ದೆಹಲಿಯ ಮನೆಯೊಂದರಲ್ಲಿ ತ್ರಿವಳಿ ಕೊಲೆ, ಕಿರಿ ಮಗನ ಮೇಲೆ ಶಂಕೆ

ದೆಹಲಿಯಲ್ಲಿ ಒಂದೇ ಮನೆಯ ಮೂವರು ಸದಸ್ಯರನ್ನು ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ದೆಹಲಿಯ ಮೈದಾನಗಢಿ ಪ್ರದೇಶದಲ್ಲಿ ತ್ರಿವಳಿ ಕೊಲೆ(Murder) ನಡೆದಿದೆ. ನಾಪತ್ತೆಯಾಗಿರುವ ಕಿರಿ ಮಗನ ಮೇಲೆ ಅನುಮಾನ ಮೂಡಿದೆ. ಮಧ್ಯವಯಸ್ಸಿನ ದಂಪತಿ ಹಾಗೂ 24 ವರ್ಷದ ಮಗ ಶವವಾಗಿ ಮನೆಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಅವರ ಇನ್ನೊಬ್ಬ ಮಗನ ಸುಳಿವೇ ಇಲ್ಲ. ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದರು.

ದೆಹಲಿಯ ಮನೆಯೊಂದರಲ್ಲಿ ತ್ರಿವಳಿ ಕೊಲೆ, ಕಿರಿ ಮಗನ ಮೇಲೆ ಶಂಕೆ
ಮೃತರು
Image Credit source: NDTV

Updated on: Aug 21, 2025 | 8:09 AM

ನವದೆಹಲಿ, ಆಗಸ್ಟ್ 21: ದೆಹಲಿಯ ಮೈದಾನಗಢಿ ಪ್ರದೇಶದಲ್ಲಿ ತ್ರಿವಳಿ ಕೊಲೆ(Murder) ನಡೆದಿದೆ. ನಾಪತ್ತೆಯಾಗಿರುವ ಕಿರಿ ಮಗನ ಮೇಲೆ ಅನುಮಾನ ಮೂಡಿದೆ. ಮಧ್ಯವಯಸ್ಸಿನ ದಂಪತಿ ಹಾಗೂ 24 ವರ್ಷದ ಮಗ ಶವವಾಗಿ ಮನೆಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಅವರ ಇನ್ನೊಬ್ಬ ಮಗನ ಸುಳಿವೇ ಇಲ್ಲ. ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದರು.

ಆಗ ಈ ಘಟನೆ ಬೆಳಕಿಗೆ ಬಂದಿದೆ.45 ರಿಂದ 50 ವರ್ಷ ವಯಸ್ಸಿನ ಪ್ರೇಮ್ ಸಿಂಗ್ ಮತ್ತು ಅವರ ಮಗ 24 ವರ್ಷ ವಯಸ್ಸಿನ ಹೃತಿಕ್ ಅವರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು.
ಸುಮಾರು 40 ರಿಂದ 45 ವರ್ಷ ವಯಸ್ಸಿನ ಮಹಿಳೆ ರಜನಿ ಅವರ ಶವ ಮೊದಲ ಮಹಡಿಯಲ್ಲಿ ಬಾಯಿ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ದಂಪತಿಯ ಕಿರಿಯ ಮಗ ಸಿದ್ಧಾರ್ಥ್ ನಾಪತ್ತೆಯಾಗಿದ್ದಾನೆ.

ಸಿದ್ಧಾರ್ಥ್ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ, ಮನೆಯಿಂದ ದಾಖಲೆಗಳು ಮತ್ತು ಔಷಧಿಗಳು ಪತ್ತೆಯಾಗಿದ್ದು, ಕಳೆದ 12 ವರ್ಷಗಳಿಂದ ಆತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ತ್ರಿವಳಿ ಕೊಲೆ; ಅಪ್ಪ, ಅಮ್ಮ, ತಮ್ಮನನ್ನು ಕೊಂದು ಯುವಕ ಪರಾರಿ

ಇತ್ತೀಚಿನ ಮಾಹಿತಿಯ ಪ್ರಕಾರ, ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸಸ್ (IHBAS) ನಲ್ಲಿ ಅವರು ಆಕ್ರಮಣಕಾರಿ ನಡವಳಿಕೆ ಮತ್ತು ಗೀಳು-ಕಂಪಲ್ಸಿವ್ ಡಿಸಾರ್ಡರ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಸಿದ್ಧಾರ್ಥ್ ಪೋಷಕರು ಮತ್ತು ಸಹೋದರನನ್ನು ಚಾಕುವಿನಿಂದ ಇರಿದು, ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ ಎಂದು ಶಂಕಿಸಲಾಗಿದೆ.

ಇದಲ್ಲದೆ, ಪ್ರಾಥಮಿಕ ತನಿಖೆಯಲ್ಲಿ ಅವನು ತನ್ನ ಕುಟುಂಬದವರನ್ನು ಕೊಂದಿರುವುದಾಗಿ ಮತ್ತು ಇನ್ನುಮುಂದೆ ಮೈದಾನಗಢಿ ಮನೆಯಲ್ಲಿ ವಾಸಿಸುವುದಿಲ್ಲ ಎಂದು ಯಾರಿಗೋ ಹೇಳಿದ್ದಾನೆ ಎಂದು ತಿಳಿದುಬಂದಿದೆ. ಗ್ರಾಮದ ಪ್ರಧಾನ್ ಮೊಹಮ್ಮದ್ ಶಕೀಲ್ ಅಹ್ಮದ್ ಖಾನ್, ತಂದೆ ಮದ್ಯವ್ಯಸನಿಯಾಗಿದ್ದು, ಅವರ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ಹೇಳಿದರು.

ಮನೆಯನ್ನು ಸೀಲ್ ಮಾಡಲಾಗಿದೆ ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳದಲ್ಲಿರುವ ವಿಧಿವಿಜ್ಞಾನ ತಂಡಗಳು ಬೆರಳಚ್ಚುಗಳು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸುತ್ತಿವೆ. ಪೊಲೀಸರು ಸಿದ್ಧಾರ್ಥ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ