AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಡ ಬಿತ್ತನೆ ಮಾಡಿದರೂ ದೆಹಲಿಯಲ್ಲಿ ಮಳೆ ಇಲ್ಲ, 3.2 ಕೋಟಿ ರೂ. ಪ್ರಯೋಗ ವಿಫಲವಾಯಿತೇ?

Cloud Seeding: ದೆಹಲಿಯ ವಿಷಕಾರಿ ಮಾಲಿನ್ಯವನ್ನು ನಿಭಾಯಿಸಲು ದೆಹಲಿ ಸರ್ಕಾರ ಮಂಗಳವಾರ ನಡೆಸಿದ ಮೋಡ ಬಿತ್ತನೆ ಪ್ರಯೋಗಗಳನ್ನು ಅತ್ಯಂತ ದುಬಾರಿ, ತಾತ್ಕಾಲಿಕ ಮತ್ತು ಸುಸ್ಥಿರವಲ್ಲದ ಕ್ರಮ ಎಂದು ತಜ್ಞರು ಕರೆದಿದ್ದಾರೆ. ಕೃತಕ ಮಳೆಯು ಮಾಲಿನ್ಯಕಾರಕಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿದರೂ, ಒಂದು-ಎರಡು ದಿನಗಳಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ ಎಂದು ಅವರು ಹೇಳುತ್ತಾರೆ. ದೆಹಲಿ ಪರಿಸರ ಇಲಾಖೆ ಮತ್ತು ಐಐಟಿ-ಕಾನ್ಪುರ ನಡುವೆ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಮೋಡ ಬಿತ್ತನೆಗಾಗಿ ಐದು ಪ್ರಯೋಗಗಳಿಗೆ 3.2 ಕೋಟಿ ರೂ.ಗಳಿಗಿಂತ ಹೆಚ್ಚು ಬಜೆಟ್ - ಅಂದರೆ ಒಂದು ಪ್ರಾಯೋಗಿಕ ಓಟಕ್ಕೆ 64 ಲಕ್ಷ ರೂ. ವೆಚ್ಚವಾಗುತ್ತದೆ.

ಮೋಡ ಬಿತ್ತನೆ ಮಾಡಿದರೂ ದೆಹಲಿಯಲ್ಲಿ ಮಳೆ ಇಲ್ಲ, 3.2 ಕೋಟಿ ರೂ. ಪ್ರಯೋಗ ವಿಫಲವಾಯಿತೇ?
ಮೋಡ ಬಿತ್ತನೆ
ನಯನಾ ರಾಜೀವ್
|

Updated on:Oct 29, 2025 | 12:30 PM

Share

ನವದೆಹಲಿ, ಅಕ್ಟೋಬರ್ 29: ಮಾಲಿನ್ಯ(Pollution)ವನ್ನು ಕಡಿಮೆ ಮಾಡುವ ದೃಷ್ಟಿಯಲ್ಲಿ ದೆಹಲಿಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಲಾಗಿದ್ದ ಮೋಡಬಿತ್ತನೆ ಕಾರ್ಯ ವಿಫಲವಾಗಿದೆ. ಸಾಮಾನ್ಯವಾಗಿ ಮಳೆ ತೀರಾ ಕಡಿಮೆಯಾದಾಗ ರಾಜ್ಯದಲ್ಲಿ ಮೋಡಬಿತ್ತನೆ ಮಾಡುವುದು ಸಾಮಾನ್ಯ. ಆದರೆ ದೆಹಲಿಯಲ್ಲಿ ಮಾಲಿನ್ಯ ಮಿತಿ ಮೀರಿದ್ದು, ಮಳೆ ಬಂದರೆ ಮಾಲಿನ್ಯವನ್ನು ಸ್ವಲ್ಪವಾದರೂ ಕಡಿಮೆ ಮಾಡಬಹುದು ಎನ್ನುವ ಆಲೋಚನೆಯಲ್ಲಿ ಬರೋಬ್ಬರಿ 3.2 ಕೋಟಿ ರೂ. ವೆಚ್ಚದಲ್ಲಿ ಮೋಡಬಿತ್ತನೆ ಮಾಡಲಾಗಿದೆಮೋಡಗಳಲ್ಲಿನ ಆರ್ದ್ರತೆ ತುಂಬಾ ಕಡಿಮೆಯಾಗಿತ್ತು ಇದೇ ಮಳೆ ಬಾರದಿರಲು ಕಾರಣ ಎಂದು ಹೇಳಲಾಗಿದೆ.

ಐಐಟಿ ಕಾನ್ಪುರ ತಂಡವು ಇಂದು ನಿಗದಿಯಾಗಿದ್ದ ಮುಂದಿನ ಪ್ರಯೋಗವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಮೋಡಗಳಲ್ಲಿ ತೇವಾಂಶ ಪತ್ತೆಯಾದಾಗ ಮೋಡ ಬಿತ್ತನೆ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತದೆ.

ಮೊದಲ ಪ್ರಯೋಗವನ್ನು ಅಕ್ಟೋಬರ್ 23 ರಂದು ಬುರಾರಿಯಲ್ಲಿ ನಡೆಸಲಾಯಿತು. ದೀಪಾವಳಿಯ ನಂತರ ಗಾಳಿಯ ಗುಣಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಇದಕ್ಕಾಗಿ ಸರ್ಕಾರವು ಕೃತಕ ಮಳೆ ಬರಿಸಲು ಮೋಡ ಬಿತ್ತನೆ ನಡೆಸಿತು. ಆದರೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದರೂ, ಮಳೆಯ ಯಾವುದೇ ಲಕ್ಷಣಗಳಿರಲಿಲ್ಲ.

ಮಂಗಳವಾರ ಮೋಡ ಬಿತ್ತನೆಗಾಗಿ ವಿಶೇಷ ಸೆಸ್ನಾ ವಿಮಾನ ಕಾನ್ಪುರದಿಂದ ದೆಹಲಿಗೆ ಹಾರಿತ್ತು.ಮಧ್ಯಾಹ್ನ 2 ಗಂಟೆಗೆ ವಿಮಾನವು ಖೇಕ್ರಾ, ಬುರಾರಿ ಮತ್ತು ಮಯೂರ್ ವಿಹಾರ್‌ನಂತಹ ಪ್ರದೇಶಗಳ ಮೇಲೆ 6,000 ಅಡಿ ಎತ್ತರದಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿತು. ಪ್ರಕ್ರಿಯೆಯ ಉದ್ದೇಶ ಮಾಲಿನ್ಯವನ್ನು ನಿಯಂತ್ರಿಸುವುದಾಗಿತ್ತು. ಕೃತಕ ಮಳೆ ಸುರಿಸುವ ಮೋಡ ಬಿತ್ತನೆಯ ಮೊದಲ ಪ್ರಯೋಗ ನಡೆದಿದ್ದು 1946ರಲ್ಲಿ.

ಮೋಡ ಬಿತ್ತನೆಯ ನಂತರ, ಐಐಟಿ ಕಾನ್ಪುರ ಮತ್ತು ದೆಹಲಿ ಸರ್ಕಾರವು ಪ್ರಯೋಗದ ನಾಲ್ಕು ಗಂಟೆಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ ಎಂದು ಹೇಳಿತ್ತು. ಆದರೆ ನಾಲ್ಕು ಗಂಟೆಗಳು ಕಳೆದರೂ ಮಳೆ ಬರಲಿಲ್ಲ.ಇದು ಸಾಕಷ್ಟು ಮಂದಿಯನ್ನು ನಿರಾಸೆಗೊಳಿಸಿತು.

ಮತ್ತಷ್ಟು ಓದಿ:  ವಾಯುಮಾಲಿನ್ಯ ಗಣನೀಯ ಹೆಚ್ಚಳ: ಕೇಂದ್ರದ ಪಟ್ಟಿಯಲ್ಲಿ ಮತ್ತಷ್ಟು ಕುಸಿದ ಬೆಂಗಳೂರು

ದೆಹಲಿ ಪರಿಸರ ಇಲಾಖೆ ಮತ್ತು ಐಐಟಿ-ಕಾನ್ಪುರ ನಡುವೆ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಮೋಡ ಬಿತ್ತನೆಗಾಗಿ ಐದು ಪ್ರಯೋಗಗಳಿಗೆ 3.2 ಕೋಟಿ ರೂ.ಗಳಿಗಿಂತ ಹೆಚ್ಚು ಬಜೆಟ್ -ಅಂದರೆ ಒಂದು ಪ್ರಯೋಗಕ್ಕೆ 64 ಲಕ್ಷ ರೂ. ವೆಚ್ಚವಾಗುತ್ತದೆ.

ಉತ್ತರ ದೆಹಲಿಯಲ್ಲಿ ಮೂರು ಪ್ರಯೋಗಗಳನ್ನು ಮಾಡಲಾಗಿದೆ, ಮತ್ತು ಅವುಗಳಲ್ಲಿ ಯಾವುದೂ ದೊಡ್ಡ ಮಳೆಗೆ ಕಾರಣವಾಗಲಿಲ್ಲ. ದೆಹಲಿಯ ವಾಯು ಗುಣಮಟ್ಟದ ಸೂಚ್ಯಂಕ (AQI) ಕಳೆದ ಕೆಲವು ದಿನಗಳಿಂದ ತುಂಬಾ ಕಳಪೆಯಾಗಿದೆ.

ಐಐಟಿ ದೆಹಲಿಯ ವಾತಾವರಣ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಶಹಜಾದ್ ಗನಿ ಮಾತನಾಡಿ, ಚಳಿಗಾಲದಲ್ಲಿ ದೆಹಲಿಯ ಹವಾಮಾನವು ಸಾಮಾನ್ಯವಾಗಿ ತುಂಬಾ ಶುಷ್ಕವಾಗಿರುತ್ತದೆ, ಗಾಳಿಯಲ್ಲಿ ತೇವಾಂಶ ಬಹಳ ಕಡಿಮೆ ಇರುತ್ತದೆ.

ಮೋಡ ಬಿತ್ತನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮೋಡ ಬಿತ್ತನೆ ಪ್ರಕ್ರಿಯೆಯ ಸಮಯದಲ್ಲಿ ಏಕಕಾಲದಲ್ಲಿ ತೀವ್ರವಾದ ಮಳೆ ಸಂಭವಿಸಿ, ಭಾರೀ ಮಳೆಯಾಗಿ ಜೀವ ಮತ್ತು ಆಸ್ತಿಗೆ ಹಾನಿಯಾದರೆ ಅದು ಮೋಡ ಬಿತ್ತನೆಗೆ ಸಂಬಂಧಿಸದಿದ್ದರೂ ಸಹ ಅದಕ್ಕೆ ಯಾರು ಹೊಣೆಗಾರರಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

ಮೋಡ ಬಿತ್ತನೆಯನ್ನು ಹೇಗೆ ಮಾಡಲಾಗುತ್ತದೆ?

ಮೋಡ ಬಿತ್ತನೆ ಎಂದರೆ ವಿಮಾನಗಳ ಮೂಲಕ ಸಿಲ್ವರ್ ಅಯೋಡೈಡ್, ಪೊಟ್ಯಾಸಿಯಂ ಅಯೋಡೈಡ್ ಅಥವಾ ಡ್ರೈ ಐಸ್‌ನಂತಹ ರಾಸಾಯನಿಕಗಳನ್ನು ಮೋಡಗಳಿಗೆ ಸಿಂಪಡಿಸಲಾಗುತ್ತದೆ. ಈ ರಾಸಾಯನಿಕಗಳು ನೀರಿನ ಆವಿಯನ್ನು ಆಕರ್ಷಿಸಿ, ಮಂಜುಗಡ್ಡೆಯನ್ನು ರೂಪಿಸಲು ಸಹಾಯ ಮಾಡುತ್ತವೆ, ಇದರಿಂದಾಗಿ ಮಳೆ ಬೀಳುತ್ತದೆ. ಸಿಲ್ವರ್ ಅಯೋಡೈಡ್‌ನಂತಹ ಸಣ್ಣ ಕಣಗಳನ್ನು ಮೋಡಗಳಿಗೆ ಬಿತ್ತಲಾಗುತ್ತದೆ.

ಇದು ಒಂದು ರೀತಿಯ ನ್ಯೂಕ್ಲಿಯಸ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರ ಸುತ್ತಲೂ ನೀರಿನ ಹನಿಗಳು ಅಥವಾ ಮಂಜುಗಡ್ಡೆ ಹರಳುಗಳು ಬೆಳೆಯುತ್ತವೆ. ಈ ರಾಸಾಯನಿಕಗಳು ಮೋಡಗಳಲ್ಲಿರುವ ನೀರಿನ ಆವಿಯನ್ನು ಆಕರ್ಷಿಸುತ್ತವೆ, ಇದರಿಂದಾಗಿ ನೀರು ದೊಡ್ಡದಾಗಿ ಘನೀಕರಿಸುತ್ತದೆ ಮತ್ತು ಮಳೆಹನಿಗಳಾಗಿ ಭೂಮಿಗೆ ಬೀಳಲು ಪ್ರಾರಂಭಿಸುತ್ತದೆ.

ಇದನ್ನು ಬರಗಾಲದ ಸಂದರ್ಭಗಳಲ್ಲಿ ಅಥವಾ ಮಳೆ ಕಡಿಮೆಯಾದಾಗ ಮಳೆಯ ಪ್ರಮಾಣವನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ದೆಹಲಿಯಂತಹ ನಗರಗಳಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಕೃತಕ ಮಳೆ ಸುರಿಸಲು ಮೋಡ ಬಿತ್ತನೆ ಪ್ರಯೋಗಗಳನ್ನು ಮಾಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:30 pm, Wed, 29 October 25

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ