AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್ ಮೂಲಕವೂ ತಿಮ್ಮಪ್ಪನ ಭಕ್ತರಿಗೆ ನಾಮ ಎಳೆದರು!

ತಿರುಪತಿ: ದೇವರನ್ನ ನಂಬಿ ಬರುವ ಭಕ್ತರಿಗೆ ಸಹಾಯವಾಗಲೆಂದು ಇತ್ತೀಚಿನ ದಿನಗಳಲ್ಲಿ ದೇವಾಲಯದ ಆಡಳಿತ ಮಂಡಳಿಗಳು ದೇವರ ದರ್ಶನಕ್ಕೆಂದೆ ಆನ್​ಲೈನ್ ಟಿಕೆಟ್‌‌ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿತ್ತು. ಈ ವ್ಯವಸ್ಥೆಯಿಂದ ದೂರದಿಂದ ಬರುವ ಲಕ್ಷಾಂತರ ಭಕ್ತರು ದಿನಗಟ್ಟಲೆ ಕ್ಯೂನಲ್ಲಿ ನಿಂತು ಕಷ್ಟಪಡುವುದು ತಪ್ಪುತ್ತಿತ್ತು. ಆದರೆ ಕೆಲವು ಆನ್ ಲೈನ್ ಖದೀಮರು ದೇವಾಲಯದ ಅಧಿಕೃತ ವೆಬ್ ಸೈಟ್​ನ್ನು ನಕಲು ಮಾಡಿ ಭಕ್ತರಿಂದ ಸಾವಿರಾರು ರೂಪಾಯಿಗಳನ್ನ ದೋಚುತಿದ್ದಾರೆ. ಭಕ್ತರಿಗೆ ಉಪಯೋಗವಾಗಲೆಂದು, ಸಾಮಾಜಿಕ ಅಂತರ ಕಾಪಾಡಬೇಕೆಂದು ತಿರುಪತಿ ದೇವಾಲಯದ ಆಡಳಿತ ಮಂಡಳಿ ಸೃಷ್ಟಿಸಿದ್ದ ವೆಬ್ […]

ಆನ್​ಲೈನ್ ಮೂಲಕವೂ ತಿಮ್ಮಪ್ಪನ ಭಕ್ತರಿಗೆ ನಾಮ ಎಳೆದರು!
ಸಾಧು ಶ್ರೀನಾಥ್​
| Updated By: |

Updated on:Jul 10, 2020 | 5:29 PM

Share

ತಿರುಪತಿ: ದೇವರನ್ನ ನಂಬಿ ಬರುವ ಭಕ್ತರಿಗೆ ಸಹಾಯವಾಗಲೆಂದು ಇತ್ತೀಚಿನ ದಿನಗಳಲ್ಲಿ ದೇವಾಲಯದ ಆಡಳಿತ ಮಂಡಳಿಗಳು ದೇವರ ದರ್ಶನಕ್ಕೆಂದೆ ಆನ್​ಲೈನ್ ಟಿಕೆಟ್‌‌ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿತ್ತು. ಈ ವ್ಯವಸ್ಥೆಯಿಂದ ದೂರದಿಂದ ಬರುವ ಲಕ್ಷಾಂತರ ಭಕ್ತರು ದಿನಗಟ್ಟಲೆ ಕ್ಯೂನಲ್ಲಿ ನಿಂತು ಕಷ್ಟಪಡುವುದು ತಪ್ಪುತ್ತಿತ್ತು.

ಆದರೆ ಕೆಲವು ಆನ್ ಲೈನ್ ಖದೀಮರು ದೇವಾಲಯದ ಅಧಿಕೃತ ವೆಬ್ ಸೈಟ್​ನ್ನು ನಕಲು ಮಾಡಿ ಭಕ್ತರಿಂದ ಸಾವಿರಾರು ರೂಪಾಯಿಗಳನ್ನ ದೋಚುತಿದ್ದಾರೆ. ಭಕ್ತರಿಗೆ ಉಪಯೋಗವಾಗಲೆಂದು, ಸಾಮಾಜಿಕ ಅಂತರ ಕಾಪಾಡಬೇಕೆಂದು ತಿರುಪತಿ ದೇವಾಲಯದ ಆಡಳಿತ ಮಂಡಳಿ ಸೃಷ್ಟಿಸಿದ್ದ ವೆಬ್ ಸೈಟ್​ನಂತೆಯೇ ನಕಲಿ‌ ವೆಬ್ ಸೈಟ್ ಸೃಷ್ಟಿಸಿ ಖದೀಮರು ಭಕ್ತರಿಂದ ಸಾವಿರಾರು ರೂಪಾಯಿಗಳನ್ನ ದೋಚಿದ್ದಾರೆ.

ಸದ್ಯಕ್ಕೆ ಟಿಟಿಡಿ ಆಡಳಿತ ಮಂಡಳಿ ನಕಲಿ ವೆಬ್‌ಸೈಟ್ ನಿರ್ಮಿಸಿದ್ದವರ‌ ವಿರುದ್ದ ಪ್ರಕರಣ ದಾಖಲಿಸಲು ಮುಂದಾಗಿದ್ದು ತಿರಚನೂರಿನ ರಘು ಎನ್ನೋ ವ್ಯಕ್ತಿಯ ವಿರುದ್ಧ ಟಿಟಿಡಿ‌ ವಿಜಿಲೆನ್ಸ್‌ ವಿಭಾಗದ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಭಕ್ತರಿಗೆ 300ರೂ.ಗಳ ದರ್ಶನ ‌ಟಿಕೆಟ್ ‌‌ಮಾರಾಟ ಸೇರಿ‌‌ ಹಲವಾರು ರೀತಿಯಲ್ಲಿ ಮೋಸ ಮಾಡಲಾಗಿದೆಯೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಟಿಟಿಡಿಯ ಅಧಿಕೃತ ವೆಬ್ ಸೈಟನ್ನೇ ಬಳಸಬೇಕೆಂದು ‌ಟಿಟಿಡಿ ಭಕ್ತರಿಗೆ ಸಲಹೆ ನೀಡಿದೆ.

Published On - 2:11 pm, Fri, 10 July 20

VIDEO: ರಣರೋಚಕ ಪಂದ್ಯ ರನೌಟ್​ನೊಂದಿಗೆ ಅಂತ್ಯ
VIDEO: ರಣರೋಚಕ ಪಂದ್ಯ ರನೌಟ್​ನೊಂದಿಗೆ ಅಂತ್ಯ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು