Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುನಾಲ್ ಕಮ್ರಾ ಮೇಲೆ ನ್ಯಾಯಾಂಗ ನಿಂದನೆ ಆರೋಪ: ನಾಳೆ ಸುಪ್ರೀಂಕೋರ್ಟ್ ತೀರ್ಪು

ಕುನಾಲ್​ರ ನಾಲ್ಕು ಟ್ವೀಟ್​ಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದ ಅಟಾರ್ನಿ ಜನರಲ್, ಈ ನಾಲ್ಕು ಟ್ವೀಟ್​ಗಳು ಕೆಟ್ಟ ಅಭಿರುಚಿ ಹೊಂದಿರುವುದು ಮಾತ್ರವಲ್ಲ, ಹಾಸ್ಯ ಮತ್ತು ನ್ಯಾಯಾಂಗ ನಿಂದನೆಯ ನಡುವೆ ಇರಬೇಕಾದ ತೆಳು ರೇಖೆಯನ್ನು ಉಲ್ಲಂಘಿಸಿವೆ ಎಂದಿದ್ದರು.

ಕುನಾಲ್ ಕಮ್ರಾ ಮೇಲೆ ನ್ಯಾಯಾಂಗ ನಿಂದನೆ ಆರೋಪ: ನಾಳೆ ಸುಪ್ರೀಂಕೋರ್ಟ್ ತೀರ್ಪು
ಕುನಾಲ್ ಕಮ್ರಾ ಮತ್ತು ರಚಿತಾ ತನೇಜಾ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 17, 2020 | 3:42 PM

ದೆಹಲಿ: ರಿಪಬ್ಲಿಕ್​ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದನ್ನು ಟ್ವೀಟ್ ಮೂಲಕ ವ್ಯಂಗ್ಯ ಮಾಡಿ, ನ್ಯಾಯಾಂಗ ನಿಂದನೆ ಆರೋಪ ಹೊತ್ತಿದ್ದ ಖ್ಯಾತ ಕಾಮಿಡಿಯನ್​ ಕುನಾಲ್​ ಕಮ್ರಾ ಮತ್ತು ಕಾರ್ಟೂನಿಸ್ಟ್​ ರಚಿತಾ ತನೇಜಾ ವಿಚಾರಣೆಯ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ನಾಳೆ ನೀಡಲಿದೆ. ಇಂದಿನ ವಿಚಾರಣೆ ವೇಳೆ ಕಮ್ರಾ ಕೋರ್ಟ್​ನಲ್ಲಿ ಹಾಜರು ಇರಲಿಲ್ಲ.

2018ರಲ್ಲಿ ಇಂಟೀರಿಯರ್​ ಡಿಸೈನರ್​ ಓರ್ವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಡಿ ನವೆಂಬರ್​ 4ರಂದು ಅರ್ನಬ್​ ಗೋಸ್ವಾಮಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ನವೆಂಬರ್​ 11ರಂದು ಸುಪ್ರೀಂಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಸುಪ್ರೀಂಕೋರ್ಟ್​ ಜಾಮೀನು ನೀಡಿದ ಬಗ್ಗೆ ಕುನಾಲ್​ ಮತ್ತು ರಚಿತಾ ವ್ಯಂಗ್ಯವಾಡಿ ಟ್ವೀಟ್​ ಮಾಡಿದ್ದರು.

ಕುನಾಲ್​ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ವಕೀಲರು, ಕಾನೂನು ವಿದ್ಯಾರ್ಥಿಗಳು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿ​ಗೆ ಪತ್ರ ಬರೆದಿದ್ದರು. ಅಟಾರ್ನಿ ಜನರಲ್​ ಅನುಮತಿಯನ್ನೂ ನೀಡಿದ್ದರು. ರಚಿತಾ ವಿಚಾರದಲ್ಲೂ ಇದೇ ರೀತಿ ಕಾನೂನು ವಿದ್ಯಾರ್ಥಿಗಳ ಮೂಲಕ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಕುನಾಲ್​ ಮತ್ತು ರಚಿತಾ ವಿರುದ್ಧ ಅನೇಕರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿರುವ ಕೋರ್ಟ್​, ನಾಳೆ ಅಂತಿಮವಾಗಿ ಆದೇಶ ನೀಡಲಿದ್ದು, ಇವರಿಬ್ಬರ ಟ್ವೀಟ್​ಗಳು ನ್ಯಾಯಾಂಗ ನಿಂದನೆ ಹೌದಾ? ಅಲ್ಲವಾ ಎಂಬುದನ್ನು ಸ್ಪಷ್ಟಪಡಿಸಲಿದೆ.

ಕುನಾಲ್​ರ ನಾಲ್ಕು ಟ್ವೀಟ್​ಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದ ಅಟಾರ್ನಿ ಜನರಲ್, ಈ ನಾಲ್ಕು ಟ್ವೀಟ್​ಗಳು ಕೆಟ್ಟ ಅಭಿರುಚಿ ಹೊಂದಿರುವುದು ಮಾತ್ರವಲ್ಲ, ಹಾಸ್ಯ ಮತ್ತು ನ್ಯಾಯಾಂಗ ನಿಂದನೆಯ ನಡುವೆ ಇರಬೇಕಾದ ತೆಳು ರೇಖೆಯನ್ನು ಉಲ್ಲಂಘಿಸಿವೆ ಎಂದಿದ್ದರು. ನ್ಯಾಯಮೂರ್ತಿಗಳಾದ ಅಶೋಕ್​ ಭೂಷಣ್​, ಆರ್.ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.

ವಕೀಲ ಪ್ರಶಾಂತ್ ಭೂಷಣ್​ಗೆ ರೂ. 1 ಜುಲ್ಮಾನೆ ವಿಧಿಸಿದ ಸುಪ್ರೀಂ ಕೋರ್ಟ್

ತಪ್ಪಿತಸ್ಥ ಪ್ರಶಾಂತ್ ಭೂಷಣ್ ಪರ ಆ ಒಂದು ರೂಪಾಯಿ ದಂಡ ಕಟ್ಟಿದ್ದು ಯಾರು ಗೊತ್ತಾ?

ಗಣರಾಜ್ಯೋತ್ಸವ ದಿನಾಚರಣೆಯಂದೇ ಅಯೋಧ್ಯಾ ಮಸೀದಿಗೆ ಶಂಕು ಸ್ಥಾಪನೆ; ಇದು ಬಾಬ್ರಿ ಮಸೀದಿಗಿಂತಲೂ ವಿಶಾಲ, ವಿಭಿನ್ನ

Published On - 3:41 pm, Thu, 17 December 20