AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೂ ಬೇಡ ರಾಜೀವ್​ ಗಾಂಧಿ ಹೆಸರು’- ಅಭಿಯಾನ ಶುರುಮಾಡಿದ ಕೊಡಗು ನಿವಾಸಿಗಳು

ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇಷ್ಟುದಿನ ಕ್ರೀಡಾಸಾಧಕರಿಗೆ ನೀಡುವ ಖೇಲ್​ರತ್ನ ಪ್ರಶಸ್ತಿಗೆ ಇದ್ದ ರಾಜೀವ್​ ಗಾಂಧಿ ಹೆಸರನ್ನು ತೆಗೆದಿದ್ದಾರೆ. ಅದರ ಬೆನ್ನಲ್ಲೇ ಕೊಡಗು ನಿವಾಸಿಗಳ ಅಭಿಯಾನವೂ ಶುರುವಾಗಿದೆ.

‘ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೂ ಬೇಡ ರಾಜೀವ್​ ಗಾಂಧಿ ಹೆಸರು’- ಅಭಿಯಾನ ಶುರುಮಾಡಿದ ಕೊಡಗು ನಿವಾಸಿಗಳು
ನಾಗರಹೊಳೆ ನ್ಯಾಶನಲ್ ಪಾರ್ಕ್​
TV9 Web
| Edited By: |

Updated on: Aug 07, 2021 | 11:35 AM

Share

ನಾಗರಹೊಳೆ ನ್ಯಾಶನಲ್​ ಪಾರ್ಕ್(Nagarahole National Park)​​ಗೆ ರಾಜೀವ್​ ಗಾಂಧಿ ನ್ಯಾಶನಲ್​ ಪಾರ್ಕ್ (Rajeev Gandhi National Park)​ ಎಂದೂ ಸಹ ಕರೆಯಲಾಗುತ್ತದೆ. ಆದರೆ ಈ ಹೆಸರನ್ನು ಬದಲಿಸಬೇಕು..ರಾಜೀವ್ ಗಾಂಧಿ ಎಂಬ ಹೆಸರು ಬೇಡ ಎಂದು ಕೊಡಗು ನಿವಾಸಿಗಳು ಆನ್​ಲೈನ್​ಲ್ಲಿ ಸಹಿ ಸಂಗ್ರಹ (Online Petition) ಅಭಿಯಾನ ಶುರು ಮಾಡಿದ್ದಾರೆ. ರಾಜೀವ್​ ಗಾಂಧಿ ನ್ಯಾಶನಲ್ ಪಾರ್ಕ್​ ಹೆಸರು ಬದಲಿಸುವ ಬಗ್ಗೆ ಅವರು ತಮ್ಮ ವಿಚಾರವನ್ನು ಹಂಚಿಕೊಂಡಿದ್ದಾರೆ. ಹಾಗೇ, ಅದಕ್ಕೆ ಒಪ್ಪಿಗೆ ಇದ್ದವರು ಬೆಂಬಲಿಸಿ ಎಂದೂ ಕೇಳಿಕೊಂಡಿದ್ದಾರೆ.

ಈ ಸಂಬಂಧ ಪ್ರಧಾನಿ ಮೋದಿ, ಅಮಿತ್​ ಶಾ, ಅರಣ್ಯ ಸಚಿವ ಭೂಪೇಂದರ್ ಸಿಂಗ್​ ಯಾದವ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಒಂದು ನಿರ್ಧಿಷ್ಟ ಕುಟುಂಬ, ಪಕ್ಷವನ್ನು ಸಮಾಧಾನಪಡಿಸಲು, ಓಲೈಸಲು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ರಾಜೀವ್​ ಗಾಂಧಿ ನ್ಯಾಶನಲ್​ ಪಾರ್ಕ್​ ಎಂದು ಹೆಸರಿಡಲಾಗಿದೆ ಎಂದು ನಾಗರಿಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಫೀಲ್ಡ್​ ಮಾರ್ಷಲ್​ ಕಾರಿಯಪ್ಪ, ಜನರಲ್​ ತಿಮ್ಮಯ್ಯ ಹೆಸರಿಡಿ.. ಇದೀಗ ಕೊಡಗು ನಿವಾಸಿಗಳು ಪ್ರಾರಂಭಿಸಿರುವ ಆನ್​ಲೈನ್​ ಅಭಿಯಾನಕ್ಕೆ ಅಪಾರ ಜನಬೆಂಬಲ ವ್ಯಕ್ತವಾಗಿದೆ. ಅದರಲ್ಲಿ ಹೆಚ್ಚಿನವರು ನ್ಯಾಶನಲ್​ ಪಾರ್ಕ್​ಗೆ ಫೀಲ್ಡ್​ ಮಾರ್ಷಲ್​ ಕಾರಿಯಪ್ಪ ಅಥವಾ ಜನರಲ್​ ತಿಮ್ಮಯ್ಯನವರ ಹೆಸರಿಡಿ ಎಂದೇ ಒತ್ತಾಯಿಸುತ್ತಿದ್ದಾರೆ. ಇವರಿಬ್ಬರೂ ಕೊಡಗಿನವರೇ ಆಗಿದ್ದು, ದೇಶಸೇವೆ ಮಾಡಿದ್ದಾರೆ. ಇವರಲ್ಲಿ ಯಾರ ಹೆಸರಿಟ್ಟರೂ ಅಡ್ಡಿಯಿಲ್ಲ ಎನ್ನುತ್ತಿದ್ದಾರೆ.

ಪ್ರಶಸ್ತಿ ಹೆಸರು ಬದಲಾದ ಬೆನ್ನಲ್ಲೇ ಒತ್ತಾಯ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇಷ್ಟುದಿನ ಕ್ರೀಡಾಸಾಧಕರಿಗೆ ನೀಡುವ ಖೇಲ್​ರತ್ನ ಪ್ರಶಸ್ತಿಗೆ ಇದ್ದ ರಾಜೀವ್​ ಗಾಂಧಿ ಹೆಸರನ್ನು ತೆಗೆದು, ಅದಕ್ಕೆ ಭಾರತದ ಹಾಕಿ ಮಾಂತ್ರಿಕ ಧ್ಯಾನ್ ಚಂದ ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಇಡಲಾದ ರಾಜೀವ್ ಗಾಂಧಿ ಹೆಸರನ್ನೂ ಬದಲಿಸಿ ಎಂಬ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ: Khel Ratna Award: ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಹಾಕಿ ಮಾಂತ್ರಿಕ ಧ್ಯಾನ್​ ಚಂದ್​ ಹೆಸರಿಟ್ಟ ಪ್ರಧಾನಿ ಮೋದಿ; ಟ್ವಿಟರ್​​ನಲ್ಲಿ ಘೋಷಣೆ

SSLC Result 2021: ಎಸ್​ಎಸ್​ಎಲ್​ಸಿ ಫಲಿತಾಂಶ ಕೊಂಚ ವಿಳಂಬ; ಮರುಮೌಲ್ಯಮಾಪನಕ್ಕೆ ಅವಕಾಶ ಇದೆಯಾ?

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!