40 ಕೋಟಿ ರೂ. ವಂಚನೆ ಪ್ರಕರಣ; ಆಮ್ ಆದ್ಮಿ ಪಕ್ಷದ ಶಾಸಕರ ಮನೆಯಲ್ಲಿ ಸಿಬಿಐ ಶೋಧ

ಸಿಬಿಐ ಅಧಿಕಾರಿಗಳು ಇಂದು ಮಲೇರ್‌ಕೋಟ್ಲಾ (ಪಂಜಾಬ್) ಸೇರಿದಂತೆ ಮೂರು ಸ್ಥಳಗಳಲ್ಲಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

40 ಕೋಟಿ ರೂ. ವಂಚನೆ ಪ್ರಕರಣ; ಆಮ್ ಆದ್ಮಿ ಪಕ್ಷದ ಶಾಸಕರ ಮನೆಯಲ್ಲಿ ಸಿಬಿಐ ಶೋಧ
ಆಮ್ ಆದ್ಮಿ ಪಕ್ಷದ ಶಾಸಕ ಜಸ್ವಂತ್ ಸಿಂಗ್ ಗುಜ್ಜನ್
Edited By:

Updated on: May 07, 2022 | 6:29 PM

ನವದೆಹಲಿ: 40 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಆಮ್ ಆದ್ಮಿ ಪಕ್ಷದ (Aam Aadmi Party) ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ (Jaswant Singh Gajjan) ಅವರ ನಿವಾಸದಲ್ಲಿ ಇಂದು ಕೇಂದ್ರೀಯ ತನಿಖಾ ದಳವು (CBI) ಶೋಧ ನಡೆಸುತ್ತಿದೆ. ಜಸ್ವಂತ್ ಸಿಂಗ್ ಅವರ ಮನೆ ಸೇರಿದಂತೆ ಸಂಗ್ರೂರಿನ ಮೂರು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಅಮರ್‌ಗಢದ ಶಾಸಕರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರೂರ್ ಜಿಲ್ಲೆಯ ಮಲೇರ್‌ಕೋಟ್ಲಾ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ. ಇದು ಅವರ ಪೂರ್ವಜರ ಮನೆ ಇರುವ ಸ್ಥಳವಾಗಿದೆ.

ಸಿಬಿಐ ಅಧಿಕಾರಿಗಳು ಇಂದು ಮಲೇರ್‌ಕೋಟ್ಲಾ (ಪಂಜಾಬ್) ಸೇರಿದಂತೆ ಮೂರು ಸ್ಥಳಗಳಲ್ಲಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಖಾಸಗಿ ಸಂಸ್ಥೆಗಳು, ನಿರ್ದೇಶಕರು ಸೇರಿದಂತೆ ಆರೋಪಿಗಳ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ. ಅಂದಾಜು 16.57 ಲಕ್ಷ ರೂ. ನಗದು, ಸುಮಾರು 88 ವಿದೇಶಿ ಕರೆನ್ಸಿ ನೋಟುಗಳು, ಕೆಲವು ಆಸ್ತಿ ದಾಖಲೆಗಳು, ಹಲವಾರು ಬ್ಯಾಂಕ್ ಖಾತೆಗಳು ಮತ್ತು ಇತರ ದೋಷಾರೋಪಣೆಯ ದಾಖಲೆಗಳು ಪತ್ತೆಯಾಗಿವೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.

ಮಲೇರ್‌ಕೋಟ್ಲಾದ ಗೌನ್ಸ್‌ಪುರ ಮೂಲದ ಖಾಸಗಿ ಸಂಸ್ಥೆಯೊಂದರ ವಿರುದ್ಧ ಲುಧಿಯಾನದ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಈ ದೂರಿನಲ್ಲಿ ಸಂಸ್ಥೆಯ ನಿರ್ದೇಶಕರು, ಖಾಸಗಿ ಕಂಪನಿಯ ಖಾತರಿದಾರರು, ಇನ್ನೊಂದು ಖಾಸಗಿ ಸಂಸ್ಥೆ ಮತ್ತು ಅಜ್ಞಾತ ಸಾರ್ವಜನಿಕ ಸೇವಕರು, ಖಾಸಗಿ ವ್ಯಕ್ತಿಗಳು ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಹೆಸರಿಸಲಾಗಿದೆ.

ಇದನ್ನೂ ಓದಿ
Supreme Court judges: ಒಂದೇ ದಿನ ಸುಪ್ರೀಂ ಕೋರ್ಟ್‌ಗೆ ಇಬ್ಬರು ಜಡ್ಜ್ ಗಳ ನೇಮಕ: ಯಾರವರು, ಹಿನ್ನೆಲೆಯೇನು?
ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ 7 ಮಂದಿ ಸಾವು, ಪ್ರಧಾನಿ ಮೋದಿ ಸಂತಾಪ
Cyclone Asani: ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ; ಆಂಧ್ರ, ಬಂಗಾಳ, ಒಡಿಶಾದಲ್ಲಿ ಹೈ ಅಲರ್ಟ್​ ಘೋಷಣೆ
MK Stalin: ತಮಿಳುನಾಡಿನಲ್ಲಿ 1 ವರ್ಷ ಪೂರೈಸಿದ ಎಂಕೆ ಸ್ಟಾಲಿನ್ ಸರ್ಕಾರ; ರಾಜ್ಯದ ಜನರಿಗೆ ಸಿಎಂ ಘೋಷಿಸಿದ ಯೋಜನೆಗಳಿವು

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us