AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duologue With Barun Das: ತಲೆ ಮೇಲೆ ಟಿಆರ್​ಪಿ ಕಳಂಕ ಹೊತ್ತು ಹೋರಾಡಿದ್ದ ಆರ್ನಬ್: ಇಲ್ಲಿದೆ ಭಾರತೀಯ ಸುದ್ದಿಮಾಧ್ಯಮದ ಆರೋಪ ಮುಕ್ತಿ, ಗೆಲುವಿನ ಕಥನ

ಎರಡು ವರ್ಷದ ಹಿಂದೆ ಭಾರಿ ಸುದ್ದಿ ಮಾಡಿದ್ದ ಟಿಆರ್​ಪಿ ಹಗರಣದ ಬಗ್ಗೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

Duologue With Barun Das: ತಲೆ ಮೇಲೆ ಟಿಆರ್​ಪಿ ಕಳಂಕ ಹೊತ್ತು ಹೋರಾಡಿದ್ದ ಆರ್ನಬ್: ಇಲ್ಲಿದೆ ಭಾರತೀಯ ಸುದ್ದಿಮಾಧ್ಯಮದ ಆರೋಪ ಮುಕ್ತಿ, ಗೆಲುವಿನ ಕಥನ
Barun Das And Arnab Goswami
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Sep 22, 2022 | 2:40 PM

(ಆರ್ನಬ್​ ಗೋಸ್ವಾಮಿ- ಅಂತಿಮ TRP ವರದಿ ಬರುವ ಕೆಲವು ದಿನಗಳ ಮೊದಲು ನಾನು ಬರುಣ್​  ಅವರೊಂದಿಗೆ ಕುಳಿತು ಈ ಡ್ಯುಯೊಲೊಗ್ ಅನ್ನು ರೆಕಾರ್ಡ್ ಮಾಡಿದ್ದೇನೆ. ನನ್ನ ಬಂಧನವಾಗಿ ಆಮೇಲೆ ಹೊರಬಂದ ನಂತರ, ಮೊದಲ ಬಾರಿಗೆ ನನ್ನ ಸೆರೆವಾಸದ ಬಗ್ಗೆ ನಾನು ಮಾತನಾಡುವಂತೆ ಮಾಡಿದವರು ಬರುಣ್​. ರಿಪಬ್ಲಿಕ್​ ಟಿವಿಗೆ  ಏನಾಯಿತು, ನಾವು ಹೇಗೆ ಹೋರಾಡಿ ಗೆದ್ದಿದ್ದೇವೆ ಎಂಬ ಸತ್ಯವನ್ನು ಜನರು ತಿಳಿದುಕೊಳ್ಳಬೇಕು. ಈ ಅವಕಾಶ ನೀಡಿದ್ದಕ್ಕಾಗಿ ಬರುಣ್​  ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ.)

ಎರಡು ವರ್ಷದ ಹಿಂದೆ ಭಾರಿ ಸುದ್ದಿ ಮಾಡಿದ್ದ ಟಿಆರ್​ಪಿ ಹಗರಣದ ಬಗ್ಗೆ ಪತ್ರಕರ್ತ ಆರ್ನಬ್ ಗೋಸ್ವಾಮಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಟಿಆರ್​ಪಿ ಹಗರಣದಲ್ಲಿ ತನಿಖಾ ಸಂಸ್ಥೆ ಇಡಿಯಿಂದ ಕ್ಲೀನ್​ಚಿಟ್ ಪಡೆದ ಬಳಿಕ ರಿಪಬ್ಲಿಕ್ ಮೀಡಿಯಾ ಲಿಮಿಟೆಡ್​ನ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯವರು ಟಿವಿ9 ನೆಟ್​ವರ್ಕ್​ನ ಎಂಡಿ, ಸಿಇಒ ಬರುಣ್​ ದಾಸ್ ಅವರೊಂದಿಗೆ ಮುಕ್ತ ಮಾತುಕತೆಯಲ್ಲಿ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟಿಆರ್​ಪಿ ಹಗರಣಕ್ಕೆ ಹೊಸ ಮಾಧ್ಯಮ ಸಂಸ್ಥೆ ಹಾಗೂ ಇಲ್ಲಿಯವರೆಗಿನ ಮಾಧ್ಯಮ ದೈತ್ಯರ ಜಗಳವೇ ಕಾರಣ, ರಿಪಬ್ಲಿಕ್​ನ ಟಿಆರ್​ಪಿಯನ್ನು ಸಹಿಸಿಕೊಳ್ಳಲಾಗದೆ ಇಂತಹ ಪ್ರಯತ್ನ ನಡೆಯಿತು ಎನ್ನುವ ಸ್ಫೋಟಕ ವಿಚಾರವನ್ನು ಆರ್ನಬ್ ಬಹಿರಂಗಪಡಿಸಿದ್ದಾರೆ.

ಭಾರತದ ಮಾಧ್ಯಮಗಳು ಹಾಗೂ ಇಂದಿನ ಸವಾಲುಗಳು ಹಾಗೂ ಇತರೆ ವಿಚಾರಗಳ ಬಗ್ಗೆ ಟಿವಿ9 ನೆಟ್​ವರ್ಕ್​ನ ಸಿಇಒ ಹಾಗೂ ಎಂಡಿ ಬರುಣ್​ ದಾಸ್​ ಅವರೊಂದಿಗೆ ಅರ್ನಬ್ ಗೋಸ್ವಾಮಿ ಮುಕ್ತವಾಗಿ ಮಾತನಾಡಿದ್ದಾರೆ. ಇದಲ್ಲದೆ ಎನ್​ಡಿಟಿವಿ, ಟೈಮ್ಸ್​ನೌ ಹಾಗೂ ರಿಪಬ್ಲಿಕ್ ದಿನಗಳಲ್ಲಿನ ನೇಷನ್ ವಾಂಟ್ಸ್​ ಟು ನೋ ಕಾರ್ಯಕ್ರಮದ ಹಿಂದಿನ ಕೆಲವು ವಿವಾದಗಳ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.

ಆರ್ನಬ್ ಗೋಸ್ವಾಮಿ ಬಗ್ಗೆ ಮಾತನಾಡಿದ ಟಿವಿ9 ನೆಟ್​ವರ್ಕ್​ನ ಎಂಡಿ ಬರುಣ್​ ದಾಸ್ ಅವರು, ಅಧ್ಯಯನಶೀಲತೆಗೆ ಸಂಬಂಧಿಸಿದಂತೆ ಗೋಸ್ವಾಮಿ ಒಬ್ಬ ಅತ್ಯದ್ಭುತ ವ್ಯಕ್ತಿ. ಅವರನ್ನು ಇಷ್ಟಪಡಿ ಅಥವಾ ದ್ವೇಷಿಸಿ, ಆದರೆ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರ ವಿಶೇಷವಾದ ಶಕ್ತಿ ಏನೆಂದರೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತುಂಬಾ ನಿರ್ಭಾವುಕವಾಗಿ ಮಾತನಾಡುತ್ತಾರೆ.

ಅರ್ನಬ್ ಗೋಸ್ವಾಮಿ ಮಾತುಕತೆಯನ್ನು ಮುಂದುವರೆಸಿ, ವಿವಾದಾತ್ಮಕ ವಿಚಾರಗಳಿಗೆ ಬರುಣ್​ ಅವರ ವಿಚಾರಗಳು ತುಂಬಾ ತೀಕ್ಷ್ಣವಾಗಿರುತ್ತದೆ ಮತ್ತು ನಾನು ಇಲ್ಲಿಯವರೆಗೆ ಮಾತನಾಡದ ವಿಚಾರಗಳನ್ನು ಇಂದು ಹೊರಗೆ ಹಾಕುವಂತೆ ಮಾಡಿದ್ದಾರೆ. ನ್ಯೂಸ್​ಪ್ಲಸ್ ಒಟಿಟಿಗೆ ಶುಭಾಶಯವನ್ನು ಕೋರುತ್ತೇನೆ ಎಂದು ಆರ್ನಬ್ ಗೋಸ್ವಾಮಿ ಹೇಳಿದ್ದಾರೆ.

ತಮ್ಮ ಬಂಧನ ಹಾಗೂ ಕ್ಲೀನ್​ಚಿಟ್​ಗೆ ಸಂಬಂಧಿಸಿದಂತೆ ಮಾತನಾಡಿದ ಆರ್ನಬ್ ಗೋಸ್ವಾಮಿ, ಮೊದಲ ಬಾರಿಗೆ ಟಿಆರ್​ಪಿ ಹಗರಣದ ಬಗ್ಗೆ ಮಾತನಾಡುತ್ತಿದ್ದೇನೆ, ಈ ಬಗ್ಗೆ ಮಾತನಾಡುವಂತಹ ಸ್ಥಿತಿಗೆ ಬರುಣ್​ ತಂದಿದ್ದಾರೆ. ಜನರು ಈ ಬಗ್ಗೆ ಏನಾಯಿತು, ಜನರು ರಿಪಬ್ಲಿಕ್ ಜತೆಗೆ ಹೇಗೆ ನಡೆದುಕೊಂಡರು, ಕದನವನ್ನು ನಾನು ಹೇಗೆ ಗೆದ್ದೆ ಎಂದು ತಿಳಿಸುವಂತಹ ಅವಕಾಶವನ್ನು ಮಾಡಿಕೊಟ್ಟಿದ್ದಕ್ಕೆ, ಬರುನ್​ಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಒಟ್ಟು ನಾಲ್ಕು ಸಂಚಿಕೆಗಳು ಲಭ್ಯವಿದೆ -ದಿ ಡಿಸ್ರಪ್ಟರ್ಸ್​ -ಫ್ರೆಂಡ್ಸ್​, ಫೋಸ್ ಆಂಡ್ ಫಾರ್ಟಿಟ್ಯೂಡ್ -ಮೀಡಿಯಾ Inc -ಫ್ರ್ಯಾಂಕ್ಲಿ ಸ್ಪೀಕಿಂಗ್, ಫೈನಲಿ ಎನ್ನುವ ನಾಲ್ಕು ಸಂಚಿಕೆಗಳಿವೆ.

ಸಂಚಿಕೆಗಳನ್ನು ವೀಕ್ಷಿಸಲು, News9Plus ಅಪ್ಲಿಕೇಶನ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ: onelink.to/htmqpz

Published On - 12:12 pm, Thu, 22 September 22

ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!