AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kumbh Mela Covid 19: ಕುಂಭಮೇಳ ಕೊವಿಡ್ 19 ನಕಲಿ ತಪಾಸಣೆ ಹಗರಣ; ಲ್ಯಾಬೋರೇಟರಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಇ.ಡಿ.

Kumbh Mela: ಈ ಬಾರಿ ಕೊವಿಡ್​ 19 ಮಧ್ಯೆಯೂ ಕುಂಭಮೇಳ ನಡೆದಿತ್ತು. ಅದಾದ ಬಳಿಕ ಕೊವಿಡ್​ ಪ್ರಕರಣಗಳು ಹೆಚ್ಚಿದ್ದವು. ನಂತರ ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೊವಿಡ್​ 19 ತಪಾಸಣೆ ಮಾಡಲು ಡಯಾಗ್ನೋಸ್ಟಿಕ್​ ಸಂಸ್ಥೆಗಳಿಗೆ ಉತ್ತರಾಖಂಡ ಸರ್ಕಾರವೇ ಗುತ್ತಿಗೆ ನೀಡಿತ್ತು.

Kumbh Mela Covid 19: ಕುಂಭಮೇಳ ಕೊವಿಡ್ 19 ನಕಲಿ ತಪಾಸಣೆ ಹಗರಣ; ಲ್ಯಾಬೋರೇಟರಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಇ.ಡಿ.
ಕುಂಭಮೇಳ ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Aug 07, 2021 | 10:13 AM

Share

ಉತ್ತರಾಖಂಡ್​: ಇಲ್ಲಿ ಕುಂಭಮೇಳ (Kumbh Mela)ದ ಸಮಯದಲ್ಲಿ ನಡೆದಿದೆ ಎನ್ನಲಾದ ನಕಲಿ ಕೊವಿಡ್​ 19 ಪರೀಕ್ಷೆ (Covid 19 Test Scam) ಹಗರಣಕ್ಕೆ ಸಂಬಂಧಪಟ್ಟಂತೆ ಐದು ಡಯಾಗ್ನೋಸ್ಟಿಕ್ಸ್ (ರೋಗನಿರ್ಣಯ) ಸಂಸ್ಥೆಗಳ ಉನ್ನತ ಕಾರ್ಯನಿರ್ವಾಹಕರ ಮನೆಗಳು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲ ಯ(Enforcement Directorate) ಶುಕ್ರವಾರ ಶೋಧಕಾರ್ಯ ನಡೆಸಿದೆ.

ಈ ಬಾರಿ ಕೊವಿಡ್​ 19 ಮಧ್ಯೆಯೂ ಕುಂಭಮೇಳ ನಡೆದಿತ್ತು. ಅದಾದ ಬಳಿಕ ಕೊವಿಡ್​ ಪ್ರಕರಣಗಳು ಹೆಚ್ಚಿದ್ದವು. ನಂತರ ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೊವಿಡ್​ 19 ತಪಾಸಣೆ ಮಾಡಲು ಡಯಾಗ್ನೋಸ್ಟಿಕ್​ ಸಂಸ್ಥೆಗಳಿಗೆ ಉತ್ತರಾಖಂಡ ಸರ್ಕಾರವೇ ಗುತ್ತಿಗೆ ನೀಡಿತ್ತು. ಅದರ ಅನ್ವಯ ಈ ಲ್ಯಾಬೋರೇಟರಿಗಳು ಜನರಿಗೆ ಕೊರೊನಾ ಱಪಿಡ್​ ಆ್ಯಂಟಿಜೆನ್​ ಟೆಸ್ಟ್​ ಮತ್ತು ಆರ್​ಟಿ-ಪಿಸಿಆರ್​ ಟೆಸ್ಟ್​ಗಳನ್ನು ಮಾಡಿ ರಿಪೋರ್ಟ್​ ನೀಡಬೇಕಿತ್ತು. ಆದರೆ ಲ್ಯಾಬೋರೇಟರಿಗಳು ಕೊಟ್ಟ ಕೆಲಸವನ್ನು ಸರಿಯಾಗಿ ನಡೆಸದೆ, ಅದೆಷ್ಟೋ ಜನರಿಗೆ ಕೊರೊನಾ ತಪಾಸಣೆಯನ್ನೇ ಮಾಡದೆ ವರದಿ ನೀಡಿದ್ದವು. ಅದಕ್ಕಾಗಿ ಹಣ ಪಡೆದಿದ್ದಲ್ಲದೆ, ಸರ್ಕಾರಕ್ಕೆ ತೋರಿಸಲು ನಕಲಿ ಬಿಲ್​ಗಳನ್ನೂ ಸೃಷ್ಟಿಸಿದ್ದವು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಉತ್ತಾರಖಂಡ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು.

ಈ ಲ್ಯಾಬೋರೇಟರಿಗಳು ಹೇಗೆ ಜನರನ್ನು ವಂಚಿಸಿವೆ ಎಂಬುದನ್ನು ಇಡಿ ವಿವರಿಸಿದೆ. ಒಬ್ಬರ ಸ್ಯಾಂಪಲ್​​ ತಪಾಸಣೆಯ ವರದಿಯನ್ನೇ ಹಲವರಿಗೆ ನೀಡಿದ್ದಾಗಿ ತಿಳಿಸಿದೆ. ಅದೆಷ್ಟರ ಮಟ್ಟಿಗೆ ಎಡವಟ್ಟು ಮಾಡಿಕೊಂಡಿವೆ ಎಂದರೆ, ಕುಂಭಮೇಳದಲ್ಲಿ ಪಾಲ್ಗೊಳ್ಳದೆ, ಕೊವಿಡ್​ ತಪಾಸಣೆಗೆ ಒಳಗಾಗದೆ ಇರುವವರ ಮೊಬೈಲ್​ಗೂ ನೆಗೆಟಿವ್​ ರಿಪೋರ್ಟ್ ಹೋಗಿದೆ ಎಂದು ಇಡಿ ಮಾಹಿತಿ ನೀಡಿದೆ. ಸದ್ಯ ತನಿಖೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಐದು ಲ್ಯಾಬೋರೇಟರಿಗಳ ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೇರಿದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದೆ. ಸದ್ಯ ಈ ಲ್ಯಾಬೋರೇಟರಿಗಳ ಲೈಸೆನ್ಸ್​ ರದ್ದುಗೊಳಿಸಲಾಗಿದ್ದು, ಯಾವುದೇ ರೋಗ ತಪಾಸಣೆ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದೆ.

ಇದನ್ನೂ ಓದಿ: ಮಾಜಿ ಗೃಹ ಸಚಿವರಿಗೆ ಹಾರ ಹಾಕಿ ಜನ್ಮದಿನ ಶುಭಾಶಯ ಕೋರಿದ ರೌಡಿ ಶೀಟರ್, ನೆಲಮಂಗಲದ ಕಡೆ ಹೆಜ್ಜೆ ಹಾಕಿದರಾ ಪರಮೇಶ್ವರ್?

ಉಡುಪಿಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: 65 ವರ್ಷ ಪ್ರಾಯದ ವ್ಯಕ್ತಿ ಬಂಧನ

Published On - 9:42 am, Sat, 7 August 21

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ