AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಸರಸಕ್ಕೆ ಬಾ ಎಂದು ಮುದ್ದಿನ ಮಡದಿಯನ್ನು ಗೋಗರೆದ ಪತಿರಾಯ! ಮುಂದೇನಾಯ್ತು ಎಂಬುದೇ ಸೋಜಿಗ

ಇಷ್ಟೆಲ್ಲಾ ಆದರೂ ಪತ್ನಿಯ ಮೇಲೆ ಕನಿಕರ ತೋರದ ಶಂಕರ್ ರಾಮ್ ತನ್ನೊಂದಿಗೆ ಮಿಲನ ಮಾಡುವಂತೆ ಬಲವಂತ ಮಾಡಿದ್ದಾನೆ. ಮತ್ತೆ ಗಂಡ-ಹೆಂಡತಿ ಮಧ್ಯೆ ಕಲಹ ಶುರುವಾಗಿದೆ. ಅದು ತಾರಕಕ್ಕೆ ಏರಿದೆ.

Viral News: ಸರಸಕ್ಕೆ ಬಾ ಎಂದು ಮುದ್ದಿನ ಮಡದಿಯನ್ನು ಗೋಗರೆದ ಪತಿರಾಯ! ಮುಂದೇನಾಯ್ತು ಎಂಬುದೇ ಸೋಜಿಗ
ವಿಕೋಪಕ್ಕೆ ಹೋದ ಗಂಡ-ಹೆಂಡತಿ ಜಗಳ
TV9 Web
| Updated By: ಸಾಧು ಶ್ರೀನಾಥ್​|

Updated on: Apr 19, 2023 | 7:00 PM

Share

ಗಂಡ ಹೆಂಡತಿ ಮಧ್ಯೆ ದಿನಬೆಳಗಾದರೆ ಕಲಹಗಳು ಸರ್ವೆ ಸಾಮಾನ್ಯ ಅಲ್ಲವೇ!? ಆದರೆ ಕೆಲವೊಮ್ಮೆ ಚಿಕ್ಕ ಚಿಕ್ಕ ತಗಾದೆಗಳೇ ದೊಡ್ಡದಾಗಿ ಬಿಡುತ್ತವೆ. ಕ್ಷಣಿಕ ಆವೇಶದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಅಥವಾ ಪ್ರಾಣವನ್ನೇ ತೆಗೆದುಬಿಡುತ್ತಾರೆ. ಛತ್ತೀಸ್‌ಗಢ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಅದೀಗ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ವಿವರಗಳನ್ನು ನೋಡುವುದಾದರೆ … ಛತ್ತೀಸ್‌ಗಢ್‌ನಲ್ಲಿರುವ ಜಶ್‌ಪುರ ಜಿಲ್ಲೆಗೆ ಸೇರಿದ ಶಂಕರ್‌ರಾಮ್ ಮತ್ತು ಅಶಾಬಾಯಿ ಎಂಬ ದಂಪತಿಯ ಕತೆಯಿದು. ಶಂಕರರಾಮ ದಿನಾ ಕುಡಿದು ಮನೆಗೆ ಬರುವವನು. ಹೀಗಾಗಿ ಹೆಂಡತಿ ಜೊತೆ ಆಗಾಗ ಕಲಹಗಳು ನಡೆಯುತ್ತಿದ್ದವು.

ಇಂತಿಪ್ಪ ಶಂಕರ್ ರಾಮ್ ಮೊನ್ನೆ ಸೋಮವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಹೆಂಡತಿಯನ್ನು ಮಂಚಕ್ಕೆ ಕರೆದಿದ್ದಾನೆ. ಅದಕ್ಕೆ ಅವಳು ನಿರಾಕರಿಸಿದ್ದಾಳೆ. ಅವರಿಬ್ಬರ ನಡುವೆ ಆಗ ವಾಗ್ವಾದ ನಡೆದಿದೆಡ. ವೈಲೆಂಟ್​ ಆದ ಶಂಕರರಾಮ ತನ್ನ ಪತ್ನಿ ಆಶಾಬಾಯಿಯನ್ನು ಸೈಲೆಂಟಾಗಿ ಬಾವಿಗೆ ತಳ್ಳಿಬಿಟ್ಟಿದ್ದಾನೆ. ತಕ್ಷಣ ಅನಾಹುತದ ಅರಿವಾಗಿ, ನಶೆ ಇಳಿದಿದೆ. ಎಚ್ಚರಗೊಂಡ ಪತಿ ಸೀದಾ ತಾನೂ ಬಾವಿಗೆ ಧುಮುಕಿ, ಅವಳನ್ನು ರಕ್ಷಿಸಿಕೊಂಡಿದ್ದಾನೆ.

ಇಷ್ಟೆಲ್ಲಾ ಆದರೂ ಪತ್ನಿಯ ಮೇಲೆ ಕನಿಕರ ತೋರದ ಶಂಕರ್ ರಾಮ್ ತನ್ನೊಂದಿಗೆ ಮಿಲನ ಮಾಡುವಂತೆ ಬಲವಂತ ಮಾಡಿದ್ದಾನೆ. ಮತ್ತೆ ಗಂಡ-ಹೆಂಡತಿ ಮಧ್ಯೆ ಕಲಹ ಶುರುವಾಗಿದೆ. ಅದು ತಾರಕಕ್ಕೆ ಏರಿದೆ. ಕ್ಷಣಿಕಾವೇಷದಲ್ಲಿ ಪತ್ನಿ ಆಶಾಬಾಯಿ ಮೇಲೆ ದಾಳಿ ಮಾಡಿದ್ದಾನೆ ಪತಿ ಶಂಕರ್ ರಾಮ್. ಈ ಬಾರಿ ನಿಜಕ್ಕೂ ಬಾವಿಗೆ ತಳ್ಳಿದ್ದಾನೆ ಪತ್ನಿಯನ್ನು. ಬಾವಿಗೆ ಬಿದ್ದ ಪತ್ನಿ ಆಶಾ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ. ಪೊಲೀಸರಿಗೆ ಮಾಹಿತಿ ತಲುಪಿ, ಸ್ಥಳಕ್ಕೆ ಬಂದು ಶಂಕರನನ್ನು ಬಂಧಿಸಿದ್ದಾರೆ. ನಂತರ ಮೃತದೇಹವನ್ನು ಪೋಸ್ಟ್‌ ಮಾರ್ಟಂ ಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ