ಗಾಜಿಪುರ, ಟಿಕ್ರಿಯಲ್ಲಿ ಬ್ಯಾರಿಕೇಡ್‌ ತೆರವು; ರೈತರು ಸಂಸತ್​​ಗೆ ಹೋಗಲಿದ್ದಾರೆ ಎಂದ ರಾಕೇಶ್ ಟಿಕಾಯತ್

Tikri, Ghazipur borders ರೈತರು ಎಲ್ಲಿ ಬೇಕಾದರೂ ಬೆಳೆ ಮಾರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ರಸ್ತೆಗಳು ತೆರೆದರೆ, ನಾವು ನಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಂಸತ್​​ಗೆ  ಹೋಗುತ್ತೇವೆ. ಮೊದಲು ನಮ್ಮ ಟ್ರ್ಯಾಕ್ಟರ್‌ಗಳು ದೆಹಲಿಗೆ ಹೋಗುತ್ತವೆ. ನಾವು ದಾರಿಯನ್ನು ತಡೆದಿಲ್ಲ ಎಂದ ರಾಕೇಶ್ ಟಿಕಾಯತ್.

ಗಾಜಿಪುರ, ಟಿಕ್ರಿಯಲ್ಲಿ ಬ್ಯಾರಿಕೇಡ್‌ ತೆರವು; ರೈತರು ಸಂಸತ್​​ಗೆ ಹೋಗಲಿದ್ದಾರೆ ಎಂದ ರಾಕೇಶ್ ಟಿಕಾಯತ್
ಬ್ಯಾರಿಕೇಡ್ ತೆರವುಗೊಳಿಸುತ್ತಿರುವುದು
Edited By: ರಶ್ಮಿ ಕಲ್ಲಕಟ್ಟ

Updated on: Oct 29, 2021 | 12:29 PM

ದೆಹಲಿ: ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ, ಗಾಜಿಪುರ ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ದೆಹಲಿ ಪೊಲೀಸರು ಗುರುವಾರ ತೆಗೆದುಹಾಕಲು ಪ್ರಾರಂಭಿಸಿದ್ದಾರೆ ಎಂದು ಎಎನ್‌ಐ  ಸುದ್ದಿ ಸಂಸ್ಥೆ ವರದಿ ಮಾಡಿದೆ. ಟಿಕ್ರಿ ಗಡಿಯಲ್ಲಿ ಎಂಟು ಪದರಗಳ ಬ್ಯಾರಿಕೇಡ್‌ಗಳ ಪೈಕಿ ನಾಲ್ಕನ್ನು ತೆಗೆದುಹಾಕಲಾಗಿದೆ. ಆದರೆ, ಸಿಮೆಂಟ್ ಬ್ಯಾರಿಕೇಡ್‌ಗಳು ಹಾಗೆಯೇ ಉಳಿದುಕೊಂಡಿದ್ದು, ಪ್ರಯಾಣಿಕರಿಗೆ ರಸ್ತೆ ಬಂದ್ ಆಗಿದೆ. ಟಿಕ್ರಿ (ದೆಹಲಿ-ಹರಿಯಾಣ) ಗಡಿಯಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲಾಗುತ್ತಿದೆ. ಘಾಜಿಪುರ (ದೆಹಲಿ-ಉತ್ತರ ಪ್ರದೇಶ) ಗಡಿಯಿಂದಲೂ ಬ್ಯಾರಿಕೇಡಿಂಗ್ ಅನ್ನು ತೆಗೆದುಹಾಕಲಾಗುತ್ತಿದೆ. ಈ ಗಡಿಗಳಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನಗಳು ನಡೆಯುತ್ತಿವೆ.


ಇದು ದೆಹಲಿ ಪೊಲೀಸರ ಉಪಕ್ರಮ ಮತ್ತು ನಾವು ಹಾಕಿರುವ ಬ್ಲಾಕ್ ಅನ್ನು ತೆಗೆದುಹಾಕುತ್ತಿದ್ದೇವೆ. ಈ ಹೆದ್ದಾರಿಯನ್ನು ಜನರಿಗೆ ಮುಕ್ತಗೊಳಿಸುವಂತೆ ರೈತರಲ್ಲಿ ಮನವಿ ಮಾಡುತ್ತೇವೆ. ನಮ್ಮ ಇಂಗಿತವನ್ನು ರೈತರು ಸ್ವೀಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ, ದೇವೇಂದ್ರ ಪಾಠಕ್ ಹೇಳಿದ್ದಾರೆ.


ಕಳೆದ ವಾರ, ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಮೇಲ್ಸೇತುವೆಯ ಕೆಳಗಿನ ಸರ್ವಿಸ್ ರಸ್ತೆಯ ಒಂದು ಭಾಗವನ್ನು ತೆರವು ಮಾಡಿದರು. ರಸ್ತೆಯ ಸೇವಾ ಲೇನ್ ಭಾಗವು ಗಾಜಿಯಾಬಾದ್‌ನಿಂದ ದೆಹಲಿಗೆ ಹೋಗುತ್ತದೆ, ಅದರ ಮೇಲೆ ರೈತರಿಂದ ಮಾಧ್ಯಮ ಕೇಂದ್ರವನ್ನು ನಿರ್ಮಿಸಲಾಗಿದೆ. ಇನ್ನು ರೈತರು ಮೇಲ್ಸೇತುವೆ ಮೇಲಿನ ಭಾಗದಲ್ಲಿ ಮಾತ್ರ ಕುಳಿತುಕೊಳ್ಳಲಿದ್ದಾರೆ. ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುವ ರೈತರಿಗೆ ಆಂದೋಲನ ಮಾಡುವ ಹಕ್ಕಿದೆ ಆದರೆ ಅವರು ಅನಿರ್ದಿಷ್ಟವಾಗಿ ರಸ್ತೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ಈ ನಡೆ ಸ್ವೀಕರಿಸಲಾಗಿದೆ . ಕಾನೂನಾತ್ಮಕ ಸವಾಲು ಬಾಕಿಯಿರುವಾಗಲೂ ಪ್ರತಿಭಟನೆ ಮಾಡುವ ಹಕ್ಕಿಗೆ ವಿರುದ್ಧವಾಗಿಲ್ಲ ಆದರೆ ಅಂತಿಮವಾಗಿ ಏನಾದರೂ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ರಸ್ತೆ ತಡೆ ರೈತರ ಪ್ರತಿಭಟನೆಯ ಭಾಗವಲ್ಲ: ರಾಕೇಶ್ ಟಿಕಾಯತ್
ರೈತರು ಎಲ್ಲಿ ಬೇಕಾದರೂ ಬೆಳೆ ಮಾರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ರಸ್ತೆಗಳು ತೆರೆದರೆ, ನಾವು ನಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಂಸತ್​​ಗೆ  ಹೋಗುತ್ತೇವೆ. ಮೊದಲು ನಮ್ಮ ಟ್ರ್ಯಾಕ್ಟರ್‌ಗಳು ದೆಹಲಿಗೆ ಹೋಗುತ್ತವೆ. ನಾವು ದಾರಿಯನ್ನು ತಡೆದಿಲ್ಲ. ರಸ್ತೆ ತಡೆ ನಮ್ಮ ಪ್ರತಿಭಟನೆಯ ಭಾಗವಲ್ಲ ಎಂದು ಗಾಜೀಪುರದಲ್ಲಿ ಮಾತನಾಡಿದ ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಇದನ್ನೂ ಓದಿ: ಜಿ20 ಶೃಂಗಸಭೆಗಾಗಿ ರೋಮ್​​ಗೆ ತೆರಳಿದ ನರೇಂದ್ರ ಮೋದಿ; ಪ್ರಧಾನಿಯಾದ ಬಳಿಕ ಇದು ಮೊದಲ ಭೇಟಿ

Published On - 12:25 pm, Fri, 29 October 21

Web contact

TV9 Kannada

Read More
Follow Us