AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandipura virus: ಜುಲೈನಿಂದ ಗುಜರಾತ್‌ನಲ್ಲಿ ಚಂಡೀಪುರ ವೈರಸ್​​ನಿಂದ ಸಾವಿಗೀಡಾಗಿದ್ದು 28 ಮಕ್ಕಳು: ಆರೋಗ್ಯ ಸಚಿವ

ಗುಜರಾತಿನ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಣ್ಣಿನ ಮನೆಗಳ ಬಿರುಕುಗಳು ಮತ್ತು ಕುಳಿಗಳಲ್ಲಿ ಚಂಡೀಪುರ ವೈರಸ್ ಅನ್ನು ಹೊತ್ತಿರುವ ಮರಳು ನೊಣ ವಿಶಿಷ್ಟವಾಗಿ ವಾಸಿಸುತ್ತದೆ ಎಂದು ಆರೋಗ್ಯ ಸಚಿವರು ಸದನಕ್ಕೆ ತಿಳಿಸಿದರು. ಈ ರೋಗವನ್ನು ಎದುರಿಸಲು ರಾಜ್ಯ ಸರ್ಕಾರವು ವೆಕ್ಟರ್ ನಿಯಂತ್ರಣ ಮತ್ತು ವೈರಸ್ ನಿಯಂತ್ರಣಕ್ಕಾಗಿ ವ್ಯಾಪಕವಾದ ಡ್ರೈವ್ ಅನ್ನು ಪ್ರಾರಂಭಿಸಿದೆ.

Chandipura virus: ಜುಲೈನಿಂದ ಗುಜರಾತ್‌ನಲ್ಲಿ ಚಂಡೀಪುರ ವೈರಸ್​​ನಿಂದ ಸಾವಿಗೀಡಾಗಿದ್ದು 28 ಮಕ್ಕಳು: ಆರೋಗ್ಯ ಸಚಿವ
ಮನೆಗಳಲ್ಲಿ ರೋಗ ಪರಿಶೋಧನೆ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರು
Follow us
ರಶ್ಮಿ ಕಲ್ಲಕಟ್ಟ
|

Updated on: Aug 21, 2024 | 8:54 PM

ಗಾಂಧಿನಗರ ಆಗಸ್ಟ್ 21: ಜುಲೈನಲ್ಲಿ ಮೊದಲ ಪ್ರಕರಣ ವರದಿಯಾದಾಗಿನಿಂದ ಗುಜರಾತ್‌ನಲ್ಲಿ (Gujarat) ಚಂಡೀಪುರ ವೈರಸ್ (Chandipura Virus) 14 ವರ್ಷದೊಳಗಿನ 28 ಮಕ್ಕಳನ್ನು ಬಲಿ ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಬುಧವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ (AAP) ಶಾಸಕ ಉಮೇಶ್ ಮಕ್ವಾನಾ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರವರು. ಪಟೇಲ್ ಪ್ರಕಾರ, ರಾಜ್ಯದಲ್ಲಿ 164 ವೈರಲ್ ಎನ್ಸೆಫಾಲಿಟಿಸ್ ಪ್ರಕರಣಗಳು ವರದಿಯಾಗಿದ್ದು, 101 ಮಕ್ಕಳು ಸೋಂಕಿನಿಂದ ಸಾವಿಗೀಡಾಗಿದ್ದಾರೆ. 164 ಪ್ರಕರಣಗಳಲ್ಲಿ, 61 ನಿರ್ದಿಷ್ಟವಾಗಿ ಚಂಡೀಪುರ ವೈರಸ್‌ನಿಂದ ಉಂಟಾಗಿದೆ. ಇದು ಜ್ವರ, ಜ್ವರ ತರಹದ ರೋಗಲಕ್ಷಣಗಳು ಮತ್ತು ಮೆದುಳಿನ ತೀವ್ರವಾದ ಉರಿಯೂತವನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ವೈರಸ್ ಮುಖ್ಯವಾಗಿ ಸೊಳ್ಳೆಗಳು ಮತ್ತು ನೊಣ(ಸ್ಯಾಂಡ್ ಫ್ಲೈ)ಗಳಂತಹ ವಾಹಕಗಳಿಂದ ಹರಡುತ್ತದೆ.

ಕಳೆದ ವಾರದಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಕಳೆದ 12 ದಿನಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಸಚಿವರು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಜುಲೈ 17 ರಂದು, ಅರಾವಳಿಯಲ್ಲಿ ನಾಲ್ಕು ವರ್ಷದ ಮಗು ಮೋಟಾ ಕಾಂತರಿಯಾ ಅದೇ ತಿಂಗಳ ಆರಂಭದಲ್ಲಿ ಸಬರಕಾಂತದ ಸರ್ಕಾರಿ ಆಸ್ಪತ್ರೆಯಲ್ಲಿ ವೈರಸ್‌ಗೆ ಬಲಿಯಾದ ನಂತರ ಚಂಡೀಪುರ ವೈರಸ್‌ನಿಂದಾದ ಮೊದಲ ಸಾವನ್ನು ಗುಜರಾತ್ ಸರ್ಕಾರ ದೃಢಪಡಿಸಿತು.

ಗುಜರಾತಿನ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಣ್ಣಿನ ಮನೆಗಳ ಬಿರುಕುಗಳು ಮತ್ತು ಕುಳಿಗಳಲ್ಲಿ ಚಂಡೀಪುರ ವೈರಸ್ ಅನ್ನು ಹೊತ್ತಿರುವ ಮರಳು ನೊಣ ವಿಶಿಷ್ಟವಾಗಿ ವಾಸಿಸುತ್ತದೆ ಎಂದು ಆರೋಗ್ಯ ಸಚಿವರು ಸದನಕ್ಕೆ ತಿಳಿಸಿದರು. ಈ ರೋಗವನ್ನು ಎದುರಿಸಲು ರಾಜ್ಯ ಸರ್ಕಾರವು ವೆಕ್ಟರ್ ನಿಯಂತ್ರಣ ಮತ್ತು ವೈರಸ್ ನಿಯಂತ್ರಣಕ್ಕಾಗಿ ವ್ಯಾಪಕವಾದ ಡ್ರೈವ್ ಅನ್ನು ಪ್ರಾರಂಭಿಸಿದೆ.

ಈ ಅಭಿಯಾನದ ಭಾಗವಾಗಿ, ಆರೋಗ್ಯ ತಂಡಗಳು ಪೀಡಿತ ಪ್ರದೇಶಗಳಲ್ಲಿ 53,000 ಕ್ಕೂ ಹೆಚ್ಚು ಮನೆಗಳನ್ನು ಸಮೀಕ್ಷೆ ನಡೆಸಿವೆ. ಹಳ್ಳಿಗಳ 7 ಲಕ್ಷಕ್ಕೂ ಹೆಚ್ಚು ಮಣ್ಣಿನ ಮನೆಗಳಲ್ಲಿ ಕೀಟನಾಶಕವಾದ ಮಲಾಥಿಯಾನ್ ಪುಡಿಯನ್ನು ಸಿಂಪಡಿಸಿವೆ. ಹೆಚ್ಚುವರಿಯಾಗಿ, ಸುಮಾರು 1.58 ಲಕ್ಷ ಮನೆಗಳಲ್ಲಿ ದ್ರವರೂಪದ ಕೀಟನಾಶಕವನ್ನು ಸಿಂಪಡಿಸಲಾಗಿದೆ. ಮಕ್ಕಳ ದುರ್ಬಲತೆಯನ್ನು ಗುರುತಿಸಿ, ಅಧಿಕಾರಿಗಳು ಪೀಡಿತ ಜಿಲ್ಲೆಗಳಲ್ಲಿ ಸುಮಾರು 40,000 ಶಾಲೆಗಳು ಮತ್ತು 36,000 ಅಂಗನವಾಡಿಗಳಲ್ಲಿ ಈ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Andhra Pradesh Blast: ಆಂಧ್ರಪ್ರದೇಶದ ಅಚ್ಚುತಪುರಂನ ಫಾರ್ಮಾ ಕಂಪನಿಯಲ್ಲಿ ರಿಯಾಕ್ಟರ್ ಸ್ಫೋಟ; 7 ಜನ ಸಾವು

ಮೊದಲ ಬಾರಿಗೆ 1965 ರಲ್ಲಿ ಭಾರತದ ಮಹಾರಾಷ್ಟ್ರದ ಚಂಡೀಪುರ ಎಂಬ ಹಳ್ಳಿಯಲ್ಲಿ ಗುರುತಿಸಲಾಯಿತು. CHPV ವೈರಸ್ ರಾಬ್ಡೋವಿರಿಡೆ ಕುಟುಂಬಕ್ಕೆ ಸೇರಿದ್ದು ವೆಸಿಕ್ಯುಲರ್ ಸ್ಟೊಮಾಟಿಟಿಸ್ ವೈರಸ್‌ಗೆ ನಿಕಟ ಸಂಬಂಧ ಹೊಂದಿದೆ. ಇದು ಪ್ರಾಥಮಿಕವಾಗಿ ಸೋಂಕಿತ ಮರಳು ನೊಣಗಳ ಕಡಿತದ ಮೂಲಕ ಮಾನವರಿಗೆ ಹರಡುತ್ತದೆ, ಆದಾಗ್ಯೂ ಇತರ ಕೀಟಗಳು ಅದರ ಹರಡುವಿಕೆಯಲ್ಲಿ ಪಾತ್ರವನ್ನು ವಹಿಸಬಹುದು. ಆಂಧ್ರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ರೋಗ ವರದಿಯಾಗಿದ್ದು ಭಾರತದ ವಿವಿಧ ಭಾಗಗಳಲ್ಲಿ ಈ ವೈರಸ್ ವಿರಳವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ