AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪರ್ಧಿ ತನ್ನೊಂದಿಗೆ ಫ್ಲರ್ಟ್ ಮಾಡಿದಾಗ ಕೆಬಿಸಿ ನಿರ್ಮಾಪಕರಿಗೆ ಶೋ ನಿಲ್ಲಿಸಲು ಹೇಳಿದ ಅಮಿತಾಭ್!; ಕಾರಣವೇನು?

Amitabh Bachchan: ಕೆಬಿಸಿ 13ರ ಇತ್ತೀಚಿನ ಪ್ರೋಮೋದಲ್ಲಿ ಅಮಿತಾಭ್​ರೊಂದಿಗೆ ಸ್ಪರ್ಧಿಯೊಬ್ಬರು ಫ್ಲರ್ಟ್ ಮಾಡಿರುವುದು ಸಖತ್ ಸುದ್ದಿಯಾಗಿದೆ. ಜೊತೆಗೆ ಇದಕ್ಕೆ ಅಮಿತಾಭ್ ನೀಡಿರುವ ಪ್ರತಿಕ್ರಿಯೆ ವೈರಲ್ ಆಗಿದೆ.

ಸ್ಪರ್ಧಿ ತನ್ನೊಂದಿಗೆ ಫ್ಲರ್ಟ್ ಮಾಡಿದಾಗ ಕೆಬಿಸಿ ನಿರ್ಮಾಪಕರಿಗೆ ಶೋ ನಿಲ್ಲಿಸಲು ಹೇಳಿದ ಅಮಿತಾಭ್!; ಕಾರಣವೇನು?
ಸ್ಪರ್ಧಿ ನಮ್ರತಾ ಷಾ ಹಾಗೂ ಅಮಿತಾಭ್ ಬಚ್ಚನ್
TV9 Web
| Updated By: shivaprasad.hs|

Updated on:Sep 21, 2021 | 2:06 PM

Share

KBC 13: ಕೌನ್ ಬನೇಗಾ ಕರೋಡ್​ಪತಿ 13ರ ಕಾರ್ಯಕ್ರಮದಲ್ಲಿ ಅಮಿತಾಭ್ ತಮ್ಮ ಲವಲವಿಕೆ ನಿರೂಪಣೆಯಿಂದ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಚಾನಲ್ ಹಂಚಿಕೊಂಡ ಪ್ರೋಮೋ ವೀಕ್ಷಕರ ಆಸಕ್ತಿ ಕೆರಳಿಸಿದ್ದು, ಅಮಿತಾಭ್ ನಡೆಗೆ ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ಅಮಿತಾಭ್ ಮಾಡಿದ್ದೇನು ಅಂತೀರಾ. ಇಲ್ಲಿದೆ ಉತ್ತರ. ಚಾನಲ್ ಹಂಚಿಕೊಂಡಿರುವ ಇತ್ತೀಚಿನ ಪ್ರೋಮೋದಲ್ಲಿ ಹಾಟ್​ಸೀಟ್​ನಲ್ಲಿ ಕುಳಿತ ಸ್ಪರ್ಧಿ, ಕಥಕ್ ನೃತ್ಯಪಟುವಾದ ನಮ್ರತಾ ಷಾ ಅವರು ಅಮಿತಾಭ್​ರೊಂದಿಗೆ ಫ್ಲರ್ಟ್ ಮಾಡಿದ್ದಾರೆ. ಅದಕ್ಕೆ ಅಮಿತಾಭ್ ಉತ್ತರಿಸಿರುವ ಪ್ರೋಮೋ ಈಗ ವೈರಲ್ ಆಗುತ್ತಿದೆ.

ನಮ್ರತಾ ಅವರು ಧರಿಸಿದ್ದ ನೆಕ್ಲೇಸನ್ನು ಅಮಿತಾಭ್ ಪ್ರಶಂಸಿಸಿದಾಗ, ಅವರು ನಿಮ್ಮನ್ನು ‘ಅಮಿತ್ ಜಿ’ ಎನ್ನಲೇ ಎಂದು ಕೇಳುತ್ತಾರೆ. ಆಗ ಅಮಿತಾಭ್, ಕೇವಲ ‘ಅಮಿತ್’ ಎಂದು ಕರೆಯಿರಿ ಸಾಕು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಜೊತೆಗೆ ಕೆಬಿಸಿಯ ಪ್ರೊಡ್ಯೂಸರ್​ಗೆ ‘ನಿರ್ಮಾಪಕರೇ ಕೂಡಲೇ ಈ ಶೋವನ್ನು ನಿಲ್ಲಿಸಿ, ನಾನು ನಮ್ರತಾ ಅವರೊಂದಿಗೆ ಹೊರ ಹೋಗಿ ಒಂದು ಕಪ್ ಟೀ ಕುಡಿಯಬೇಕು’ ಎಂದಿದ್ದಾರೆ. ಅಮಿತಾಭ್ ಮಾತಿಗೆ ಸೆಟ್ಟಿನಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ.

ಚಾನಲ್ ಹಂಚಿಕೊಂಡ ಪ್ರೋಮೋ ಇಲ್ಲಿದೆ:

ಇತ್ತೀಚೆಗೆ ಚಾನಲ್ ಮತ್ತೊಂದು ಪ್ರೋಮೋ ಹಂಚಿಕೊಂಡಿತ್ತು. ಅದರಲ್ಲಿ ಮೂವರು ಹೊಸ ಸ್ಪರ್ಧಿಗಳು ಭಾಗವಹಿಸುತ್ತಿರುವ ಕುರಿತು ಮಾಹಿತಿ ನೀಡಲಾಗಿತ್ತು. ಅದರಲ್ಲಿ ಕೂಡ ಅಮಿತಾಭ್ ಅವರೊಂದಿಗೆ ನಮ್ರತಾ ಮಾತನಾಡಿರುವುದು ಸಾಕಷ್ಟು ಸುದ್ದಿಯಾಗಿತ್ತು. ಅದರಲ್ಲಿ ನಮ್ರತಾ ನೃತ್ಯ ಮಾಡುತ್ತಾ ಹಲವಾರು ಸುತ್ತು ತಿರುಗಿದ್ದರು. ಆಗ ಅಮಿತಾಭ್, ಹಾಗೆ ತಿರುಗುವಾಗ ತಲೆ ಸುತ್ತುವುದಿಲ್ಲವೇ? ಎಂದು ಪ್ರಶ್ನಿಸಿದ್ದರು. ಆಗ ನಮ್ರತಾ, ‘ಇಲ್ಲ. ದೃಷ್ಟಿಯನ್ನು ಒಂದೇ ಕಡೆ ಕೇಂದ್ರೀಕರಿಸಿದಾಗ ಹಾಗಾಗುವುದಿಲ್ಲ’ ಎಂದು ಅಮಿತಾಭ್​ರನ್ನು ಉದ್ದೇಶಿಸಿ ಹೇಳುತ್ತಾ ಫ್ಲರ್ಟ್ ಮಾಡಿದ್ದರು. ಜೊತೆಗೆ ‘ನೀವು ಯುವಕನಂತೆ ಕಾಣುತ್ತೀರಿ’ ಎಂದು ಅಮಿತಾಭ್​ರಿಗೆ ಹೇಳಿದಾಗ, ಅಮಿತಾಭ್ ನಾಚಿದ್ದರು. ಆ ಪ್ರೋಮೋ ಇಲ್ಲಿದೆ.

ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದ ಮತ್ತೋರ್ವ ಸ್ಪರ್ಧಿ, ಪಂಕಜ್ ₹ 12.5 ಲಕ್ಷ ಬಹುಮಾನ ಗಳಿಸಿದರು. ಮತ್ತೋರ್ವ ಸ್ಪರ್ಧಿಗೆ ₹ 1 ಕೋಟಿ ಮೊತ್ತದ ಪ್ರಶ್ನೆ ಕೇಳುತ್ತಿರುವುದನ್ನು ತೋರಿಸಲಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ.

ಕೆಬಿಸಿ 13ರಲ್ಲಿ ಪ್ರತೀ ಶುಕ್ರವಾರ ತಾರೆಯರು ಭಾಗಿಯಾಗುತ್ತಾರೆ. ಕಳೆದ ವಾರ ಒಲಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗಗೂ ಪಿ.ಶ್ರೀಜೇಶ್ ಬಾಗಿಯಾಗಿದ್ದರು. ಅವರು ಒಟ್ಟು ₹ 25 ಲಕ್ಷವನ್ನು ಗಳಿಸಿದ್ದು ಚಾರಿಟಿಗಾಗಿ ಹಣವನ್ನು ಬಳಸಲಿದ್ದಾರೆ. ಅದಕ್ಕೂ ಮೊದಲು ಶುಕ್ರವಾರದ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ, ಫರಾ ಖಾನ್ ಭಾಗವಹಿಸಿದ್ದರು. ಮೊದಲ ಸಂಚಿಕೆಯಲ್ಲಿ ಖ್ಯಾತ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು.

ಇದನ್ನೂ ಓದಿ:

Kareena Kapoor Khan Birthday: ಹುಟ್ಟುಹಬ್ಬದ ದಿನ ಸೈಫ್​ ಜತೆ ಎಂಜಾಯ್​ ಮಾಡಲು ಮಾಲ್ಡೀವ್ಸ್​ಗೆ ತೆರಳಿದ ಕರೀನಾ

KBC 13: ಕೆಬಿಸಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ‘ಐ ಲವ್ ಯೂ ಟೂ’ ಎಂದ ಜೆನಿಲಿಯಾ; ಏನಿದು ಸಮಾಚಾರ?

(Amitabh told to KBC 13 producer to stop the show after a contestant flirts with him)

Published On - 2:04 pm, Tue, 21 September 21

ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ