Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣಾನಗರ: ಮಹುವಾ ಮೊಯಿತ್ರಾಗೆ ಪೈಪೋಟಿ ನೀಡಲು ರಾಜಮಾತೆಯನ್ನು ಕಣಕ್ಕಿಳಿಸಲಿದೆಯೇ ಬಿಜೆಪಿ?

ಬಿಜೆಪಿ ಸೇರಿದ ರಾಣಿ ಮಾ ಅಮೃತಾ ರಾಯ್, 'ನನ್ನ ಜತೆಗೆ ಇರಿ, ಎಲ್ಲರೂ ನನ್ನನ್ನು ಬೆಂಬಲಿಸಿ. ನಾನು ಖಂಡಿತವಾಗಿಯೂ ಮತ್ತೆ ಗೆಲ್ಲುತ್ತೇನೆ ಎಂದಿದ್ದಾರೆ. ಆದರೆ, ಕೃಷ್ಣಾನಗರದ ಯಾವುದೇ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಉನ್ನತ ನಾಯಕತ್ವ ಅಧಿಕೃತವಾಗಿ ಪ್ರಕಟಿಸಿಲ್ಲ. ಕೃಷ್ಣಾನಗರದ ರಾಣಿ ಮಾ, ಸುವೇಂದು  ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

ಕೃಷ್ಣಾನಗರ: ಮಹುವಾ ಮೊಯಿತ್ರಾಗೆ ಪೈಪೋಟಿ ನೀಡಲು ರಾಜಮಾತೆಯನ್ನು ಕಣಕ್ಕಿಳಿಸಲಿದೆಯೇ ಬಿಜೆಪಿ?
ಅಮೃತಾ ರಾಯ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 21, 2024 | 4:37 PM

ಕೃಷ್ಣಾನಗರ  ಮಾರ್ಚ್ 21:  ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ (BJP) ಮತ್ತೊಂದು ದೊಡ್ಡ ಅಚ್ಚರಿ. ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳ ನಡುವೆ ಪಶ್ಚಿಮ ಬಂಗಾಳದ ಕೃಷ್ಣಾನಗರದ (Krishnanagar) ರಾಜಮಾತೆ ಅಮೃತಾ ರಾಯ್(Amrita Roy) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೃಷ್ಣಾನಗರದ ರಾಜವಂಶಸ್ಥ ವಧು ಬುಧವಾರ ನಾಡಿಯಾದ ಕೃಷ್ಣಾನಗರದಲ್ಲಿರುವ ಬಿಜೆಪಿಯ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಸುವೇಂದು ಅಧಿಕಾರಿಯ ಕೈ ಹಿಡಿದು ಬಿಜೆಪಿ ಸೇರಿದರು. ಕಳೆದ ಕೆಲವು ದಿನಗಳಿಂದ ರಾಜಮಾತೆ ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಕೊನೆಗೂ ಇಂದು ಆ ಊಹೆ ನಿಜವಾಯಿತು. ಹಾಗಾದರೆ, ಮಹುವಾ ವಿರುದ್ಧ ಹೋರಾಡಲು ಬಿಜೆಪಿ ಕೃಷ್ಣಾನಗರದ ರಾಜಮಾತೆಯನ್ನು ಆಯ್ಕೆ ಮಾಡಲಿದೆಯೇ?

ಬಿಜೆಪಿ ಸೇರಿದ ರಾಣಿ ಮಾ ಅಮೃತಾ ರಾಯ್, ‘ನನ್ನ ಜತೆಗೆ ಇರಿ, ಎಲ್ಲರೂ ನನ್ನನ್ನು ಬೆಂಬಲಿಸಿ. ನಾನು ಖಂಡಿತವಾಗಿಯೂ ಮತ್ತೆ ಗೆಲ್ಲುತ್ತೇನೆ ಎಂದಿದ್ದಾರೆ. ಆದರೆ, ಕೃಷ್ಣಾನಗರದ ಯಾವುದೇ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಉನ್ನತ ನಾಯಕತ್ವ ಅಧಿಕೃತವಾಗಿ ಪ್ರಕಟಿಸಿಲ್ಲ. ಕೃಷ್ಣಾನಗರದ ರಾಣಿ ಮಾ, ಸುವೇಂದು  ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

‘ನಾನು ರಾಜಕಾರಣಿಯಲ್ಲ. ಆದರೆ ನಾನು ನನ್ನ 1000 ಪ್ರತಿಶತದಿಂದ ಪ್ರಯತ್ನಿಸುತ್ತೇನೆ, ಇದರಿಂದ ಸಮಾಜವು ಉತ್ತಮವಾಗಿರುತ್ತದೆ. ವಂಚಿತರಾದವರು ಇನ್ನು ಮುಂದೆ ವಂಚಿತರಾಗದಂತೆ ಚೆನ್ನಾಗಿರಲಿ’ ಎಂದಿದ್ದಾರೆ.

ಇದನ್ನೂ ಓದಿ: ಬಹರಂಪುರದಲ್ಲಿ ಯೂಸಫ್ ಪಠಾಣ್​​ನ್ನು ಕಣಕ್ಕಿಳಿಸಿದ ಟಿಎಂಸಿ; ಬೌನ್ಸರ್ ನಿಭಾಯಿಸಬಲ್ಲರೇ ಕಾಂಗ್ರೆಸ್​​ನ ಅಧೀರ್ ಚೌಧರಿ?

ಕೃಷ್ಣಾನಗರದ ರಾಜಮಾತೆ

ಅಮೃತಾ ರಾಯ್ ಕೃಷ್ಣನಗರದ ರಾಜಮಾತೆ. ರಾಜಾ ಕೃಷ್ಣಚಂದ್ರ 1710 ರಲ್ಲಿ ಜನಿಸಿದರು. ಅವರು 1783 ರವರೆಗೆ ಬದುಕಿದ್ದು 1728 ರಿಂದ 1782 ರವರೆಗಿನ ಅವರ ಜೀವಿತಾವಧಿಯಲ್ಲಿ ನಾಡಿಯಾದ ರಾಜ ಮತ್ತು ಜಮೀನ್ದಾರರಾಗಿದ್ದರು. ಅವರು ನಾಡಿಯಾ ರಾಜ್ ಕುಟುಂಬ ಮತ್ತು ಶಾಕ್ತ ಹಿಂದೂ ಸಂಪ್ರದಾಯಕ್ಕೆ ಸೇರಿದವರು. ಅವರು ಮೊಘಲ್ ಆಳ್ವಿಕೆಯನ್ನು ವಿರೋಧಿಸಲು ಹೆಸರುವಾಸಿಯಾಗಿದ್ದಾರೆ. ತನ್ನ ಸಾಮ್ರಾಜ್ಯದಲ್ಲಿ ಕಲೆಯ ವಿಸ್ತರಣೆ ಮತ್ತು ಪೋಷಣೆ ಮಾಡಿದ್ದಾರೆ. ಅಮೃತಾ ರಾಯ್ ಈ ಕುಟುಂಬದ ಸದಸ್ಯರಾಗಿದ್ದು, ಪ್ರಸ್ತುತ ರಾಜ ಮಾತೆ ಆಗಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಮಹುವಾ ಮೊಯಿತ್ರಾ ಅವರು ಕಳೆದ ಬಾರಿ 63,218 ಮತಗಳಿಂದ ಗೆದ್ದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ