AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ಭಾಗದಲ್ಲಿ ಮಧ್ಯರಾತ್ರಿ ಡ್ರೋಣ್​ ಹಾರಾಟ; ಬಿಎಸ್​ಎಫ್​ ಯೋಧರಿಂದ ಗುಂಡಿನ ದಾಳಿ

ಅಮೃತ್​ಸರ್​​ ವಲಯದಲ್ಲಿ ಅಕ್ಟೋಬರ್​ 19-20ರ ನಡುವಿನ ರಾತ್ರಿ ಇದೇ ತರಹದ ಡ್ರೋಣ್​ವೊಂದು ಪತ್ತೆಯಾಗಿತ್ತು. ಆಗಲೂ ಸಹ ಬಿಎಸ್​ಎಫ್​ ಸೈನಿಕರು ಅದರೆಡೆಗೆ ಗುಂಡಿನ ದಾಳಿ ನಡೆಸಿದ್ದರು.

ಗಡಿ ಭಾಗದಲ್ಲಿ ಮಧ್ಯರಾತ್ರಿ ಡ್ರೋಣ್​ ಹಾರಾಟ; ಬಿಎಸ್​ಎಫ್​ ಯೋಧರಿಂದ ಗುಂಡಿನ ದಾಳಿ
ಡ್ರೋಣ್​​ ಸಾಂಕೇತಿಕ ಚಿತ್ರ
TV9 Web
| Edited By: |

Updated on: Oct 28, 2021 | 11:23 AM

Share

ಪಂಜಾಬ್​​​ನ ಅಮೃತ್​ಸರ್​​ನ ಭಾರತ-ಪಾಕಿಸ್ತಾನ ಗಡಿ (India-Pakistan Border)ಯಲ್ಲಿ ಇಂದು ಬೆಳಗ್ಗೆ ಡ್ರೋಣ್​​ವೊಂದು ಹಾರಾಟ ನಡೆಸಿತ್ತು. ಶಹ್​ಪುರ್​​ ಗಡಿಯ ಔಟ್​​ಪೋಸ್ಟ್​​​ ಬಳಿ ಮಧ್ಯರಾತ್ರಿ 12.30ರ ಹೊತ್ತಿಗೆ ಕಾಣಿಸಿಕೊಂಡ ಡ್ರೋಣ್​​ಗೆ ಗಡಿ ಭದ್ರತಾ ಪಡೆ (BSF) (BSF)ಯ 73ನೇ ಬೆಟಾಲಿಯನ್​​​ ಯೋಧರು ಗುಂಡು ಹಾರಿಸಿದ್ದಾರೆ. ಇವರು ಒಂದೇ ಸಮ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಡ್ರೋಣ್​ ಪಾಕಿಸ್ತಾನದತ್ತ ಹಾರಿಹೋಗಿದೆ.   

ಅಮೃತ್​ಸರ್​​ ವಲಯದಲ್ಲಿ ಅಕ್ಟೋಬರ್​ 19-20ರ ನಡುವಿನ ರಾತ್ರಿ ಇದೇ ತರಹದ ಡ್ರೋಣ್​ವೊಂದು ಪತ್ತೆಯಾಗಿತ್ತು. ಆಗಲೂ ಸಹ ಬಿಎಸ್​ಎಫ್​ ಸೈನಿಕರು ಅದರೆಡೆಗೆ ಗುಂಡಿನ ದಾಳಿ ನಡೆಸಿದ್ದರು. ಆ ಡ್ರೋಣ್​ ಹಾರಾಡಿದ ಜಾಗದಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲಿ ಒಂದು ಕೆಜಿ ಹೆರೋಯಿನ್​ ಮತ್ತು ಅದಕ್ಕೆ ಸಿಕ್ಕಿಸಿಡಲಾಗಿದ್ದ ಕಬ್ಬಿಣದ ರಿಂಗ್​​ವೊಂದು ಪತ್ತೆಯಾಗಿತ್ತು. ಇತ್ತೀಚೆಗೆ ಗಡಿ ಭಾಗಗಳಲ್ಲಿ ಡ್ರೋಣ್​​ಗಳು ಪದೇಪದೆ ಹಾರಾಟ ನಡೆಸುತ್ತಿವೆ. ಮೊಟ್ಟ ಮೊದಲು ಜೂ.27ರಂದು ಜಮ್ಮುವಿನ ಭಾರತೀಯ ವಾಯುಪಡೆ ಸ್ಟೇಶನ್​​​ನಲ್ಲಿ ಡ್ರೋಣ್​ ದಾಳಿ ಆಯಿತು. ಎರಡು ಡ್ರೋಣ್​​​ಗಳು ಅಲ್ಲಿ ಬಾಂಬ್​ ಎಸೆದ ಪರಿಣಾಮ ಇಬ್ಬರು ಸಿಬ್ಬಂದಿಗೆ ಗಾಯವಾಗಿತ್ತು.  ಹಾಗೇ, ವಾಯುನೆಲೆಯ ಒಂದು ಭಾಗವೂ ಜಖಂಗೊಂಡಿತ್ತು.

ಇದೀಗ ಜಮ್ಮು-ಕಾಶ್ಮೀರ ಸೇರಿ ಗಡಿ ಭಾಗಗಳಲ್ಲಿ ಡ್ರೋಣ್​​ಗಳ ಹಾರಾಟ ಹೆಚ್ಚುತ್ತಿರುವುದರಿಂದ ಅವುಗಳ ಮೇಲೆ ಕಣ್ಣಿಡಲೆಂದೇ ಹೆಚ್ಚಿನ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶ್ರೀನಗರ ಮತ್ತು ಜಮ್ಮು ಏರ್​​ ಫೋರ್ಸ್​ ಸ್ಟೇಶನ್​​ಗಳಲ್ಲಿ ಕೂಡ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG)ಯನ್ನು ನಿಯೋಜಿಸಲಾಗಿದೆ. ಹೀಗೆ ಪಾಕಿಸ್ತಾನದಿಂದ ಬರುವ ಡ್ರೋಣಗಳು ಗಡಿ ಭಾಗಗಳಲ್ಲಿ ಉಗ್ರರಿಗೆ ಮಾದಕ ದ್ರವ್ಯ, ಮಾರಕ ಅಸ್ತ್ರಗಳ ಸರಬರಾಜು ಮಾಡುತ್ತಿರುವ ಬಗ್ಗೆಯೂ ವರದಿಯಾಗಿದೆ.

ಇದನ್ನೂ ಓದಿ: ಪುರಾಣ ಪ್ರಸಿದ್ಧ ಹಾಸನಾಂಬೆ ದರ್ಶನೋತ್ಸವ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

KL Rahul: ಮೆಗಾ ಹರಾಜಿಗೂ ಮುನ್ನ ಬಿಗ್ ಶಾಕ್: ಕೆಎಲ್ ರಾಹುಲ್ ಬಗ್ಗೆ ಪಂಜಾಬ್ ಕಿಂಗ್ಸ್​ನಿಂದ ಅಚ್ಚರಿ ಹೇಳಿಕೆ

Follow Us
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ