AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚ್​ನಲ್ಲಿ ದೆಹಲಿ ಉಷ್ಣಾಂಶ 40.1 ಡಿಗ್ರಿ: ಇದು 76 ವರ್ಷಗಳಲ್ಲೇ ಅಧಿಕ

New Delhi Weather: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಗಾಳಿಯು ಜನರನ್ನು ಕಾಡುತ್ತಿದೆ. ಹೋಳಿ ಹಬ್ಬದ ದಿನವೇ ದೆಹಲಿಯ ಉಷ್ಣಾಂಶ 40.1 ಡಿಗ್ರಿ ಮುಟ್ಟಿದೆ. ಕಳೆದ 76 ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ಎಂದಿಗೂ ದೆಹಲಿಯಲ್ಲಿ ಈ ಪ್ರಮಾಣದ ಉಷ್ಣಾಂಶ ದಾಖಲಾಗಿರಲಿಲ್ಲ.

ಮಾರ್ಚ್​ನಲ್ಲಿ ದೆಹಲಿ ಉಷ್ಣಾಂಶ 40.1 ಡಿಗ್ರಿ: ಇದು 76 ವರ್ಷಗಳಲ್ಲೇ ಅಧಿಕ
ದೆಹಲಿಯಲ್ಲಿ ಪ್ರಖರ ಬಿಸಿಲು
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 29, 2021 | 10:46 PM

Share

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಗಾಳಿಯು ಜನರನ್ನು ಕಾಡುತ್ತಿದೆ. ಹೋಳಿ ಹಬ್ಬದ ದಿನವೇ ದೆಹಲಿಯ ಉಷ್ಣಾಂಶ 40.1 ಡಿಗ್ರಿ ಮುಟ್ಟಿದೆ. ಕಳೆದ 76 ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ಎಂದಿಗೂ ದೆಹಲಿಯಲ್ಲಿ ಈ ಪ್ರಮಾಣದ ಉಷ್ಣಾಂಶ ದಾಖಲಾಗಿರಲಿಲ್ಲ. ದೆಹಲಿ ಹವಾಮಾನದ ಮುನ್ಸೂಚನೆ, ಮಾಹಿತಿ ನೀಡುವ ಸಫ್ತಾರ್​ಜಂಗ್ ಹವಾಮಾನ ಕಚೇರಿಯು ಇಂದಿನ ಗರಿಷ್ಠ ಉಷ್ಣಾಂಶವನ್ನು 40.1 ಡಿಗ್ರಿ ಎಂದು ಹೇಳಿದೆ. ಇದು ಮಾರ್ಚ್ ತಿಂಗಳ ಸಾಮಾನ್ಯ ಸರಾಸರಿ ಉಷ್ಣಾಂಶಕ್ಕೆ ಹೋಲಿಸಿದರೆ 4 ಡಿಗ್ರಿ ಹೆಚ್ಚು ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿ ಕುಲ್​ದೀಪ್ ಶ್ರೀವಾಸ್ತವ.

ಮಾರ್ಚ್​ 31, 1945ರ ನಂತರ ದೆಹಲಿಯಲ್ಲಿ ದಾಖಲಾಗಿರುವ ಅತ್ಯಂತ ಬಿಸಿ ದಿನವಿದು. ಅಂದು ಅಂದರೆ ಮಾರ್ಚ್ 31, 1945ರಲ್ಲಿ 40.5 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು ಎನ್ನುತ್ತಾರೆ ಅವರು. ಕಡಿಮೆ ವೇಗದಲ್ಲಿ ಬೀಸುತ್ತಿರುವ ಗಾಳಿ, ಪ್ರಖರ ಬಿಸಿಲು, ಶುಭ್ರ ಆಗಸವು ರಾಜಧಾನಿಯ ಉಷ್ಣಾಂಶ ಹೆಚ್ಚಾಗಲು ಮುಖ್ಯ ಕಾರಣ ಎನ್ನುತ್ತಾರೆ ಅವರು.

ಮಾರ್ಚ್ 29, 1973ರಲ್ಲಿ ದೆಹಲಿ ನಗರವು 39.6 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಿಸಿತ್ತು. ಇದು ಮಾರ್ಚ್ ತಿಂಗಳಲ್ಲಿ ದಾಖಲಾಗಿರುವ 3ನೇ ಗರಿಷ್ಠ ತಾಪಮಾನವಾಗಿದೆ.

ನಜ್​ಫಾಗಡ, ನರೇಲಾ, ಪೀತಾಂಪುರ ಮತ್ತು ಪುಸ ಹವಾಮಾನ ಕೇಂದ್ರಗಳಲ್ಲಿ ಗರಿಷ್ಠ ತಾಪಮಾನ 41.5 ಡಿಗ್ರಿ ಸೆಲ್ಷಿಯಸ್​ಗಿಂತಲೂ ಹೆಚ್ಚು ದಾಖಲಾಗಿದೆ. ಕನಿಷ್ಠ ತಾಪಮಾನವು 20.6 ಡಿಗ್ರಿಗೆ ಬಂದು ನಿಂತಿದೆ. ಇದೂ ಸಹ ಸರಾಸರಿಗಿಂತಲೂ 3 ಡಿಗ್ರಿ ಹೆಚ್ಚು. ಬಯಲು ಪ್ರದೇಶಗಳಲ್ಲಿ ಉಷ್ಣಾಂಶವು 40 ಡಿಗ್ರಿಗಿಂತಲೂ ಹೆಚ್ಚು ದಾಖಲಾದಾಗ ಮತ್ತು ಸರಾಸರಿ ಉಷ್ಣಾಂಶವು ವಾಡಿಕೆಗಿಂತಲೂ 4.5 ಡಿಗ್ರಿಯಷ್ಟು ಹೆಚ್ಚಿದ್ದಾಗ ಬಿಸಿಗಾಳಿಯನ್ನು ಘೋಷಿಸಲಾಗುತ್ತದೆ.

ವಾಡಿಕೆಗಿಂತಲೂ 6.5 ಡಿಗ್ರಿ ಸೆಲ್ಷಿಯಸ್​ನಷ್ಟು ಉಷ್ಣಾಂಶ ಹೆಚ್ಚಾದರೆ ‘ತೀವ್ರ’ ಬಿಸಿಗಾಳಿಯ ಮುನ್ನೆಚ್ಚರಿಕೆ ನೀಡಲಾಗುತ್ತದೆ. ವೇಗವಾಗಿ ಬೀಸುತ್ತಿರುವ ಗಾಳಿಯು ದೆಹಲಿಯ ಉಷ್ಣಾಂಶವನ್ನು ತಗ್ಗಿಸಬಹುದು. ಮಂಗಳವಾರದ ಹೊತ್ತಿಗೆ ಉಷ್ಣಾಂಶವು 38 ಡಿಗ್ರಿ ಸೆಲ್ಷಿಯಸ್​ಗೆ ಬರಬಹುದು ಎಂದು ಎಂದು ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಾನೂನಾಯ್ತು ದೆಹಲಿ ಮಸೂದೆ: ದೆಹಲಿ ಆಡಳಿತದಲ್ಲಿ ಕೇಂದ್ರದ ಹಿಡಿತ ಬಲಪಡಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ

ಇದನ್ನೂ ಓದಿ: ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಆರೋಪಿಗೆ ಸಮಾಜ ಸೇವೆ ಮಾಡಲು ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್!

Published On - 10:44 pm, Mon, 29 March 21

Follow Us
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ