ಬಿಜೆಪಿಯವರು ಬಿಲ್ಕಿಸ್ ಬಾನು, ಕುಸ್ತಿಪಟುಗಳಿಗೆ, ಮಣಿಪುರದ ಮಹಿಳೆಯರಿಗೆ ರಾಖಿ ಕಟ್ಟಬೇಕು: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ, ಅವರ ಪಕ್ಷ ಶಿವಸೇನಾ ಯುಬಿಟಿ ಸಭೆಯನ್ನು ಆಯೋಜಿಸುತ್ತಿದೆ. ‘ಇಂದು ರಕ್ಷಾ ಬಂಧನ.ಬಿಜೆಪಿಯವರು ಬಿಲ್ಕಿಸ್ ಬಾನೊ, ಮಣಿಪುರದ ಮಹಿಳೆಯರು, ಮಹಿಳಾ ಕುಸ್ತಿಪಟುಗಳಿಗೆ ರಾಖಿ ಕಟ್ಟಬೇಕು.ಅವರು ದೇಶದಲ್ಲಿ ಸುರಕ್ಷಿತವಾಗಿರಬೇಕು, ಅದಕ್ಕಾಗಿ ನಾವು ಒಗ್ಗೂಡಿದ್ದೇವೆ’ ಎಂದು ಠಾಕ್ರೆ ಹೇಳಿದ್ದಾರೆ.

ಮುಂಬೈ ಆಗಸ್ಟ್ 30: ಮುಂಬೈನಲ್ಲಿ ನಾಳೆ (ಗುರುವಾರ) ಆರಂಭವಾಗಲಿರುವ ಇಂಡಿಯಾ (INDIA)ಮೈತ್ರಿಕೂಟದ ಎರಡು ದಿನಗಳ ಸಭೆಗೆ ಮುಂಚಿತವಾಗಿ, ಈ ಸಭೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಸೀಟು ಹಂಚಿಕೆ ಕುರಿತು ಸಂವಾದವು ನಡೆಯಬಹುದು ಎಂದು ಅದರ ನಾಯಕರು ಸೂಚಿಸಿದ್ದಾರೆ. 28 ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ. ನಾವು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಕುಳಿತು ಚರ್ಚಿಸುತ್ತೇವೆ ಎಂದು ಹಿರಿಯ ನಾಯಕ ಶರದ್ ಪವಾರ್ (Sharad Pawar) ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾವು ಇನ್ನೂ ಸೀಟು ಹಂಚಿಕೆಗೆ ಸಂವಾದವನ್ನು ಪ್ರಾರಂಭಿಸಬೇಕಾಗಿದೆ. ನಾವು ಈ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಬಹುದು ಮತ್ತು ನಂತರ ಸೀಟು ಹಂಚಿಕೆ ಕುರಿತು ರಾಜ್ಯ ನಾಯಕರೊಂದಿಗೆ ಮಾತನಾಡಲು ನಾಯಕರಿಗೆ ಜವಾಬ್ದಾರಿಯನ್ನು ನೀಡುವ ಅವಕಾಶವಿದೆ” ಎಂದು ಅವರು ಹೇಳಿದರು.
ಉದ್ಧವ್ ಠಾಕ್ರೆ, ಅವರ ಪಕ್ಷ ಶಿವಸೇನಾ ಯುಬಿಟಿ ಸಭೆಯನ್ನು ಆಯೋಜಿಸುತ್ತಿದೆ. ‘ಇಂದು ರಕ್ಷಾ ಬಂಧನ.ಬಿಜೆಪಿಯವರು ಬಿಲ್ಕಿಸ್ ಬಾನೊ, ಮಣಿಪುರದ ಮಹಿಳೆಯರು, ಮಹಿಳಾ ಕುಸ್ತಿಪಟುಗಳಿಗೆ ರಾಖಿ ಕಟ್ಟಬೇಕು.ಅವರು ದೇಶದಲ್ಲಿ ಸುರಕ್ಷಿತವಾಗಿರಬೇಕು, ಅದಕ್ಕಾಗಿ ನಾವು ಒಗ್ಗೂಡಿದ್ದೇವೆ’ ಎಂದು ಠಾಕ್ರೆ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಕೇಂದ್ರವು ಘೋಷಿಸಿದ ಅಡುಗೆ ಅನಿಲಕ್ಕೆ ₹ 200 ಸಬ್ಸಿಡಿಗೆ ಪ್ರತಿಪಕ್ಷಗಳು ಮನ್ನಣೆ ನೀಡಿವೆ. “ಗ್ಯಾಸ್ ಸಿಲಿಂಡರ್ನ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಇದಕ್ಕೆ ಇಂಡಿಯಾ ಸಭೆಯೇ ಕಾರಣ” ಎಂದು ಠಾಕ್ರೆ ಪಕ್ಷದ ಹಿರಿಯ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
11 ಸದಸ್ಯರ ಸಮನ್ವಯ ಸಮಿತಿ ಹೆಸರಿಡುವ ನಿರೀಕ್ಷೆಯೂ ಇದೆ, ಮುಂಬೈನಲ್ಲಿ ನಡೆಯುವ ಸಭೆಯಲ್ಲಿ 11 ಮಂದಿ ಯಾರು, ಸಂಚಾಲಕರು ಯಾರು ಎಂಬಿತ್ಯಾದಿ ವಿಚಾರಗಳನ್ನು ನಿರ್ಧರಿಸುತ್ತೇವೆ, ಇವೆಲ್ಲ ಸಣ್ಣ ವಿಷಯಗಳು ಎಂದು ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯ ನಂತರ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಡಲಾಗಿತ್ತು.
ಇದನ್ನೂ ಓದಿ: ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಸಂಚಾಲಕರು ಇರಲ್ಲ, 11 ಜನರ ಸಮಿತಿ ಮಾತ್ರ
ಹೊಸ ಹೆಸರನ್ನು ಘೋಷಿಸಿದ ಕಾಂಗ್ರೆಸ್ನ ರಾಹುಲ್ ಗಾಂಧಿ, “ಹೋರಾಟವು ಎನ್ಡಿಎ ಮತ್ತು ಇಂಡಿಯಾ, ನರೇಂದ್ರ ಮೋದಿ ಮತ್ತು ಇಂಡಿಯಾ ನಡುವೆ, ಅವರ ಸಿದ್ಧಾಂತ ಮತ್ತು ಇಂಡಿಯಾ ನಡುವಿನ ಹೋರಾಟವು ಭಾರತದ ಎರಡು ವಿಭಿನ್ನ ಆಲೋಚನೆಗಳ ಬಗ್ಗೆಯಾಗಿದೆ. ಹೋರಾಟವು ಭಾರತದ ಧ್ವನಿಗಾಗಿ ಎಂದು ಹೇಳಿದರು. ಬಿಜೆಪಿ ಈ ಹೆಸರನ್ನು ಆಡಂಬರ ಎಂದು ಕರೆದಿತ್ತು ಮತ್ತು ಇಂಡಿಯಾ ವಿರುದ್ಧ ಭಾರತ್ ಪರಿಕಲ್ಪನೆಯನ್ನು ಎತ್ತಿ ಹಿಡಿದಿತ್ತು.
“ಇಂದು ಎಲ್ಲರೂ ಎನ್ಡಿಎಯ ಭಾಗವಾಗಿದ್ದಾರೆಂದು ಜನರು ನೋಡುತ್ತಿದ್ದಾರೆ.ನಾವು ಶೋಷಿತ ಮತ್ತು ವಂಚಿತ್, ಆದಿವಾಸಿಗಳು ಹಿಂದುಳಿದ ಸಮುದಾಯಗಳು ಗಾಗಿ ಕೆಲಸ ಮಾಡುತ್ತಿದ್ದಾರೆ.ಇದು ದೇಶದ ಜನತೆಗೆ ಸಮರ್ಪಿತವಾಗಿದೆ” ಎಂದು ಪ್ರಧಾನಿ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ