AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗಮ ಪ್ರದೇಶದ ಜನರಿಗೆ ಲಸಿಕೆ ಕೊಡಲು, ತಂಡ ಕಟ್ಟಿಕೊಂಡು ಕಡಿದಾದ ಹಾದಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗುವ ಜಿಲ್ಲಾಧಿಕಾರಿ; ಇವರ ಶ್ರದ್ಧೆಗೆ ಮೆಚ್ಚುಗೆ..ಕೃತಜ್ಞತೆ

ಈ ಹಳ್ಳಿಯ ಜನರಿಗೆ ಲಸಿಕೆ ಕೊಡುವುದು ಸುಲಭವಾಗಿರಲಿಲ್ಲ. ಅದೆಷ್ಟೋ ಮಂದಿಗೆ ಕೊವಿಡ್​ 19 ಲಸಿಕೆ ಬಗ್ಗೆ ಅರಿವು ಇರಲಿಲ್ಲ. ಅಂಥವರಿಗೆ ತಿಳಿವಳಿಕೆ ಮೂಡಿಸಿ, ಧೈರ್ಯ ತುಂಬಿ ಲಸಿಕೆ ಹಾಕಬೇಕಿತ್ತು. ಆದರೆ ಕೊನೆಗೂ ಎಲ್ಲರಿಗೂ ಲಸಿಕೆ ಹಾಕಿದ್ದೇವ ಎನ್ನುತ್ತಾರೆ ಸುರೇಂದ್ರ ಕುಮಾರ್​ ಮೀನಾ

ದುರ್ಗಮ ಪ್ರದೇಶದ ಜನರಿಗೆ ಲಸಿಕೆ ಕೊಡಲು, ತಂಡ ಕಟ್ಟಿಕೊಂಡು ಕಡಿದಾದ ಹಾದಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗುವ ಜಿಲ್ಲಾಧಿಕಾರಿ; ಇವರ ಶ್ರದ್ಧೆಗೆ ಮೆಚ್ಚುಗೆ..ಕೃತಜ್ಞತೆ
ಜಿಲ್ಲಾಧಿಕಾರಿ ಸುರೇಂದ್ರ ಕುಮಾರ್​ ಮೀನಾ
Follow us
TV9 Web
| Updated By: Lakshmi Hegde

Updated on: Jun 20, 2021 | 5:27 PM

ಈ ಐಎಎಸ್​ ಅಧಿಕಾರಿಯನ್ನು ಇಂಟರ್​ನೆಟ್​​ನಲ್ಲಿ ಜನರು ಭರ್ಜರಿ ಶ್ಲಾಘಿಸುತ್ತಿದ್ದಾರೆ. ಬರೀ ನೆಟ್ಟಿಗರಷ್ಟೇ ಅಲ್ಲ, ಜಿಲ್ಲಾಧಿಕಾರಿಯ ನಿಷ್ಠೆಯ ಬಗ್ಗೆ ತಿಳಿದ ಪ್ರತಿಯೊಬ್ಬರೂ ಹೊಗಳುತ್ತಿದ್ದಾರೆ. ಅಲಿಪುರ್ದಾರ್​ ಜಿಲ್ಲೆಯ ಜಿಲ್ಲಾಧಿಕಾರಿ ಸುರೇಂದ್ರ ಕುಮಾರ್​ ಮೀನಾ ಇದೀಗೆ ಎಲ್ಲೆಡೆಯಿಂದ ಶ್ಲಾಘನೆಗೆ ಪಾತ್ರರಾದವರು. ಇವರು ಜನರಿಗೆ ಉತ್ತರ ಬಂಗಾಳದ ಹಳ್ಳಿಹಳ್ಳಿಗೆ ಹೋಗಿ ಜನರಿಗೆ ಲಸಿಕೆ ನೀಡುತ್ತಿದ್ದಾರೆ. ಅದರಲ್ಲೇನು ವಿಶೇಷ ಕೇಳಬೇಡಿ? ವಾಹನ ಸಂಚಾರ ಸಾಧ್ಯವಿಲ್ಲದ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ. ಜನರಿಗೆ ಲಸಿಕೆ ಕೊಡಿಸಬೇಕು ಎಂದು ದುರ್ಗಮ ಅರಣ್ಯದಲ್ಲಿ ಹೆಜ್ಜೆ ಹಾಕಿದ್ದಾರೆ. ಬೆಟ್ಟ ಹತ್ತಿದ್ದಾರೆ..ಕಡಿದಾದ ಮಾರ್ಗಗಳಲ್ಲಿ ಸಾಗಿದ್ದಾರೆ.

ಹೀಗೆ ದುರ್ಗಮ ಹಳ್ಳಿಯಾದ ಅದ್ಮಾಕ್ಕೆ ಹೋದ ಅನುಭವವನ್ನು ಸುರೇಂದ್ರ ಕುಮಾರ್​ ಇಂಡಿಯಾ ಟುಡೆಯೊಂದಿಗೆ ಹಂಚಿಕೊಂಡಿದ್ದಾರೆ. ನಾನು ನನ್ನ ತಂಡದೊಂದಿಗೆ ಅದ್ಮಾಕ್ಕೆ ತಲುಪಲು ಸುಮಾರು 11 ಕಿಮೀ ದೂರ ಟ್ರೆಕ್ಕಿಂಗ್​ ಮಾಡಬೇಕಾಯಿತು. ಈ ಗ್ರಾಮ ಭಾರತ-ಭೂತಾನ್​ ಗಡಿಯಾದ ಬುಕ್ಸಾ ಎಂಬ ಗುಡ್ಡದ ಮೇಲಿದೆ. ಅತ್ಯಂತ ಕಡಿದಾದ ಮಾರ್ಗದಲ್ಲಿ ಟ್ರೆಕ್ಕಿಂಗ್ ಮಾಡಬೇಕಾಯಿತು ಎಂದಿದ್ದಾರೆ. ಉತ್ತರ ಬಂಗಾಳದಲ್ಲಿಯೇ ಈ ಅದ್ಮಾ ಅತ್ಯಂತ ದುರ್ಗಮ ಪ್ರದೇಶವಾಗಿದ್ದು, ಅಲ್ಲಿನ ಜನರಿಗೆ ಕೊವಿಡ್​ 19 ಲಸಿಕೆ ನೀಡಲು ಪ್ರಯಾಣ ಬೆಳೆಸುವುದು ಅನಿವಾರ್ಯವಾಗಿತ್ತು. ಹಾಗೇ ಅದ್ಮಾಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಪೊಖಾರಿ, ತೋರಿಬರಿ, ಶೇಗಾನ್​, ಫುಲ್​​ಬಟಿ ಹಳ್ಳಿಗಳಿಗೂ ಭೇಟಿ ಕೊಟ್ಟು ಅಲ್ಲಿನ ಜನರಿಗೆ ಲಸಿಕೆ ಕೊಟ್ಟಿದ್ದೇವೆ. ಈ ಹಳ್ಳಿಗಳಿಗೆ ತಲುಪುವುದೇ ದೊಡ್ಡ ಸಾಹಸವಾಗಿತ್ತು. ನಮ್ಮೊಂದಿಗೆ ಇದ್ದ ಆರೋಗ್ಯ ಕಾರ್ಯಕರ್ತರು ಕೊವಿಡ್ ಲಸಿಕೆಯ ದೊಡ್ಡ ದೊಡ್ಡ ಬಾಕ್ಸ್​ಗಳನ್ನು ಹೊತ್ತಿದ್ದರು ಎಂದು ತಮ್ಮ ಪ್ರಯಾಣದ ಅನುಭವ ಹೇಳಿದ್ದಾರೆ.

ಈ ಹಳ್ಳಿಯ ಜನರಿಗೆ ಲಸಿಕೆ ಕೊಡುವುದು ಸುಲಭವಾಗಿರಲಿಲ್ಲ. ಅದೆಷ್ಟೋ ಮಂದಿಗೆ ಕೊವಿಡ್​ 19 ಲಸಿಕೆ ಬಗ್ಗೆ ಅರಿವು ಇರಲಿಲ್ಲ. ಅಂಥವರಿಗೆ ತಿಳಿವಳಿಕೆ ಮೂಡಿಸಿ, ಧೈರ್ಯ ತುಂಬಿ ಲಸಿಕೆ ಹಾಕಬೇಕಿತ್ತು. ಆದರೆ ಕೊನೆಗೂ ಎಲ್ಲರಿಗೂ ಲಸಿಕೆ ಹಾಕಿದ್ದೇವೆ. ಆ ಸಮಾಧಾನ ಖಂಡಿತ ಇದೆ ಎಂದು ಸುರೇಂದ್ರ ಕುಮಾರ್​ ಮೀನಾ ತಿಳಿಸಿದ್ದಾರೆ. ಹಾಗೇ ಸುರೇಂದ್ರ ಕುಮಾರ್​ ಮತ್ತು ಅವರ ತಂಡ ಹೀಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿ ಹಳ್ಳಿಗರಿಗೆ ಕೊರೊನಾ ವ್ಯಾಕ್ಸಿನ್​ ನೀಡಿದ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಪ್ರವೀನ್​ ಕಸ್ವಾನ್​ ಕೂಡ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಐಎಎಸ್​ ಅಧಿಕಾರಿಯ ತಂಡ ಹಳ್ಳಿಗಳಿಗೆ ಕಾಲಿಟ್ಟ ತಕ್ಷಣ ಮೊದಲು ಅಲ್ಲಿನವರಿಗೆಲ್ಲ ಮಾಸ್ಕ್​ ವಿತರಿಸುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇವರ ಶ್ರಮವನ್ನು ಗ್ರಾಮಪಂಚಾಯಿತಿ ಸದಸ್ಯರು, ಹಳ್ಳಿಯ ಜನರು ಮೆಚ್ಚಿಕೊಂಡಿದ್ದಾರೆ..ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣದ ಕಾಳೇಶ್ವರಂ ಪ್ರಾಜೆಕ್ಟ್​ ಕುರಿತು ಜೂನ್ 25ಕ್ಕೆ ಡಿಸ್ಕವರಿ ಚಾನೆಲ್ ಸಾಕ್ಷ್ಯಚಿತ್ರ

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ