CMRL-Exalogic ಪ್ರಕರಣದಲ್ಲಿ ಪಿಣರಾಯಿ ವಿಜಯನ್, ವೀಣಾ ವಿಜಯನ್ಗೆ ಕೇರಳ ಹೈಕೋರ್ಟ್ ನೋಟಿಸ್
ಈ ಹಿಂದೆ, ಕಾಂಗ್ರೆಸ್ ನಾಯಕ ಮ್ಯಾಥ್ಯೂ ಕುಳಲ್ನಾಡನ್ ಸಲ್ಲಿಸಿದ್ದ ಅರ್ಜಿಯನ್ನು ವಿಜಿಲೆನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು, ಅಲ್ಲಿ ನ್ಯಾಯಾಲಯವು ಅರ್ಜಿಯಲ್ಲಿ ಮಾನ್ಯವಾದ ಸಾಕ್ಷ್ಯವಿಲ್ಲ ಮತ್ತು ಅದು ಕೇವಲ ಆರೋಪಗಳನ್ನು ಹೊಂದಿದೆ. ಈ ಪ್ರಕರಣವು ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು.

ಎರ್ನಾಕುಳಂ: ಸಿಎಂಆರ್ಎಲ್ (ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್)-ಎಕ್ಸಾಲಾಜಿಕ್ ಹಣಕಾಸು ವಹಿವಾಟುಗಳ (CMRL-Exalogic case)ಕುರಿತು ವಿಸ್ತೃತ ತನಿಖೆ ನಡೆಸುವಂತೆ ಕೋರಿ ಮ್ಯಾಥ್ಯೂ ಕುಳಲ್ನಾಡನ್ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ (Kerala high court) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಮತ್ತು ಅವರ ಪುತ್ರಿ ವೀಣಾ ವಿಜಯನ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಎಕ್ಸಾಲಾಜಿಕ್ ಎಂಬುದು ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಒಡೆತನದ ಸಾಫ್ಟ್ವೇರ್ ಸಂಸ್ಥೆಯಾಗಿದೆ.
ಈ ಹಿಂದೆ, ಕಾಂಗ್ರೆಸ್ ನಾಯಕ ಮ್ಯಾಥ್ಯೂ ಕುಳಲ್ನಾಡನ್ ಸಲ್ಲಿಸಿದ್ದ ಅರ್ಜಿಯನ್ನು ವಿಜಿಲೆನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು, ಅಲ್ಲಿ ನ್ಯಾಯಾಲಯವು ಅರ್ಜಿಯಲ್ಲಿ ಮಾನ್ಯವಾದ ಸಾಕ್ಷ್ಯವಿಲ್ಲ ಮತ್ತು ಅದು ಕೇವಲ ಆರೋಪಗಳನ್ನು ಹೊಂದಿದೆ. ಈ ಪ್ರಕರಣವು ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು.
ವಿಜಿಲೆನ್ಸ್ ನ್ಯಾಯಾಲಯವು ಕುಳಲ್ನಾಡನ್ ಅವರ ಅರ್ಜಿಯನ್ನು ಟೀಕಿಸಿದ್ದು,ಈ ಆರೋಪವು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿತ್ತು. ವಿಜಿಲೆನ್ಸ್ ನ್ಯಾಯಾಲಯದ ಈ ಅವಲೋಕನವನ್ನು ಮರುಪರಿಶೀಲಿಸುವಂತೆ ನಿರ್ದೇಶನವನ್ನು ನೀಡುವಂತೆ ಕೋರಿಕೆಯೊಂದಿಗೆ ಕುಳಲ್ನಾಡನ್ ಹೈಕೋರ್ಟ್ ಮೆಟ್ಟಿಲೇರಿದ್ದರು.. ಮಾಸಿಕ ಪಾವತಿ ವಿವಾದದ ಕುರಿತು ಗಂಭೀರ ವಂಚನೆ ತನಿಖಾ ಕಚೇರಿ, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಜುಲೈ 2ರಂದು ನ್ಯಾಯಾಲಯ ವಿಚಾರಣೆ ನಡೆಸಲಿದ್ದು, ಇದೇ ವೇಳೆ ಪ್ರಕರಣದ ವಿಚಾರಣೆ ವೇಳೆ ಮೃತಪಟ್ಟ ಕಳಮಶ್ಶೇರಿಯ ಗಿರೀಶ್ ಬಾಬು ಎಂಬುವರು ಇದೇ ವಿಚಾರವಾಗಿ ಸಲ್ಲಿಸಿರುವ ಅರ್ಜಿಯನ್ನು ಜುಲೈ 3ರಂದು ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.
ಸಾಫ್ಟ್ವೇರ್ ಸೇವೆಗಳನ್ನು ಒದಗಿಸುವ ನೆಪದಲ್ಲಿ ಸಿಎಂಆರ್ಎಲ್ ಎಕ್ಸಾಲಾಜಿಕ್ ಸೊಲ್ಯೂಷನ್ಗೆ 1.72 ಕೋಟಿ ರೂಪಾಯಿ ಪಾವತಿಸಿರುವುದು ಬೆಳಕಿಗೆ ಬಂದಿರುವ ಆದಾಯ ತೆರಿಗೆ ತನಿಖೆಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.
ಮತ್ತೊಂದು ರಾಷ್ಟ್ರೀಯ ಸಂಸ್ಥೆ- ಗಂಭೀರ ವಂಚನೆಗಳ ತನಿಖಾ ಕಚೇರಿ (SFIO)ಯ 2019 ರಲ್ಲಿ CMRL ವಿರುದ್ಧ ನಡೆಸಿದ ಆದಾಯ ತೆರಿಗೆ ತನಿಖೆಯಲ್ಲಿ ಬಹಿರಂಗಗೊಂಡ ರಾಜಕೀಯ ಮುಖಂಡರು ಮತ್ತು ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ವ್ಯಕ್ತಿಗಳಿಗೆ 95 ಕೋಟಿ ರೂ ಪಾವತಿ ಮಾಡಿದ್ದರ ಬಗ್ಗೆ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಈದ್ ಮಿಲಾದ್ ದಿನವೇ ಶ್ರೀನಗರದಲ್ಲಿ ಪರಿಶೀಲನಾ ಸಭೆ; ಕೇಂದ್ರ ಸರ್ಕಾರದ ವಿರುದ್ಧ ಒಮರ್ ಅಬ್ದುಲ್ಲಾ ಟೀಕೆ
2016 ರಲ್ಲಿ ಮಾರ್ಕೆಟಿಂಗ್ ಕನ್ಸಲ್ಟೆನ್ಸಿ ಸೇವೆಗಳನ್ನು ಪಡೆಯಲು ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಅವರೊಂದಿಗೆ CMRL ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ತಿಳಿದುಬಂದಿದೆ. ಸೇವೆಗಾಗಿ ವೀಣಾಗೆ ತಿಂಗಳಿಗೆ ತಲಾ ಐದು ಲಕ್ಷ ರೂ ನೀಡಲಾಗಿತ್ತು. 2017 ರಲ್ಲಿ ಕಂಪನಿಗೆ ಸಾಫ್ಟ್ವೇರ್ ಬೆಂಬಲವನ್ನು ಒದಗಿಸಲು CMRL ನಿಂದ Exalogic ನೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು. Exalogic ಸೇವೆಗಾಗಿ ಪ್ರತಿ ತಿಂಗಳು 3 ಲಕ್ಷ ರೂಪಾಯಿಗಳನ್ನು ಪಡೆಯುತ್ತದೆ ಎಂದು ಒಪ್ಪಂದವನ್ನು ಮಾಡಲಾಗಿತ್ತು. ಆದರೆ, ಆದಾಯ ತೆರಿಗೆ ತನಿಖೆಯ ವೇಳೆ ಸಿಎಂಆರ್ಎಲ್ನ ಉನ್ನತ ಅಧಿಕಾರಿಗಳು ವೀಣಾ ಮತ್ತು ಎಕ್ಸಾಲಾಜಿಕ್ನಿಂದ ಯಾವುದೇ ಸೇವೆಯನ್ನು ಪಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ