AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವ್ಯಾಕ್ಸಿನ್​ ಎರಡೂ ಡೋಸ್​ ಲಸಿಕೆ ಪಡೆದವರೂ ಇನ್ಮುಂದೆ ಯುಎಸ್​ಗೆ ಪ್ರಯಾಣಿಸಬಹುದು !

ಭಾರತದಲ್ಲಿ ಜನವರಿಯಿಂದಲೇ ಕೊವ್ಯಾಕ್ಸಿನ್​ ಕೊವಿಡ್​ 19 ಲಸಿಕೆ ನೀಡಲಾಗುತ್ತಿತ್ತಾದರೂ ಕಡಿಮೆ ಜನರಿಗೆ ನೀಡಲಾಗುತ್ತಿತ್ತು. ಕೊವಿಶೀಲ್ಡ್​ ಕೊರೊನಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದರೂ ಕೊವ್ಯಾಕ್ಸಿನ್​​ಗೆ ಅನುಮತಿ ನೀಡಿರಲಿಲ್ಲ.

ಕೊವ್ಯಾಕ್ಸಿನ್​ ಎರಡೂ ಡೋಸ್​ ಲಸಿಕೆ ಪಡೆದವರೂ ಇನ್ಮುಂದೆ ಯುಎಸ್​ಗೆ ಪ್ರಯಾಣಿಸಬಹುದು !
ಕೊವ್ಯಾಕ್ಸಿನ್ ಲಸಿಕೆ
TV9 Web
| Edited By: |

Updated on:Nov 09, 2021 | 5:46 PM

Share

ವಾಷಿಂಗ್ಟನ್​: ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್ (Covaxin)​ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ ಬೆನ್ನಲ್ಲೇ ಒಂದೊಂದೇ ರಾಷ್ಟ್ರಗಳು ಕೊವ್ಯಾಕ್ಸಿನ್​​ಗೆ ಮಾನ್ಯತೆ ನೀಡುತ್ತಿವೆ. ಇದೀಗ ಯುಎಸ್​​ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವೂ ಕೂಡ ಕೊವ್ಯಾಕ್ಸಿನ್​​ಗೆ ಅನುಮೋದನೆ ನೀಡಿದೆ. ಇದರ ಅನ್ವಯ  ಇನ್ನುಮುಂದೆ  ಎರಡೂ ಡೋಸ್​ ಕೊವ್ಯಾಕ್ಸಿನ್​ ಲಸಿಕೆ ಪಡೆದ ಭಾರತೀಯರು ಅಥವಾ ಭಾರತದಲ್ಲಿರುವ ಇನ್ಯಾವುದೇ ದೇಶದವರು ಅಮೆರಿಕಕ್ಕೆ ಪ್ರಯಾಣ ಮಾಡಬಹುದಾಗಿದೆ.  

ಈ ಬಗ್ಗೆ ಸಿಡಿಸಿ ಮಾಧ್ಯಮ ಅಧಿಕಾರಿ ಸ್ಕಾಟ್​ ಪೌಲೆ ಮಾಹಿತಿ ನೀಡಿದ್ದಾರೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಎಸ್​​ನ ಎಫ್​ಡಿಎ (ಆಹಾರ ಮತ್ತು ಔಷಧ ಆಡಳಿತ)ಅನುಮೋದನೆ ನೀಡಿದ ಕೊವಿಡ್​ 19 ಲಸಿಕೆಗಳಿಗೆ ಸಿಡಿಸಿಯ ಪ್ರಯಾಣ ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆಯೂ ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ.  ಯುಎಸ್​ನ ಫುಡ್​ ಆ್ಯಂಡ್​ ಡ್ರಗ್​ ಪ್ರಾಧಿಕಾರ ಮತ್ತು ಡಬ್ಲ್ಯೂಎಚ್​ಒ ಅನುಮೋದನೆ ನೀಡಿದ ಕೊವಿಡ್​ 19 ಲಸಿಕೆಗಳನ್ನು ಪಡೆದವರು ಯುಎಸ್​ ಪ್ರವೇಶ ಮಾಡಬಹುದು ಎಂಬ ನಿಯಮವುಳ್ಳ ಹೊಸ ಪ್ರಯಾಣ ಮಾರ್ಗಸೂಚಿಯನ್ನು ಯುಎಸ್​ ಕಳೆದವಾರವಷ್ಟೇ ಹೊರಡಿಸಿದೆ. ಈ ಮಾರ್ಗಸೂಚಿ ಹೊರಡಿಸುವ ಕೊನೇ ಕ್ಷಣದಲ್ಲಿ ಕೊವ್ಯಾಕ್ಸಿನ್​ ಲಸಿಕೆಯನ್ನೂ ಅದಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅದರ ಅನ್ವಯ ಫೈಜರ್​​, ಜಾನ್ಸನ್​ ಆ್ಯಂಡ್​ ಜಾನ್ಸನ್​, ಮಾಡೆರ್ನಾ, ಆಕ್ಸಫರ್ಡ್​, ಕೊವಿಶೀಲ್ಡ್​, ಸಿನೋಫಾರ್ಮ್​ ಮತ್ತು ಸಿನೋವ್ಯಾಕ್​ ಲಸಿಕೆಗಳನ್ನೂ ಕೂಡ ಯುಎಸ್​ ಒಪ್ಪಿಕೊಳ್ಳಲಿದೆ.

ಭಾರತದಲ್ಲಿ ಜನವರಿಯಿಂದಲೇ ಕೊವ್ಯಾಕ್ಸಿನ್​ ಕೊವಿಡ್​ 19 ಲಸಿಕೆ ನೀಡಲಾಗುತ್ತಿತ್ತಾದರೂ ಕಡಿಮೆ ಜನರಿಗೆ ನೀಡಲಾಗುತ್ತಿತ್ತು. ಕೊವಿಶೀಲ್ಡ್​ ಕೊರೊನಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದರೂ ಕೊವ್ಯಾಕ್ಸಿನ್​​ಗೆ ಅನುಮತಿ ನೀಡಿರಲಿಲ್ಲ. ಅದರ ತುರ್ತು ಬಳಕೆ ಪಟ್ಟಿಯಲ್ಲಿ ಕೊವ್ಯಾಕ್ಸಿನ್​ ಸೇರ್ಪಡೆಯಾಗಿರಲಿಲ್ಲ. ಆದರೆ ಇತ್ತೀಚೆಗೆ ಕೊವ್ಯಾಕ್ಸಿನ್​ಗೆ ಕೂಡ ಅನುಮೋದನೆ ನೀಡಿದೆ.

ಇದನ್ನೂ ಓದಿ: ‘ನಾನು ಹೈಡ್ರೋಜನ್​ ಬಾಂಬ್ ಸ್ಫೋಟಿಸುತ್ತೇನೆ‘-ಫಡ್ನವೀಸ್​ಗೆ ನವಾಬ್​ ಮಲ್ಲಿಕ್​ ತಿರುಗೇಟು !

Published On - 5:46 pm, Tue, 9 November 21

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!