ಸಂಸತ್​​​​ನಲ್ಲಿ ‘ಜೈ ಸಂವಿಧಾನ್’ ಘೋಷಣೆಯನ್ನೂ ಕೂಗಬಾರದೇ?: ಪ್ರಿಯಾಂಕಾ ಗಾಂಧಿ

|

Updated on: Jun 27, 2024 | 6:50 PM

ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸ್ಪೀಕರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಿಯಾಂಕಾ ಗಾಂಧಿ, ಭಾರತೀಯ ಸಂಸತ್ತಿನಲ್ಲಿ ‘ಜೈ ಸಂವಿಧಾನ್’ ಘೋಷಣೆ ಮಾಡಲಾಗುವುದಿಲ್ಲವೇ? ಅಧಿಕಾರದಲ್ಲಿರುವವರು ಸಂಸತ್ತಿನಲ್ಲಿ ಅಸಂವಿಧಾನಿಕ ಮತ್ತು ಅಸಂವಿಧಾನಿಕ ಘೋಷಣೆಗಳನ್ನು ಎತ್ತುವುದನ್ನು ನಿಲ್ಲಿಸಲಿಲ್ಲ, ಆದರೆ ವಿರೋಧ ಪಕ್ಷದ ಸಂಸದರು ‘ಜೈ ಸಂವಿಧಾನ್’ ಎಂದು ಘೋಷಣೆ ಕೂಗಿದಾಗ ಆಕ್ಷೇಪಣೆಗಳು ವ್ಯಕ್ತವಾದವು ಎಂದು ಹೇಳಿದ್ದಾರೆ.

ಸಂಸತ್​​​​ನಲ್ಲಿ ‘ಜೈ ಸಂವಿಧಾನ್’ ಘೋಷಣೆಯನ್ನೂ ಕೂಗಬಾರದೇ?: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
Follow us on

ದೆಹಲಿ ಜೂನ್ 27: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಗುರುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಸತ್​​ನಲ್ಲಿ “ಜೈ ಸಂವಿಧಾನ್” (ಸಂವಿಧಾನಕ್ಕೆ ಜೈ) ಎಂಬ ಘೋಷಣೆಗೆ ಅವಕಾಶವಿದೆಯೇ ಎಂದು ಕೇಳಿದ ಅವರು ಅಧಿಕಾರದಲ್ಲಿರುವವರು ಅಸಂಸದೀಯ ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ ಎಂದ ಆರೋಪಿಸಿದ್ದಾರೆ.

18ನೇ ಲೋಕಸಭೆಯ ಸದಸ್ಯರಾಗಿ ತಿರುವನಂತಪುರಂನಿಂದ ಕಾಂಗ್ರೆಸ್ ಸಂಸದ ಶಶಿ ತರೂರ್ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ “ಜೈ ಹಿಂದ್, ಜೈ ಸಂವಿಧಾನ್” ಎಂದು ಘೋಷಣೆ ಕೂಗಿದ್ದರು.ವಿರೋಧ ಪಕ್ಷದ ಸದಸ್ಯರು ತರೂರ್ ಅವರ “ಜೈ ಸಂವಿಧಾನ್” ಘೋಷಣೆಗೆ ದನಿಗೂಡಿಸಿದ್ದರು. ಆಗ ಸ್ಪೀಕರ್ ನೀವೆಲ್ಲರೂ ಸಂವಿಧಾನ ಪ್ರಕಾರವೇ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಎಂದು ನೆನಪಿಸಿದ್ದಾರೆ.

ಸ್ಪೀಕರ್ ಆಕ್ಷೇಪಿಸಬಾರದಿತ್ತು ಎಂದು ಹರಿಯಾಣದ ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡಾ ಹೇಳಿದಾಗ ಸಭಾಧ್ಯಕ್ಷರು, ಯಾವುದಕ್ಕೆ ಆಕ್ಷೇಪ ವ್ಯಕ್ತಪಡಿಸಬೇಕು, ಯಾವುದನ್ನು ಮಾಡಬಾರದು ಎಂಬ ಬಗ್ಗೆ ಸಲಹೆ ನೀಡಬೇಡಿ. ಕುಳಿತುಕೊಳ್ಳಿ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿ ಟ್ವೀಟ್


ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ಎಕ್ಸ್‌ನಲ್ಲಿ , “ಭಾರತೀಯ ಸಂಸತ್ತಿನಲ್ಲಿ ‘ಜೈ ಸಂವಿಧಾನ್’ ಘೋಷಣೆ ಮಾಡಲಾಗುವುದಿಲ್ಲವೇ? ಅಧಿಕಾರದಲ್ಲಿರುವವರು ಸಂಸತ್ತಿನಲ್ಲಿ ಅಸಂವಿಧಾನಿಕ ಮತ್ತು ಅಸಂವಿಧಾನಿಕ ಘೋಷಣೆಗಳನ್ನು ಕೂಗುವುದನ್ನು ನಿಲ್ಲಿಸಲಿಲ್ಲ, ಆದರೆ ವಿರೋಧ ಪಕ್ಷದ ಸಂಸದರು ‘ಜೈ ಸಂವಿಧಾನ್’ ಎಂದು ಘೋಷಣೆ ಕೂಗಿದಾಗ ಆಕ್ಷೇಪಣೆಗಳು ವ್ಯಕ್ತವಾದವು. ಚುನಾವಣೆಯ ಸಂದರ್ಭದಲ್ಲಿ ಹುಟ್ಟಿಕೊಂಡ ಸಂವಿಧಾನ ವಿರೋಧಿ ಭಾವನೆ ಈಗ ಹೊಸ ರೂಪ ಪಡೆದುಕೊಂಡಿದ್ದು, ನಮ್ಮ ಸಂವಿಧಾನವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ.
ಸಂಸತ್ತು ಕಾರ್ಯನಿರ್ವಹಿಸುವ ಸಂವಿಧಾನ, ಪ್ರತಿಯೊಬ್ಬ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ಸಂವಿಧಾನ, ಪ್ರತಿಯೊಬ್ಬ ನಾಗರಿಕನ ಜೀವನ ಮತ್ತು ಜೀವನೋಪಾಯದ ರಕ್ಷಣೆಯನ್ನು ಪಡೆಯುವ ಸಂವಿಧಾನ-ಇದೇ ಸಂವಿಧಾನವು ಈಗ ವಿರೋಧದ ಧ್ವನಿಯನ್ನು ಹತ್ತಿಕ್ಕಲು ವಿರೋಧಿಸುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ ಸೇತುವೆ ಕುಸಿತ; ಒಂದೇ ವಾರದಲ್ಲಿ ಕುಸಿದದ್ದು ನಾಲ್ಕು ಸೇತುವೆಗಳು 

18ನೇ ಲೋಕಸಭೆಯ ಮೊದಲ ಅಧಿವೇಶನವು ಹೊಸದಾಗಿ ಚುನಾಯಿತರಾದ ಎಲ್ಲಾ ಸಂಸತ್ ಸದಸ್ಯರ ಪ್ರಮಾಣ ವಚನದೊಂದಿಗೆ ಸೋಮವಾರ ಪ್ರಾರಂಭವಾಯಿತು. ಇದು ಜುಲೈ 3 ರವರೆಗೆ ನಡೆಯಲಿದೆ. ಎರಡು ದಿನಗಳ ಪ್ರಮಾಣ ವಚನ ಸಮಾರಂಭದ ನಂತರ, ಲೋಕಸಭೆಯ ಸ್ಪೀಕರ್ ಆಯ್ಕೆಗೆ ಜೂನ್ 26ರಂದು ಚುನಾವಣೆ ನಡೆಯಿತು.

ಓಂ ಬಿರ್ಲಾ ಅವರು ಸತತ ಎರಡನೇ ಅವಧಿಗೆ ಸ್ಪೀಕರ್ ಆಗಿ ಆಯ್ಕೆಯಾದರು. ಪ್ರತಿಪಕ್ಷದ ನಾಯಕರು ಸದನದಲ್ಲಿ ತಮ್ಮ ಹೆಚ್ಚಿದ ಬಲಾಬಲವನ್ನು ಪದೇ ಪದೇ ಪ್ರಸ್ತಾಪಿಸುವ ಮೂಲಕ ಮತ್ತು ಸ್ಪೀಕರ್‌ ‘ತಟಸ್ಥ ಮತ್ತು ನಿಷ್ಪಕ್ಷಪಾತ’ ವಾಗಿರಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Thu, 27 June 24