AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನವದಂಪತಿಯನ್ನು ರಸ್ತೆಯಲ್ಲಿ ತಡೆದ ಪಂಜಾಬ್​ ಸಿಎಂ ಚರಣಜಿತ್​ ಸಿಂಗ್​ ಛನ್ನಿ; ನಿಯಮ ಉಲ್ಲಂಘನೆ

ಪಂಜಾಬ್​​ನಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಕ್ಯಾಪ್ಟನ್​ ಅಮರಿಂದರ್​ ಸಿಂಗ್​ರನ್ನು ಕೆಳಗಿಳಿಸಿ ಛನ್ನಿ ಅವರನ್ನು ಸಿಎಂ ಮಾಡಲಾಗಿದೆ. ನಿನ್ನೆ ಸಂಪುಟ ವಿಸ್ತರಣೆಯೂ ಕೂಡ ಆಗಿದೆ.

Video: ನವದಂಪತಿಯನ್ನು ರಸ್ತೆಯಲ್ಲಿ ತಡೆದ ಪಂಜಾಬ್​ ಸಿಎಂ ಚರಣಜಿತ್​ ಸಿಂಗ್​ ಛನ್ನಿ; ನಿಯಮ ಉಲ್ಲಂಘನೆ
ನವದಂಪತಿಗೆ ಶುಭ ಕೋರಿದ ಪಂಜಾಬ್​ ಸಿಎಂ
TV9 Web
| Updated By: Lakshmi Hegde|

Updated on: Sep 27, 2021 | 9:41 AM

Share

ಪಂಜಾಬ್​​ನ ನೂತನ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ(Charanjit Singh Channi)  ನಿನ್ನೆ ಬಟಿಂಡಾಕ್ಕೆ ಭೇಟಿ ನೀಡಿದ ವೇಳೆ, ಹೊಸದಾಗಿ ಮದುವೆಯಾಗಿದ್ದ ಜೋಡಿ (newly wed couple) ಯೊಂದಕ್ಕೆ ಸರ್ಪ್ರೈಸ್​ ನೀಡಿದ್ದಾರೆ. ನೂತನ ಮುಖ್ಯಮಂತ್ರಿ, ನವವಿವಾಹಿತರಿಗೆ ಸರ್ಪ್ರೈಸ್​ ನೀಡಿದ ವಿಡಿಯೋವನ್ನು ಪಂಜಾಬ್​ ಸರ್ಕಾರ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದೆ. ಆದರೆ ಒಂದೆಂದರೆ, ಇಂಥ ಕೊವಿಡ್​ 19 ಕಾಲದಲ್ಲೂ ಮುಖ್ಯಮಂತ್ರಿಯಿಂದ ಹಿಡಿದು ಪೊಲೀಸರು, ನವವಿವಾಹಿತರು, ಅವರ ಸಂಬಂಧಿಕರೆಲ್ಲ ಮಾಸ್ಕ್​ ಇಲ್ಲದೆ ಗುಂಪಾಗಿ ನಿಂತಿದ್ದಾರೆ. ಹಾಗಾಗಿ ವಿಡಿಯೋ ನೋಡಿದ ಜನರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕೊವಿಡ್​ 19 ನಿಯಮ ಉಲ್ಲಂಘನೆ ಎಂದಿದ್ದಾರೆ. 

ಚರಣಜಿತ್​ ಸಿಂಗ್​ ಛನ್ನಿ ನಿನ್ನೆ ಬಟಿಂಡಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಂಡಿ ಕಲನ್​ ಗ್ರಾಮದ ಬಳಿ ನವವಿವಾಹಿತರು ಮತ್ತು ಅವರ ಸಂಬಂಧಿಕರು ಬರುತ್ತಿರುವುದನ್ನು ನೋಡಿದ ಛನ್ನಿ, ತಮ್ಮ ಗಾಡಿಯನ್ನು ನಿಲ್ಲಿಸಿ, ದಂಪತಿಗೆ ಶುಭಕೋರಿದ್ದಾರೆ. ಸಿಹಿಯನ್ನೂ ತಿಂದಿದ್ದಾರೆ. ಮುಖ್ಯಮಂತ್ರಿ ತಮಗೆ ಹಾರೈಸಿದ್ದಕ್ಕೆ ಆ ಹೊಸ ಜೋಡಿ ಫುಲ್​ ಖುಷಿಯಾಗಿದ್ದು ವಿಡಿಯೋದಲ್ಲಿ ಕಾಣುತ್ತದೆ.

ಪಂಜಾಬ್​​ನಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಕ್ಯಾಪ್ಟನ್​ ಅಮರಿಂದರ್​ ಸಿಂಗ್​ರನ್ನು ಕೆಳಗಿಳಿಸಿ ಛನ್ನಿ ಅವರನ್ನು ಸಿಎಂ ಮಾಡಲಾಗಿದೆ. ನಿನ್ನೆ ಸಂಪುಟ ವಿಸ್ತರಣೆಯೂ ಕೂಡ ಆಗಿದ್ದು, ಈ ಹಿಂದೆ ಇದ್ದ ಕೆಲವು ಸಚಿವರನ್ನು ಕೈಬಿಡಲಾಗಿದೆ. ಆರು ಮಂದಿ ಹೊಸ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.  ಛನ್ನಿ ತಮ್ಮನ್ನು ತಾವು ಸಾಮಾನ್ಯ ಜನರ ಪ್ರತಿನಿಧಿ ಎಂದು ಕರೆದುಕೊಂಡಿದ್ದಾರೆ. ಸದ್ಯ ಅವರ ಕ್ಯಾಬಿನೆಟ್​​ನಲ್ಲಿ 15 ಮಂದಿ ಸಚಿವರು ಇದ್ದಾರೆ.

ಇದನ್ನೂ ಓದಿ: ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ

Bharat Bandh: ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಶುರು; ಹೆದ್ದಾರಿಗಳೆಲ್ಲ ಬಂದ್​

(Chief Minister Charanjit Singh Channi stopped his vehicle to greet newly wed couple in Punjab)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ