AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿ-ಅತ್ತೆ ಜೊತೆ ಜಗಳವಾಡಿ, ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತ ಕುಡುಕ ಪತಿ! ದಂಪತಿಗೆ ಮೂವರು ಮಕ್ಕಳು

3 ತಿಂಗಳಿಂದ ತವರು ಮನೆ ಸೇರಿದ್ದ ಹೆಂಡತಿಯನ್ನು ತವರು ಮನೆಯಿಂದ ಕರೆತರಲು ಪತಿ ಪಬುರಾಮ್​ ತನ್ನ ಮಾವನ ಊರಿಗೆ ಹೋಗಿದ್ದ. ಅಲ್ಲಿ ಹೆಂಡತಿ ಮತ್ತು ಅತ್ತೆಯ ಜೊತೆ ಜಗಳ ಶುರುವಾಗಿದೆ. ಅದಾಗುತ್ತಿದ್ದಂತೆ ಆತ ಶರಾಬು ಕುಡಿದಿದ್ದಾನೆ. ಅದೇ ಕೋಪದಲ್ಲಿ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತಿದ್ದಾನೆ. ಘಟನೆ ನಡೆದಾಗ ಮನಯೆಲ್ಲಿ ಪಬುರಾಮ್​ ಮಾವ ಇರಲಿಲ್ಲ ಎಂದು ತಿಳಿದುಬಂದಿದೆ.

ಹೆಂಡತಿ-ಅತ್ತೆ ಜೊತೆ ಜಗಳವಾಡಿ, ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತ ಕುಡುಕ ಪತಿ! ದಂಪತಿಗೆ ಮೂವರು ಮಕ್ಕಳು
ಘೋರ ಸುದ್ದಿ: ಅಕ್ರಮ ವಿದ್ಯುತ್​ಗೆ ರೈತ ಬಲಿ; ಅದಕ್ಕೆ ವಿದ್ಯುತ್ ಅಳವಡಿಸಿದ್ದ ಜಮೀನು ಮಾಲೀಕನನ್ನು ಹೊಡೆದು ಸಾಯಿಸಿದ ಸ್ಥಳೀಯರು
TV9 Web
| Edited By: ಸಾಧು ಶ್ರೀನಾಥ್​|

Updated on:Oct 25, 2021 | 5:36 PM

Share

ಜೈಸಲ್ಮೇರ್, ರಾಜಸ್ಥಾನ: ಕುಡುಕ ಪತಿಯೊಬ್ಬ ತನ್ನ ಹೆಂಡತಿಯ ಜೊತೆ ಜಗಳ ಮಾಡಿಕೊಂಡು ಹೋಗಿ ಸಮೀಪದ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಇಹಲೋಕ ಯಾತ್ರೆ ತ್ಯಜಿಸಿದ್ದಾನೆ! ಇಲ್ಲಿನ ಬರ್ಮರ್ ಗ್ರಾಮೀಣ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಯುವಕನೊಬ್ಬ ತನ್ನ ಪತ್ನಿ ಮತ್ತು ಅತ್ತೆ ಜೊತೆ ಗಂಭೀರವಾಗಿ ಜಗಳವಾಡಿಕೊಂಡು ಅದೇ ಗುಂಗಿನಲ್ಲಿ ಸಮೀಪದ ವಿದ್ಯುತ್​ ಕಂಬಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದಾನೆ.

ದಂಪತಿಗೆ ಮೂವರು ಮಕ್ಕಳು: ಘಟನೆಯ ಬಳಿಕ ಸ್ಥಳೀಯ ಪೊಲೀಸರು ಪಬುರಾಮ್​ ಎಂಬ ಯುವಕನ ಶವ ಪರೀಕ್ಷೆ ನಡೆಸಿ, ದೇಹವನ್ನುಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಪಬುರಾಮ್​ ಹಾಪೋಂ ಕಿ ಧಣಿ ಪ್ರದೇಶದಲ್ಲಿ ವಾಸವಾಗಿದ್ದ. ಆರು ವರ್ಷ ಹಿಂದೆ ಆತ ದರುಡಾ ಗ್ರಾಮದ ಧೂಡಿ ದೇವಿ ಎಂಬ ಯುವತಿಯನ್ನು ವಿವಾಹವಾಗಿದ್ದ. ಮದುವೆಯ ಬಳಿಕ ದಂಪತಿಗೆ ಮೂವರು ಮಕ್ಕಳು ಇದ್ದರು.

ಕಳೆದ 2-3 ತಿಂಗಳಿಂದ ತವರು ಮನೆ ಸೇರಿದ್ದ ಹೆಂಡತಿಯನ್ನು ತವರು ಮನೆಯಿಂದ ಕರೆತರಲು ಪತಿ ಪಬುರಾಮ್​ ತನ್ನ ಮಾವನ ಊರಿಗೆ ಹೋಗಿದ್ದ. ಅಲ್ಲಿ ಹೆಂಡತಿ ಮತ್ತು ಅತ್ತೆಯ ಜೊತೆ ಜಗಳ ಶುರುವಾಗಿದೆ. ಅದಾಗುತ್ತಿದ್ದಂತೆ ಆತ ಶರಾಬು ಕುಡಿದಿದ್ದಾನೆ. ಅದೇ ಕೋಪದಲ್ಲಿ ವಿದ್ಯುತ್​ ಕಂಬಕ್ಕೆ ನೇಣು ಹಾಕಿಕೊಂಡು ಸತ್ತಿದ್ದಾನೆ. ಘಟನೆ ನಡೆದಾಗ ಮನಯೆಲ್ಲಿ ಪಬುರಾಮ್​ ಮಾವ ಇರಲಿಲ್ಲ ಎಂದು ತಿಳಿದುಬಂದಿದೆ.

ಕೊನೆಗೆ, ಅಕ್ಕಪಕ್ಕದವರು ವಿದ್ಯುತ್​ ಕಂಬದಲ್ಲಿ ನೇತಾಡುತ್ತಿದ್ದ ಪಬುರಾಮ್​ ಶವವನ್ನು ನೋಡಿ, ಆತನ ಪತ್ನಿಗೆ ಮಾಹಿತಿ ನೀಡಿದ್ದಾರೆ. ಘಟನೆ ವರದಿಯಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಪ್ರಕರಣನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿರುವುದಾಗಿ ಠಾಣಾಧಿಕಾರಿ ಪರಬತ್ ಸಿಂಗ್​ ತಿಳಿಸಿದ್ದಾರೆ.

(Drunk Man Argue With Wife and Mother in-law in Barmer in Jaisalmer in Rajasthan Ends Life by Hanging Self From Electricity Tower)

Published On - 5:35 pm, Mon, 25 October 21

Follow Us
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ