AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corbevax Covid 19 Vaccine: 5-18ವರ್ಷದವರ ಮೇಲೆ ’ಕಾರ್ಬ್​ವ್ಯಾಕ್ಸ್’ ಲಸಿಕೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ

ಬಯಾಲಜಿಕಲ್​ ಇ  ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕಾರ್ಬ್​ವ್ಯಾಕ್ಸ್​ ಲಸಿಕೆ ಆರ್​ಬಿಡಿ ಪ್ರೋಟಿನ್​ ಸಬ್​ ಯೂನಿಟ್​ ಲಸಿಕೆಯಾಗಿದ್ದು, ಇದು ಮೂರು ಡೋಸ್​ಗಳನ್ನು ಪಡೆಯಬೇಕಾಗುತ್ತದೆ. 

Corbevax Covid 19 Vaccine: 5-18ವರ್ಷದವರ ಮೇಲೆ ’ಕಾರ್ಬ್​ವ್ಯಾಕ್ಸ್’ ಲಸಿಕೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ
ಲಸಿಕೆ ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Sep 02, 2021 | 9:39 AM

Share

5-18ವರ್ಷದವರ ಮೇಲೆ ಕೊವಿಡ್​ 19 ಲಸಿಕೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಲು ಹೈದರಾಬಾದ್​ ಮೂಲದ ಔಷಧೀಯ ಕಂಪನಿ ಬಯಾಲಜಿಕಲ್​ ಇ ಲಿಮಿಟೆಡ್​ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI) ಅನುಮತಿ ನೀಡಿದೆ. ಬಯಾಲಜಿಕಲ್​ ಇ ಕಂಪನಿ ಅಭಿವೃದ್ಧಿ ಪಡಿಸಿರುವ ಲಸಿಕೆ ಹೆಸರು ಕಾರ್ಬ್​ವ್ಯಾಕ್ಸ್​(Corbevax) ಎಂದಾಗಿದ್ದು, ಇದು ಮೂರೂ ಹಂತದ ಕ್ಲಿನಿಕಲ್​ ಪ್ರಯೋಗದಲ್ಲಿ ಯಶಸ್ವಿಯಾದರೆ 5ವರ್ಷದ ಮಕ್ಕಳಿಂದ 18 ವರ್ಷದವರೆಗಿನವರಿಗೆ ಈ ಲಸಿಕೆ ನೀಡಬಹುದಾಗಿದೆ. ಅಂದ ಹಾಗೇ, ಈ ಕಾರ್ಬ್​ವ್ಯಾಕ್ಸ್ (Corbevax) ಅಥವಾ ಬಯಾಲಜಿಕಲ್​ ಇ ಲಿಮಿಟೆಡ್ (Biologicals E Limited) ಲಸಿಕೆಯ ಕ್ಲಿನಿಕಲ್​ ಪ್ರಯೋಗ ದೇಶದ 10 ಕಡೆಗಳಲ್ಲಿ ನಡೆಯಲಿದೆ. 

ಬಯಾಲಜಿಕಲ್​ ಇ  ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕಾರ್ಬ್​ವ್ಯಾಕ್ಸ್​ ಲಸಿಕೆ ಆರ್​ಬಿಡಿ ಪ್ರೋಟಿನ್​ ಸಬ್​ ಯೂನಿಟ್​ ಲಸಿಕೆಯಾಗಿದ್ದು, ಇದು ಮೂರು ಡೋಸ್​ಗಳನ್ನು ಪಡೆಯಬೇಕಾಗುತ್ತದೆ.  ಇದನ್ನು ದೇಹದಲ್ಲಿ ಇಂಜೆಕ್ಟ್​ ಮಾಡಿದಾಗ  SARS-CoV-2 ನ ಸ್ಪೈಕ್​ ಪ್ರೋಟೀನ್​ ಉತ್ಪಾದಿಸುತ್ತದೆ. ಹಾಗೇ, ರೋಗಪ್ರತಿರೋಧಕ ಪ್ರತಿಕ್ರಿಯೆಯನ್ನು ಹೊರಸೂಸುತ್ತದೆ. ಸೋಂಕಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೈಡಸ್​ ಕ್ಯಾಡಿಲಾಕ್ಕೆ ಸಿಕ್ಕಿದೆ ಅನುಮೋದನೆ ಸದ್ಯ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನೀಡಲು ಮೂರ್ನಾಲ್ಕು ಲಸಿಕೆಗಳಿದ್ದರೂ, ಮಕ್ಕಳಿಗೆ ನೀಡಲು ಒಂದೂ ಕೊವಿಡ್ 19 ಲಸಿಕೆಯಿಲ್ಲ. ಸದ್ಯ ಜೈಡಸ್​ ಕ್ಯಾಡಿಲಾ ಸಂಸ್ಥೆಯ ZyCoV-D ಕೊವಿಡ್​ 19 ಲಸಿಕೆಯನ್ನು 12-18ವರ್ಷದವರೆಗಿನವರ ಮೇಲೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಈಗಾಗಲೇ ಡಿಸಿಜಿಐ ಅನುಮೋದನೆ ನೀಡಿದೆ. ಸೆಪ್ಟೆಂಬರ್​ನಿಂದ ಬಳಕೆಗೆ ಲಭ್ಯವಿರಲಿದೆ ಎಂದು ಹೇಳಲಾಗಿತ್ತಾದರೂ ಇನ್ನೂ ಆ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.  ಇದರೊಂದಿಗೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆಯನ್ನು 2-18ವರ್ಷದವರ ಮೇಲೆ, 2 ಹಾಗೂ 3ನೇ ಹಂತದ ಕ್ಲಿನಿಕಲ್​ ಪ್ರಯೋಗ ನಡೆಸಲಾಗುತ್ತಿದೆ ಎಂದೂ ಹೇಳಲಾಗಿದೆ. ಹಾಗೇ, ಕೊವ್ಯಾಕ್ಸಿನ್​ ಲಸಿಕೆಯನ್ನು ಅಕ್ಟೋಬರ್​-ನವೆಂಬರ್​​ನಿಂದ ಮಕ್ಕಳಿಗೆ ನೀಡಲು ಶುರು ಮಾಡಲಾಗುತ್ತದೆ ಎಂದು ಈ ಮೊದಲು ತಿಳಿಸಿಲಾಗಿದೆ.

ಇದನ್ನೂ ಓದಿ: ದೇಹಕ್ಕೆ ತಂಪು ನೀಡುವ ಹೆಸರು ಬೇಳೆ ದೋಸೆ ಮಾಡಿ ಸವಿಯಿರಿ; ಮಾಡುವ ವಿಧಾನ ಇಲ್ಲಿದೆ ನೋಡಿ

Chanakya Niti: ಮಾತು, ವರ್ತನೆ, ಸಹವಾಸದ ಬಗ್ಗೆ ಸದಾ ನಿಗಾ ವಹಿಸಿ; ಈ ಸಂಗತಿಯನ್ನು ಮರೆಯಬೇಡಿ

Published On - 9:21 am, Thu, 2 September 21

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?