AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online fraud: ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ

ಚಂದೂಲಾಲ್​ ತಮ್ಮ ಬ್ಯಾಂಕ್​ ಖಾತೆಯಿಂದ ಸೈಬರ್ ವಂಚಕನ ಖಾತೆಗೆ 5,000 ರೂಪಾಯಿ ಹಣ ವರ್ಗಾಯಿಸಿದ್ದಾರೆ. ಷೇರ್ ಮಾರ್ಕೆಟ್​​ನಲ್ಲಿ ತನ್ನ ಲೆಕ್ಕದಲ್ಲಿ ಹಣ ಹೂಡುವಂತೆ ಸೂಚಿಸಿದ್ದಾರೆ. ಮುಂದೆ ಒಂದು ವಾರದಲ್ಲಿ ವಂಚಕ ನೀಡಿದ್ದ ಬ್ಯಾಂಕ್​ ಖಾತೆಗಳಿಗೆ ಚಂದೂಲಾಲ್​ 9.12 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರು ವಂಚಕನ ಮೋಡಸ್​ ಆಪರೆಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ.

Online fraud:  ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ
Online fraud: ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ
TV9 Web
| Edited By: ಸಾಧು ಶ್ರೀನಾಥ್​|

Updated on: Oct 25, 2021 | 6:36 PM

Share

ಸೈಬರ್​ ಖದೀಮರು ಷೇರ್ ಮಾರ್ಕೆಟ್​​ನಲ್ಲಿ ಹಣ ಹೂಡಿದರೆ ಬಂಪರ್​ ಲಾಭದ ತಂದುಕೊಡುವ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ಮೋಸಾ ಮಾಡಿದ್ದಾರೆ. ಹೈದರಾಬಾದ್​​ನ ರಾಮನಗರ ನಿವಾಸಿ ಚಂದೂಲಾಲ್ ಚೌಧರಿ ಅವರ ವಾಟ್ಸಪ್​ ನಂಬರಿಗೆ ವ್ಯಕ್ತಿಯೊಬ್ಬ ಮೆಸೆಜ್​ ಕಳಿಸಿದ್ದಾನೆ. ಸಣ್ಣ ಮೊತ್ತದ ಹೂಡಿಕೆಯಿಂದಲೆ ಬಂಪರ್​ ಲಾಭದ ತಂದುಕೊಡುವ ಆಮಿಷವೊಡ್ಡಿದ್ದಾನೆ. ಮತ್ತು ಇದರಲ್ಲಿ ಆಸಕ್ತಿಯಿದ್ದರೆ ತಾನುಕಳಿಸಿರುವ ಮೊಬೈಲ್​ ಆ್ಯಪ್​ ಡೌನ್​ ಲೋಡ್​ ಮಾಡಿಕೊಳ್ಳಲು ವಂಚಕ ಸೂಚಿಸಿದ್ದಾನೆ.

ಮೊದಲು ಚಂದೂಲಾಲ್​ ತಮ್ಮ ಬ್ಯಾಂಕ್​ ಖಾತೆಯಿಂದ ಸೈಬರ್ ವಂಚಕನ ಖಾತೆಗೆ 5,000 ರೂಪಾಯಿ ಹಣ ವರ್ಗಾಯಿಸಿದ್ದಾರೆ. ಷೇರ್ ಮಾರ್ಕೆಟ್​​ನಲ್ಲಿ ತನ್ನ ಲೆಕ್ಕದಲ್ಲಿ ಹಣ ಹೂಡುವಂತೆ ಸೂಚಿಸಿದ್ದಾರೆ. ಮುಂದೆ ಒಂದು ವಾರದಲ್ಲಿ ವಂಚಕ ನೀಡಿದ್ದ ಬ್ಯಾಂಕ್​ ಖಾತೆಗಳಿಗೆ ಚಂದೂಲಾಲ್​ 9.12 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರು ವಂಚಕನ ಮೋಡಸ್​ ಆಪರೆಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದರೆ ಕ್ರಮೇಣ ತಾನು ಮೋಸ ಹೋಗಿರುವುದು ಚಂದೂಲಾಲ್ ಚೌಧರಿ ಅನುಭವಕ್ಕೆ ಬಂದಿದೆ. ಸೈಬರ್​​ ವಂಚಕನು ತನ್ನ ಲಕ್ಷಾಂತರ ರೂಪಾಯಿ ಹಣವನ್ನು ಸ್ವಾಹಾ ಮಾಡಿರುವುದು ಗೊತ್ತಾಗಿದೆ. ಆಗ ಚಂದೂಲಾಲ್ ಚೌಧರಿ ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರ ಬಳಿ ಹೋಗಿ ತನಗೆ ಮೋಸವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಸೈಬರ್​​ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೈಸ್ ಮುಖ್ಯಸ್ಥ ಸೂಟ್ಕೇಸ್ ತಗೊಂಡು ದೇವೇಗೌಡ್ರ ಮನೆಗೆ ಬಂದಿದ್ರು |TV9Kannada

(Hyderabad man Chandulal Chowdhary duped lakhs of rupees in online fraud say Hyderabad Cyber crime officials )

Follow Us
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ