AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದಂತಹ ಸೂರತ್‌ ಆಭರಣ ಉದ್ಯಮದ ಮೇಲೆ ಕೊರೊನಾ ಕಾರ್ಮೋಡ

ಸೂರತ್: ಕೊರೊನಾ ವೈರಸ್ ಅಪ್ಪಳಿಸಿದ್ದೇ ಬಂತು, ಜಗತ್ತಿನ ದೈನಂದಿನ ಚಟುವಟಿಕೆಯೇ ಅಲ್ಲೋಲ ಕಲ್ಲೋಲವಾಗಿದೆ. ದಿನಗೂಲಿಗಳಿಂದ ಹಿಡಿದು ದೊಡ್ಡ ವ್ಯಾಪಾರಿಗಳು, ಖಾಸಗಿಯಿಂದ ಹಿಡಿದು ಸರ್ಕಾರಿ ನೌಕರರ ಜೀವನವೇ ಏರುಪೇರಾಗಿದೆ. ಹೌದು ಕೊರೊನಾ ಮಹಾಮಾರಿ ಯಾವಾಗ ಪೂರ್ವದಿಂದ ದಾಳಿ ಮಾಡಿತೋ, ಜಗತ್ತಿನ ಚಿತ್ರಣವೇ ಬದಲಾಗಿದೆ. ಇದರ ಘೋರ ಪರಿಣಾಮ ದೇಶದ ಚಿನ್ನ ಮತ್ತು ವಜ್ರಗಳ ವ್ಯಾಪಾರ ರಾಜಧಾನಿಯಂದೇ ಖ್ಯಾತಿಯಾಗಿರುವ ಸೂರತ್ ಮೇಲೂ ಬೀರಿದೆ. ಯಾವಾಗ ದೇಶಾದ್ಯಂತ ಕೊರೊನಾ ವೈರಸ್ ಹಬ್ಬದಂತೆ ತಪ್ಪಿಸಲು ಲಾಕ್ಡೌನ್ ಘೋಷಿಸಲಾಯಿತೋ, ಇಡಿ ಜನಜೀವನವೇ ಅಸ್ತವ್ಯಸ್ತವಾಗಿದೆ. ವ್ಯಾಪಾರ […]

ಚಿನ್ನದಂತಹ ಸೂರತ್‌ ಆಭರಣ ಉದ್ಯಮದ ಮೇಲೆ ಕೊರೊನಾ ಕಾರ್ಮೋಡ
Guru
| Edited By: |

Updated on:Jul 11, 2020 | 2:25 PM

Share

ಸೂರತ್: ಕೊರೊನಾ ವೈರಸ್ ಅಪ್ಪಳಿಸಿದ್ದೇ ಬಂತು, ಜಗತ್ತಿನ ದೈನಂದಿನ ಚಟುವಟಿಕೆಯೇ ಅಲ್ಲೋಲ ಕಲ್ಲೋಲವಾಗಿದೆ. ದಿನಗೂಲಿಗಳಿಂದ ಹಿಡಿದು ದೊಡ್ಡ ವ್ಯಾಪಾರಿಗಳು, ಖಾಸಗಿಯಿಂದ ಹಿಡಿದು ಸರ್ಕಾರಿ ನೌಕರರ ಜೀವನವೇ ಏರುಪೇರಾಗಿದೆ.

ಹೌದು ಕೊರೊನಾ ಮಹಾಮಾರಿ ಯಾವಾಗ ಪೂರ್ವದಿಂದ ದಾಳಿ ಮಾಡಿತೋ, ಜಗತ್ತಿನ ಚಿತ್ರಣವೇ ಬದಲಾಗಿದೆ. ಇದರ ಘೋರ ಪರಿಣಾಮ ದೇಶದ ಚಿನ್ನ ಮತ್ತು ವಜ್ರಗಳ ವ್ಯಾಪಾರ ರಾಜಧಾನಿಯಂದೇ ಖ್ಯಾತಿಯಾಗಿರುವ ಸೂರತ್ ಮೇಲೂ ಬೀರಿದೆ. ಯಾವಾಗ ದೇಶಾದ್ಯಂತ ಕೊರೊನಾ ವೈರಸ್ ಹಬ್ಬದಂತೆ ತಪ್ಪಿಸಲು ಲಾಕ್ಡೌನ್ ಘೋಷಿಸಲಾಯಿತೋ, ಇಡಿ ಜನಜೀವನವೇ ಅಸ್ತವ್ಯಸ್ತವಾಗಿದೆ. ವ್ಯಾಪಾರ ವಹಿವಾಟು ಬಂದ್ ಆಗಿದೆ. ಬೇರೆ ದಾರಿ ಕಾಣದೇ ಬಂಗಾರ ಮತ್ತು ವಜ್ರಗಳ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಪರಿಣತ ಕಾರ್ಮಿಕರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಪರಿಣಾಮ ಅವರು ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ.

ಇದರ ಪರಿಣಾಮ ಈಗ ಸೂರತ್​ನ ಇಡೀ ಚಿನ್ನ ಮತ್ತು ವಜ್ರಗಳ ವಹಿವಾಟಿನ ಮೇಲೆ ಆಗಿದೆ. ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡಲು ಕಾರ್ಮಿಕರಿಲ್ಲದೇ ಸಾಕಷ್ಟು ಕೆಲಸ ಹಾಗೇ ಉಳಿದಿದೆ. ಆಭರಣಗಳ ಕೆತ್ತನೆ ಕೆಲಸ ಮಾಡುವವರೇ ಇಲ್ಲದಂತಾಗಿದೆ. ಲಾಕ್ಡೌನ್ ಓಪನ್ ಮಾಡಿದ್ದರೂ, ವ್ಯಾಪಾರ ಮೊದಲಿನಂತೆ ನಡೆಯುತ್ತಿಲ್ಲ. ಹಾಗೇನೇ ಚಿನ್ನ ಕೊಳ್ಳುವವರ ಸಂಖ್ಯೆಯೂ ಮೊದಲಿನಂತಿಲ್ಲ.

ಈ ಬಗ್ಗೆ ಮಾತನಾಡಿರುವ ಸೂರತ್​ನ ಚಿನ್ನದ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವಿಜಯ್ ಮಂಗೂಖಿಯಾ, ಲಾಕ್ಡೌನ್ ನಂತರ ಸುಮಾರು ಶೇ.70 ರಷ್ಟು ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಇದುವರೆಗೂ ವಾಪಸ್ ಬಂದಿಲ್ಲ. ಹೀಗಾಗಿ ಕಾರ್ಮಿಕರ ಕೊರತೆಯಿಂದಾಗಿ ಅವಶ್ಯವಿದ್ದಷ್ಟು ಆಭರಣಗಳ ಉತ್ಪಾದನೆ ಹೊರಬರುತ್ತಿಲ್ಲ. ಜೊತೆಗೆ ಆಭರಣಗಳಿಗೆ ಬೇಡಿಕೆಯೂ ಕಡಿಮೆಯಾಗಿದೆ. ಪರಿಣಾಮ ಉದ್ಯಮ ನಷ್ಟ ಎದುರಿಸುತ್ತಿದೆ ಎಂದು ಅವಲತ್ತು ಕೊಂಡಿದ್ದಾರೆ.

Published On - 11:47 am, Sat, 11 July 20

ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು