AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu: ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಇ ಪಳನಿಸ್ವಾಮಿ ಬಂಧನ

ತಮಿಳುನಾಡು ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಎಐಎಡಿಎಂಕೆಯ ಇ ಪಳನಿಸ್ವಾಮಿ ಬಂಧನ ಮಾಡಲಾಗಿದೆ.

Tamil Nadu: ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಇ ಪಳನಿಸ್ವಾಮಿ ಬಂಧನ
E Palaniswami
TV9 Web
| Edited By: |

Updated on:Oct 19, 2022 | 11:32 AM

Share

ತಮಿಳುನಾಡು: ತಮಿಳುನಾಡು (Tamil Nadu) ವಿಧಾನಸಭೆಯಿಂದ ಉಚ್ಛಾಟನೆ ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಯತ್ನಿಸಿದ ಎಐಎಡಿಎಂಕೆಯ (AIADMK) ಇ ಪಳನಿಸ್ವಾಮಿ (E Palaniswami) ಬಂಧನ ಮಾಡಲಾಗಿದೆ. ಇ ಪಳನಿಸ್ವಾಮಿ ತಮಿಳುನಾಡು ವಿಧಾನಸಭೆಯಿಂದ ಉಚ್ಛಾಟನೆಗೊಂಡಿದ್ದು, ಅವರ ಬೆಮಬಲಿಗರೊಂದಿಗೆ ಉಚ್ಛಾಟನೆಗೊಂಡಿರುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಪ್ರತಿಸ್ಪರ್ಧಿ ಬಣದ ನಾಯಕ ಓ ಪನ್ನೀರಸೆಲ್ವಂ (ಒಪಿಎಸ್‌) ಅವರನ್ನು ಉಪ ಸ್ಪೀಕರ್‌ ಕೈಬಿಡದಿರುವುದನ್ನು ಖಂಡಿಸಿ ತಮಿಳುನಾಡು ವಿಧಾನಸಭೆಯ ಹೊರಗೆ ಉಪವಾಸ ಸತ್ಯಾಗ್ರಹ ನಡೆಸಲು ಯತ್ನಿಸಿದ ಪ್ರತಿಪಕ್ಷ ನಾಯಕ ಎಡಪ್ಪಡ್ಡಿ ಕೆ ಪಳನಿಸ್ವಾಮಿ (ಇಪಿಎಸ್‌) ಮತ್ತು ಇತರ ಎಐಎಡಿಎಂಕೆ ಶಾಸಕರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಎರಡರಲ್ಲಿ ಪ್ರಬಲವಾಗಿರುವ ಇಪಿಎಸ್ ಬಣ ಹೊಸ ಉಪ ನಾಯಕನನ್ನು ಆಯ್ಕೆ ಮಾಡಿದೆ ಮತ್ತು ಆದರೆ ಒಪಿಎಸ್ ಸದಸ್ಯರನ್ನು ಬೇರೆಡೆ ಕೂರಿಸುವಂತೆ ಹಲವಾರು ಪತ್ರಗಳನ್ನು ಬರೆದಿದೆ. ಈ ವಿಚಾರವಾಗಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಎಡಪ್ಪಡ್ಡಿ ಕೆ ಪಳನಿಸ್ವಾಮಿ ಬಣದ ನಾಯಕರನ್ನು ನಿನ್ನೆ ಸದನದಿಂದ ಹೊರಹಾಕಲಾಗಿತ್ತು.

ಈ ಬಗ್ಗೆ ಪರಿಶೀಲಿಸುವುದಾಗಿ ಸ್ಪೀಕರ್ ಎಂ ಅಪ್ಪಾವು ಹೇಳಿದ್ದರು, ಯಾವುದೇ ಆಸನದ ಮೇಲೆ ಆದೇಶ ನೀಡುವ ಮತ್ತು ಈ ಆಸನದಲ್ಲಿ ಕುಳಿತುಕೊಳ್ಳಿ ಎನ್ನುವ ಅಧಿಕಾರ ಇಲ್ಲ, ನಿಮಗೆ ಸಂವಿಧಾನ ಪ್ರಕಾರ ಏನನ್ನೂ ಸೂಚಿಸಿದೆ ಅದನ್ನು ಮಾಡಿ ಎಂದು ಹೇಳಿದ್ದಾರೆ. ಇಪಿಎಸ್ ಮತ್ತು ಒಪಿಎಸ್ ಇಬ್ಬರೂ ಮಾಜಿ ಮುಖ್ಯಮಂತ್ರಿಗಳಾಗಿದ್ದು, ಜಯಲಲಿತಾ ಅವರ ಮರಣದ ನಂತರ ಎಐಎಡಿಎಂಕೆಯನ್ನು ಜಂಟಿಯಾಗಿ ಮುನ್ನಡೆಸಿದರು. ಈ ಬಗ್ಗೆ ಅನೇಕ ಕೇಸುಗಳು ನ್ಯಾಯಾಲಯದಲ್ಲಿವೆ, ಆದರೆ ಇಪಿಎಸ್ ಬಣವು ಎಐಎಡಿಎಂಕೆ ಮೇಲೆ ಬಲವಾದ ಹಿಡಿತವನ್ನು ಹೊಂದಿದೆ.

ನಿನ್ನೆ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಪಿಎಸ್, ಎಐಎಡಿಎಂಕೆಯಲ್ಲಿನ ಬಹುಮತದ ನಿರ್ಧಾರವನ್ನು ಸ್ಪೀಕರ್ ಪಾಲಿಸಿಲ್ಲ, ಒಪಿಎಸ್ ಬದಲಿಗೆ ಆರ್‌ಬಿ ಉದಯಕುಮಾರ್ ಅವರನ್ನು ವಿಧಾನಸಭೆಯಲ್ಲಿ ಪಕ್ಷದ ಉಪನಾಯಕರನ್ನಾಗಿ ಆಯ್ಕೆ ಮಾಡಿದರು.

ಓ ಪನ್ನೀರಸೆಲ್ವಂ (OPS) ಮತ್ತು ಅವರ ಬೆಂಬಲಿಗರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ. ಸ್ಪೀಕರ್ ಆಡಳಿತಾರೂಢ ಡಿಎಂಕೆ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಆಸನದ ಕುರಿತು ಯಾವುದೇ ಚರ್ಚೆಗೆ ಸ್ಪೀಕರ್ ಅನುಮತಿಸಲಿಲ್ಲ, ಈ ಅವಧಿ ಜನರ ಸಮಸ್ಯೆಗಳಿಗೆ ಮೀಸಲಾಗಿದೆ. ನಂತರ ಸಮಸ್ಯೆಯನ್ನು ಪ್ರಸ್ತಾಪಿಸಲು ಅವಕಾಶ ನೀಡಲಾಗುತ್ತದೆ ಎಂದು ಸ್ಪೀಕರ್ ತಿಳಿಸಿದರು. ಆದರೆ ಇಪಿಎಸ್ ಅವರ ಮಾತು ಕೇಳದೇ ಈಗಾಗಲೇ ಅವಕಾಶ ನೀಡಿ ಎಂದಿ ಒತ್ತಾಯ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಸ್ಪೀಕರ್ ನೀವೆಲ್ಲರೂ ಕಲಾಪಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಬಂದಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಎಐಎಡಿಎಂಕೆ ಸದಸ್ಯರು ನಿಂತುಕೊಂಡಾಗ, ಕೂಗಾಡಲು ಶುರು ಮಾಡಿದ್ದಾರೆ ನಂತರ ಇಪಿಎಸ್ ಮತ್ತು ಅವರ ಶಾಸಕರನ್ನು ಹೊರಹಾಕುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್ ಸೂಚಿಸಿದರು.

Published On - 10:25 am, Wed, 19 October 22

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ