AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಈಗ ಚೆನ್ನೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ದರ 2,000 ರೂ.

ಚೆನ್ನೈ: ಚೆನ್ನೈ-ಬೆಂಗಳೂರು ಒನ್ ವೇ ವಿಮಾನ ಪ್ರಯಾಣ ದರವು ಕೋವಿಡ್ ಪೂರ್ವ ದರಕ್ಕಿಂತ ಕಡಿಮೆಯಾಗಿದೆ. ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತಿವೆ.

Bengaluru: ಈಗ ಚೆನ್ನೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ದರ 2,000 ರೂ.
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 19, 2023 | 4:16 PM

Share

ಚೆನ್ನೈ-ಬೆಂಗಳೂರು   (Chennai, Bengaluru) ಒನ್ ವೇ ವಿಮಾನ ಪ್ರಯಾಣ ದರವು ಕೋವಿಡ್ ಪೂರ್ವ ದರಕ್ಕಿಂತ ಕಡಿಮೆಯಾಗಿದೆ. ವಿಮಾನಯಾನ ಸಂಸ್ಥೆಗಳು ಮತ್ತು ಆನ್ಲೈನ್ ಟ್ರಾವೆಲ್ ಪೋರ್ಟಲ್​​ಗಳು ಆಫ್ ಸೀಸನ್​​ನಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ರಿಯಾಯಿತಿಗಳನ್ನು ನೀಡುತ್ತಿವೆ. ಸೋಮವಾರದಂದು ದರವು 900 ರೂ.ಗಳಷ್ಟು ಕಡಿಮೆಯಿಯಾಗಿದ್ದು, ಮುಂಬರುವ ದಿನಗಳಲ್ಲಿ 1,700 ರಿಂದ 2,000 ರೂ.ಒಳಗೆ ಪ್ರಯಾಣಿಸಬಹುದಾಗಿದೆ. ಚೆನ್ನೈ-ಬೆಂಗಳೂರು ಮಾರ್ಗದಲ್ಲಿನ ಪ್ರಸ್ತುತ ವಿಮಾನಯಾನ ದರಗಳಲ್ಲಿನ ಕುಸಿತವು ಎಟಿಎಫ್ ಬೆಲೆಗಳಲ್ಲಿ ಕಡಿತ, ಅಕಾಸಾ ಏರ್ ನಂತಹ ವಿಮಾನಗಳ ಸಾಮರ್ಥ್ಯ ಹೆಚ್ಚಳ, ನಿಧಾನಗತಿಯ ಕಾರ್ಪೊರೇಟ್ ಬೇಡಿಕೆ ಸೇರಿದಂತೆ ಅನೇಕ ಅಂಶಗಳಿಗೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಎರಡು ನಗರಗಳ ನಡುವಿನ ಸಾಮೀಪ್ಯದಿಂದಾಗಿ, ಜನರು ರಸ್ತೆ ಅಥವಾ ರೈಲು ಮೂಲಕ ಪ್ರಯಾಣಿಸಲು ಆಯ್ಕೆ ಮಾಡುತ್ತಾರೆ. ವಿಮಾನ ಪ್ರಯಾಣಕ್ಕೆ ಹೋಲಿಸಿದರೆ ಇದು ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗಿದೆ ಹಾಗಾಗಿ ಜನರನ್ನು ಆಕರ್ಷಿಸುವುಸು ಮುಖ್ಯವಾಗಿದೆ.

“ವಂದೇ ಭಾರತ್ ಪ್ರಾರಂಭವು ಪ್ರತಿ ಟಿಕೆಟ್ ದರವನ್ನು 1,000 ರೂ.ಗೆ ಇಳಿಸಿದೆ” ಎಂದು ಚೆನ್ನೈ ಮೆಟ್ರೋ ಟ್ರಾವೆಲ್ಸ್​​ನ ಬಶೀರ್ ಅಹ್ಮದ್ ತಿಳಿಸಿದ್ದಾರೆ. “ಶಾಲೆ ಅಥವಾ ಕಾಲೇಜು ಪರೀಕ್ಷೆಗಳು ನಡೆಯುತ್ತಿರುವುದರಿಂದ ಇದು ಆಫ್-ಸೀಸನ್ ಆಗಿದೆ” ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದು ಸಾಧ್ಯತೆಯೆಂದರೆ ಕೆಲವು ವಿಮಾನಗಳು ಬೆಂಗಳೂರು ಮೂಲಕ ಹೈದರಾಬಾದ್ ಮತ್ತು ಇತರ ಸ್ಥಳಗಳಿಗೆ ಹೋಗುತ್ತಿವೆ. ಹಾಗಾಗಿ ವಿಮಾನವು ಖಾಲಿ ಹೋಗುವುದನ್ನು ತಡೆಯಲು ಚೆನ್ನೈ-ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಕರನ್ನು ಆಕರ್ಷಿಸಲು ಟಿಕೆಟ್ ದರ ಕಡಿತಗೊಳಿಸಿದೆ.

ಈ ಪ್ರಕ್ರಿಯೆಯಿಂದ ಹೆಚ್ಚಿನ ಕುಟುಂಬಗಳು ವಿಮಾನ ಪ್ರಯಾಣವನ್ನು ಒಂದು ಆಯ್ಕೆಯಾಗಿ ನೋಡುತ್ತಿವೆ ಏಕೆಂದರೆ ಇದು ಉತ್ತಮ ಅನುಭವವನ್ನು ನೀಡುವುದರ ಜೊತೆಗೆ ಈಗ ಅಗ್ಗವಾಗಿದೆ. ಪ್ರತಿ ವಾರಾಂತ್ಯದಲ್ಲಿ ಬೆಂಗಳೂರಿಗೆ ಬಂದು ತಮ್ಮ ಕುಟುಂಬವನ್ನು ಭೇಟಿಯಾಗಲು ಬರುವ ನಗರ ಮೂಲದ ವೈದ್ಯ ಡಾ.ಶರಣ್ ಎಸ್ ಅವರಿಗೆ ಕಡಿಮೆ ಶುಲ್ಕವು ವರದಾನವಾಗಿ ಮಾರ್ಪಟ್ಟಿದೆ. “ನಾನು ವಾಹನ ಚಲಾಯಿಸುವುದನ್ನು ನಿಲ್ಲಿಸಿದ್ದೇನೆ ಮತ್ತು ಶುಲ್ಕ ಕಡಿಮೆ ಇರುವುದರಿಂದ ಕಳೆದ ಕೆಲವು ವಾರಗಳಿಂದ ಹೋಗಿ ಬರುತ್ತಿದ್ದೇನೆ. ರೈಲು ಪ್ರಯಾಣವು ಆಯಾಸಕರವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ. ಎಂದಿಗೂ ವಿಮಾನದಲ್ಲಿ ಪ್ರಯಾಣಿಸದ ವಿವೇಕ್ಈ ಎಂಬುವವರು ವಾರಾಂತ್ಯದಲ್ಲಿ ತನ್ನ ಕುಟುಂಬವನ್ನು ಕರೆದೊಯ್ಯಲು ಯೋಜಿಸುತ್ತಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಸಮಯ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣದಿಂದ ನಗರವನ್ನು ತಲುಪುವ ವೆಚ್ಚವು ಅನೇಕರನ್ನು ರೈಲಿನಿಂದ ವಿಮಾನಗಳಿಗೆ ಸ್ಥಳಾಂತರಿಸುವುದನ್ನು ತಡೆಯುತ್ತಿದೆ.

ಇದನ್ನೂ ಓದಿ: ವಿಮಾನ ಪ್ರಯಾಣ ದರವನ್ನು ನಿಯಂತ್ರಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

ವಾರಾಂತ್ಯದಲ್ಲಿ ಪ್ರಯಾಣಿಸಲು ಕಾಯ್ದಿರಿಸುವಿಕೆ ಆರಂಭವಾಗಿದ್ದು ವೇಟಿಂಗ್ ಲಿಸ್ಟ್ ನಲ್ಲಿದೆ. ಚೆನ್ನೈನಿಂದ ಕೊಚ್ಚಿನ್ ಅಥವಾ ಕೊಯಮತ್ತೂರಿಗೆ ಇತರ ನಗರಗಳಿಗೆ ವಿಮಾನ ದರಗಳು ತುಂಬಾ ಹೆಚ್ಚಾಗಿದೆ. ಹಾಗಾಗಿ “ಬೆಂಗಳೂರು ಮತ್ತು ಚೆನ್ನೈ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಪೀಕ್ ಸೀಸನ್ನಲ್ಲಿ ಹೆಚ್ಚಾಗಿದೆ. ಕೈಗಾರಿಕೆಗಳು, ಸರಕು ಸಾಗಣೆ, ವ್ಯವಹಾರ, ಐಟಿ ವಲಯದಲ್ಲಿ ಹೆಚ್ಚಿನ ದಟ್ಟಣೆಗೆ ಕಾರಣವಾಗಿದೆ” ಎಂದು ಟ್ರಾವೆಲ್ ಏಜೆಂಟ್ ಒಬ್ಬರು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು