ ಬಿಜೆಪಿಯ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಸುವೇಂದು ಅಧಿಕಾರಿಯ ಕೈ ಹಿಡಿದು ಬಿಜೆಪಿ ಸೇರಿದರು. ಕಳೆದ ಕೆಲವು ದಿನಗಳಿಂದ ರಾಜಮಾತೆ ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಕೊನೆಗೂ ಇಂದು ಆ ಊಹೆ ನಿಜವಾಯಿತು. ಹಾಗಾದರೆ, ಮಹುವಾ ವಿರುದ್ಧ ಹೋರಾಡಲು ಬಿಜೆಪಿ ಕೃಷ್ಣಾನಗರದ ರಾಜಮಾತೆಯನ್ನು ಆಯ್ಕೆ ಮಾಡಲಿದೆಯೇ?

ಬಿಜೆಪಿ ಸೇರಿದ ರಾಣಿ ಮಾ ಅಮೃತಾ ರಾಯ್, ‘ನನ್ನ ಜತೆಗೆ ಇರಿ, ಎಲ್ಲರೂ ನನ್ನನ್ನು ಬೆಂಬಲಿಸಿ. ನಾನು ಖಂಡಿತವಾಗಿಯೂ ಮತ್ತೆ ಗೆಲ್ಲುತ್ತೇನೆ ಎಂದಿದ್ದಾರೆ. ಆದರೆ, ಕೃಷ್ಣಾನಗರದ ಯಾವುದೇ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಉನ್ನತ ನಾಯಕತ್ವ ಅಧಿಕೃತವಾಗಿ ಪ್ರಕಟಿಸಿಲ್ಲ. ಕೃಷ್ಣಾನಗರದ ರಾಣಿ ಮಾ, ಸುವೇಂದು  ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

‘ನಾನು ರಾಜಕಾರಣಿಯಲ್ಲ. ಆದರೆ ನಾನು ನನ್ನ 1000 ಪ್ರತಿಶತದಿಂದ ಪ್ರಯತ್ನಿಸುತ್ತೇನೆ, ಇದರಿಂದ ಸಮಾಜವು ಉತ್ತಮವಾಗಿರುತ್ತದೆ. ವಂಚಿತರಾದವರು ಇನ್ನು ಮುಂದೆ ವಂಚಿತರಾಗದಂತೆ ಚೆನ್ನಾಗಿರಲಿ’ ಎಂದಿದ್ದಾರೆ.

ಇದನ್ನೂ ಓದಿ: ಬಹರಂಪುರದಲ್ಲಿ ಯೂಸಫ್ ಪಠಾಣ್​​ನ್ನು ಕಣಕ್ಕಿಳಿಸಿದ ಟಿಎಂಸಿ; ಬೌನ್ಸರ್ ನಿಭಾಯಿಸಬಲ್ಲರೇ ಕಾಂಗ್ರೆಸ್​​ನ ಅಧೀರ್ ಚೌಧರಿ?

ಕೃಷ್ಣಾನಗರದ ರಾಜಮಾತೆ

ಅಮೃತಾ ರಾಯ್ ಕೃಷ್ಣನಗರದ ರಾಜಮಾತೆ. ರಾಜಾ ಕೃಷ್ಣಚಂದ್ರ 1710 ರಲ್ಲಿ ಜನಿಸಿದರು. ಅವರು 1783 ರವರೆಗೆ ಬದುಕಿದ್ದು 1728 ರಿಂದ 1782 ರವರೆಗಿನ ಅವರ ಜೀವಿತಾವಧಿಯಲ್ಲಿ ನಾಡಿಯಾದ ರಾಜ ಮತ್ತು ಜಮೀನ್ದಾರರಾಗಿದ್ದರು. ಅವರು ನಾಡಿಯಾ ರಾಜ್ ಕುಟುಂಬ ಮತ್ತು ಶಾಕ್ತ ಹಿಂದೂ ಸಂಪ್ರದಾಯಕ್ಕೆ ಸೇರಿದವರು. ಅವರು ಮೊಘಲ್ ಆಳ್ವಿಕೆಯನ್ನು ವಿರೋಧಿಸಲು ಹೆಸರುವಾಸಿಯಾಗಿದ್ದಾರೆ. ತನ್ನ ಸಾಮ್ರಾಜ್ಯದಲ್ಲಿ ಕಲೆಯ ವಿಸ್ತರಣೆ ಮತ್ತು ಪೋಷಣೆ ಮಾಡಿದ್ದಾರೆ. ಅಮೃತಾ ರಾಯ್ ಈ ಕುಟುಂಬದ ಸದಸ್ಯರಾಗಿದ್ದು, ಪ್ರಸ್ತುತ ರಾಜ ಮಾತೆ ಆಗಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಮಹುವಾ ಮೊಯಿತ್ರಾ ಅವರು ಕಳೆದ ಬಾರಿ 63,218 ಮತಗಳಿಂದ ಗೆದ್ದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ