AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chirag Paswan ಕಾಂಗ್ರೆಸ್, ಆರ್​ಜೆಡಿ ಪಕ್ಷಗಳಿಗೆ ಸೇರಲು ಎಲ್​ಜೆಪಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್​ಗೆ ಆಹ್ವಾನ

Bihar Politics: ಬಿಹಾರದ ಪ್ರಸ್ತುತ ರಾಜಕೀಯ ಪರಿಸ್ಥಿತಿಯು ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಜತೆಯಾಗಿ ಕೈಜೋಡಿಸಲು ತಕ್ಕ ಸಮಯವಾಗಿದೆ ಎಂದು ರಾಷ್ಟ್ರೀಯ ಜನತಾದಳದ ಶಾಸಕ ಭಾಯಿ ಬೀರೇಂದ್ರ ಹೇಳಿದ್ದಾರೆ.

Chirag Paswan ಕಾಂಗ್ರೆಸ್, ಆರ್​ಜೆಡಿ ಪಕ್ಷಗಳಿಗೆ ಸೇರಲು ಎಲ್​ಜೆಪಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್​ಗೆ ಆಹ್ವಾನ
ಚಿರಾಗ್ ಪಾಸ್ವಾನ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 15, 2021 | 4:09 PM

Share

ಪಟ್ನಾ: ಚಿರಾಗ್ ಪಾಸ್ವಾನ್ ವಿರುದ್ಧ ಎಲ್‌ಜೆಪಿ ನಾಯಕತ್ವದ ಬಂಡಾಯದ ಮಧ್ಯೆ, ಕಾಂಗ್ರೆಸ್ ಮತ್ತು ಆರ್​ಜೆಡಿ ಬಿಹಾರದಲ್ಲಿ ವಿರೋಧ ಪಕ್ಷವನ್ನು ಬಲಪಡಿಸುವುದಕ್ಕಾಗಿ ತಮ್ಮ ಪಕ್ಷಗಳಿಗೆ ಸೇರಲು ಆಹ್ವಾನ ನೀಡಿದ್ದಾರೆ. ಎಲ್‌ಜೆಪಿಯ ಆರು ಸಂಸದರಲ್ಲಿ ಐವರು ಭಾನುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಚಿರಾಗ್ ಅವರನ್ನು ತೆಗೆದುಹಾಕಿ ಪಕ್ಷದ ನಾಯಕರಾಗಿ ಪಶುಪತಿ ಪಾರಸ್ ಅವರನ್ನು ನೇಮಕ ಮಾಡುವ ಲಿಖಿತ ಮನವಿಯನ್ನು ಸಲ್ಲಿಸಿದರು.

ಬಿಜೆಪಿ ಮತ್ತು ಜೆಡಿಯು ಅವಮಾನವನ್ನು ಎದುರಿಸಿದ ನಂತರ, ಎಲ್‌ಜೆಪಿಯಲ್ಲಿನ ಬಿಕ್ಕಟ್ಟಿನ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಿದೆ. ಚಿರಾಗ್ ಅವರು ಪಕ್ಷ ತೊರದು ವಿರೋಧ ಪಕ್ಷಕ್ಕೆ ಸೇರಲು ಇದು ಸರಿಯಾದ ಸಮಯ ಎಂದು ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಪಕ್ಷ ಹೇಳಿದೆ.

ಬಿಹಾರದ ಪ್ರಸ್ತುತ ರಾಜಕೀಯ ಪರಿಸ್ಥಿತಿಯು ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಜತೆಯಾಗಿ ಕೈಜೋಡಿಸಲು ತಕ್ಕ ಸಮಯವಾಗಿದೆ ಎಂದು ರಾಷ್ಟ್ರೀಯ ಜನತಾದಳದ ಶಾಸಕ ಭಾಯಿ ಬೀರೇಂದ್ರ ಹೇಳಿದ್ದಾರೆ. ಹಾಲಿ ಎಲ್ ಜೆಪಿ ಅಧ್ಯಕ್ಷರು ತೇಜಸ್ವಿಗೆ ಬಿಹಾರ ಮುಖ್ಯಮಂತ್ರಿಯಾಗಲು ಸಹಾಯ ಮಾಡಬೇಕು ಮತ್ತು ಅವರು ಆರ್​ಜೆಡಿಯ ರಾಷ್ಟ್ರೀಯ ಕರ್ತವ್ಯವನ್ನು ನೋಡಿಕೊಳ್ಳಬೇಕು ಎಂದು ಬೀರೇಂದ್ರ ಹೇಳಿದರು.

“ಲೋಕ ಜನಶಕ್ತಿ ಪಕ್ಷದಲ್ಲಿ ಏನಾಯಿತು ಎಂಬುದರ ನಂತರ ಯುವ ನಾಯಕರಾದ ಚಿರಾಗ್ ಮತ್ತು ತೇಜಸ್ವಿ ಇಬ್ಬರೂ ಒಗ್ಗೂಡಿ ಭವಿಷ್ಯದ ರಾಜಕೀಯ ಮಾಡಬೇಕು ಎಂಬುದು ಸಾಮಾನ್ಯ ಜನರ ಬೇಡಿಕೆಯಿದೆ. ಚಿರಾಗ್ ಪಾಸ್ವಾನ್ ಈಗ ತೇಜಸ್ವಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಹಾಯ ಮಾಡಬೇಕು, ಅವರು ರಾಷ್ಟ್ರೀಯ ರಾಜಕಾರಣವನ್ನು ವಹಿಸಿಕೊಳ್ಳಬೇಕು ಅಂತಾರೆ ಬೀರೇಂದ್ರ.

ಮತ್ತೊಂದೆಡೆ, ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಎಂಎಲ್ ಸಿ ಪ್ರೇಮ್ ಚಂದ್ರ ಮಿಶ್ರಾ ಅವರು ಚಿರಾಗ್ ಪಾಸ್ವಾನ್ ಅವರಿಗೆ ಕಾಂಗ್ರೆಸ್ ಸೇರಲು ಮುಕ್ತ ಪ್ರಸ್ತಾಪವನ್ನು ಮಾಡಿದ್ದಾರೆ.

“ಚಿರಾಗ್ ಪಾಸ್ವಾನ್ ಕಾಂಗ್ರೆಸ್ ಮತ್ತು ಮಹಾ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡು ಬಿಜೆಪಿ ಮತ್ತು ಜನತಾದಳ ಯುನೈಟೆಡ್ ತಂಡಕ್ಕೆ ಎದಿರೇಟು ನೀಡಲು ಇದುಸೂಕ್ತ ಸಮಯ. ಚಿರಾಗ್ ಪಾಸ್ವಾನ್ ಕಾಂಗ್ರೆಸ್ ಸೇರುವುದು ಪಕ್ಷವನ್ನು ಬಲಪಡಿಸುತ್ತದೆ ”ಎಂದು ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾ ಹೇಳಿದ್ದಾರೆ.

ಏತನ್ಮಧ್ಯೆ, ಸಂಸತ್ತಿನ ಕೆಳಮನೆಯಲ್ಲಿದ್ದ ಆರು ಸಂಸದರಲ್ಲಿ ಐವರು ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದ ನಂತರ ಎಲ್‌ಜೆಪಿ ಭಾರಿ ಹಿನ್ನಡೆ ಅನುಭವಿಸಿದೆ.

ಈ ಬಂಡಾಯಕ್ಕೆ ಚಿರಾಗ್ ಅವರ ಚಿಕ್ಕಪ್ಪ ಪಶುಪತಿ ಪಾರಸ್, ಹಾಜಿಪುರ ಸಂಸದ ಮತ್ತು ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ನೇತೃತ್ವ ವಹಿಸಿದ್ದರು. ನಾಲ್ಕು ಎಲ್ ಜೆಪಿ ಸಂಸದರು – ಚಂದನ್ ಸಿಂಗ್, ವೀಣಾ ದೇವಿ, ಮೆಹಬೂಬ್ ಅಲಿ ಕೈಸರ್ ಮತ್ತು ಪ್ರಿನ್ಸ್ ರಾಜ್ ಪಾರಸ್ ಅವರನ್ನು ಪಕ್ಷದ ಸಂಸದೀಯ ಮಂಡಳಿಯ ನಾಯಕರಾಗಿ ಬೆಂಬಲಿಸಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಅವರನ್ನು ಮೂಲೆಗುಂಪು ಮಾಡಿದರು.

ಆಗ ಪಾರಸ್ ಅವರು ಲೋಕಸಭೆಯಲ್ಲಿ ಎಲ್‌ಜೆಪಿ ಸಂಸದೀಯ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಲೋಕಸಭಾ ಸ್ಪೀಕರ್ ಸೋಮವಾರ ಇದನ್ನು ಅಂಗೀಕರಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪಾರಸ್ “ನಮ್ಮ ಪಕ್ಷದಲ್ಲಿ ಆರು ಸಂಸದರು ಇದ್ದಾರೆ. ನಮ್ಮ ಪಕ್ಷವನ್ನು ಉಳಿಸಬೇಕೆಂಬುದು ಐದು ಸಂಸದರ ಬಯಕೆಯಾಗಿತ್ತು. ಹಾಗಾಗಿ, ನಾನು ಪಕ್ಷವನ್ನು ವಿಭಜಿಸಿಲ್ಲ, ಅದನ್ನು ಉಳಿಸಿದ್ದೇನೆ. ಚಿರಾಗ್ ಪಾಸ್ವಾನ್ ನನ್ನ ಅಣ್ಣನ ಮಗ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಅವನ ಬಗ್ಗೆ ನನಗೆ ಯಾವುದೇ ಆಕ್ಷೇಪಗಳಿಲ್ಲ ಎಂದಿದ್ದರು.

“ನಾನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಜತೆಗೆ ಇದ್ದೇನೆ. ನಿತೀಶ್ ಕುಮಾರ್ ಉತ್ತಮ ನಾಯಕ ಮತ್ತು ವಿಕಾಸ್ ಪುರುಷ (ಅಭಿವೃದ್ಧಿಯ ವ್ಯಕ್ತಿ) ಎಂದು ಪಾರಸ್ ಹೇಳಿದ್ದಾರೆ.

ಇದನ್ನೂ ಓದಿ:  Chirag Paswan ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದ ಎಲ್​ಜೆಪಿ ಸಂಸದರು; ಬಂಡಾಯದ ತಂಡಕ್ಕೆ ಪಶುಪತಿ ಪಾರಸ್ ನೇತೃತ್ವ

Published On - 3:55 pm, Tue, 15 June 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ