AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI ನಲ್ಲಿ ಮತ್ತೊಂದು ಭಾರೀ ಗೋಲ್‌ಮಾಲ್‌! ಎಣ್ಣೆ ಕಂಪನಿ ಮೇಲೆ CBI ದಾಳಿ

ಭೋಪಾಲ್: ಭಾರತೀಯ ಸ್ಟೇಟ್‌ ಬ್ಯಾಂಕ್‌ಗೂ ಹಗರಣಗಳಿಗೂ ಗಳಸ್ಯ-ಕಂಠಸ್ಯ ಅಂತಾ ಕಾಣುತ್ತೆ. ಯಾಕಂದ್ರೆ ಸದಾ ಒಂದಿಲ್ಲೊಂದು ಹಗರಣಗಳಲ್ಲಿ ಬ್ಯಾಂಕಿನ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇದೆ. ಲೇಟೆಸ್ಟ್‌ ಸಮಾಚಾರ ಅಂದ್ರೆ ಮಧ್ಯಪ್ರದೇಶದ ಕಂಪನಿಯೊಂದಕ್ಕೆ ನೀಡಿದ ಸಾಲದಲ್ಲಿ ಗೋಲ್‌ಮಾಲ್‌ ಕಂಡು ಬಂದಿದ್ದು, ಸಿಬಿಐ ಈ ಕಂಪನಿಯ ಮೇಲೆ ದಾಳಿ ನಡೆಸಿದೆ. ಹೌದು ಮಧ್ಯಪ್ರದೇಶದ ಮೊರೆನಾ ನಗರದ ಕೆ ಎಸ್‌ ಆಯಿಲ್ಸ್‌ ಲಿಮಿಟೆಡ್‌ ಕಂಪನಿ ಸ್ಟೇಟ್‌ ಬ್ಯಾಂಕ್‌ನಿಂದ ಸಾಲ ಪಡೆಯುವಾಗ ತನ್ನ ಬಳಿ ಇರುವ ಸ್ವತ್ತುಗಳು ಮತ್ತು ವ್ಯಾಪಾರ ವಹಿವಾಟಿನ ಬಗ್ಗೆ ಸುಳ್ಳು […]

SBI ನಲ್ಲಿ ಮತ್ತೊಂದು ಭಾರೀ ಗೋಲ್‌ಮಾಲ್‌! ಎಣ್ಣೆ ಕಂಪನಿ ಮೇಲೆ CBI ದಾಳಿ
Guru
| Updated By: ಸಾಧು ಶ್ರೀನಾಥ್​|

Updated on: Aug 24, 2020 | 4:32 PM

Share

ಭೋಪಾಲ್: ಭಾರತೀಯ ಸ್ಟೇಟ್‌ ಬ್ಯಾಂಕ್‌ಗೂ ಹಗರಣಗಳಿಗೂ ಗಳಸ್ಯ-ಕಂಠಸ್ಯ ಅಂತಾ ಕಾಣುತ್ತೆ. ಯಾಕಂದ್ರೆ ಸದಾ ಒಂದಿಲ್ಲೊಂದು ಹಗರಣಗಳಲ್ಲಿ ಬ್ಯಾಂಕಿನ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇದೆ. ಲೇಟೆಸ್ಟ್‌ ಸಮಾಚಾರ ಅಂದ್ರೆ ಮಧ್ಯಪ್ರದೇಶದ ಕಂಪನಿಯೊಂದಕ್ಕೆ ನೀಡಿದ ಸಾಲದಲ್ಲಿ ಗೋಲ್‌ಮಾಲ್‌ ಕಂಡು ಬಂದಿದ್ದು, ಸಿಬಿಐ ಈ ಕಂಪನಿಯ ಮೇಲೆ ದಾಳಿ ನಡೆಸಿದೆ.

ಹೌದು ಮಧ್ಯಪ್ರದೇಶದ ಮೊರೆನಾ ನಗರದ ಕೆ ಎಸ್‌ ಆಯಿಲ್ಸ್‌ ಲಿಮಿಟೆಡ್‌ ಕಂಪನಿ ಸ್ಟೇಟ್‌ ಬ್ಯಾಂಕ್‌ನಿಂದ ಸಾಲ ಪಡೆಯುವಾಗ ತನ್ನ ಬಳಿ ಇರುವ ಸ್ವತ್ತುಗಳು ಮತ್ತು ವ್ಯಾಪಾರ ವಹಿವಾಟಿನ ಬಗ್ಗೆ ಸುಳ್ಳು ದಾಖಲೆ ನೀಡಿದೆ. ಹೀಗೆ ಸುಳ್ಳು ಮಾಹಿತಿ ನೀಡಿ ಪಡೆದ ಸಾಲ ಬರೋಬ್ಬರಿ 938 ಕೋಟಿ ರೂ.ಗಳು.

ಯಾವಾಗ ಸರಿಯಾಗಿ ಸಾಲ ವಸೂಲಾತಿಯಾಗಿಲ್ಲವೋ ಬ್ಯಾಂಕ್‌ ಆಡಿಟರ್‌ಗಳಿಗೆ ಅನುಮಾನ ಬಂದು ಕ್ರಾಸ್‌ ಚೆಕ್‌ ಮಾಡಿದ್ದಾರೆ. ಆಗ ಗೊತ್ತಾಗಿದೆ ಕಂಪನಿಯ ಅಸಲಿ ಗೋಲ್‌ಮಾಲ್‌. ಕೆಎಸ್‌ ಆಯಿಲ್‌ ಕಂಪನಿ ಮತ್ತು ಅದರ ಮ್ಯಾನೆಜಿಂಗ್‌ ಡೈರೆಕ್ಟರ್‌ ರಮೇಶ್‌ ಚಂದ್ರ ಗರ್ಗ್‌ ಮತ್ತು ಇತರ ನಿರ್ದೇಶಕರು ಸೇರಿ ಎಸ್‌ಬಿಐ ಬ್ಯಾಂಕ್‌ಗೆ ವ್ಯಾಪಾರ ವಹಿವಾಟಿನ ಬಗ್ಗೆ ಒಂದಕ್ಕೆ ಹತ್ತು ಸೇರಿಸಿ ತಪ್ಪು ಲೆಕ್ಕಾಚಾರ ಕೊಟ್ಟು ಉಂಡೆನಾಮ ತಿಕ್ಕಿರೋದು.

ಇದು ಗೊತ್ತಾಗುತ್ತಿದ್ದಂತೆ ಈ ಗೋಲ್‌ಮಾಲ್‌ ಬಗ್ಗೆ ಸಿಬಿಐ ತನಿಖೆಗೆ ವಹಿಸಲಾಗಿದೆ. ಈ ಸಂಬಂಧ ಈಗ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಇತರ ನಿರ್ದೇಶಕರ ಮೊರೆನಾ ಮತ್ತು ದೆಹಲಿ ನಿವಾಸಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ