AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತರ ಮನೆಗೆ ಎಚ್ಚರಿಕೆಯ ಪೋಸ್ಟರ್​ ಬೇಡ: ಸುಪ್ರೀಂಕೋರ್ಟ್​ ಸೂಚನೆ

ಕರ್ನಾಟದಲ್ಲಿ ಈಗಾಗಲೇ ಈ ಪ್ರಕ್ರಿಯೆಗೆ ಬ್ರೇಕ್​ ಹಾಕಲಾಗಿದೆ. ಆದರೆ, ಅನೇಕ ರಾಜ್ಯಗಳಲ್ಲಿ ಈ ಕ್ರಮ ಇಂದು ಕೂಡ ಮುಂದುವರಿದಿದೆ.

ಕೊರೊನಾ ಸೋಂಕಿತರ ಮನೆಗೆ ಎಚ್ಚರಿಕೆಯ ಪೋಸ್ಟರ್​ ಬೇಡ: ಸುಪ್ರೀಂಕೋರ್ಟ್​ ಸೂಚನೆ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 09, 2020 | 4:45 PM

Share

ನವದೆಹಲಿ: ಕೊರೊನಾ ವೈರಸ್ ಸೋಂಕಿತರ ಮನೆಗೆ ಎಚ್ಚರಿಕೆಯ ಪೋಸ್ಟರ್​ ಅಂಟಿಸುವ ಕ್ರಮವನ್ನು ತಕ್ಷಣ ನಿಲ್ಲಿಸಿ ಎಂದು ಸುಪ್ರೀಂಕೋರ್ಟ್​ ಸೂಚನೆ ನೀಡಿದೆ.

ಕರ್ನಾಟದಲ್ಲಿ ಈಗಾಗಲೇ ಈ ಪ್ರಕ್ರಿಯೆಗೆ ಬ್ರೇಕ್​ ಹಾಕಲಾಗಿದೆ. ಆದರೆ, ಅನೇಕ ರಾಜ್ಯಗಳಲ್ಲಿ ಈ ಕ್ರಮ ಇಂದು ಕೂಡ ಮುಂದುವರಿದಿದೆ. ಇದಕ್ಕೆ, ಸುಪ್ರೀಂಕೋರ್ಟ್​ ಈಗ ಆಕ್ಷೇಪ ವ್ಯಕ್ತಪಡಿಸಿದ್ದು, ಸೋಂಕಿತರಲ್ಲಿ ಕಳಂಕಿತರು ಎನ್ನುವ ಭಾವನೆ ಮೂಡಲಿದೆ ಎಂದು ಕಳವಳ ಹೊರಹಾಕಿದೆ.

ಕೊರೊನಾ ಸೋಂಕಿತರ ಮನೆ ಎದುರು ಗೇಟ್​ ನಿಲ್ಲಿಸಿ, ಅದಕ್ಕೆ ಎಚ್ಚರಿಕೆಯ ಪೋಸ್ಟರ್​ ಅಂಟಿಸಲಾಗುತ್ತಿತ್ತು. ಈ ಮೂಲಕ ಮನೆಯಲ್ಲಿ ಕೊರೊನಾ ಸೋಂಕಿತರಿದ್ದಾರೆ ಎನ್ನುವ ಎಚ್ಚರಿಕೆಯನ್ನು ಅಕ್ಕ-ಪಕ್ಕದ ಮನೆಯವರಿಗೆ ನೀಡುವುದು ಇದರ ಉದ್ದೇಶವಾಗಿತ್ತು. ಈ ಕ್ರಮದ ಉದ್ದೇಶ ಉತ್ತಮವಾಗಿದ್ದರೂ, ಕೊರೊನಾ ಸೋಂಕಿತರನ್ನು ನೋಡುವ ದೃಷ್ಟಿ ಬೇರೆ ಆಗಿದೆ ಎನ್ನುವ ಅಭಿಪ್ರಾಯವನ್ನು ಅನೇಕರು ಹೊರ ಹಾಕಿದ್ದರು. ಈಗ ಸುಪ್ರೀಂಕೋರ್ಟ್​ ಕೂಡ ಇದೇ ರೀತಿಯ ಅಭಿಪ್ರಾಯ ಹೊರ ಹಾಕಿದೆ.

ಸುಪ್ರೀಂ ಹೇಳಿದ್ದೇನು: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್​, ಕೊರೊನಾ ಸೊಂಕಿತರ ಮನೆಗೆ ಪೋಸ್ಟರ್ ಅಂಟಿಸುವ ಅವಶ್ಯಕತೆ ಇಲ್ಲ. ಪೋಸ್ಟರ್ ಅಂಟಿಸುವುದು ಸರಿಯಾದ ಕ್ರಮವಲ್ಲ. ಹೀಗೆ ಪೋಸ್ಟರ್​ ಅಂಟಿಸುವದರಿಂದ ಸೋಂಕಿತರಲ್ಲಿ ಕಳಂಕಿತರು ಎನ್ನುವ ಭಾವನೆ ಮೂಡಲಿದೆ. ಎಚ್ಚರಿಕೆಯ ಪೋಸ್ಟರ್​​​ಗಳು ಅಸ್ಪೃಶ್ಯತೆಗೆ ಕಾರಣವಾಗಬಾರದು ಎಂದಿದೆ.

ಸರ್ಕಾರಗಳಿಗೆ ಸೂಚನೆ: ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿ. ಹೀಗಾಗಿ, ಸರ್ಕಾರಗಳಿಗೆ ಈ ಬಗ್ಗೆ ಗಮನಹರಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರಲ್ಲಿ ಹಾಕಲಾಗುತ್ತಿತ್ತು ಪೋಸ್ಟರ್​: ಯಾವುದೇ ವ್ಯಕ್ತಿಗೆ ಕೊರೊನಾ ಬಂದರೆ, ಅಂಥವರ ಮನೆಗೆ ಗೇಟ್​ ಹಾಕಿ ಎಚ್ಚರಿಕೆಯ ಪೋಸ್ಟರ್​ ಅಂಟಿಸಲಾಗುತ್ತಿತ್ತು. ಆರಂಭದ ದಿನಗಳಲ್ಲಿ ಕೊರೊನಾ ಪಾಸಿಟಿವ್ ಬಂದ ಗಲ್ಲಿಯನ್ನೇ ಸೀಲ್​ ಡೌನ್​ ಮಾಡಲಾಗುತ್ತಿತ್ತು. ಆದರೆ, ದಿನ ಕಳೆದಂತೆ, ಈ ಕ್ರಮಗಳನ್ನು ಕೈಬಿಡಲಾಗಿತ್ತು.

ನಟಿ ಮೇಘನಾ ರಾಜ್‌ ಹಾಗೂ ಫ್ಯಾಮಿಲಿಗೆ ಕೊರೊನಾ!

ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ