AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu: ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಇ ಪಳನಿಸ್ವಾಮಿ ಬಂಧನ

ತಮಿಳುನಾಡು ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಎಐಎಡಿಎಂಕೆಯ ಇ ಪಳನಿಸ್ವಾಮಿ ಬಂಧನ ಮಾಡಲಾಗಿದೆ.

Tamil Nadu: ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಇ ಪಳನಿಸ್ವಾಮಿ ಬಂಧನ
E Palaniswami
TV9 Web
| Edited By: |

Updated on:Oct 19, 2022 | 11:32 AM

Share

ತಮಿಳುನಾಡು: ತಮಿಳುನಾಡು (Tamil Nadu) ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಎಐಎಡಿಎಂಕೆಯ (AIADMK) ಇ ಪಳನಿಸ್ವಾಮಿ (E Palaniswami) ಬಂಧನ ಮಾಡಲಾಗಿದೆ. ಇ ಪಳನಿಸ್ವಾಮಿ ತಮಿಳುನಾಡು ವಿಧಾನಸಭೆಯಿಂದ ಉಚ್ಛಾಟನೆಗೊಂಡಿದ್ದು, ಅವರ ಬೆಮಬಲಿಗರೊಂದಿಗೆ ಉಚ್ಛಾಟನೆಗೊಂಡಿರುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಪ್ರತಿಸ್ಪರ್ಧಿ ಬಣದ ನಾಯಕ ಓ ಪನ್ನೀರಸೆಲ್ವಂ (ಒಪಿಎಸ್‌) ಅವರನ್ನು ಉಪ ಸ್ಪೀಕರ್‌ ಕೈಬಿಡದಿರುವುದನ್ನು ಖಂಡಿಸಿ ತಮಿಳುನಾಡು ವಿಧಾನಸಭೆಯ ಹೊರಗೆ ಉಪವಾಸ ಸತ್ಯಾಗ್ರಹ ನಡೆಸಲು ಯತ್ನಿಸಿದ ಪ್ರತಿಪಕ್ಷ ನಾಯಕ ಎಡಪ್ಪಡ್ಡಿ ಕೆ ಪಳನಿಸ್ವಾಮಿ (ಇಪಿಎಸ್‌) ಮತ್ತು ಇತರ ಎಐಎಡಿಎಂಕೆ ಶಾಸಕರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಎರಡರಲ್ಲಿ ಪ್ರಬಲವಾಗಿರುವ ಇಪಿಎಸ್ ಬಣ ಹೊಸ ಉಪ ನಾಯಕನನ್ನು ಆಯ್ಕೆ ಮಾಡಿದೆ ಮತ್ತು ಆದರೆ ಒಪಿಎಸ್ ಸದಸ್ಯರನ್ನು ಬೇರೆಡೆ ಕೂರಿಸುವಂತೆ ಹಲವಾರು ಪತ್ರಗಳನ್ನು ಬರೆದಿದೆ. ಈ ವಿಚಾರವಾಗಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಎಡಪ್ಪಡ್ಡಿ ಕೆ ಪಳನಿಸ್ವಾಮಿ ಬಣದ ನಾಯಕರನ್ನು ನಿನ್ನೆ ಸದನದಿಂದ ಹೊರಹಾಕಲಾಗಿತ್ತು.

ಈ ಬಗ್ಗೆ ಪರಿಶೀಲಿಸುವುದಾಗಿ ಸ್ಪೀಕರ್ ಎಂ ಅಪ್ಪಾವು ಹೇಳಿದ್ದರು, ಯಾವುದೇ ಆಸನದ ಮೇಲೆ ಆದೇಶ ನೀಡುವ ಮತ್ತು ಈ ಆಸನದಲ್ಲಿ ಕುಳಿತುಕೊಳ್ಳಿ ಎನ್ನುವ ಅಧಿಕಾರ ಇಲ್ಲ, ನಿಮಗೆ ಸಂವಿಧಾನ ಪ್ರಕಾರ ಏನನ್ನೂ ಸೂಚಿಸಿದೆ ಅದನ್ನು ಮಾಡಿ ಎಂದು ಹೇಳಿದ್ದಾರೆ. ಇಪಿಎಸ್ ಮತ್ತು ಒಪಿಎಸ್ ಇಬ್ಬರೂ ಮಾಜಿ ಮುಖ್ಯಮಂತ್ರಿಗಳಾಗಿದ್ದು, ಜಯಲಲಿತಾ ಅವರ ಮರಣದ ನಂತರ ಎಐಎಡಿಎಂಕೆಯನ್ನು ಜಂಟಿಯಾಗಿ ಮುನ್ನಡೆಸಿದರು. ಈ ಬಗ್ಗೆ ಅನೇಕ ಕೇಸುಗಳು ನ್ಯಾಯಾಲಯದಲ್ಲಿವೆ, ಆದರೆ ಇಪಿಎಸ್ ಬಣವು ಎಐಎಡಿಎಂಕೆ ಮೇಲೆ ಬಲವಾದ ಹಿಡಿತವನ್ನು ಹೊಂದಿದೆ.

ನಿನ್ನೆ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಪಿಎಸ್, ಎಐಎಡಿಎಂಕೆಯಲ್ಲಿನ ಬಹುಮತದ ನಿರ್ಧಾರವನ್ನು ಸ್ಪೀಕರ್ ಪಾಲಿಸಿಲ್ಲ, ಒಪಿಎಸ್ ಬದಲಿಗೆ ಆರ್‌ಬಿ ಉದಯಕುಮಾರ್ ಅವರನ್ನು ವಿಧಾನಸಭೆಯಲ್ಲಿ ಪಕ್ಷದ ಉಪನಾಯಕರನ್ನಾಗಿ ಆಯ್ಕೆ ಮಾಡಿದರು.

ಓ ಪನ್ನೀರಸೆಲ್ವಂ (OPS) ಮತ್ತು ಅವರ ಬೆಂಬಲಿಗರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ. ಸ್ಪೀಕರ್ ಆಡಳಿತಾರೂಢ ಡಿಎಂಕೆ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಆಸನದ ಕುರಿತು ಯಾವುದೇ ಚರ್ಚೆಗೆ ಸ್ಪೀಕರ್ ಅನುಮತಿಸಲಿಲ್ಲ, ಈ ಅವಧಿ ಜನರ ಸಮಸ್ಯೆಗಳಿಗೆ ಮೀಸಲಾಗಿದೆ. ನಂತರ ಸಮಸ್ಯೆಯನ್ನು ಪ್ರಸ್ತಾಪಿಸಲು ಅವಕಾಶ ನೀಡಲಾಗುತ್ತದೆ ಎಂದು ಸ್ಪೀಕರ್ ತಿಳಿಸಿದರು. ಆದರೆ ಇಪಿಎಸ್ ಅವರ ಮಾತು ಕೇಳದೇ ಈಗಾಗಲೇ ಅವಕಾಶ ನೀಡಿ ಎಂದಿ ಒತ್ತಾಯ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಸ್ಪೀಕರ್ ನೀವೆಲ್ಲರೂ ಕಲಾಪಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಬಂದಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಎಐಎಡಿಎಂಕೆ ಸದಸ್ಯರು ನಿಂತುಕೊಂಡಾಗ, ಕೂಗಾಡಲು ಶುರು ಮಾಡಿದ್ದಾರೆ ನಂತರ ಇಪಿಎಸ್ ಮತ್ತು ಅವರ ಶಾಸಕರನ್ನು ಹೊರಹಾಕುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್ ಸೂಚಿಸಿದರು.

Published On - 10:25 am, Wed, 19 October 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ