AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ’; ಇಶಿತಾ ಬಗ್ಗೆ ಪತಿಯ ದೂರು

ಕಲರ್ಸ್​ ಕನ್ನಡ ವಾಹಿನಿ ರಾಜಾ-ರಾಣಿ ಹೆಸರಿನ ಹೊಸ ಶೋ ಆರಂಭಿಸಿದೆ. ಈ ಶೋನಲ್ಲಿ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡ ಧಾರಾವಾಹಿ ಕಲಾವಿದರು, ರಿಯಾಲಿಟಿ ಶೋ ಸ್ಪರ್ಧಿಗಳು ಆಗಮಿಸಿದ್ದಾರೆ.

‘ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ’; ಇಶಿತಾ ಬಗ್ಗೆ ಪತಿಯ ದೂರು
ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ; ಇಶಿತಾ ಬಗ್ಗೆ ಪತಿಯ ದೂರು
TV9 Web
| Edited By: |

Updated on: Sep 20, 2021 | 7:56 PM

Share

ಪ್ರೀತಿ ಹೆಚ್ಚಾದಾಗ ಪತಿಯನ್ನು ನಾನಾ ಹೆಸರಿನಿಂದ ಹೆಂಡತಿಯರು ಕೂಗುತ್ತಾರೆ. ಇನ್ನು ಕೋಪ ಹೆಚ್ಚಾದಾಗ ಹೆಂಡತಿಯರು ಏರು ಧ್ವನಿಯಲ್ಲಿ ಮಾತನಾಡಿ ಗಂಡಂದಿರನ್ನು ಬೈಯುತ್ತಾರೆ. ಇದು ಸಾಮಾನ್ಯರ ಮನೆಯಿಂದ ಹಿಡಿದು ಸೆಲೆಬ್ರಿಟಿಗಳ ಮನೆಯವರೆಗೂ ನಡೆದೇ ಇದೆ. ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡ ನಟಿ ಇಶಿತಾ ವರ್ಷಾ ಮನೆಯಲ್ಲೂ ಇದೇ ಕಥೆ. ಈ ಬಗ್ಗೆ ‘ರಾಜಾ-ರಾಣಿ’ ವೇದಿಕೆ ಮೇಲೆ ಇಶಿತಾ ಹೇಳಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ರಾಜಾ-ರಾಣಿ ಹೆಸರಿನ ಹೊಸ ಶೋ ಆರಂಭಿಸಿದೆ. ಈ ಶೋನಲ್ಲಿ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡ ಧಾರಾವಾಹಿ ಕಲಾವಿದರು, ರಿಯಾಲಿಟಿ ಶೋ ಸ್ಪರ್ಧಿಗಳು ಆಗಮಿಸಿದ್ದಾರೆ. ಪ್ರತಿ ವಾರ ನಾನಾ ರೀತಿಯ ಟಾಸ್ಕ್​ಗಳನ್ನು ಅವರಿಗೆ ನೀಡಲಾಗುತ್ತಿದೆ. ಇದರ ಜತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಒಂದಷ್ಟು ವಿಚಾರ ಕೇಳಲಾಗುತ್ತದೆ. ಅದೇ ರೀತಿ ಇಶಿತಾ ವರ್ಷ ಹಾಗೂ ಅವರ ಪತಿ ಮುರುಗ ವೈಯಕ್ತಿಕ ಜೀವನದ ಒಂದಷ್ಟು ವಿಚಾರ ಹೊರ ಬಿದ್ದಿದೆ.

‘ಇಶಿತಾ ವರ್ಷಾ ಕೋಪ ಬಂದಾಗ ಪತಿಯನ್ನು ಯಾವ ಶಬ್ದದಿಂದ ಬಯ್ಯುತ್ತಾರೆ’ ಎಂದು ಪ್ರಶ್ನಿಸಿದರು ನಿರೂಪಕಿ ಅನುಪಮಾ ಗೌಡ. ಇದಕ್ಕೆ ಇಶಿತಾ ‘ನಾನು ಯಾವುದೇ ಶಬ್ದದಿಂದಲೂ ಬಯ್ಯುವುದಿಲ್ಲ. ಮುರುಗ ಎಂದು ಏರು ಧ್ವನಿಯಲ್ಲಿ ಮಾತನಾಡುತ್ತೆನೆ. ಆಗ ಅವರಿಗೆ ಗೊತ್ತಾಗುತ್ತದೆ’ ಎಂದರು. ಹಾಗಾದರೆ, ಪ್ರೀತಿ ಹೆಚ್ಚಾದಾಗ ಯಾವ ಪದ ಬಳಕೆ ಮಾಡುತ್ತಾರೆ ಎಂದು ಕೇಳಲಾಯಿತು. ಈ ವೇಳೆ ಮುರುಗ ‘ಸೋನು’ ಎಂದು ಆಕೆ ಕರೆಯುತ್ತಾರೆ ಎಂದು ಉತ್ತರಿಸಿದರು.

ಮುಂದುವರಿದು, ‘ನನ್ನನ್ನೂ ಸೋನು ಅಂತಾಳೆ, ಅಲ್ಲಿ ರಸ್ತೆಯಲ್ಲಿ ಹೋಗುವ ನಾಯಿಯನ್ನೂ ಸೋನು ಎನ್ನುತ್ತಾಳೆ’ ಎಂದು ನಗುತ್ತಲೇ ಸೃಜನ್​ ಬಳಿ ದೂರು ಹೇಳಿಕೊಂಡರು ಮುರುಗ. ಈ ಮಾತನ್ನು ಕೇಳಿ ನಿರೂಪಕಿ ಅನುಪಮಾ ಗೌಡ, ಜಡ್ಜ್​ಗಳಾದ ಹಿರಿಯ ನಟಿ ತಾರಾ ಹಾಗೂ ಸೃಜನ್​ ಲೋಕೇಶ್​ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ‘ರಾಜಾ-ರಾಣಿ’ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ಕಷ್ಟಕಾಲದಲ್ಲಿ ಮಾರಿದ್ದ ಪ್ರೀತಿಯ ಕಾರನ್ನು ಹುಡುಕಿ ಇಶಿತಾಗೆ ಗಿಫ್ಟ್​ ಮಾಡಿದ ಪತಿ ಮುರುಗ

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!