AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್ನಬ್ ಗೋಸ್ವಾಮಿ- ಪಾರ್ಥೊದಾಸ್​ಗುಪ್ತ ವಾಟ್ಸಾಪ್​ ಚಾಟ್​ಗೂ ಟಿಆರ್​ಪಿ ಹಗರಣಕ್ಕೂ ಸಂಬಂಧವಿಲ್ಲ’

ಆರ್ನಬ್ ಮತ್ತು ದಾಸ್​ಗುಪ್ತ ನಡುವಣ ಚಾಟ್​ನ ಕೆಲ ಭಾಗವನ್ನು ಓದಿದ ಅವರು, ಇವರು ಕೇವಲ ಮಾರ್ಕೆಟ್ ಟ್ರೆಂಡ್​ ಬಗ್ಗೆ ಮಾತನಾಡುತ್ತಿದ್ದಾರೆ. ಇಬ್ಬರು ಹತ್ತಿರದ ಗೆಳೆಯರ ನಡುವಣ ಸಂವಾದವಿದು ಎಂದು ಆರ್ನಬ್ ಪರ ವಕೀಲರು ವಾದಿಸಿದರು.

‘ಆರ್ನಬ್ ಗೋಸ್ವಾಮಿ- ಪಾರ್ಥೊದಾಸ್​ಗುಪ್ತ ವಾಟ್ಸಾಪ್​ ಚಾಟ್​ಗೂ ಟಿಆರ್​ಪಿ ಹಗರಣಕ್ಕೂ ಸಂಬಂಧವಿಲ್ಲ’
ಅರ್ನಬ್​ ಗೋಸ್ವಾಮಿ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ರಾಜೇಶ್ ದುಗ್ಗುಮನೆ

Updated on:Mar 22, 2021 | 11:30 PM

ಮುಂಬೈ: ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಆರ್ನಬ್ ಗೋಸ್ವಾಮಿ ಮತ್ತು ಬಾರ್ಕ್​ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪಾರ್ಥೊ ದಾಸ್​ಗುಪ್ತ ನಡುವಣ ವಾಟ್ಸ್ಯಾಪ್​ ಚಾಟ್​ ಕೇವಲ ಇಬ್ಬರು ಗೆಳೆಯರ ನಡುವಣ ಸಂವಾದ. ಅದಕ್ಕೂ ಟಿಆರ್​ಪಿ ತಿರುಚಿದ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರ್ನಬ್ ಗೋಸ್ವಾಮಿ ವಕೀಲರು ಬಾಂಬೆ ಹೈಕೋರ್ಟ್​ಗೆ ಸೋಮವಾರ ಹೇಳಿದರು.

ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಆರ್ನಬ್ ಪರ ವಕೀಲ ಅಶೋಕ್ ಮುಂಡರಗಿ, ‘ಟಿಆರ್​ಪಿ ಹಗರಣಕ್ಕೆ ಸಂಬಂಧಿಸಿದಂತೆ ಈ ವಾಟ್ಸ್ಯಾಪ್​ ಚಾಟ್​ ಅತಿದೊಡ್ಡ ಆಧಾರ ಎಂದು ಮುಂಬೈ ಪೊಲೀಸರು ಹೇಳುತ್ತಿದ್ದಾರೆ. ನೀವು ದಯವಿಟ್ಟು ಈ ಚಾಟ್​ಗಳನ್ನು ಇಡಿಯಾಗಿ ಪರಿಶೀಲಿಸಿ ನೋಡಿ. ಪೊಲೀಸರು ಈ ಚಾಟ್​ಗಳನ್ನು ಸಂದರ್ಭದಿಂದ ಆಚೆಗೆ ವಿಶ್ಲೇಷಿಸುತ್ತಿದ್ದಾರೆ’ ಎಂದು ಹೇಳಿದರು.

ಆರ್ನಬ್ ಮತ್ತು ದಾಸ್​ಗುಪ್ತ ನಡುವಣ ಚಾಟ್​ನ ಕೆಲ ಭಾಗವನ್ನು ಓದಿದ ಅವರು, ಇವರು ಕೇವಲ ಮಾರ್ಕೆಟ್ ಟ್ರೆಂಡ್​ ಬಗ್ಗೆ ಮಾತನಾಡುತ್ತಿದ್ದಾರೆ. ಇಬ್ಬರು ಹತ್ತಿರದ ಗೆಳೆಯರ ನಡುವಣ ಸಂವಾದವಿದು. ಇವರಿಬ್ಬರ ನಡುವೆ ಟಿಆರ್​ಪಿ ತಿರುಚುವುದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಎಸ್​ಎಂಎಸ್ ಅಥವಾ ಮೆಸೇಜ್ ವಿನಿಮಯವಾಗಿಲ್ಲ ಎಂದರು.

ಆರ್ನಬ್ ಗೋಸ್ವಾಮಿಗೆ ತೊಂದರೆ ಕೊಡುವ ಒಂದೇ ಉದ್ದೇಶದಿಂದ ಪೊಲೀಸರು ಈ ಪ್ರಕರಣದಲ್ಲಿ ಆರ್ನಬ್ ಹೆಸರು ಸೇರಿಸಿದ್ದಾರೆ. ಇದರಿಂದಾಗಿ ಬಹುಕಾಲದಿಂದ ಅವರಿಗೆ ತೊಂದರೆಯಾಗುತ್ತಿದೆ ಎಂದು ವಕೀಲರು ವಾದಿಸಿದರು.

‘ಕೇಂದ್ರ ಅಥವಾ ರಾಜ್ಯ ತನಿಖಾ ದಳದಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿದರೂ ಸಂಸ್ಥೆಯು ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸುವಂತೆ ನ್ಯಾಯಾಲಯ ಆದೇಶಿಸಲು ಆಗುವುದಿಲ್ಲ. ಪೊಲೀಸರು ಇವರನ್ನು ಶಂಕಿತರು ಎನ್ನುತ್ತಿದ್ದಾರೆಯೇ ಹೊರತು, ಆರೋಪಿಗಳು ಎನ್ನುತ್ತಿಲ್ಲ. ಇದೊಂದು ವ್ಯರ್ಥ ಕಾಲಹರಣ’ ಎಂದು ನ್ಯಾಯಾಧೀಶರು ಹೇಳಿದರು.

ಇದನ್ನೂ ಓದಿ: ರಿಪಬ್ಲಿಕ್ ಟಿವಿ ಸಂಪಾದಕ ಆರ್ನಬ್ ಗೋಸ್ವಾಮಿಗೆ ಸಿಕ್ತು ಸುಪ್ರೀಂ ಜಾಮೀನು!

ಇದನ್ನೂ ಓದಿ: TRP ಹಗರಣದಲ್ಲಿ ಅರ್ನಬ್​ ಗೋಸ್ವಾಮಿ ಶಾಮೀಲು.. ಮೊಟ್ಟಮೊದಲ ಬಾರಿಗೆ ಅರ್ನಬ್​ ಹೆಸರು ಪ್ರಸ್ತಾಪಿಸಿದ ಮುಂಬೈ ಪೊಲೀಸರು

Published On - 11:29 pm, Mon, 22 March 21

ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್