ಬಕ್ರೀದ್ ಶುಭಾಶಯ ಕೋರಲು ಹಸುವಿನ ಚಿತ್ರ ಬಳಸಿದ ಕಾಂಗ್ರೆಸ್ ಶಾಸಕನ ವಿರುದ್ಧ ಆಕ್ರೋಶ

|

Updated on: Jun 18, 2024 | 1:54 PM

ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕ ವಿಡಿಯೊ ಹೇಳಿಕೆಯಲ್ಲಿ, ಪೋಸ್ಟ್‌ಗೆ ಕ್ಷಮೆಯಾಚಿಸಿದ್ದಾರೆ. ನಾನು 'ರಾಮ ಭಕ್ತ' , ನಾನು ಯಾವಾಗಲೂ ಸಂಪ್ರದಾಯಗಳನ್ನು ಅನುಸರಿಸುತ್ತೇನೆ. ತಪ್ಪು ಗಮನಕ್ಕೆ ಬಂದ ಕೂಡಲೇ ಪೋಸ್ಟರ್ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಬಕ್ರೀದ್ ಶುಭಾಶಯ ಕೋರಲು ಹಸುವಿನ ಚಿತ್ರ ಬಳಸಿದ ಕಾಂಗ್ರೆಸ್ ಶಾಸಕನ ವಿರುದ್ಧ ಆಕ್ರೋಶ
ಕುಂಬಂ ಅನಿಲ್ ಕುಮಾರ್ ರೆಡ್ಡಿ ಬಕ್ರೀ
Follow us on

ಹೈದರಾಬಾದ್ ಜೂನ್ 18: ಕಾಂಗ್ರೆಸ್ ಶಾಸಕ ಕುಂಬಂ ಅನಿಲ್ ಕುಮಾರ್ ರೆಡ್ಡಿ (Anil Kumar Reddy) ಬಕ್ರೀದ್ (Bakrid) ಶುಭಾಶಯ ಕೋರುವ ಪೋಸ್ಟ್ ನಲ್ಲಿ ಹಸುವಿನ ಗ್ರಾಫಿಕ್ ಚಿತ್ರವನ್ನು ಬಳಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ . ವಿವಾದಾತ್ಮಕ ಪೋಸ್ಟ್ ಸಾಮಾಜಿಕ ಮಾಧ್ಯಮದ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ತೆಲಂಗಾಣದ (Telangana) ಭೋಂಗಿರ್ ಕ್ಷೇತ್ರವನ್ನು ಪ್ರತಿನಿಧಿಸುವ ರೆಡ್ಡಿ ಅವರು “ಅಚಾತುರ್ಯದ ದೋಷ” ಕ್ಕಾಗಿ ಕ್ಷಮೆಯಾಚಿಸಿದ್ದು ಎಲ್ಲಾ ಸಂಬಂಧಿತ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಪೋಸ್ಟ್ ಅನ್ನು ತೆಗೆದುಹಾಕಿದ್ದಾರೆ. ಪೋಸ್ಟ್‌ನಲ್ಲಿ ಮೇಕೆಯ ಚಿತ್ರ ಇರಬೇಕಿತ್ತು. ಕಣ್ತಪ್ಪಿನಿಂದ ಗಿ ಹಸುವಿನ ಚಿತ್ರವನ್ನು ಬಳಸಲಾಗಿದೆ ಎಂದು ಕಾಂಗ್ರೆಸ್ ಶಾಸಕರು ಸ್ಪಷ್ಟಪಡಿಸಿದ್ದಾರೆ. ಈ ಪೋಸ್ಟ್ ಅನ್ನು ಈಗ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ.

ಶಾಸಕರ ಬಕ್ರೀದ್ ಶುಭಾಶಯಕ್ಕೆ ಭಾರೀ ಆಕ್ರೋಶ

ಕಾಂಗ್ರೆಸ್ ಶಾಸಕರ ಬಕ್ರೀದ್ ಪೋಸ್ಟ್‌ಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಮತ್ತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

ಬಿಜೆಪಿ ಕೂಡ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸರ್ಕಾರ ರಚಿಸುವಲ್ಲೆಲ್ಲಾ ಹಿಂದೂಗಳನ್ನು ಅವಮಾನಿಸಲಾಗುತ್ತದೆ ಎಂದು ಆರೋಪಿಸಿದರು. ರೆಡ್ಡಿಯವರ ಬಕ್ರೀದ್ ಶುಭಾಶಯಗಳಲ್ಲಿ ಹಸುವಿನ ಚಿತ್ರವನ್ನು ಹೊರತುಪಡಿಸಿದ ಬಿಜೆಪಿ ಶಾಸಕ ರಾಜಾ ಸಿಂಗ್, ಬಕ್ರೀದ್ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುವುದರಲ್ಲಿ ಆಕ್ಷೇಪಾರ್ಹ ಏನೂ ಇಲ್ಲ, ಆದರೆ ಶಾಸಕರು ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ? . ಈ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮೌನವೇಕೆ ಎಂದು ಪ್ರಶ್ನಿಸಿದ್ದಾರೆ.

ನಾನು ರಾಮಭಕ್ತ ಎಂದು ಕ್ಷಮೆ ಕೇಳಿದ ಕಾಂಗ್ರೆಸ್ ಶಾಸಕ

ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕ ವಿಡಿಯೊ ಹೇಳಿಕೆಯಲ್ಲಿ, ಪೋಸ್ಟ್‌ಗೆ ಕ್ಷಮೆಯಾಚಿಸಿದ್ದಾರೆ. ನಾನು ‘ರಾಮ ಭಕ್ತ’ , ನಾನು ಯಾವಾಗಲೂ ಸಂಪ್ರದಾಯಗಳನ್ನು ಅನುಸರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ದೋಷ ಗಮನಕ್ಕೆ ಬಂದ ಕೂಡಲೇ ಪೋಸ್ಟರ್ ತೆಗೆದುಹಾಕಲಾಗಿದೆ. ಯಾರಿಗಾದರೂ ನೋವಾಗಿದ್ದರೆ, ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ನಾನೊಬ್ಬ ರಾಮಭಕ್ತ,” ಎಂದು ರೆಡ್ಡಿ ವಿಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಂ, ಯಾದವರ ಬಗ್ಗೆ ಜೆಡಿಯು ಸಂಸದರ ಹೇಳಿಕೆ ವಿರುದ್ಧ ಗುಡುಗಿದ ಮಿಸಾ ಭಾರತಿ

ಯಾವುದೇ ಪೋಸ್ಟ್ ಮಾಡುವ ಮೊದಲು ಸಂಪೂರ್ಣವಾಗಿ ಪರಿಶೀಲಿಸುವಂತೆ ಶಾಸಕರು ತಮ್ಮ ಸಾಮಾಜಿಕ ಮಾಧ್ಯಮ ತಂಡಕ್ಕೆ ಹೇಳಿದ್ದು ಈ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ.

Published On - 12:56 pm, Tue, 18 June 24