AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಸರಸಕ್ಕೆ ಬಾ ಎಂದು ಮುದ್ದಿನ ಮಡದಿಯನ್ನು ಗೋಗರೆದ ಪತಿರಾಯ! ಮುಂದೇನಾಯ್ತು ಎಂಬುದೇ ಸೋಜಿಗ

ಇಷ್ಟೆಲ್ಲಾ ಆದರೂ ಪತ್ನಿಯ ಮೇಲೆ ಕನಿಕರ ತೋರದ ಶಂಕರ್ ರಾಮ್ ತನ್ನೊಂದಿಗೆ ಮಿಲನ ಮಾಡುವಂತೆ ಬಲವಂತ ಮಾಡಿದ್ದಾನೆ. ಮತ್ತೆ ಗಂಡ-ಹೆಂಡತಿ ಮಧ್ಯೆ ಕಲಹ ಶುರುವಾಗಿದೆ. ಅದು ತಾರಕಕ್ಕೆ ಏರಿದೆ.

Viral News: ಸರಸಕ್ಕೆ ಬಾ ಎಂದು ಮುದ್ದಿನ ಮಡದಿಯನ್ನು ಗೋಗರೆದ ಪತಿರಾಯ! ಮುಂದೇನಾಯ್ತು ಎಂಬುದೇ ಸೋಜಿಗ
ವಿಕೋಪಕ್ಕೆ ಹೋದ ಗಂಡ-ಹೆಂಡತಿ ಜಗಳ
TV9 Web
| Edited By: |

Updated on: Apr 19, 2023 | 7:00 PM

Share

ಗಂಡ ಹೆಂಡತಿ ಮಧ್ಯೆ ದಿನಬೆಳಗಾದರೆ ಕಲಹಗಳು ಸರ್ವೆ ಸಾಮಾನ್ಯ ಅಲ್ಲವೇ!? ಆದರೆ ಕೆಲವೊಮ್ಮೆ ಚಿಕ್ಕ ಚಿಕ್ಕ ತಗಾದೆಗಳೇ ದೊಡ್ಡದಾಗಿ ಬಿಡುತ್ತವೆ. ಕ್ಷಣಿಕ ಆವೇಶದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಅಥವಾ ಪ್ರಾಣವನ್ನೇ ತೆಗೆದುಬಿಡುತ್ತಾರೆ. ಛತ್ತೀಸ್‌ಗಢ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಅದೀಗ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ವಿವರಗಳನ್ನು ನೋಡುವುದಾದರೆ … ಛತ್ತೀಸ್‌ಗಢ್‌ನಲ್ಲಿರುವ ಜಶ್‌ಪುರ ಜಿಲ್ಲೆಗೆ ಸೇರಿದ ಶಂಕರ್‌ರಾಮ್ ಮತ್ತು ಅಶಾಬಾಯಿ ಎಂಬ ದಂಪತಿಯ ಕತೆಯಿದು. ಶಂಕರರಾಮ ದಿನಾ ಕುಡಿದು ಮನೆಗೆ ಬರುವವನು. ಹೀಗಾಗಿ ಹೆಂಡತಿ ಜೊತೆ ಆಗಾಗ ಕಲಹಗಳು ನಡೆಯುತ್ತಿದ್ದವು.

ಇಂತಿಪ್ಪ ಶಂಕರ್ ರಾಮ್ ಮೊನ್ನೆ ಸೋಮವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಹೆಂಡತಿಯನ್ನು ಮಂಚಕ್ಕೆ ಕರೆದಿದ್ದಾನೆ. ಅದಕ್ಕೆ ಅವಳು ನಿರಾಕರಿಸಿದ್ದಾಳೆ. ಅವರಿಬ್ಬರ ನಡುವೆ ಆಗ ವಾಗ್ವಾದ ನಡೆದಿದೆಡ. ವೈಲೆಂಟ್​ ಆದ ಶಂಕರರಾಮ ತನ್ನ ಪತ್ನಿ ಆಶಾಬಾಯಿಯನ್ನು ಸೈಲೆಂಟಾಗಿ ಬಾವಿಗೆ ತಳ್ಳಿಬಿಟ್ಟಿದ್ದಾನೆ. ತಕ್ಷಣ ಅನಾಹುತದ ಅರಿವಾಗಿ, ನಶೆ ಇಳಿದಿದೆ. ಎಚ್ಚರಗೊಂಡ ಪತಿ ಸೀದಾ ತಾನೂ ಬಾವಿಗೆ ಧುಮುಕಿ, ಅವಳನ್ನು ರಕ್ಷಿಸಿಕೊಂಡಿದ್ದಾನೆ.

ಇಷ್ಟೆಲ್ಲಾ ಆದರೂ ಪತ್ನಿಯ ಮೇಲೆ ಕನಿಕರ ತೋರದ ಶಂಕರ್ ರಾಮ್ ತನ್ನೊಂದಿಗೆ ಮಿಲನ ಮಾಡುವಂತೆ ಬಲವಂತ ಮಾಡಿದ್ದಾನೆ. ಮತ್ತೆ ಗಂಡ-ಹೆಂಡತಿ ಮಧ್ಯೆ ಕಲಹ ಶುರುವಾಗಿದೆ. ಅದು ತಾರಕಕ್ಕೆ ಏರಿದೆ. ಕ್ಷಣಿಕಾವೇಷದಲ್ಲಿ ಪತ್ನಿ ಆಶಾಬಾಯಿ ಮೇಲೆ ದಾಳಿ ಮಾಡಿದ್ದಾನೆ ಪತಿ ಶಂಕರ್ ರಾಮ್. ಈ ಬಾರಿ ನಿಜಕ್ಕೂ ಬಾವಿಗೆ ತಳ್ಳಿದ್ದಾನೆ ಪತ್ನಿಯನ್ನು. ಬಾವಿಗೆ ಬಿದ್ದ ಪತ್ನಿ ಆಶಾ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ. ಪೊಲೀಸರಿಗೆ ಮಾಹಿತಿ ತಲುಪಿ, ಸ್ಥಳಕ್ಕೆ ಬಂದು ಶಂಕರನನ್ನು ಬಂಧಿಸಿದ್ದಾರೆ. ನಂತರ ಮೃತದೇಹವನ್ನು ಪೋಸ್ಟ್‌ ಮಾರ್ಟಂ ಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?