ಬೀಡ್ (ಮಹರಾಷ್ಟ್ರ): ಮಹಾರಾಷ್ಟ್ರದ ಕೃಷಿ ಸಚಿವ ಅಬ್ದುಲ್ ಸತ್ತಾರ್ (Maharashtra Agriculture Minister Abdul Sattar) ಜಿಲ್ಲಾಧಿಕಾರಿಯೊಬ್ಬರಿಗೆ ಅಣುಕಿಸಿ ಪೇಚಿಗೆ ಸಿಲುಕಿದ್ದಾರೆ. ಟೀ ನಿರಾಕರಿಸಿದ ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ ಅವರಿಗೆ ಅಬ್ದುಲ್ ಸತ್ತಾರ್, ಮದ್ಯ ಸೇವಿಸುತ್ತೀರಾ ಎಂದು ಕೇಳುವ ಮೂಲಕ ಟೀಕೆಗೆ ಒಳಗಾಗುತ್ತಿದ್ದಾರೆ. ಮದ್ಯ ಮಹಾರಾಷ್ಟ್ರದ ಬೀಡ್ ಜಿಲ್ಲೆಯಾದ್ಯಂತ ಅತಿಯಾಗಿ ಮಳೆಯಾಗಿ ಬೆಳೆಗಳು ಹಾನಿಯಾಗಿವೆ. ಈ ಸಂಬಂಧ ಕೃಷಿ ಸಚಿವ ಅಬ್ದುಲ್ ಸತ್ತಾರ್, ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ ಮತ್ತು ಅಧಿಕಾರಿಗಳು ಬೀಡ್ ಜಿಲ್ಲೆಯ ಗೆವ್ರಾಯಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಆದ ಬೆಳೆ ಹಾನಿ ಪರಿಶೀಲಿಸಲು ಅ.21ರಂದು ಬಂದಿದ್ದರು. ಈ ವೇಳೆ ಹಾಲ್ವೊಂದರಲ್ಲಿ ಕುಳಿತಾಗ, ಟೀ ಕೊಡಲು ಬಂದಿದ್ದಾರೆ.
अतिवृष्टी पाहणी दौरा कि मद्यसृष्टी पाहणी दौरा?
ತಾಜಾ ಸುದ್ದಿ
गम का दौर हो या हो खुशी, समा बाँधती है शराबकिसान मरे या करे खुदकुशी, समा बाँधती है शराबएक मशवरा है जनाब के थोड़ी-थोड़ी पिया करोहुई महँगी बहत ही शराब, के थोड़ी-थोड़ी पिया करो 🤔 pic.twitter.com/UDZsfypmAO
— Sachin Sawant सचिन सावंत (@sachin_inc) October 27, 2022
ಈ ವೇಳೆ ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ ಟೀ ನಿರಾಕರಿಸಿದ್ದಾರೆ. ಅದಕ್ಕೆ ಸಚಿವ ಅಬ್ದುಲ್ ಸತ್ತಾರ್ ಮದ್ಯ ಸೇವಿಸುತ್ತೀರಾ ಎಂದು ಅಣುಕಿಸಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ವಿರೋಧ ಪಕ್ಷಗಳು ಅಬ್ದುಲ್ ಸತ್ತಾರ್ ಅವರನ್ನು ಟೀಕೆ ಮಾಡುತ್ತಿವೆ.
ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್, ಸತ್ತಾರ್ ಅವರದ್ದು ಮಳೆ ಹಾನಿ ಪರಿಶೀಲನೆ ಪ್ರವಾಸವೋ ಅಥವಾ ಮದ್ಯ ಸೇವಿಸಲು ಹೋಗಿರುವ ಪ್ರವಾಸವೋ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ