AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಜ.23ರ ಹೊತ್ತಿಗೆ ಕೊವಿಡ್​ 19 ಅಲೆ ಉತ್ತುಂಗಕ್ಕೆ; ಆದರೂ ಒಂದು ಸಮಾಧಾನಕರ ಸಂಗತಿ ಹೇಳಿದ ವಿಜ್ಞಾನಿಗಳು

ಜನವರಿ 11ನೇ ತಾರೀಖಿನವರಿಗಿನ ಅಂಕಿ-ಅಂಶಗಳನ್ನು ಒಳಗೊಂಡ ಕೊವಿಡ್​ 19 ಪಥವನ್ನು ಗಮನಿಸಿದಾಗ, ಜನವರಿ 23ರ ಸುಮಾರಿಗೆ ದಿನಕ್ಕೆ ಸುಮಾರು 7.2 ಲಕ್ಷ ಕೇಸ್​ಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿತ್ತು.

ದೇಶದಲ್ಲಿ ಜ.23ರ ಹೊತ್ತಿಗೆ ಕೊವಿಡ್​ 19 ಅಲೆ ಉತ್ತುಂಗಕ್ಕೆ; ಆದರೂ ಒಂದು ಸಮಾಧಾನಕರ ಸಂಗತಿ ಹೇಳಿದ ವಿಜ್ಞಾನಿಗಳು
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on: Jan 19, 2022 | 9:06 AM

Share

ಭಾರತದಲ್ಲಿ ಕೊವಿಡ್​ 19 ಮೂರನೇ ಅಲೆ ಜನವರಿ 23ರ ಹೊತ್ತಿಗೆ ಉತ್ತುಂಗಕ್ಕೆ ಏರಲಿದೆ. ಆದರೆ ಒಂದು ದಿನದಲ್ಲಿ ಪತ್ತೆಯಾಗುವ ಕೊವಿಡ್ 19 ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಲಾರದು ಎಂದು  ವಿಜ್ಞಾನಿಗಳು ಹೇಳಿದ್ದಾರೆ. ಭಾರತದಲ್ಲಿ ಸದ್ಯದ ಕೊವಿಡ್ 19 ಸ್ಥಿತಿಗತಿ, ಪಾಸಿಟಿವಿಟಿ ರೇಟ್ ಇತ್ಯಾದಿ ಅಧ್ಯಯನ ಮಾಡಿದ ಬಳಿಕ ವರದಿ ನೀಡಿದ ಅವರು, ದೆಹಲಿ, ಮುಂಬೈಗಳಲ್ಲಿ ಜನವರಿ ಎರಡನೇ ವಾರದಲ್ಲಿಯೇ ಕೊರೊನಾ ಉತ್ತುಂಗಕ್ಕೆ ಏರಿತ್ತು.  ಕೊವಿಡ್​ 19 ಸಾಂಕ್ರಾಮಿಕ ಶುರುವಾದಾಗಿನಿಂದಲೂ ಸಂಖ್ಯೆ ಪತ್ತೆಮಾಡಲು ಬಳಕೆಯಾಗುತ್ತಿರುವ ಸೂತ್ರ ಮಾದರಿ ಟ್ರ್ಯಾಕರ್​ ಒಕ್ಕೂಟದಲ್ಲಿ ಸಂಶೋಧಕರಾಗಿರುವ ಐಐಟಿ ಪ್ರಾಧ್ಯಾಪಕ ಮಣೀಂದರ್ ಅಗರ್​​ವಾಲ್​, ಕೊವಿಡ್​ 19 ಪಥ ದೇಶಾದ್ಯಂತ ಬದಲಾಗುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆ ಆದವರಲ್ಲಿ ಒಮಿಕ್ರಾನ್​ ಸೋಂಕು ಕಾಣಿಸುತ್ತಿದೆ ಎಂದಿದ್ದಾರೆ.

ಇನ್ನು ರಾಜ್ಯಾವಾರು ಕೊವಿಡ್​ 19 ಕೇಸ್​ಗಳ ಬಗ್ಗೆ ಮಾಹಿತಿ ನೀಡಿದ ಅವರು, ಯಾವ್ಯಾವ ರಾಜ್ಯಗಳು ಯಾವಾಗ ಕೊವಿಡ್ 19 ಮೂರನೇ ಅಲೆಯ ಉತ್ತುಂಗಕ್ಕೆ ತಲುಪಿವೆ ಎಂಬುದನ್ನು ತಿಳಿಸಿದ್ದಾರೆ. ಅದರಂತೆ ಮುಂಬೈನಲ್ಲಿ ಜನವರಿ 12ರಂದು ಅತ್ಯಂತ ಹೆಚ್ಚು ಪ್ರಮಾಣದ ಸೋಂಕು ದಾಖಲಾಗಿತ್ತು. ದೆಹಲಿ ಜನವರಿ 16ರಂದು, ಕೋಲ್ಕತ್ತ ಜನವರಿ 13, ಮಹಾರಾಷ್ಟ್ರ, ಗುಜರಾತ್​, ಉತ್ತರಪ್ರದೇಶಗಳು ಇಂದು (19)ರಂದು ಉತ್ತುಂಗವನ್ನು ತಲುಪಲಿದೆ. ಹಾಗೇ, ಬೆಂಗಳೂರಿನಲ್ಲಿ ಜನವರಿ 22ರಂದು ಅತ್ಯಂತ ಹೆಚ್ಚು ಕೇಸ್​ಗಳು ದಾಖಲಾಗಲಿವೆ ಎಂದೂ ಮಾಹಿತಿ ನೀಡಿದ್ದಾರೆ.   ಕೊರೊನಾ ಪ್ರಸರಣ ವೇಗ ಹೆಚ್ಚುತ್ತಿರುವ ನಡುವೆಯೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ತುಂಬ ಕಡಿಮೆ ಇದೆ. ಉತ್ತರಪ್ರದೇಶದಲ್ಲಂತೂ ಶೇ.1ಕ್ಕಿಂತ ಕಡಿಮೆ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಗರ್​ವಾಲ್ ಮಾಹಿತಿ ನೀಡಿದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಮಣೀಂದರ್​ ಅಗರ್​ವಾಲ್​, ಜನವರಿ 11ನೇ ತಾರೀಖಿನವರಿಗಿನ ಅಂಕಿ-ಅಂಶಗಳನ್ನು ಒಳಗೊಂಡ ಕೊವಿಡ್​ 19 ಪಥವನ್ನು ಗಮನಿಸಿದಾಗ, ಜನವರಿ 23ರ ಸುಮಾರಿಗೆ ದಿನಕ್ಕೆ ಸುಮಾರು 7.2 ಲಕ್ಷ ಕೇಸ್​ಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸದ್ಯದ ಪಥ ಗಮನಿಸಿದಾಗ ಏಳು ಲಕ್ಷವಲ್ಲ, ಜ.23ರ ಹೊತ್ತಿಗೆ ಭಾರತದಲ್ಲಿ ದಿನದ ಸೋಂಕಿತರ ಸಂಖ್ಯೆ 4 ಲಕ್ಷವೂ ದಾಟುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಇದೊಂದು ಸಮಾಧಾನಕರ ಸಂಗತಿ.

ಭಾರತದಲ್ಲಿ ಮಂಗಳವಾರ 2.38 ಕೊರೊನಾ ಕೇಸ್​ಗಳೂ ದಾಖಲಾಗಿವೆ. ಹಾಗೇ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದಲೂ ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿನ ಕೇಸ್​ಗಳಲ್ಲಿ ಇಳಿಮುಖವಾಗುತ್ತಿದೆ.  ಮಂಗಳವಾರ ದೆಹಲಿಯಲ್ಲಿ 11,684, ಸೋಮವಾರ 12, 527 ಕೇಸ್​ಗಳು ದಾಖಲಾಗಿದ್ದವು.  ಆದರೆ ಕರ್ನಾಟಕದಲ್ಲಿ ನಿನ್ನೆ 41ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಕೌತುಕ ಮೂಡಿಸಿದ ‘19.20.21’ ಕನ್ನಡ ಸಿನಿಮಾ; ಮಂಸೋರೆ ಹೊಸ ಚಿತ್ರ ಅನೌನ್ಸ್​

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ