AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19 ಕೇಂದ್ರಕ್ಕೆ ಹೋಗಿ ಸಿರಿಂಜ್​ಗೆ ಔಷಧಿ ತುಂಬಿಸಿದ ಬಿಜೆಪಿ ಶಾಸಕ; 4ನೇ ಕ್ಲಾಸ್​​ವರೆಗೆ ಮಾತ್ರ ಓದಿದ್ದೀರಿ ಎಂದ ಕಾಂಗ್ರೆಸ್​

ಬಿಜೆಪಿ ಶಾಸಕರೊಬ್ಬರು ರೆಮ್​​ಡಿಸಿವಿರ್​ ಇಂಜೆಕ್ಷನ್​​ ಔಷಧಿಯನ್ನು ಸಿರಿಂಜ್​​ಗೆ ತುಂಬಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್​ನಿಂದ ಟೀಕೆಗಳ ಸುರಿಮಳೆಯೇ ಸುರಿದಿದೆ. ಗುಜರಾತ್​ನ ಸೂರತ್​​ನಲ್ಲಿರುವ ಕಾಮ್ರೇಜ್​ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಡಿ. ಜಲವಾಡಿಯಾ ಅವರು ಕೊವಿಡ್​ 19 ಕೇಂದ್ರವೊಂದರಲ್ಲಿ ಈ ಕೆಲಸ ಮಾಡಿದ್ದಾರೆ. ರೆಮ್​ಡಿಸಿವಿರ್​ನ ಪುಟ್ಟ ಬಾಟಲಿಯಿಂದ ಔಷಧಿಯನ್ನು ಸಿರಿಂಜ್​​ಗೆ ತುಂಬಿದ್ದಾರೆ. ಕೊವಿಡ್​ 19 ರೋಗಿಗೆ ಅಳವಡಿಸಲಾದ ಡ್ರಿಪ್​ ಬಾಟಲಿಗೆ ಇಂಜೆಕ್ಟ್ ಮಾಡುವ ಮೊದಲು ಬಿಜೆಪಿ ಶಾಸಕನೇ ಅದರಲ್ಲಿ ರೆಮ್​ಡಿಸಿವಿರ್​ ತುಂಬಿಸಿದ್ದಾರೆ. ಈ […]

ಕೊವಿಡ್​ 19 ಕೇಂದ್ರಕ್ಕೆ ಹೋಗಿ ಸಿರಿಂಜ್​ಗೆ ಔಷಧಿ ತುಂಬಿಸಿದ ಬಿಜೆಪಿ ಶಾಸಕ; 4ನೇ ಕ್ಲಾಸ್​​ವರೆಗೆ ಮಾತ್ರ ಓದಿದ್ದೀರಿ ಎಂದ ಕಾಂಗ್ರೆಸ್​
ಸಿರಿಂಜ್​ಗೆ ರೆಮ್​ಡಿಸಿವಿರ್ ತುಂಬಿಸಿದ ಶಾಸಕ
Lakshmi Hegde
|

Updated on: May 23, 2021 | 10:57 PM

Share

ಬಿಜೆಪಿ ಶಾಸಕರೊಬ್ಬರು ರೆಮ್​​ಡಿಸಿವಿರ್​ ಇಂಜೆಕ್ಷನ್​​ ಔಷಧಿಯನ್ನು ಸಿರಿಂಜ್​​ಗೆ ತುಂಬಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್​ನಿಂದ ಟೀಕೆಗಳ ಸುರಿಮಳೆಯೇ ಸುರಿದಿದೆ. ಗುಜರಾತ್​ನ ಸೂರತ್​​ನಲ್ಲಿರುವ ಕಾಮ್ರೇಜ್​ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಡಿ. ಜಲವಾಡಿಯಾ ಅವರು ಕೊವಿಡ್​ 19 ಕೇಂದ್ರವೊಂದರಲ್ಲಿ ಈ ಕೆಲಸ ಮಾಡಿದ್ದಾರೆ. ರೆಮ್​ಡಿಸಿವಿರ್​ನ ಪುಟ್ಟ ಬಾಟಲಿಯಿಂದ ಔಷಧಿಯನ್ನು ಸಿರಿಂಜ್​​ಗೆ ತುಂಬಿದ್ದಾರೆ. ಕೊವಿಡ್​ 19 ರೋಗಿಗೆ ಅಳವಡಿಸಲಾದ ಡ್ರಿಪ್​ ಬಾಟಲಿಗೆ ಇಂಜೆಕ್ಟ್ ಮಾಡುವ ಮೊದಲು ಬಿಜೆಪಿ ಶಾಸಕನೇ ಅದರಲ್ಲಿ ರೆಮ್​ಡಿಸಿವಿರ್​ ತುಂಬಿಸಿದ್ದಾರೆ.

ಈ ವಿಡಿಯೋ ನೋಡಿದ ಕಾಂಗ್ರೆಸ್​ ವಕ್ತಾರ ಜಯರಾಜ್​ಸಿನ್ಹ್​ ಪಾರ್ಮರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ವಿ.ಡಿ. ಜಲವಾಡಿಯಾರಿಂದ ಗುಜರಾತ್​ನ ಆರೋಗ್ಯ ಸಚಿವ ನಿತಿನ್​ ಪಟೇಲ್​ ಅವರು ಸ್ಫೂರ್ತಿ ಪಡೆಯಬೇಕು. ಬಿಜೆಪಿ ಕಾರ್ಯಕರ್ತರಿಗೆ ಇಂಜೆಕ್ಷನ್​ ನೀಡುವ ತರಬೇತಿ ನೀಡುವ ಕೇಂದ್ರವೊಂದನ್ನು ತೆರೆಯಬೇಕು ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ರಾಜ್ಯದಲ್ಲಿ ವೈದ್ಯರು, ನರ್ಸ್​ಗಳು, ಆರೋಗ್ಯ ಸಿಬ್ಬಂದಿ ಮತ್ತು ಪ್ಯಾರಾ ಮೆಡಿಕಲ್​ ಸಿಬ್ಬಂದಿಯ ಅಭಾವ ಇದೆ. ಹಾಗಾಗಿ ಆರೋಗ್ಯ ಸಚಿವರು ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ನೀಡಲಿ ಎಂದು ಟೀಕೆ ಮಾಡಿರುವ ಅವರು, ಸೂರತ್​ ಶಾಸಕ ವಿ.ಡಿ. ಜಲವಾಡಿಯಾ 4ನೇ ತರಗತಿವರೆಗೆ ಓದಿದ್ದಾರೆ. ಅವರೀಗ ಹೋಗಿ ಇಂಜೆಕ್ಷನ್​ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೆ ಏರಿದ ಭಾರತ; ಮೊದಲೆರಡು ಸ್ಥಾನ ಯಾವ ದೇಶಗಳಿಗೆ?

PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ