ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದ ದೆಹಲಿ-ಗೋವಾ ರಾಜಧಾನಿ ಎಕ್ಸ್​ಪ್ರೆಸ್​; ಬಂಡೆ ಬಿದ್ದಿದ್ದೇ ಅಪಘಾತಕ್ಕೆ ಕಾರಣ

| Updated By: Lakshmi Hegde

Updated on: Jun 26, 2021 | 1:27 PM

ರತ್ನಗಿರಿ ಜಿಲ್ಲೆಯ ಉಕ್ಷಿ ಮತ್ತು ಭೋಕೆ ರೈಲ್ವೆ ಸ್ಟೇಶನ್​ಗಳ ಮಧ್ಯೆ ಸಿಗುವ ಕಾರ್ಬುಡೆ ಸುರಂಗ ಮಾರ್ಗದಲ್ಲಿ ಹಳಿಗಳ ಮೇಲೆ ಬಂಡೆ ಬಿದ್ದಿತ್ತು. ಇದರಿಂದಾಗಿ ರೈಲಿನ ಮುಂದಿನ ಚಕ್ರಗಳು ಹಳಿ ತಪ್ಪುವಂತಾಯಿತು ಎಂದು ರೈಲ್ವೆ ಡಿಪಾರ್ಟ್​​ಮೆಂಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದ ದೆಹಲಿ-ಗೋವಾ ರಾಜಧಾನಿ ಎಕ್ಸ್​ಪ್ರೆಸ್​; ಬಂಡೆ ಬಿದ್ದಿದ್ದೇ ಅಪಘಾತಕ್ಕೆ ಕಾರಣ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿಯ ಹಜ್ರತ್​ ನಿಜಾಮುದ್ದೀನ್​ ಸ್ಟೇಶನ್​​ನಿಂದ ಗೋವಾದ ಮಡಗಾಂವ್​ಗೆ ತೆರಳುತ್ತಿದ್ದ, ಗೋವಾದ ರಾಜಧಾನಿ ಎಕ್ಸ್​​ಪ್ರೆಸ್​​ ರೈಲು ಅಪಘಾತಕ್ಕೀಡಾಗಿದೆ. ಇಂದು ಮುಂಜಾನೆ 4 ಗಂಟೆ ವೇಳೆಯಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಬಳಿ ಕಾರ್ಬುಡೆ​ ಸುರಂಗ ಮಾರ್ಗದಲ್ಲಿ ಚಲಿಸುವಾಗ ಹಳಿ ತಪ್ಪಿದೆ. ಯಾವ ಪ್ರಯಾಣಿಕರಿಗೂ ಜೀವಹಾನಿಯಾಗಿಲ್ಲ, ಗಾಯವೂ ಆಗಿಲ್ಲ ಎಂದು ಕೊಂಕಣ ರೈಲ್ವೆ ವಿಭಾಗದ ವಕ್ತಾರ ತಿಳಿಸಿದ್ದಾರೆ. ಹಳಿಗಳ ಮೇಲೆ ಬಂಡೆ ಬಿದ್ದಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಅವರು ಮಾಹಿತಿ ನೀಡಿದ್ದಾರೆ.

ರತ್ನಗಿರಿ ಜಿಲ್ಲೆಯ ಉಕ್ಷಿ ಮತ್ತು ಭೋಕೆ ರೈಲ್ವೆ ಸ್ಟೇಶನ್​ಗಳ ಮಧ್ಯೆ ಸಿಗುವ ಕಾರ್ಬುಡೆ ಸುರಂಗ ಮಾರ್ಗದಲ್ಲಿ ಹಳಿಗಳ ಮೇಲೆ ಬಂಡೆ ಬಿದ್ದಿತ್ತು. ಇದರಿಂದಾಗಿ ರೈಲಿನ ಮುಂದಿನ ಚಕ್ರಗಳು ಹಳಿ ತಪ್ಪುವಂತಾಯಿತು ಎಂದು ಹೇಳಿದ್ದಾರೆ. ಹಳಿ ತಪ್ಪಿದ ರೈಲನ್ನು ದುರಸ್ತಿ ಪಡಿಸಲು ರೈಲು ನಿರ್ವಹಣಾ ವಾಹನ (RMV) ಸ್ಥಳಕ್ಕೆ ತೆರಳಿದೆ. ಆ್ಯಕ್ಸಿಡೆಂಟ್​ ರಿಲೀಫ್​ ಮೆಡಿಕಲ್​ ವಾಹನ ಕೂಡ ಸ್ಥಳಕ್ಕೆ ತಲುಪಿದೆ ಎಂದೂ ಮಾಹಿತಿ ನೀಡಿದ್ದಾರೆ. ಹಳಿ ಮೇಲೆ ಬಿದ್ದ ಬಂಡೆಯನ್ನು ತೆರವುಗೊಳಿಸಲು ಕೊಂಕಣ ರೈಲ್ವೆ ಅಧಿಕಾರಿಗಳೂ ಧಾವಿಸಿದ್ದಾರೆ.

ಮುಂಬೈ ಸಮೀಪದ ರೋಹಾದಿಂದ ಮಂಗಳೂರು ಬಳಿಯ ಥೋಕೂರ್​​​ವರೆಗೆ ಸುಮಾರು 750 ಕಿಮೀ ಉದ್ದದ ಮಾರ್ಗ ಕೊಂಕಣ ರೈಲ್ವೆ ಮಾರ್ಗವಾಗಿದೆ. ಈ ಮಾರ್ಗ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯವನ್ನು ಒಳಗೊಳ್ಳುತ್ತದೆ. ಇಲ್ಲಿನ ಮಾರ್ಗದಲ್ಲಿ ನದಿಗಳು, ಪರ್ವತ ಪ್ರದೇಶಗಳು, ಕಮರಿಗಳೆಲ್ಲ ಇದ್ದು, ದುರ್ಗಮ ಪ್ರದೇಶದಲ್ಲಿ ರೈಲ್ವೆ ಹಳಿ ಹಾದುಹೋಗಿದೆ. ಇಲ್ಲಿ ಸಂಚಾರ ಸುಲಭವಲ್ಲ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಕಣ್ಣೆದುರೇ ಅಪಘಾತಕ್ಕೆ ಒಳಗಾದವರ ನೆರವಿಗೆ ನಿಂತ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ