AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಲೀನ್ ಚಿಟ್ ವರದಿ: ಅನಿಲ್ ದೇಶ್​​ಮುಖ್ ಅವರ ವಕೀಲರನ್ನು ಬಂಧಿಸಿದ ಸಿಬಿಐ

Anil Deshmukh: ಏತನ್ಮಧ್ಯೆ, ದೇಶ್​​ಮುಖ್ ಅವರ ಕುಟುಂಬ ಸದಸ್ಯರು ಏಜೆನ್ಸಿ ಯಾವುದೇ ಸೂಚನೆ ನೀಡದೆ ಅಥವಾ ಅವರ ಕುಟುಂಬಗಳಿಗೆ ತಿಳಿಸಲು ಅವಕಾಶ ನೀಡದೆ ಕಾನೂನುಬಾಹಿರವಾಗಿ ಚತುರ್ವೇದಿ ಮತ್ತು ದಾಗಾರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಆರೋಪಿಸಿದರು

ಕ್ಲೀನ್ ಚಿಟ್ ವರದಿ: ಅನಿಲ್ ದೇಶ್​​ಮುಖ್ ಅವರ ವಕೀಲರನ್ನು ಬಂಧಿಸಿದ ಸಿಬಿಐ
ಅನಿಲ್ ದೇಶ್​ಮುಖ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 02, 2021 | 12:12 PM

Share

ಮುಂಬೈ: ಸಿಬಿಐ ಬುಧವಾರ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್​​ಮುಖ್ ಅವರ ವಕೀಲರನ್ನು ಬಂಧಿಸಿ, ಎನ್‌ಸಿಪಿ ನಾಯಕನ ಅಳಿಯನನ್ನು ವಿಚಾರಣೆಗೆ ಒಳಪಡಿಸಿದೆ. ಅದೇ ವೇಳೆ ಪೋಲಿಸರ ಆರೋಪಗಳ ತನಿಖೆಯ ಅಧಿಕೃತ ವರದಿಯ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಐ, ತಮ್ಮದೇ ಸಂಸ್ಥೆಯ ಸಬ್ ಇನ್ಸ್‌ಪೆಕ್ಟರ್ ಅವರನ್ನು ಬಂಧಿಸಿದೆ. ದೇಶ್​​ಮುಖ್ ಅವರ ಪರವಾಗಿ ಲಂಚ ಸಂಗ್ರಹಿಸಲು ಒತ್ತಾಯಿಸಿದ್ದಾರೆ ಎಂಬ ಆರೋಪ ಎಸ್ಐ ಮೇಲಿದೆ. ಏಜೆನ್ಸಿಯು ದೇಶ್​​ಮುಖ್ ಅವರ ಅಳಿಯ ಗೌರವ್ ಚತುರ್ವೇದಿ ಅವರನ್ನು ಕೆಲವು ಗಂಟೆಗಳ ನಂತರ ಹೋಗಲು ಅವಕಾಶ ಮಾಡಿಕೊಟ್ಟಿತು ಆದರೆ ಆತನೊಂದಿಗೆ ಪ್ರಯಾಣಿಸುತ್ತಿದ್ದ ವಕೀಲ ಆನಂದ್ ದಾಗಾ ಅವರನ್ನು ರಾತ್ರಿ 7 ಗಂಟೆಗೆ ವರ್ಲಿ ಸೀಫೇಸ್‌ನಲ್ಲಿ ಸಿಬಿಐ ತಡೆಹಿಡಿಯಿತು.

ದಾಗಾ, ಸಬ್ ಇನ್ಸ್‌ಪೆಕ್ಟರ್ ಅಭಿಷೇಕ್ ತಿವಾರಿ ಮತ್ತು ಅಪರಿಚಿತ ಇತರರ ವಿರುದ್ಧ “ಕಾನೂನುಬಾಹಿರ ಲಂಚ” ಸೇರಿದಂತೆ ಪ್ರಕರಣಗಳನ್ನು ದಾಖಲಿಸಿದೆ. ದೇಶ್​​ಮುಖ್ ಪ್ರಕರಣದ ತನಿಖೆಯ ಸಮಯದಲ್ಲಿ, ಸಿಬಿಐ ಇಂದು ಸಬ್ ಇನ್ಸ್‌ಪೆಕ್ಟರ್ ಅನ್ನು ಬಂಧಿಸಿದೆ. ಈ ವಕೀಲರನ್ನು ವಿಚಾರಣೆಗೊಳಪಡಿಸಲಾಗಿದೆ. ಅಲಹಾಬಾದ್ ಮತ್ತು ದೆಹಲಿಯಲ್ಲಿ ಶೋಧ ನಡೆಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ದೇಶ್​​ಮುಖ್ ವಿರುದ್ಧ ಸಿಬಿಐ ತನಿಖೆ ಆರಂಭವಾಗಿದ್ದು, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ತನ್ನ ಪರವಾಗಿ ಲಂಚವನ್ನು ಸಂಗ್ರಹಿಸುವಂತೆ ಆಗಿನ ಸಚಿವರು ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸೋರಿಕೆಯಾದ ದಾಖಲೆಯ ಪ್ರಕಾರ ತನಿಖಾ ಅಧಿಕಾರಿ ಡಿವೈಎಸ್‌ಪಿ ಆರ್‌ಎಸ್ ಗುಂಜಿಯಾಲ್ ಸಹಿ ಮಾಡಿದ ಪ್ರಾಥಮಿಕ ವಿಚಾರಣೆ (ಪಿಇ) ವರದಿಯಲ್ಲಿ ದೇಶ್​​ಮುಖ್ ವಿರುದ್ಧ ಯಾವುದೇ ವೇದ್ಯ ಅಪರಾಧವನ್ನು ಮಾಡಲಾಗಿಲ್ಲ.

ದಾಖಲೆಯ ಸತ್ಯಾಸತ್ಯತೆಯನ್ನು ಸಿಬಿಐ ನಿರಾಕರಿಸಿಲ್ಲ, ಅದರಲ್ಲಿರುವ ವಿಷಯಗಳನ್ನು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಟ್ವೀಟ್ ಮಾಡಿದ್ದಾರೆ ಮತ್ತು ನಂತರ ವಾರಾಂತ್ಯದಲ್ಲಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಡಾಕ್ಯುಮೆಂಟ್ ಅಂತಿಮ ಪಿಇ ಅಲ್ಲ ಆದರೆ ಐಒ ಸಲ್ಲಿಸಿದ “ಆರಂಭಿಕ” ವಿಚಾರಣಾ ವರದಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಚಾರಣಾ ವರದಿಯು ಹಲವಾರು ಸುತ್ತಿನ ಸಮಾಲೋಚನೆಗಳ ಮೂಲಕ ಸಾಗುತ್ತದೆ ಮತ್ತು ಕಾನೂನು ಅಧಿಕಾರಿಗಳ ಅಭಿಪ್ರಾಯವನ್ನೂ ಪರಿಗಣಿಸುತ್ತದೆ. ಅಂತಿಮವಾಗಿ, ಉನ್ನತ ಅಧಿಕಾರಿಯು ಪ್ರಕರಣ ದಾಖಲಿಸಬೇಕೇ ಅಥವಾ ಬೇಡವೇ ಎಂದು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಧಿಕಾರಿ ಹೇಳಿದರು.

ಏತನ್ಮಧ್ಯೆ, ದೇಶ್​​ಮುಖ್ ಅವರ ಕುಟುಂಬ ಸದಸ್ಯರು ಏಜೆನ್ಸಿ ಯಾವುದೇ ಸೂಚನೆ ನೀಡದೆ ಅಥವಾ ಅವರ ಕುಟುಂಬಗಳಿಗೆ ತಿಳಿಸಲು ಅವಕಾಶ ನೀಡದೆ ಕಾನೂನುಬಾಹಿರವಾಗಿ ಚತುರ್ವೇದಿ ಮತ್ತು ದಾಗಾರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಆರೋಪಿಸಿದರು. ಎನ್‌ಸಿಪಿ ಮತ್ತು ಆಡಳಿತ ಮಿತ್ರ ಪಕ್ಷ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಮತ್ತು ಸಿಬಿಐ ಕ್ರಮವು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದೆ.

ಆದಾಗ್ಯೂ, ಸಿಬಿಐ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದು, ಈ ಪ್ರಕರಣದಲ್ಲಿ ದೇಶುಖ್ ಪರವಾಗಿ ಪ್ರತಿನಿಧಿಸುತ್ತಿರುವ ನಾಗ್ಪುರ್ ಮೂಲದ ದಾಗಾ ಅವರನ್ನು ಪಿಇಯಲ್ಲಿ ಒಳಗೊಂಡಿರುವ ಸಬ್ ಇನ್ಸ್‌ಪೆಕ್ಟರ್‌ಗೆ ಲಂಚ ನೀಡಿದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. “ಪಿಇ ಸಮಯದಲ್ಲಿ ಪ್ರಕರಣದಲ್ಲಿ ತನಿಖಾಧಿಕಾರಿಗಿಂತ ಕೆಳಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗೆ ವಕೀಲರು ಲಂಚ ನೀಡಿದ್ದರು ಎಂಬುದಕ್ಕೆ ಸಾಕ್ಷಿಗಳಿವೆ. ವಿಚಾರಣೆ ನಡೆಯುತ್ತಿದೆ “ಎಂದು ಅಧಿಕಾರಿ ಹೇಳಿದರು.

ಇದನ್ನೂ  ಓದಿ: Syed Ali Shah Geelani ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ; ಕಾಶ್ಮೀರದಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ಹೇರಿಕೆ

(Clean chit report CBI detained the lawyer of former Maharashtra Home Minister Anil Deshmukh)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ