AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19 ಕೇಂದ್ರಕ್ಕೆ ಹೋಗಿ ಸಿರಿಂಜ್​ಗೆ ಔಷಧಿ ತುಂಬಿಸಿದ ಬಿಜೆಪಿ ಶಾಸಕ; 4ನೇ ಕ್ಲಾಸ್​​ವರೆಗೆ ಮಾತ್ರ ಓದಿದ್ದೀರಿ ಎಂದ ಕಾಂಗ್ರೆಸ್​

ಬಿಜೆಪಿ ಶಾಸಕರೊಬ್ಬರು ರೆಮ್​​ಡಿಸಿವಿರ್​ ಇಂಜೆಕ್ಷನ್​​ ಔಷಧಿಯನ್ನು ಸಿರಿಂಜ್​​ಗೆ ತುಂಬಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್​ನಿಂದ ಟೀಕೆಗಳ ಸುರಿಮಳೆಯೇ ಸುರಿದಿದೆ. ಗುಜರಾತ್​ನ ಸೂರತ್​​ನಲ್ಲಿರುವ ಕಾಮ್ರೇಜ್​ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಡಿ. ಜಲವಾಡಿಯಾ ಅವರು ಕೊವಿಡ್​ 19 ಕೇಂದ್ರವೊಂದರಲ್ಲಿ ಈ ಕೆಲಸ ಮಾಡಿದ್ದಾರೆ. ರೆಮ್​ಡಿಸಿವಿರ್​ನ ಪುಟ್ಟ ಬಾಟಲಿಯಿಂದ ಔಷಧಿಯನ್ನು ಸಿರಿಂಜ್​​ಗೆ ತುಂಬಿದ್ದಾರೆ. ಕೊವಿಡ್​ 19 ರೋಗಿಗೆ ಅಳವಡಿಸಲಾದ ಡ್ರಿಪ್​ ಬಾಟಲಿಗೆ ಇಂಜೆಕ್ಟ್ ಮಾಡುವ ಮೊದಲು ಬಿಜೆಪಿ ಶಾಸಕನೇ ಅದರಲ್ಲಿ ರೆಮ್​ಡಿಸಿವಿರ್​ ತುಂಬಿಸಿದ್ದಾರೆ. ಈ […]

ಕೊವಿಡ್​ 19 ಕೇಂದ್ರಕ್ಕೆ ಹೋಗಿ ಸಿರಿಂಜ್​ಗೆ ಔಷಧಿ ತುಂಬಿಸಿದ ಬಿಜೆಪಿ ಶಾಸಕ; 4ನೇ ಕ್ಲಾಸ್​​ವರೆಗೆ ಮಾತ್ರ ಓದಿದ್ದೀರಿ ಎಂದ ಕಾಂಗ್ರೆಸ್​
ಸಿರಿಂಜ್​ಗೆ ರೆಮ್​ಡಿಸಿವಿರ್ ತುಂಬಿಸಿದ ಶಾಸಕ
Lakshmi Hegde
|

Updated on: May 23, 2021 | 10:57 PM

Share

ಬಿಜೆಪಿ ಶಾಸಕರೊಬ್ಬರು ರೆಮ್​​ಡಿಸಿವಿರ್​ ಇಂಜೆಕ್ಷನ್​​ ಔಷಧಿಯನ್ನು ಸಿರಿಂಜ್​​ಗೆ ತುಂಬಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್​ನಿಂದ ಟೀಕೆಗಳ ಸುರಿಮಳೆಯೇ ಸುರಿದಿದೆ. ಗುಜರಾತ್​ನ ಸೂರತ್​​ನಲ್ಲಿರುವ ಕಾಮ್ರೇಜ್​ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಡಿ. ಜಲವಾಡಿಯಾ ಅವರು ಕೊವಿಡ್​ 19 ಕೇಂದ್ರವೊಂದರಲ್ಲಿ ಈ ಕೆಲಸ ಮಾಡಿದ್ದಾರೆ. ರೆಮ್​ಡಿಸಿವಿರ್​ನ ಪುಟ್ಟ ಬಾಟಲಿಯಿಂದ ಔಷಧಿಯನ್ನು ಸಿರಿಂಜ್​​ಗೆ ತುಂಬಿದ್ದಾರೆ. ಕೊವಿಡ್​ 19 ರೋಗಿಗೆ ಅಳವಡಿಸಲಾದ ಡ್ರಿಪ್​ ಬಾಟಲಿಗೆ ಇಂಜೆಕ್ಟ್ ಮಾಡುವ ಮೊದಲು ಬಿಜೆಪಿ ಶಾಸಕನೇ ಅದರಲ್ಲಿ ರೆಮ್​ಡಿಸಿವಿರ್​ ತುಂಬಿಸಿದ್ದಾರೆ.

ಈ ವಿಡಿಯೋ ನೋಡಿದ ಕಾಂಗ್ರೆಸ್​ ವಕ್ತಾರ ಜಯರಾಜ್​ಸಿನ್ಹ್​ ಪಾರ್ಮರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ವಿ.ಡಿ. ಜಲವಾಡಿಯಾರಿಂದ ಗುಜರಾತ್​ನ ಆರೋಗ್ಯ ಸಚಿವ ನಿತಿನ್​ ಪಟೇಲ್​ ಅವರು ಸ್ಫೂರ್ತಿ ಪಡೆಯಬೇಕು. ಬಿಜೆಪಿ ಕಾರ್ಯಕರ್ತರಿಗೆ ಇಂಜೆಕ್ಷನ್​ ನೀಡುವ ತರಬೇತಿ ನೀಡುವ ಕೇಂದ್ರವೊಂದನ್ನು ತೆರೆಯಬೇಕು ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ರಾಜ್ಯದಲ್ಲಿ ವೈದ್ಯರು, ನರ್ಸ್​ಗಳು, ಆರೋಗ್ಯ ಸಿಬ್ಬಂದಿ ಮತ್ತು ಪ್ಯಾರಾ ಮೆಡಿಕಲ್​ ಸಿಬ್ಬಂದಿಯ ಅಭಾವ ಇದೆ. ಹಾಗಾಗಿ ಆರೋಗ್ಯ ಸಚಿವರು ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ನೀಡಲಿ ಎಂದು ಟೀಕೆ ಮಾಡಿರುವ ಅವರು, ಸೂರತ್​ ಶಾಸಕ ವಿ.ಡಿ. ಜಲವಾಡಿಯಾ 4ನೇ ತರಗತಿವರೆಗೆ ಓದಿದ್ದಾರೆ. ಅವರೀಗ ಹೋಗಿ ಇಂಜೆಕ್ಷನ್​ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೆ ಏರಿದ ಭಾರತ; ಮೊದಲೆರಡು ಸ್ಥಾನ ಯಾವ ದೇಶಗಳಿಗೆ?

PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!

Follow Us
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!