AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kumbh Mela Covid 19: ಕುಂಭಮೇಳ ಕೊವಿಡ್ 19 ನಕಲಿ ತಪಾಸಣೆ ಹಗರಣ; ಲ್ಯಾಬೋರೇಟರಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಇ.ಡಿ.

Kumbh Mela: ಈ ಬಾರಿ ಕೊವಿಡ್​ 19 ಮಧ್ಯೆಯೂ ಕುಂಭಮೇಳ ನಡೆದಿತ್ತು. ಅದಾದ ಬಳಿಕ ಕೊವಿಡ್​ ಪ್ರಕರಣಗಳು ಹೆಚ್ಚಿದ್ದವು. ನಂತರ ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೊವಿಡ್​ 19 ತಪಾಸಣೆ ಮಾಡಲು ಡಯಾಗ್ನೋಸ್ಟಿಕ್​ ಸಂಸ್ಥೆಗಳಿಗೆ ಉತ್ತರಾಖಂಡ ಸರ್ಕಾರವೇ ಗುತ್ತಿಗೆ ನೀಡಿತ್ತು.

Kumbh Mela Covid 19: ಕುಂಭಮೇಳ ಕೊವಿಡ್ 19 ನಕಲಿ ತಪಾಸಣೆ ಹಗರಣ; ಲ್ಯಾಬೋರೇಟರಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಇ.ಡಿ.
ಕುಂಭಮೇಳ ಸಾಂಕೇತಿಕ ಚಿತ್ರ
TV9 Web
| Edited By: |

Updated on:Aug 07, 2021 | 10:13 AM

Share

ಉತ್ತರಾಖಂಡ್​: ಇಲ್ಲಿ ಕುಂಭಮೇಳ (Kumbh Mela)ದ ಸಮಯದಲ್ಲಿ ನಡೆದಿದೆ ಎನ್ನಲಾದ ನಕಲಿ ಕೊವಿಡ್​ 19 ಪರೀಕ್ಷೆ (Covid 19 Test Scam) ಹಗರಣಕ್ಕೆ ಸಂಬಂಧಪಟ್ಟಂತೆ ಐದು ಡಯಾಗ್ನೋಸ್ಟಿಕ್ಸ್ (ರೋಗನಿರ್ಣಯ) ಸಂಸ್ಥೆಗಳ ಉನ್ನತ ಕಾರ್ಯನಿರ್ವಾಹಕರ ಮನೆಗಳು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲ ಯ(Enforcement Directorate) ಶುಕ್ರವಾರ ಶೋಧಕಾರ್ಯ ನಡೆಸಿದೆ.

ಈ ಬಾರಿ ಕೊವಿಡ್​ 19 ಮಧ್ಯೆಯೂ ಕುಂಭಮೇಳ ನಡೆದಿತ್ತು. ಅದಾದ ಬಳಿಕ ಕೊವಿಡ್​ ಪ್ರಕರಣಗಳು ಹೆಚ್ಚಿದ್ದವು. ನಂತರ ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೊವಿಡ್​ 19 ತಪಾಸಣೆ ಮಾಡಲು ಡಯಾಗ್ನೋಸ್ಟಿಕ್​ ಸಂಸ್ಥೆಗಳಿಗೆ ಉತ್ತರಾಖಂಡ ಸರ್ಕಾರವೇ ಗುತ್ತಿಗೆ ನೀಡಿತ್ತು. ಅದರ ಅನ್ವಯ ಈ ಲ್ಯಾಬೋರೇಟರಿಗಳು ಜನರಿಗೆ ಕೊರೊನಾ ಱಪಿಡ್​ ಆ್ಯಂಟಿಜೆನ್​ ಟೆಸ್ಟ್​ ಮತ್ತು ಆರ್​ಟಿ-ಪಿಸಿಆರ್​ ಟೆಸ್ಟ್​ಗಳನ್ನು ಮಾಡಿ ರಿಪೋರ್ಟ್​ ನೀಡಬೇಕಿತ್ತು. ಆದರೆ ಲ್ಯಾಬೋರೇಟರಿಗಳು ಕೊಟ್ಟ ಕೆಲಸವನ್ನು ಸರಿಯಾಗಿ ನಡೆಸದೆ, ಅದೆಷ್ಟೋ ಜನರಿಗೆ ಕೊರೊನಾ ತಪಾಸಣೆಯನ್ನೇ ಮಾಡದೆ ವರದಿ ನೀಡಿದ್ದವು. ಅದಕ್ಕಾಗಿ ಹಣ ಪಡೆದಿದ್ದಲ್ಲದೆ, ಸರ್ಕಾರಕ್ಕೆ ತೋರಿಸಲು ನಕಲಿ ಬಿಲ್​ಗಳನ್ನೂ ಸೃಷ್ಟಿಸಿದ್ದವು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಉತ್ತಾರಖಂಡ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು.

ಈ ಲ್ಯಾಬೋರೇಟರಿಗಳು ಹೇಗೆ ಜನರನ್ನು ವಂಚಿಸಿವೆ ಎಂಬುದನ್ನು ಇಡಿ ವಿವರಿಸಿದೆ. ಒಬ್ಬರ ಸ್ಯಾಂಪಲ್​​ ತಪಾಸಣೆಯ ವರದಿಯನ್ನೇ ಹಲವರಿಗೆ ನೀಡಿದ್ದಾಗಿ ತಿಳಿಸಿದೆ. ಅದೆಷ್ಟರ ಮಟ್ಟಿಗೆ ಎಡವಟ್ಟು ಮಾಡಿಕೊಂಡಿವೆ ಎಂದರೆ, ಕುಂಭಮೇಳದಲ್ಲಿ ಪಾಲ್ಗೊಳ್ಳದೆ, ಕೊವಿಡ್​ ತಪಾಸಣೆಗೆ ಒಳಗಾಗದೆ ಇರುವವರ ಮೊಬೈಲ್​ಗೂ ನೆಗೆಟಿವ್​ ರಿಪೋರ್ಟ್ ಹೋಗಿದೆ ಎಂದು ಇಡಿ ಮಾಹಿತಿ ನೀಡಿದೆ. ಸದ್ಯ ತನಿಖೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಐದು ಲ್ಯಾಬೋರೇಟರಿಗಳ ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೇರಿದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದೆ. ಸದ್ಯ ಈ ಲ್ಯಾಬೋರೇಟರಿಗಳ ಲೈಸೆನ್ಸ್​ ರದ್ದುಗೊಳಿಸಲಾಗಿದ್ದು, ಯಾವುದೇ ರೋಗ ತಪಾಸಣೆ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದೆ.

ಇದನ್ನೂ ಓದಿ: ಮಾಜಿ ಗೃಹ ಸಚಿವರಿಗೆ ಹಾರ ಹಾಕಿ ಜನ್ಮದಿನ ಶುಭಾಶಯ ಕೋರಿದ ರೌಡಿ ಶೀಟರ್, ನೆಲಮಂಗಲದ ಕಡೆ ಹೆಜ್ಜೆ ಹಾಕಿದರಾ ಪರಮೇಶ್ವರ್?

ಉಡುಪಿಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: 65 ವರ್ಷ ಪ್ರಾಯದ ವ್ಯಕ್ತಿ ಬಂಧನ

Published On - 9:42 am, Sat, 7 August 21

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!