AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಭದ್ರತೆ ಲೋಪವಾಗಿದ್ದಕ್ಕೆ ಪ್ರತೀಕಾರ ಇದು; ಸೋದರಳಿಯನ ಮನೆ ಮೇಲೆ ಇ.ಡಿ. ದಾಳಿ ಆಗಿದ್ದಕ್ಕೆ ಸಿಎಂ ಛನ್ನಿ ಆಕ್ರೋಶ

ಪ್ರಧಾನಿ ಮೋದಿಯವರ ಫಿರೋಜ್​ಪುರ ಭೇಟಿ ಸಂದರ್ಭವನ್ನು ಮರೆಯಬೇಡಿ ಎಂದು ಇ.ಡಿ. ದಾಳಿ ನಡೆಸಲು ಬಂದಾಗ ಹೇಳಿತ್ತು ಎಂದೂ ಸಿಎಂ ಛನ್ನಿ ಪ್ರತಿಪಾದಿಸಿದ್ದಾರೆ.

ಪ್ರಧಾನಿ ಭದ್ರತೆ ಲೋಪವಾಗಿದ್ದಕ್ಕೆ ಪ್ರತೀಕಾರ ಇದು; ಸೋದರಳಿಯನ ಮನೆ ಮೇಲೆ ಇ.ಡಿ. ದಾಳಿ ಆಗಿದ್ದಕ್ಕೆ ಸಿಎಂ ಛನ್ನಿ ಆಕ್ರೋಶ
ಚರಣ್​​ಜಿತ್ ಸಿಂಗ್ ಚನ್ನಿ
TV9 Web
| Edited By: |

Updated on:Jan 20, 2022 | 9:29 AM

Share

ತಮ್ಮ ಸೋದರಳಿಯನ  ಮನೆ ಮೇಲೆ ನಡೆದ ಇ.ಡಿ. ದಾಳಿಯನ್ನು ಪಂಜಾಬ್​ ಮುಖ್ಯಮಂತ್ರಿ ಚರಣಜಿತ್ ಸಿಂಗ್​ ಛನ್ನಿ(Charanjit Singh Channi), ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪಕ್ಕೆ (PM Security Breach) ಲಿಂಕ್​ ಮಾಡಿದ್ದಾರೆ. ಅಂದರೆ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್​ಗೆ ಭೇಟಿ ಕೊಟ್ಟಿದ್ದಾಗ ಅವರ ಭದ್ರತೆಯಲ್ಲಿ ಲೋಪವುಂಟಾಗಿದ್ದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಈ ಇ.ಡಿ.ದಾಳಿ ನಡೆಸಿದೆ ಎಂದು ಹೇಳಿದ್ದಾರೆ.  ಇತ್ತೀಚೆಗಷ್ಟೇ ಪಂಜಾಬ್ ಸಿಎಂ ಸೋದರಳಿಯ ಭೂಪಿಂದರ್ ಸಿಂಗ್ ಹನಿ ವಿರುದ್ಧ ಅಕ್ರಮ ಮರಳು ಗಣಿಗಾರಿಕೆ ಆರೋಪದಡಿ ಜಾರಿ ನಿರ್ದೇಶನಲಾಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಒಟ್ಟು 10-12 ಸ್ಥಳಗಳ ಮೇಲೆ ಇ.ಡಿ. ರೇಡ್​ ಆಗಿತ್ತು. ಅದರಲ್ಲಿ ಭೂಪಿಂದರ್​ ಸಿಂಗ್​ ಹನಿಗೆ ಸೇರಿದ ಪ್ರದೇಶದ ಮೇಲೆಯೂ ನಡೆದಿತ್ತು. 

ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಛನ್ನಿ, ಜಾರಿ ನಿರ್ದೇಶನಲಾಯ, ಆದಾಯ ತೆರಿಗೆ ಇಲಾಖೆ ಮತ್ತಿತರ ತನಿಖಾ ದಳಗಳನ್ನು ಕೇಂದ್ರ ಸರ್ಕಾರ  ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರಗಳ ವಿರುದ್ಧ ಪ್ರತೀಕಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿಯವರ ಫಿರೋಜ್​ಪುರ ಭೇಟಿ ಸಂದರ್ಭವನ್ನು ಮರೆಯಬೇಡಿ ಎಂದು ಇ.ಡಿ. ದಾಳಿ ನಡೆಸಲು ಬಂದಾಗ ಹೇಳಿತ್ತು ಎಂದೂ ಸಿಎಂ ಛನ್ನಿ ಪ್ರತಿಪಾದಿಸಿದ್ದಾರೆ. ಇದು ಪಕ್ಕಾ ಪ್ರತೀಕಾರದ ದಾಳಿಯಾಗಿದೆ. ನನ್ನನ್ನು ಸಿಕ್ಕಿಹಾಕಿಸುವ ಸಲುವಾಗಿ ನನ್ನ ಸೋದರಳಿಯನನ್ನು 24 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ನನ್ನ ವಿರುದ್ಧ ಇ.ಡಿ.ಗೆ ಯಾವುದೇ ಪುರಾವೆಯೂ ಸಿಕ್ಕಿಲ್ಲ. ಪಂಜಾಬ್​ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಾಂತಿ ಈಗಾಗಲೇ ಶುರುವಾಗಿದೆ. ದೆಹಲಿ ಸರ್ಕಾರ (ಕೇಂದ್ರ ಸರ್ಕಾರ) ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆದರೆ ನಾವು ಅದಕ್ಕೆ ಪ್ರತಿಯಾಗಿ ಹೊಡೆತ ಕೊಟ್ಟಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಸೋಲಿಸುವ ಪ್ರಯತ್ನ ಮಾಡುತ್ತಿರುವ ಬಿಜೆಪಿ, ನನ್ನನ್ನು ಟಾರ್ಗೆಟ್​ ಮಾಡುತ್ತಿದೆ. ಆದರೆ ಇವರು ಸಾಗುತ್ತಿರುವ ಮಾರ್ಗ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ಅಂದಹಾಗೆ, ಭೂಪಿಂದರ್​ ಹನಿ ಅವರ ಮೊಹಾಲಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು 10 ಕೋಟಿ ರೂ.ನಗದು ಮತ್ತು 21 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಸಿಎಂ ಛನ್ನಿ ಸೋದರಳಿಯನ ಮನೆ ಮೇಲೆ ಇ.ಡಿ.ದಾಳಿಯಾಗುತ್ತಿದ್ದಂತೆ ಕಾಂಗ್ರೆಸ್​ ಬಿಜೆಪಿ ವಿರುದ್ಧ ಆರೋಪ ಮಾಡಿತ್ತು. ಒಂದು ಹಳೇ ಪ್ರಕರಣದ ನೆಪ ಇಟ್ಟುಕೊಂಡು ಈಗ ಕೇಂದ್ರ ಸರ್ಕಾರ ಪಂಜಾಭ್​ ಮತ್ತು ಪಂಜಾಬಿಯತ್​​ಗೆ ಅವಮಾನ ಮಾಡುತ್ತಿದೆ. ಈ ರಾಜ್ಯದ ಜನರೇ ಇದಕ್ಕೆಲ್ಲ ತಕ್ಕ ಶಾಸ್ತಿ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೇಳಿತ್ತು. ಆದರೆ ಪಂಜಾಬ್​​ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚುತ್ತಿರುವ ಬಗ್ಗೆ ಆಮ್​ ಆದ್ಮಿ ಪಕ್ಷ ಕೂಡ ಧ್ವನಿ ಎತ್ತಿತ್ತು ಪಂಜಾಬ್​​ನಲ್ಲಿ ಅದರಲ್ಲೂ ಮುಖ್ಯಮಂತ್ರಿ ಛನ್ನಿ ಅವರ ಸ್ವಕ್ಷೇತ್ರ ಚಮಕೌರ್​ ಸಾಹಿಬ್​​ನಲ್ಲಿಯೇ  ಅಕ್ರಮ ಮರಳು ಗಣಿಗಾರಿಕೆ  ಜಾಸ್ತಿಯಾಗುತ್ತಿದೆ ಎಂದು ಆರೋಪಿಸಿತ್ತು.

ಇದನ್ನೂ ಓದಿ: ರೈತಾಪಿ ಜನರೇ ದಯವಿಟ್ಟು ರಸ್ತೆಯಲ್ಲಿ ಕಣ ಹಾಕಬೇಡಿ, ಗರ್ಭಿಣಿಯಿದ್ದ ಆ್ಯಂಬುಲೆನ್ಸ್ ರಸ್ತೆ ಮಧ್ಯೆ ಸಿಲುಕಿ ಪರದಾಟ

Published On - 9:29 am, Thu, 20 January 22

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ