AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗಮ ಪ್ರದೇಶದ ಜನರಿಗೆ ಲಸಿಕೆ ಕೊಡಲು, ತಂಡ ಕಟ್ಟಿಕೊಂಡು ಕಡಿದಾದ ಹಾದಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗುವ ಜಿಲ್ಲಾಧಿಕಾರಿ; ಇವರ ಶ್ರದ್ಧೆಗೆ ಮೆಚ್ಚುಗೆ..ಕೃತಜ್ಞತೆ

ಈ ಹಳ್ಳಿಯ ಜನರಿಗೆ ಲಸಿಕೆ ಕೊಡುವುದು ಸುಲಭವಾಗಿರಲಿಲ್ಲ. ಅದೆಷ್ಟೋ ಮಂದಿಗೆ ಕೊವಿಡ್​ 19 ಲಸಿಕೆ ಬಗ್ಗೆ ಅರಿವು ಇರಲಿಲ್ಲ. ಅಂಥವರಿಗೆ ತಿಳಿವಳಿಕೆ ಮೂಡಿಸಿ, ಧೈರ್ಯ ತುಂಬಿ ಲಸಿಕೆ ಹಾಕಬೇಕಿತ್ತು. ಆದರೆ ಕೊನೆಗೂ ಎಲ್ಲರಿಗೂ ಲಸಿಕೆ ಹಾಕಿದ್ದೇವ ಎನ್ನುತ್ತಾರೆ ಸುರೇಂದ್ರ ಕುಮಾರ್​ ಮೀನಾ

ದುರ್ಗಮ ಪ್ರದೇಶದ ಜನರಿಗೆ ಲಸಿಕೆ ಕೊಡಲು, ತಂಡ ಕಟ್ಟಿಕೊಂಡು ಕಡಿದಾದ ಹಾದಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗುವ ಜಿಲ್ಲಾಧಿಕಾರಿ; ಇವರ ಶ್ರದ್ಧೆಗೆ ಮೆಚ್ಚುಗೆ..ಕೃತಜ್ಞತೆ
ಜಿಲ್ಲಾಧಿಕಾರಿ ಸುರೇಂದ್ರ ಕುಮಾರ್​ ಮೀನಾ
TV9 Web
| Edited By: |

Updated on: Jun 20, 2021 | 5:27 PM

Share

ಈ ಐಎಎಸ್​ ಅಧಿಕಾರಿಯನ್ನು ಇಂಟರ್​ನೆಟ್​​ನಲ್ಲಿ ಜನರು ಭರ್ಜರಿ ಶ್ಲಾಘಿಸುತ್ತಿದ್ದಾರೆ. ಬರೀ ನೆಟ್ಟಿಗರಷ್ಟೇ ಅಲ್ಲ, ಜಿಲ್ಲಾಧಿಕಾರಿಯ ನಿಷ್ಠೆಯ ಬಗ್ಗೆ ತಿಳಿದ ಪ್ರತಿಯೊಬ್ಬರೂ ಹೊಗಳುತ್ತಿದ್ದಾರೆ. ಅಲಿಪುರ್ದಾರ್​ ಜಿಲ್ಲೆಯ ಜಿಲ್ಲಾಧಿಕಾರಿ ಸುರೇಂದ್ರ ಕುಮಾರ್​ ಮೀನಾ ಇದೀಗೆ ಎಲ್ಲೆಡೆಯಿಂದ ಶ್ಲಾಘನೆಗೆ ಪಾತ್ರರಾದವರು. ಇವರು ಜನರಿಗೆ ಉತ್ತರ ಬಂಗಾಳದ ಹಳ್ಳಿಹಳ್ಳಿಗೆ ಹೋಗಿ ಜನರಿಗೆ ಲಸಿಕೆ ನೀಡುತ್ತಿದ್ದಾರೆ. ಅದರಲ್ಲೇನು ವಿಶೇಷ ಕೇಳಬೇಡಿ? ವಾಹನ ಸಂಚಾರ ಸಾಧ್ಯವಿಲ್ಲದ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ. ಜನರಿಗೆ ಲಸಿಕೆ ಕೊಡಿಸಬೇಕು ಎಂದು ದುರ್ಗಮ ಅರಣ್ಯದಲ್ಲಿ ಹೆಜ್ಜೆ ಹಾಕಿದ್ದಾರೆ. ಬೆಟ್ಟ ಹತ್ತಿದ್ದಾರೆ..ಕಡಿದಾದ ಮಾರ್ಗಗಳಲ್ಲಿ ಸಾಗಿದ್ದಾರೆ.

ಹೀಗೆ ದುರ್ಗಮ ಹಳ್ಳಿಯಾದ ಅದ್ಮಾಕ್ಕೆ ಹೋದ ಅನುಭವವನ್ನು ಸುರೇಂದ್ರ ಕುಮಾರ್​ ಇಂಡಿಯಾ ಟುಡೆಯೊಂದಿಗೆ ಹಂಚಿಕೊಂಡಿದ್ದಾರೆ. ನಾನು ನನ್ನ ತಂಡದೊಂದಿಗೆ ಅದ್ಮಾಕ್ಕೆ ತಲುಪಲು ಸುಮಾರು 11 ಕಿಮೀ ದೂರ ಟ್ರೆಕ್ಕಿಂಗ್​ ಮಾಡಬೇಕಾಯಿತು. ಈ ಗ್ರಾಮ ಭಾರತ-ಭೂತಾನ್​ ಗಡಿಯಾದ ಬುಕ್ಸಾ ಎಂಬ ಗುಡ್ಡದ ಮೇಲಿದೆ. ಅತ್ಯಂತ ಕಡಿದಾದ ಮಾರ್ಗದಲ್ಲಿ ಟ್ರೆಕ್ಕಿಂಗ್ ಮಾಡಬೇಕಾಯಿತು ಎಂದಿದ್ದಾರೆ. ಉತ್ತರ ಬಂಗಾಳದಲ್ಲಿಯೇ ಈ ಅದ್ಮಾ ಅತ್ಯಂತ ದುರ್ಗಮ ಪ್ರದೇಶವಾಗಿದ್ದು, ಅಲ್ಲಿನ ಜನರಿಗೆ ಕೊವಿಡ್​ 19 ಲಸಿಕೆ ನೀಡಲು ಪ್ರಯಾಣ ಬೆಳೆಸುವುದು ಅನಿವಾರ್ಯವಾಗಿತ್ತು. ಹಾಗೇ ಅದ್ಮಾಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಪೊಖಾರಿ, ತೋರಿಬರಿ, ಶೇಗಾನ್​, ಫುಲ್​​ಬಟಿ ಹಳ್ಳಿಗಳಿಗೂ ಭೇಟಿ ಕೊಟ್ಟು ಅಲ್ಲಿನ ಜನರಿಗೆ ಲಸಿಕೆ ಕೊಟ್ಟಿದ್ದೇವೆ. ಈ ಹಳ್ಳಿಗಳಿಗೆ ತಲುಪುವುದೇ ದೊಡ್ಡ ಸಾಹಸವಾಗಿತ್ತು. ನಮ್ಮೊಂದಿಗೆ ಇದ್ದ ಆರೋಗ್ಯ ಕಾರ್ಯಕರ್ತರು ಕೊವಿಡ್ ಲಸಿಕೆಯ ದೊಡ್ಡ ದೊಡ್ಡ ಬಾಕ್ಸ್​ಗಳನ್ನು ಹೊತ್ತಿದ್ದರು ಎಂದು ತಮ್ಮ ಪ್ರಯಾಣದ ಅನುಭವ ಹೇಳಿದ್ದಾರೆ.

ಈ ಹಳ್ಳಿಯ ಜನರಿಗೆ ಲಸಿಕೆ ಕೊಡುವುದು ಸುಲಭವಾಗಿರಲಿಲ್ಲ. ಅದೆಷ್ಟೋ ಮಂದಿಗೆ ಕೊವಿಡ್​ 19 ಲಸಿಕೆ ಬಗ್ಗೆ ಅರಿವು ಇರಲಿಲ್ಲ. ಅಂಥವರಿಗೆ ತಿಳಿವಳಿಕೆ ಮೂಡಿಸಿ, ಧೈರ್ಯ ತುಂಬಿ ಲಸಿಕೆ ಹಾಕಬೇಕಿತ್ತು. ಆದರೆ ಕೊನೆಗೂ ಎಲ್ಲರಿಗೂ ಲಸಿಕೆ ಹಾಕಿದ್ದೇವೆ. ಆ ಸಮಾಧಾನ ಖಂಡಿತ ಇದೆ ಎಂದು ಸುರೇಂದ್ರ ಕುಮಾರ್​ ಮೀನಾ ತಿಳಿಸಿದ್ದಾರೆ. ಹಾಗೇ ಸುರೇಂದ್ರ ಕುಮಾರ್​ ಮತ್ತು ಅವರ ತಂಡ ಹೀಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿ ಹಳ್ಳಿಗರಿಗೆ ಕೊರೊನಾ ವ್ಯಾಕ್ಸಿನ್​ ನೀಡಿದ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಪ್ರವೀನ್​ ಕಸ್ವಾನ್​ ಕೂಡ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಐಎಎಸ್​ ಅಧಿಕಾರಿಯ ತಂಡ ಹಳ್ಳಿಗಳಿಗೆ ಕಾಲಿಟ್ಟ ತಕ್ಷಣ ಮೊದಲು ಅಲ್ಲಿನವರಿಗೆಲ್ಲ ಮಾಸ್ಕ್​ ವಿತರಿಸುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇವರ ಶ್ರಮವನ್ನು ಗ್ರಾಮಪಂಚಾಯಿತಿ ಸದಸ್ಯರು, ಹಳ್ಳಿಯ ಜನರು ಮೆಚ್ಚಿಕೊಂಡಿದ್ದಾರೆ..ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣದ ಕಾಳೇಶ್ವರಂ ಪ್ರಾಜೆಕ್ಟ್​ ಕುರಿತು ಜೂನ್ 25ಕ್ಕೆ ಡಿಸ್ಕವರಿ ಚಾನೆಲ್ ಸಾಕ್ಷ್ಯಚಿತ್ರ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ