AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಕೇಸ್​​; 11 ಮಂದಿಯನ್ನು ಬಂಧಿಸಿದ ಸಿಬಿಐ

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರ, ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣವನ್ನು ಕೋಲ್ಕತ್ತ ಹೈಕೋರ್ಟ್​ ಆಗಸ್ಟ್​ನಲ್ಲಿ ಸಿಬಿಐಗೆ ವಹಿಸಿದೆ. ಅದಕ್ಕೆ ಸಂಬಂಧಪಟ್ಟಂತೆ ಸಿಬಿಐ ಇದೀಗ 5ನೇ ಚಾರ್ಜ್​ಶೀಟ್​ ಸಲ್ಲಿಸಿದೆ.

ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಕೇಸ್​​; 11 ಮಂದಿಯನ್ನು ಬಂಧಿಸಿದ ಸಿಬಿಐ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Oct 10, 2021 | 11:58 AM

ನಂದಿಗ್ರಾಮ: ಮೇ 2ರಂದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ (West Bengal Assembly Election)ಯ ಫಲಿತಾಂಶ ಪ್ರಕಟವಾದ ಬಳಿಕ ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ (BJP Worker) ದೇವವ್ರತ ಮೈತಿ ಎಂಬುವರ ಹತ್ಯೆಯಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಇದೀಗ ಕೇಂದ್ರೀಯ ತನಿಖಾ ದಳ (CBI) 11 ಮಂದಿಯನ್ನು ಬಂಧಿಸಿದೆ.  ಇವರಷ್ಟೂ ಜನರನ್ನು ಪಶ್ಚಿಮ ಮೇದಿನಿಪುರದಿಂದ ಬಂಧಿಸಲಾಗಿದೆ. ಇದೀಗ ಸಿಬಿಐ ಬಂಧಿಸಿದವರಲ್ಲಿ ಟಿಎಂಸಿ ನಾಯಕ, ಮಮತಾ ಬ್ಯಾನರ್ಜಿ ಆಪ್ತರಲ್ಲಿ ಒಬ್ಬರಾದ ಶೇಖ್​​ ಸುಫ್ಯಾನ್​ರ ಅಳಿಯ ಶೇಖ್​ ಹಕಿಬುಲ್​​ ಕೂಡ ಇದ್ದಾರೆ.  ಶೇಖ್​ ಸುಫ್ಯಾನ್​ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರ ಚುನಾವಣಾ ಏಜೆಂಟ್​ ಕೂಡ ಆಗಿದ್ದರು.

ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಸಿಬಿಐ 11 ಮಂದಿಯನ್ನು ಬಂಧಿಸುತ್ತಿದ್ದಂತೆ ಇತ್ತ ಟಿಎಂಸಿ ನಾಯಕರು ಸಿಬಿಐ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಸಿಬಿಐ ಬಿಜೆಪಿಗೆ ತಕ್ಕಂತೆ ಕುಣಿಯುತ್ತಿದೆ. ಬಿಜೆಪಿ ಕೂಡ ಸಿಬಿಐ ಮೂಲಕ ನಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದಿದ್ದಾರೆ. ಆದರೆ ಬಿಜೆಪಿ ಈ ಆರೋಪವನ್ನು ಅಲ್ಲಗಳೆದಿದೆ. ಸಿಬಿಐ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಅಲ್ಲ. ಕೋಲ್ಕತ್ತ ಹೈಕೋರ್ಟ್​ ಆದೇಶ ನೀಡಿದ್ದರಿಂದ ಅದು ತನಿಖೆ ನಡೆಸುತ್ತಿದೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರ, ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣವನ್ನು ಕೋಲ್ಕತ್ತ ಹೈಕೋರ್ಟ್​ ಆಗಸ್ಟ್​ನಲ್ಲಿ ಸಿಬಿಐಗೆ ವಹಿಸಿದೆ. ಅದಕ್ಕೆ ಸಂಬಂಧಪಟ್ಟಂತೆ ಸಿಬಿಐ ಇದೀಗ 5ನೇ ಚಾರ್ಜ್​ಶೀಟ್​ ಸಲ್ಲಿಸಿದೆ. ಹಾಗೇ, ಹಲ್ದಿಯಾ ಕೋರ್ಟ್​​ನಲ್ಲಿ ಚಾರ್ಜ್​ಶೀಟ್​ ಸಲ್ಲಿಸಿದ್ದಾಗಿಯೂ ಹೇಳಿಕೊಂಡಿದೆ. ಶೇಖ್ ಫತೇನೂರ್, ಶೇಖ್ ಮಿಜನೂರ್ ಮತ್ತು ಶೇಖ್ ಇಮ್ದುಲಾಲ್ ಎಂಬುವರ ವಿರುದ್ಧ ಇದೀಗ ಸಿಬಿಐ ಚಾರ್ಜ್​ಶೀಟ್​ ಹಾಕಿದ್ದು, ಈ ಮೂವರೂ ಕೂಡ ಟಿಎಂಸಿ ಕಾರ್ಯಕರ್ತರು ಎಂದೇ ಹೇಳಲಾಗಿದೆ.

ಇದನ್ನೂ ಓದಿ: Lakhimpur Kheri Violence: ಅಜಯ್​ ಮಿಶ್ರಾ ರಾಜೀನಾಮೆಗೆ ಕಾಂಗ್ರೆಸ್​ ಆಗ್ರಹ; ಅ.11ರಂದು ಮೌನವ್ರತ ಆಚರಿಸಲು ನಿರ್ಧಾರ

ದಕ್ಷಿಣ ಕನ್ನಡ: ಮೂಡುಬಿದಿರೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ; ಇಬ್ಬರು ಆರೋಪಿಗಳ ಬಂಧನ