Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಅಪ್ಪ ನಾರಾಯಣ ಮೂರ್ತಿ ಜೊತೆ ಐಸ್ ಕ್ರೀಂ ಸವಿದ ಬ್ರಿಟನ್​​ನ ಪ್ರಥಮ ಮಹಿಳೆ ಅಕ್ಷತಾ

ಬೆಂಗಳೂರಿನ ಜಯನಗರದಲ್ಲಿರುವ ಕಾರ್ನರ್ ಹೌಸ್ ನಲ್ಲಿ ಐಸ್ ಕ್ರೀಂ ಸವಿಯುತ್ತಿರುವ ನಾರಾಯಣ ಮೂರ್ತಿ ಮತ್ತು ಅವರ ಪುತ್ರಿ ಅಕ್ಷತಾ ಮೂರ್ತಿ ಅವರ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶ್ರೀಮಂತರಾಗಿದ್ದರೂ, ಸಾಮಾನ್ಯ ಜನರಂತೆ ಹಮ್ಮು ಬಿಮ್ಮುಗಳಿಲ್ಲದೆ ಅಪ್ಪ - ಮಗಳು ಐಸ್ ಕ್ರೀಂ ತಿನ್ನುತ್ತಿರುವುದನ್ನು ನೋಡಿದಿರಾ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಅಪ್ಪ ನಾರಾಯಣ ಮೂರ್ತಿ ಜೊತೆ ಐಸ್ ಕ್ರೀಂ ಸವಿದ ಬ್ರಿಟನ್​​ನ ಪ್ರಥಮ ಮಹಿಳೆ ಅಕ್ಷತಾ
ನಾರಾಯಣ ಮೂರ್ತಿ- ಅಕ್ಷತಾ ಮೂರ್ತಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 13, 2024 | 1:13 PM

ಬೆಂಗಳೂರು ಫೆಬ್ರುವರಿ 13: ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ(Narayana Murthy) ಮತ್ತು ಅವರ ಮಗಳು ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ (Akshata Murthy) ಅವರು ಸೋಮವಾರ ಬೆಂಗಳೂರಿನಲ್ಲಿ ಒಟ್ಟಿಗೆ ಕುಳಿತು ಐಸ್‌ಕ್ರೀಂ ಸವಿಯುತ್ತಿರುವ ಫೋಟೊ ಸಾಮಾಜಿಕ  ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಜಯನಗರದಲ್ಲಿರುವ ಕಾರ್ನರ್ ಹೌಸ್‌ನಲ್ಲಿ (Corner House) ತಂದೆ-ಮಗಳು ಐಸ್ ಕ್ರೀಂ ಸವಿಯುತ್ತಿರುವ ಫೋಟೊ ಇದಾಗಿದೆ. ವರದಿಗಳ ಪ್ರಕಾರ, ಫೆಬ್ರವರಿ 10 ರಂದು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಚಿತ್ರಾ ಬ್ಯಾನರ್ಜಿ ದಿವಾಕರುಣಿ ಬರೆದ “An Uncommon Love: The Early Life of Sudha and Narayana Murthy” ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣ ಮೂರ್ತಿ ಅವರು ತಮ್ಮ ಪತ್ನಿ ಸುಧಾ ಮೂರ್ತಿ ಅವರೊಂದಿಗಿನ ಮೊದಲ ಭೇಟಿಯ ಘಟನೆಗಳನ್ನು ಹಂಚಿಕೊಂಡರು. ದಂಪತಿಗಳು 1970 ರ ದಶಕದ ಆರಂಭದಲ್ಲಿ ಭೇಟಿಯಾದರು. ದಿವಾಕರುಣಿ ಅವರ ಪುಸ್ತಕವು ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಮದುವೆಗೆ ಮುನ್ನ ಇದ್ದ ಒಡನಾಟದ ಬಗ್ಗೆ ವಿವರವಾಗಿ ಹೇಳುತ್ತದೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ಅಕ್ಷತಾ ಮತ್ತು ನಾರಾಯಣ ಮೂರ್ತಿ ಅವರ ಫೋಟೊಗೆ ಕಾಮೆಂಟ್ ಮಾಡಿದ ಎಕ್ಸ್ ಬಳಕೆದಾರರೊಬ್ಬರು, “ಅಲ್ಲಿ ಜನರು ತುಂಬಿದ್ದರು…. ಅವರು ಸದ್ದಿಲ್ಲದೆ ಬಂದು ತಮ್ಮ ಐಸ್ ಕ್ರೀಂ ಖರೀದಿಸಿದರು . ಶ್ರೀಮಂತರಾದರೂ ಸರಳ ಜೀವನ. ಇದು  ನಾರಾಯಣ ಮೂರ್ತಿಯವರು ಸಾಗಿಸುತ್ತಿರುವ ಹಿರಿಮೆ.” ಎಂದು ಬರೆದಿದ್ದಾರೆ.

ಇನ್ನೊಬ್ಬ ಬಳಕೆದಾರರು “ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರು ತಮ್ಮ ತಂದೆ  ನಾರಾಯಣ ಮೂರ್ತಿ ಅವರೊಂದಿಗೆ ಜಯನಗರ ಬೆಂಗಳೂರಿನ ಕಾರ್ನರ್ ಹೌಸ್‌ನಲ್ಲಿ..ಸರಳತೆಯ ಸೌಂದರ್ಯವೆಂದರೆ ಸರಳ, ನಿರಾಭರಣ ಮತ್ತು ಜಟಿಲವಲ್ಲದ ವಿಷಯಗಳಲ್ಲಿ ಸೌಂದರ್ಯವನ್ನು ಕಾಣಬಹುದು. ” ಎಂದಿದ್ದಾರೆ.

ಒಂದು ಐಕಾನಿಕ್ ಲವ್ ಸ್ಟೋರಿ

ಆನ್ ಅನ್ ಕಾಮಲ್ ಲವ್ ಪುಸ್ತಕ  ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯನ್ನು ಹೃದಯವನ್ನು ಸ್ಪರ್ಶಿಸುವ ರೀತಿಯಲ್ಲಿ ಮಾತ್ರವಲ್ಲದೆ ನಿಮ್ಮ ತಮಾಷೆಯ ಮೂಲಕವೂ ಕಚಗುಳಿಯಿಡುತ್ತದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪುಸ್ತಕದಲ್ಲಿ, ದಿವಾಕರುಣಿ ಅವರು ಮೂರ್ತಿ ದಂಪತಿ ಜೀವನದಿಂದ ಮಹತ್ವದ ಘಟನೆಗಳು ಮತ್ತು ಸಂಭಾಷಣೆಗಳನ್ನು ಸಂಕೀರ್ಣವಾಗಿ ಆಯ್ಕೆ ಮಾಡುತ್ತಾರೆ. ಎಚ್ಚರಿಕೆಯಿಂದ ಆಯ್ಕೆಮಾಡಿದ ಘಟನೆಗಳ ಮೂಲಕ, ಅನ್‌ಕಾಮನ್ ಲವ್ ಓದುಗರನ್ನು ವಿಭಿನ್ನ ಸಮಯ ಮತ್ತು ಸ್ಥಳಕ್ಕೆ ಸಾಗಿಸುವ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: ನಾರಾಯಣ ಮೂರ್ತಿ ವಾರದ 70 ಗಂಟೆ ಕೆಲಸ ಸಲಹೆಗೆ ಉದ್ಯಮಿ ವಿನೋದ್ ಖೋಸ್ಲಾ ಬೆಂಬಲ

“ಅನ್‌ಕಾಮನ್ ಲವ್” ಬರೆಯುವುದು ಒಂದು ಮೋಡಿಮಾಡುವ ಪ್ರಯಾಣವಾಗಿದೆ. ಮೂರ್ತಿಗಳು ತಮ್ಮ ಕಥೆಯನ್ನು ಮಾತ್ರವಲ್ಲದೆ ತಮ್ಮ ನಗುವನ್ನೂ ಹಂಚಿಕೊಂಡರು, ಈ ಪುಸ್ತಕವನ್ನು ಪ್ರೀತಿ, ಜೀವನ ಮತ್ತು ಉತ್ತಮ ಹಾಸ್ಯ ಪ್ರಜ್ಞೆಯ ಆಚರಣೆಯನ್ನಾಗಿ ಮಾಡಿದರು”ಎಂದು ಸಮಾರಂಭದಲ್ಲಿ ಮಾತನಾಡಿದ ದಿವಾಕರುಣಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್