ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ

‘ರಾಜಾ-ರಾಣಿ’ ಶೋಅನ್ನು ಸಾಕಷ್ಟು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ಧಾರಾವಾಹಿ ಕಲಾವಿದರನ್ನೇ ಇಟ್ಟುಕೊಂಡು ಈ ಶೋ ನಡೆಸಲಾಗುತ್ತಿದೆ.

ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ
ದಿಗಂತ್​-ಐಂದ್ರಿತಾ ರೇ
Follow us
| Updated By: ಮದನ್​ ಕುಮಾರ್​

Updated on: Sep 27, 2021 | 9:16 AM

ನಟ ದಿಗಂತ್​ ಹಾಗೂ ಐಂದ್ರಿತಾ ರೇ ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​. ಇವರು ಮದುವೆ ಆಗಿ ಕೆಲ ವರ್ಷಗಳು ಕಳೆದಿವೆ. ಆದರೆ, ಇವರ ಮಧ್ಯೆ ಮೊದಲು ಎಷ್ಟು ಪ್ರೀತಿ ಇತ್ತೋ ಅಷ್ಟೇ ಪ್ರೀತಿ ಈಗಲೂ ಇದೆ. ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಒಟ್ಟಾಗಿ ಸಮಯ ಕಳೆಯುವ ಸಾಕಷ್ಟು ಫೋಟೋಗಳನ್ನು ಇಬ್ಬರೂ ಆಗಾಗ ಹಂಚಿಕೊಳ್ಳುತ್ತಾರೆ. ಈಗ ದಿಗಂತ್​ ಹಾಗೂ ಐಂದ್ರಿತಾ ಕಲರ್ಸ್​ ಕನ್ನಡ ವಾಹಿನಿಯ ‘ರಾಜಾ-ರಾಣಿ’ ಶೋಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ.

‘ರಾಜಾ-ರಾಣಿ’ ಶೋಅನ್ನು ಸಾಕಷ್ಟು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ಧಾರಾವಾಹಿ ಕಲಾವಿದರನ್ನೇ ಇಟ್ಟುಕೊಂಡು ಈ ಶೋ ನಡೆಸಲಾಗುತ್ತಿದೆ. ಹೆಸರೇ ಹೇಳುವಂತೆ ಇದು ಕಪಲ್​ಗಳ ಶೋ. ಈ ಕಾರಣಕ್ಕೆ ದಿಗಂತ್​ ಹಾಗೂ ಐಂದ್ರಿತಾ ‘ರಾಜಾ-ರಾಣಿ’ ವೇದಿಕೆ ಏರಿದ್ದಾರೆ. ಇದು ವೀಕ್ಷಕರಿಗೆ ಇಷ್ಟವಾಗಿದೆ.

ದಿಗಂತ್​ ನಟನೆಯ ‘ಪಂಚರಂಗಿ’ ಸಿನಿಮಾದ ‘ಉಡಿಸುವೆ ಬೆಳಕಿನ ಸೀರೆಯಾ..’ ಹಾಡು ಹಿಟ್​ ಆಗಿತ್ತು. ಈ ಹಾಡಿಗೆ ದಿಗಂತ್​ ಹಾಗೂ ಐಂದ್ರಿತಾ ಹೆಜ್ಜೆ ಹಾಕಿದ್ದಾರೆ. ಇದಾದ ನಂತರದಲ್ಲಿ ಐಂದ್ರಿತಾ ಅವರನ್ನು ದಿಗಂತ್​ ಬಾಯ್ತುಂಬ ಹೊಗಳಿದ್ದಾರೆ. ‘ನೀನು ತುಂಬಾ ಸುಂದರವಾಗಿದ್ದೀಯಾ, ಐ ಲವ್​ ಯು ಎಂದಿದ್ದಾರೆ’ ದಿಗಂತ್​. ‘ನಾನು ಈ ರೀತಿ ಕಾಂಪ್ಲಿಮೆಂಟ್​ ಕೇಳಿಯೇ ಇರಲಿಲ್ಲ’ ಎಂದರು ಐಂದ್ರಿತಾ. ಈ ವೇಳೆ ನಿರೂಪಕಿ ಅನುಪಮಾ ಗೌಡ ರೊಮ್ಯಾಂಟಿಕ್​ ಆಗಿ ಪ್ರಪೋಸ್​ ಮಾಡುವಂತೆ ಕೋರಿದರು. ಆಗ ದಿಗಂತ್​ ಗುಲಾಬಿ ಹೂವನ್ನು ಬಾಯಲ್ಲಿ ಇಟ್ಟು ಐಂದ್ರಿತಾಗೆ ನೀಡಿದ್ದಾರೆ. ಈ ಹೂವನ್ನು ಐಂದ್ರಿತಾ ತಮ್ಮ ತುಟಿ ಮೂಲಕವೇ ಪಡೆದುಕೊಂಡಿದ್ದು ವಿಶೇಷವಾಗಿತ್ತು.

ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ‘ರಾಜಾ-ರಾಣಿ’ ಶೋ ಶನಿವಾರ ಹಾಗೂ ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ಚಂದನ್​ ಶೆಟ್ಟಿಯಿಂದ ಮರೆಯಲಾರದ ಗಿಫ್ಟ್​; ಮೊದಲ ಬಾರಿಗೆ ಖುಷಿಯಿಂದ ಅತ್ತ ನಿವೇದಿತಾ ಗೌಡ

‘ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ’; ಇಶಿತಾ ಬಗ್ಗೆ ಪತಿಯ ದೂರು

ತಾಜಾ ಸುದ್ದಿ
ಇನ್ಫಿನಿಕ್ಸ್ ಲೇಟೆಸ್ಟ್ Infinix Buds Neo ಮತ್ತು Infinix XE27 ಬಿಡುಗಡೆ
ಇನ್ಫಿನಿಕ್ಸ್ ಲೇಟೆಸ್ಟ್ Infinix Buds Neo ಮತ್ತು Infinix XE27 ಬಿಡುಗಡೆ
ತಮ್ಮ ಕೋಪಕ್ಕೆ ಮಾಧ್ಯಮದವರು ಕ್ಯಾರೆ ಅನ್ನದಾಗ ಪರಮೇಶ್ವರ್ ಮೆತ್ತಗಾದರು!
ತಮ್ಮ ಕೋಪಕ್ಕೆ ಮಾಧ್ಯಮದವರು ಕ್ಯಾರೆ ಅನ್ನದಾಗ ಪರಮೇಶ್ವರ್ ಮೆತ್ತಗಾದರು!
ಬಾಗಲಕೋಟೆ: ಮೃತ ಮಹಾದೇವಿ ಪೋಷಕರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಸಾಂತ್ವನ
ಬಾಗಲಕೋಟೆ: ಮೃತ ಮಹಾದೇವಿ ಪೋಷಕರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಸಾಂತ್ವನ
ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್
VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್
ವಿಐಪಿ ಖೈದಿಗಳಿಗೆ ‘ಸೇವೆ’ ಒದಗಿಸುವ ಪದ್ಧತಿ ಬಹಳ ವರ್ಷಗಳಿಂದ ನಡೆಯುತ್ತಿದೆ!
ವಿಐಪಿ ಖೈದಿಗಳಿಗೆ ‘ಸೇವೆ’ ಒದಗಿಸುವ ಪದ್ಧತಿ ಬಹಳ ವರ್ಷಗಳಿಂದ ನಡೆಯುತ್ತಿದೆ!
ಫುಲ್ ಜೋಶ್... 20 ವರ್ಷದ ಯುವ ಎಡಗೈ ವೇಗಿಯನ್ನು ಪರಿಚಯಿಸಿದ ಇಂಗ್ಲೆಂಡ್
ಫುಲ್ ಜೋಶ್... 20 ವರ್ಷದ ಯುವ ಎಡಗೈ ವೇಗಿಯನ್ನು ಪರಿಚಯಿಸಿದ ಇಂಗ್ಲೆಂಡ್
ಇಸ್ಕಾನ್​ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ಭಕ್ತಿಯಲ್ಲಿ ಮೈ ಮರೆತ ಜನ
ಇಸ್ಕಾನ್​ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ಭಕ್ತಿಯಲ್ಲಿ ಮೈ ಮರೆತ ಜನ
‘ಸೆಂಟ್ರಲ್ ಜೈಲ್​ ಈಗ ರೆಸಾರ್ಟ್​’; ದರ್ಶನ್ ಫೋಟೋ ನೋಡಿ ಟೀಕೆ
‘ಸೆಂಟ್ರಲ್ ಜೈಲ್​ ಈಗ ರೆಸಾರ್ಟ್​’; ದರ್ಶನ್ ಫೋಟೋ ನೋಡಿ ಟೀಕೆ
Daily Devotional: ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಹಾಗೂ ಮಹತ್ವ ತಿಳಿಯಿರಿ
Daily Devotional: ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಹಾಗೂ ಮಹತ್ವ ತಿಳಿಯಿರಿ