AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಸರಸಕ್ಕೆ ಬಾ ಎಂದು ಮುದ್ದಿನ ಮಡದಿಯನ್ನು ಗೋಗರೆದ ಪತಿರಾಯ! ಮುಂದೇನಾಯ್ತು ಎಂಬುದೇ ಸೋಜಿಗ

ಇಷ್ಟೆಲ್ಲಾ ಆದರೂ ಪತ್ನಿಯ ಮೇಲೆ ಕನಿಕರ ತೋರದ ಶಂಕರ್ ರಾಮ್ ತನ್ನೊಂದಿಗೆ ಮಿಲನ ಮಾಡುವಂತೆ ಬಲವಂತ ಮಾಡಿದ್ದಾನೆ. ಮತ್ತೆ ಗಂಡ-ಹೆಂಡತಿ ಮಧ್ಯೆ ಕಲಹ ಶುರುವಾಗಿದೆ. ಅದು ತಾರಕಕ್ಕೆ ಏರಿದೆ.

Viral News: ಸರಸಕ್ಕೆ ಬಾ ಎಂದು ಮುದ್ದಿನ ಮಡದಿಯನ್ನು ಗೋಗರೆದ ಪತಿರಾಯ! ಮುಂದೇನಾಯ್ತು ಎಂಬುದೇ ಸೋಜಿಗ
ವಿಕೋಪಕ್ಕೆ ಹೋದ ಗಂಡ-ಹೆಂಡತಿ ಜಗಳ
TV9 Web
| Edited By: ಸಾಧು ಶ್ರೀನಾಥ್​|

Updated on: Apr 19, 2023 | 7:00 PM

Share

ಗಂಡ ಹೆಂಡತಿ ಮಧ್ಯೆ ದಿನಬೆಳಗಾದರೆ ಕಲಹಗಳು ಸರ್ವೆ ಸಾಮಾನ್ಯ ಅಲ್ಲವೇ!? ಆದರೆ ಕೆಲವೊಮ್ಮೆ ಚಿಕ್ಕ ಚಿಕ್ಕ ತಗಾದೆಗಳೇ ದೊಡ್ಡದಾಗಿ ಬಿಡುತ್ತವೆ. ಕ್ಷಣಿಕ ಆವೇಶದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಅಥವಾ ಪ್ರಾಣವನ್ನೇ ತೆಗೆದುಬಿಡುತ್ತಾರೆ. ಛತ್ತೀಸ್‌ಗಢ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಅದೀಗ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ವಿವರಗಳನ್ನು ನೋಡುವುದಾದರೆ … ಛತ್ತೀಸ್‌ಗಢ್‌ನಲ್ಲಿರುವ ಜಶ್‌ಪುರ ಜಿಲ್ಲೆಗೆ ಸೇರಿದ ಶಂಕರ್‌ರಾಮ್ ಮತ್ತು ಅಶಾಬಾಯಿ ಎಂಬ ದಂಪತಿಯ ಕತೆಯಿದು. ಶಂಕರರಾಮ ದಿನಾ ಕುಡಿದು ಮನೆಗೆ ಬರುವವನು. ಹೀಗಾಗಿ ಹೆಂಡತಿ ಜೊತೆ ಆಗಾಗ ಕಲಹಗಳು ನಡೆಯುತ್ತಿದ್ದವು.

ಇಂತಿಪ್ಪ ಶಂಕರ್ ರಾಮ್ ಮೊನ್ನೆ ಸೋಮವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಹೆಂಡತಿಯನ್ನು ಮಂಚಕ್ಕೆ ಕರೆದಿದ್ದಾನೆ. ಅದಕ್ಕೆ ಅವಳು ನಿರಾಕರಿಸಿದ್ದಾಳೆ. ಅವರಿಬ್ಬರ ನಡುವೆ ಆಗ ವಾಗ್ವಾದ ನಡೆದಿದೆಡ. ವೈಲೆಂಟ್​ ಆದ ಶಂಕರರಾಮ ತನ್ನ ಪತ್ನಿ ಆಶಾಬಾಯಿಯನ್ನು ಸೈಲೆಂಟಾಗಿ ಬಾವಿಗೆ ತಳ್ಳಿಬಿಟ್ಟಿದ್ದಾನೆ. ತಕ್ಷಣ ಅನಾಹುತದ ಅರಿವಾಗಿ, ನಶೆ ಇಳಿದಿದೆ. ಎಚ್ಚರಗೊಂಡ ಪತಿ ಸೀದಾ ತಾನೂ ಬಾವಿಗೆ ಧುಮುಕಿ, ಅವಳನ್ನು ರಕ್ಷಿಸಿಕೊಂಡಿದ್ದಾನೆ.

ಇಷ್ಟೆಲ್ಲಾ ಆದರೂ ಪತ್ನಿಯ ಮೇಲೆ ಕನಿಕರ ತೋರದ ಶಂಕರ್ ರಾಮ್ ತನ್ನೊಂದಿಗೆ ಮಿಲನ ಮಾಡುವಂತೆ ಬಲವಂತ ಮಾಡಿದ್ದಾನೆ. ಮತ್ತೆ ಗಂಡ-ಹೆಂಡತಿ ಮಧ್ಯೆ ಕಲಹ ಶುರುವಾಗಿದೆ. ಅದು ತಾರಕಕ್ಕೆ ಏರಿದೆ. ಕ್ಷಣಿಕಾವೇಷದಲ್ಲಿ ಪತ್ನಿ ಆಶಾಬಾಯಿ ಮೇಲೆ ದಾಳಿ ಮಾಡಿದ್ದಾನೆ ಪತಿ ಶಂಕರ್ ರಾಮ್. ಈ ಬಾರಿ ನಿಜಕ್ಕೂ ಬಾವಿಗೆ ತಳ್ಳಿದ್ದಾನೆ ಪತ್ನಿಯನ್ನು. ಬಾವಿಗೆ ಬಿದ್ದ ಪತ್ನಿ ಆಶಾ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ. ಪೊಲೀಸರಿಗೆ ಮಾಹಿತಿ ತಲುಪಿ, ಸ್ಥಳಕ್ಕೆ ಬಂದು ಶಂಕರನನ್ನು ಬಂಧಿಸಿದ್ದಾರೆ. ನಂತರ ಮೃತದೇಹವನ್ನು ಪೋಸ್ಟ್‌ ಮಾರ್ಟಂ ಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು